<p><strong>ಶ್ರೀನಗರ (ಪಿಟಿಐ): </strong>ಲಡಾಖ್ ಪ್ರಾಂತ್ಯ ಶನಿವಾರ ಮುಂಜಾನೆ ಅಕ್ಷರಶಃ ಚಳಿಯಿಂದ ತತ್ತರಿಸಿತು. ಅಂತೆಯೇ ಮೈ ಕೊರೆಯುವಂತೆ ಬೀಸುತ್ತಿರುವ ಥಂಡಿ ಗಾಳಿ ಕಾಶ್ಮೀರ ಕಣಿವೆಯಾದ್ಯಂತ ಮತ್ತಷ್ಟು ಬಿರುಸುಗೊಂಡಿತ್ತು.<br /> <br /> ಲೆಹ್ ಪಟ್ಟಣದಲ್ಲಿ ತಾಪಮಾನ ಮೈನಸ್ 21.8 ಡಿಗ್ರಿ ಸೆಲ್ಸಿಯಸ್ಗೆ ಇಳಿದ ಪರಿಣಾಮ ಈ ಬಾರಿಯ ಕನಿಷ್ಠ ಉಷ್ಣಾಂಶ ಈ ಪ್ರದೇಶದಲ್ಲಿ ದಾಖಲಾಯಿತು ಎಂದು ಹವಾಮಾನ ವಿಭಾಗದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.<br /> <br /> ಸಮೀಪದ ಕಾರ್ಗಿಲ್ ಪಟ್ಟಣದಲ್ಲಿ ತಾಪಮಾನ ಮೈನಸ್ 21.0 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾದರೆ ಪಹಲ್ಗಾಂವ್ನಲ್ಲಿ ಮೈನಸ್ 16.5, ಗುಲ್ಮಾರ್ಗ್ನಲ್ಲಿ ಮೈನಸ್ 16.2 ಹಾಗೂ ಶ್ರೀನಗರದಲ್ಲಿ ಮೈನಸ್ 5 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು. ಕಣಿವೆಯ ವಿವಿಧೆಡೆ ಹಿಮಪಾತ ಇನ್ನೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.<br /> <br /> <strong>ಪಂಜಾಬ್-ಹರಿಯಾಣ ರಾಜ್ಯಗಳಲ್ಲಿ ಶೀತಗಾಳಿ: </strong>ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಶನಿವಾರ ಮುಂಜಾನೆ ತಾಪಮಾನ 0.3 ಡಿಗ್ರಿಗೆ ಇಳಿದಿದ್ದು ಸಾಮಾನ್ಯ ಸ್ಥಿತಿಗಿಂತಲೂ ಕೆಳಕ್ಕೆ ಜಾರಿದೆ.<br /> ಎರಡೂ ರಾಜ್ಯಗಳಲ್ಲಿ ಗಾಢ ಮಂಜು ಕವಿದಿದ್ದು, ರಸ್ತೆ ಮತ್ತು ರೈಲು ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ.<br /> <br /> <strong>ಥರಗುಟ್ಟುತ್ತಿರುವ ದೆಹಲಿ:</strong> ಶನಿವಾರ ಮುಂಜಾನೆ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ ಕನಿಷ್ಠಮಟ್ಟಕ್ಕೆ ಇಳಿಯುವ ಮೂಲಕ ಸಾಮಾನ್ಯ ಜನಜೀವನ ಚಳಿಯಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು. <br /> <br /> ಶುಕ್ರವಾರ 4.5ರಷ್ಟು ಇದ್ದ ತಾಪಮಾನ ಶನಿವಾರ ಮುಂಜಾನೆ 5.4 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು ಎಂಬುದೇ ಸಮಾಧಾನಕರ ಅಂಶವಾಗಿ ಕಂಡು ಬಂದಿತು. ಎಲ್ಲೆಡೆ ದಟ್ಟ ಮಂಜು ಕವಿದಿತ್ತಾದರೂ ವಿಮಾನಗಳ ಹಾರಾಟಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ.<br /> <br /> <strong>ಪ್ರಯಾಣಿಕರ ರಕ್ಷಣೆ: </strong>ಅತೀವ ಶೀತಗಾಳಿ, ಹಿಮಪಾತದಿಂದ ತೊಂದರೆಗೀಡಾಗಿ ಜಮ್ಮು ಮತ್ತು ಕಾಶ್ಮೀರದ ನಡುವೆ ಸಿಕ್ಕಿಹಾಕಿಕೊಂಡಿದ್ದ ಸುಮಾರು 550 ಪ್ರಯಾಣಿಕರನ್ನು ಭಾರತೀಯ ವಾಯು ಪಡೆ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ ಎಂದು ಕಾಶ್ಮೀರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.<br /> <br /> 10 ದಿನಗಳಿಂದ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿ ಪ್ರಯಾಣಿಕರು ಮತ್ತು ಈ ಮಾರ್ಗಮಧ್ಯದಲ್ಲಿನ ಕರ್ತವ್ಯನಿರತ ಸೈನಿಕರು ತೀವ್ರ ತೊಂದರೆಗೆ ಒಳಗಾಗ್ದ್ದಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಪಿಟಿಐ): </strong>ಲಡಾಖ್ ಪ್ರಾಂತ್ಯ ಶನಿವಾರ ಮುಂಜಾನೆ ಅಕ್ಷರಶಃ ಚಳಿಯಿಂದ ತತ್ತರಿಸಿತು. ಅಂತೆಯೇ ಮೈ ಕೊರೆಯುವಂತೆ ಬೀಸುತ್ತಿರುವ ಥಂಡಿ ಗಾಳಿ ಕಾಶ್ಮೀರ ಕಣಿವೆಯಾದ್ಯಂತ ಮತ್ತಷ್ಟು ಬಿರುಸುಗೊಂಡಿತ್ತು.<br /> <br /> ಲೆಹ್ ಪಟ್ಟಣದಲ್ಲಿ ತಾಪಮಾನ ಮೈನಸ್ 21.8 ಡಿಗ್ರಿ ಸೆಲ್ಸಿಯಸ್ಗೆ ಇಳಿದ ಪರಿಣಾಮ ಈ ಬಾರಿಯ ಕನಿಷ್ಠ ಉಷ್ಣಾಂಶ ಈ ಪ್ರದೇಶದಲ್ಲಿ ದಾಖಲಾಯಿತು ಎಂದು ಹವಾಮಾನ ವಿಭಾಗದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.<br /> <br /> ಸಮೀಪದ ಕಾರ್ಗಿಲ್ ಪಟ್ಟಣದಲ್ಲಿ ತಾಪಮಾನ ಮೈನಸ್ 21.0 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾದರೆ ಪಹಲ್ಗಾಂವ್ನಲ್ಲಿ ಮೈನಸ್ 16.5, ಗುಲ್ಮಾರ್ಗ್ನಲ್ಲಿ ಮೈನಸ್ 16.2 ಹಾಗೂ ಶ್ರೀನಗರದಲ್ಲಿ ಮೈನಸ್ 5 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು. ಕಣಿವೆಯ ವಿವಿಧೆಡೆ ಹಿಮಪಾತ ಇನ್ನೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.<br /> <br /> <strong>ಪಂಜಾಬ್-ಹರಿಯಾಣ ರಾಜ್ಯಗಳಲ್ಲಿ ಶೀತಗಾಳಿ: </strong>ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಶನಿವಾರ ಮುಂಜಾನೆ ತಾಪಮಾನ 0.3 ಡಿಗ್ರಿಗೆ ಇಳಿದಿದ್ದು ಸಾಮಾನ್ಯ ಸ್ಥಿತಿಗಿಂತಲೂ ಕೆಳಕ್ಕೆ ಜಾರಿದೆ.<br /> ಎರಡೂ ರಾಜ್ಯಗಳಲ್ಲಿ ಗಾಢ ಮಂಜು ಕವಿದಿದ್ದು, ರಸ್ತೆ ಮತ್ತು ರೈಲು ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿದೆ.<br /> <br /> <strong>ಥರಗುಟ್ಟುತ್ತಿರುವ ದೆಹಲಿ:</strong> ಶನಿವಾರ ಮುಂಜಾನೆ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ ಕನಿಷ್ಠಮಟ್ಟಕ್ಕೆ ಇಳಿಯುವ ಮೂಲಕ ಸಾಮಾನ್ಯ ಜನಜೀವನ ಚಳಿಯಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು. <br /> <br /> ಶುಕ್ರವಾರ 4.5ರಷ್ಟು ಇದ್ದ ತಾಪಮಾನ ಶನಿವಾರ ಮುಂಜಾನೆ 5.4 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು ಎಂಬುದೇ ಸಮಾಧಾನಕರ ಅಂಶವಾಗಿ ಕಂಡು ಬಂದಿತು. ಎಲ್ಲೆಡೆ ದಟ್ಟ ಮಂಜು ಕವಿದಿತ್ತಾದರೂ ವಿಮಾನಗಳ ಹಾರಾಟಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ.<br /> <br /> <strong>ಪ್ರಯಾಣಿಕರ ರಕ್ಷಣೆ: </strong>ಅತೀವ ಶೀತಗಾಳಿ, ಹಿಮಪಾತದಿಂದ ತೊಂದರೆಗೀಡಾಗಿ ಜಮ್ಮು ಮತ್ತು ಕಾಶ್ಮೀರದ ನಡುವೆ ಸಿಕ್ಕಿಹಾಕಿಕೊಂಡಿದ್ದ ಸುಮಾರು 550 ಪ್ರಯಾಣಿಕರನ್ನು ಭಾರತೀಯ ವಾಯು ಪಡೆ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ ಎಂದು ಕಾಶ್ಮೀರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.<br /> <br /> 10 ದಿನಗಳಿಂದ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿ ಪ್ರಯಾಣಿಕರು ಮತ್ತು ಈ ಮಾರ್ಗಮಧ್ಯದಲ್ಲಿನ ಕರ್ತವ್ಯನಿರತ ಸೈನಿಕರು ತೀವ್ರ ತೊಂದರೆಗೆ ಒಳಗಾಗ್ದ್ದಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>