<p><strong>ಹೊಸಪೇಟೆ: </strong>ಮೈಸೂರಿನ ಶ್ರೀಕಂಠದತ್ತ ಒಡೆಯರ್ ಅವರ ಹಂಪಿ ಭೇಟಿ ಅವಿಸ್ಮರಣೀಯ. 2011ರ ಮಾರ್ಚ್ 8ರಂದು ಮೊದಲ ಬಾರಿಗೆ ಭೇಟಿ ನೀಡಿದ್ದ ಅವರು ನಂತರ 2011ರ ನವೆಂಬರ್ 19ರಂದು ಮತ್ತೆ ಬಂದಿದ್ದರು. ಅವರೊಂದಿಗೆ ಪತ್ನಿ ಪ್ರಮೋದಾದೇವಿ ಅವರೂ ಇದ್ದರು.<br /> <br /> ಎರಡು ದಿನಗಳ ಕಾಲ ಹಂಪಿಯ ಸ್ಮಾರಕಗಳನ್ನು ಕಣ್ತುಂಬ ನೋಡಿದ ಶ್ರೀಕಂಠದತ್ತ ಒಡೆಯರ್ ಹೆಚ್ಚು ಖುಷಿಪಟ್ಟಿದ್ದರು. ಅಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಶ್ರೀಕಂಠದತ್ತ ಒಡೆಯರ್ ಅವರು, ಕಮಲ ಮಹಲ್, ರಾಣಿಯರ ಸ್ನಾನಗೃಹ, ಮಹಾನವಮಿ ದಿಬ್ಬ ಮತ್ತಿತರ ಸ್ಮಾರಕಗಳನ್ನು ಸಂಜೆ 6 ಗಂಟೆಯವರೆಗೂ ವೀಕ್ಷಿಸಿ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು.<br /> <br /> ಮರುದಿನ ಬೆಳಿಗ್ಗೆ 9.30 ಗಂಟೆಗೆ ಹಂಪಿಯ ವಿರೂಪಾಕ್ಷೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದರು. ದೇವಸ್ಥಾನದ ಆವರಣದಲ್ಲಿದ್ದ ಆನೆ ಪಾದ ಒಡೆದಿದ್ದನ್ನು ಗಮನಿಸಿದ ಒಡೆಯರ್ ಅವರು ಮಾವುತನಿಗೆ ಔಷಧಿ ಹಚ್ಚಲು ಹೇಳಿದ್ದರು. ಜತೆಗೆ ಸಹಾಯಕನಿಂದ 5 ಕೆ.ಜಿ. ಬೆಲ್ಲ ತರಿಸಿ ಆನೆಗೆ ತಿನಿಸಿ ಪ್ರಾಣಿ ಪ್ರೀತಿ ಮೆರೆದಿದ್ದರು.<br /> <br /> ನಂತರ ಅಲ್ಲಿಂದ ಕೃಷ್ಣ ದೇವಸ್ಥಾನ, ಕಡಲೆ ಕಾಳು ಹಾಗೂ ಸಾಸುವೆಕಾಳು ಗಣಪ ಸ್ಮಾರಕಗಳನ್ನು ನೋಡಿಕೊಂಡು ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಊಟ ಮುಗಿಸಿ ದರೋಜಿ ಕರಡಿ ಧಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವು ಕ್ಷಣ ಕಳೆದ ಉಪನ್ಯಾಸಕ ಸಮದ್ ಕೊಟ್ಟೂರ, ‘ಶ್ರೀಕಂಠದತ್ತ ಒಡೆಯರ್ ರಾಜಮನೆತನದವರಾಗಿದ್ದರೂ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಸಮೀಪದಿಂದ ಕರಡಿಗಳನ್ನು ನೋಡಿದ ಅವರು ಕೆಲವು ಕ್ಷಣ ನಲಿದಾಡಿದ್ದರು. ಅವರದ್ದು ಮಗುವಿನಂಥ ಮನಸ್ಸು’ ಎಂದು ನೆನಪಿಸಿಕೊಂಡಿದ್ದಾರೆ.<br /> <br /> ಹಂಪಿ ಭೇಟಿಯ ವೇಳೆ ಅವರೊಂದಿಗೆ ಇದ್ದ ರಾಜ್ಯ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಟಿ.ಗಂಗಾಧರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಶ್ರೀಕಂಠದತ್ತ ಒಡೆಯರ್ ಎರಡನೇ ಬಾರಿ ಹಂಪಿಗೆ ಭೇಟಿ ನೀಡಿದಾಗ ಎರಡು ದಿನ ಅವರೊಟ್ಟಿಗೆ ಇದ್ದೆ. ಈ ಸಂದರ್ಭದಲ್ಲಿ ಹಂಪಿಯ ವಿವಿಧ ಸ್ಮಾರಕಗಳನ್ನು ನೋಡಿ ಅವರು ಹೆಚ್ಚು ಖುಷಿ ಪಟ್ಟಿದ್ದರು. ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ಸ್ಥಿತಿ ನೋಡಿ ಮರುಕ ಪಟ್ಟಿದ್ದರು. ಈ ಘಟನೆ ಇನ್ನೂ ನನ್ನ ಕಟ್ಟಿದಂತಿದೆ’ ಎಂದು ನೆನಪಿಸಿಕೊಂಡರು.</p>.<p><strong>ಸಂತಾಪ: </strong>ಒಡೆಯರ್ ಅವರ ನಿಧನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ವಿಕಾಸ ಯುವಕ ಸಂಘದ ಅಧ್ಯಕ್ಷ ಎಂ.ಶಂಕರ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಮೈಸೂರಿನ ಶ್ರೀಕಂಠದತ್ತ ಒಡೆಯರ್ ಅವರ ಹಂಪಿ ಭೇಟಿ ಅವಿಸ್ಮರಣೀಯ. 2011ರ ಮಾರ್ಚ್ 8ರಂದು ಮೊದಲ ಬಾರಿಗೆ ಭೇಟಿ ನೀಡಿದ್ದ ಅವರು ನಂತರ 2011ರ ನವೆಂಬರ್ 19ರಂದು ಮತ್ತೆ ಬಂದಿದ್ದರು. ಅವರೊಂದಿಗೆ ಪತ್ನಿ ಪ್ರಮೋದಾದೇವಿ ಅವರೂ ಇದ್ದರು.<br /> <br /> ಎರಡು ದಿನಗಳ ಕಾಲ ಹಂಪಿಯ ಸ್ಮಾರಕಗಳನ್ನು ಕಣ್ತುಂಬ ನೋಡಿದ ಶ್ರೀಕಂಠದತ್ತ ಒಡೆಯರ್ ಹೆಚ್ಚು ಖುಷಿಪಟ್ಟಿದ್ದರು. ಅಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಶ್ರೀಕಂಠದತ್ತ ಒಡೆಯರ್ ಅವರು, ಕಮಲ ಮಹಲ್, ರಾಣಿಯರ ಸ್ನಾನಗೃಹ, ಮಹಾನವಮಿ ದಿಬ್ಬ ಮತ್ತಿತರ ಸ್ಮಾರಕಗಳನ್ನು ಸಂಜೆ 6 ಗಂಟೆಯವರೆಗೂ ವೀಕ್ಷಿಸಿ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು.<br /> <br /> ಮರುದಿನ ಬೆಳಿಗ್ಗೆ 9.30 ಗಂಟೆಗೆ ಹಂಪಿಯ ವಿರೂಪಾಕ್ಷೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದರು. ದೇವಸ್ಥಾನದ ಆವರಣದಲ್ಲಿದ್ದ ಆನೆ ಪಾದ ಒಡೆದಿದ್ದನ್ನು ಗಮನಿಸಿದ ಒಡೆಯರ್ ಅವರು ಮಾವುತನಿಗೆ ಔಷಧಿ ಹಚ್ಚಲು ಹೇಳಿದ್ದರು. ಜತೆಗೆ ಸಹಾಯಕನಿಂದ 5 ಕೆ.ಜಿ. ಬೆಲ್ಲ ತರಿಸಿ ಆನೆಗೆ ತಿನಿಸಿ ಪ್ರಾಣಿ ಪ್ರೀತಿ ಮೆರೆದಿದ್ದರು.<br /> <br /> ನಂತರ ಅಲ್ಲಿಂದ ಕೃಷ್ಣ ದೇವಸ್ಥಾನ, ಕಡಲೆ ಕಾಳು ಹಾಗೂ ಸಾಸುವೆಕಾಳು ಗಣಪ ಸ್ಮಾರಕಗಳನ್ನು ನೋಡಿಕೊಂಡು ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಊಟ ಮುಗಿಸಿ ದರೋಜಿ ಕರಡಿ ಧಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವು ಕ್ಷಣ ಕಳೆದ ಉಪನ್ಯಾಸಕ ಸಮದ್ ಕೊಟ್ಟೂರ, ‘ಶ್ರೀಕಂಠದತ್ತ ಒಡೆಯರ್ ರಾಜಮನೆತನದವರಾಗಿದ್ದರೂ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಸಮೀಪದಿಂದ ಕರಡಿಗಳನ್ನು ನೋಡಿದ ಅವರು ಕೆಲವು ಕ್ಷಣ ನಲಿದಾಡಿದ್ದರು. ಅವರದ್ದು ಮಗುವಿನಂಥ ಮನಸ್ಸು’ ಎಂದು ನೆನಪಿಸಿಕೊಂಡಿದ್ದಾರೆ.<br /> <br /> ಹಂಪಿ ಭೇಟಿಯ ವೇಳೆ ಅವರೊಂದಿಗೆ ಇದ್ದ ರಾಜ್ಯ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಟಿ.ಗಂಗಾಧರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಶ್ರೀಕಂಠದತ್ತ ಒಡೆಯರ್ ಎರಡನೇ ಬಾರಿ ಹಂಪಿಗೆ ಭೇಟಿ ನೀಡಿದಾಗ ಎರಡು ದಿನ ಅವರೊಟ್ಟಿಗೆ ಇದ್ದೆ. ಈ ಸಂದರ್ಭದಲ್ಲಿ ಹಂಪಿಯ ವಿವಿಧ ಸ್ಮಾರಕಗಳನ್ನು ನೋಡಿ ಅವರು ಹೆಚ್ಚು ಖುಷಿ ಪಟ್ಟಿದ್ದರು. ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ಸ್ಥಿತಿ ನೋಡಿ ಮರುಕ ಪಟ್ಟಿದ್ದರು. ಈ ಘಟನೆ ಇನ್ನೂ ನನ್ನ ಕಟ್ಟಿದಂತಿದೆ’ ಎಂದು ನೆನಪಿಸಿಕೊಂಡರು.</p>.<p><strong>ಸಂತಾಪ: </strong>ಒಡೆಯರ್ ಅವರ ನಿಧನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ವಿಕಾಸ ಯುವಕ ಸಂಘದ ಅಧ್ಯಕ್ಷ ಎಂ.ಶಂಕರ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>