<p><strong>ಕಮಲಾಪುರ (ಹೊಸಪೇಟೆ): </strong>ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಕಮಲಾಪುರ ಕೆರೆಗೆ ಒತ್ತುವರಿ ಮತ್ತು ಹೂಳು ಎಂಬ ಭೂತಗಳು ಬೆಂಬಿಡದೆ ಕಾಡುತ್ತಿವೆ.<br /> <br /> ಒಟ್ಟು 476 ಎಕರೆ ಪ್ರದೇಶದಲ್ಲಿ ಹರಿಡಿಕೊಂಡಿದ್ದ ಈ ಕೆರೆ ಒಂದು ಕಾಲದಲ್ಲಿ ವಿಜಯನಗರ ಅರಸರ ರಾಜಧಾನಿ ಹಂಪಿ ಜನರ ಜೀವನಾಡಿಯಾಗಿತ್ತು. ಅಂದಿನಿಂದಲೂ ಈ ಪ್ರದೇಶದ 1200ಗೂ ಎಕರೆಗೂ ಅಧಿಕ ಪ್ರದೇಶಕ್ಕೆ ನೀರಾವರಿ ಹಾಗೂ ಮೀನುಗಾರಿಕೆ ಅನುಕೂಲ ಕಲ್ಪಿಸಿತ್ತು. ಆದರೆ, ಕೆರೆಯಲ್ಲಿ ಹೂಳು ಹಾಗೂ ಒತ್ತುವರಿಯಿಂದಾಗಿ ಕೆರೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ.<br /> <br /> ಈ ಕುರಿತು ಸಣ್ಣ ನೀರಾವರಿ ಇಲಾಖೆ ನಾಲ್ಕು ವರ್ಷಗಳ ಹಿಂದೆಯೆ ವರದಿ ಸಲ್ಲಿಸಿದೆ. ಅದರೆ, ಸರ್ಕಾರ ಅಥವಾ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.<br /> <br /> ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿರುವ ಕೃಷಿ ಚಟುವಟಿಕೆಗಳಿಂದಾಗಿ ವೇಗವಾಗಿ ಹೂಳು ತುಂಬಲಾರಂಭಿಸಿದೆ. ಆರಂಭದಲ್ಲಿ ಒಟ್ಟು 28 ಅಡಿ ಆಳವಿದ್ದ ಈ ಕೆರೆ 1950ರ ಮಾಹಿತಿಯಂತೆ 6 ಅಡಿ, 1991ರಲ್ಲಿ 12 ಮತ್ತು ಸದ್ಯ ಅಂದಾಜು 15 ಅಡಿಯಷ್ಟು ಹೂಳು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ. <br /> <br /> ಮಳೆಯ ನೀರು ಸೇರಿದಂತೆ ವರ್ಷದ 11 ತಿಂಗಳು ನೀರು ಕೊಡುವ ರಾಯ, ಬಸವಣ್ಣ ಹೆಸರಿನ ವಿಜಯನಗರ ಕಾಲದ ಕಾಲುವೆಗಳು ಸೇರಿದಂತೆ ತುಂಗಭದ್ರಾ ಜಲಾಶಯದ ಪವರ್ ಕೆನಾಲ್ ತೂಬಿನಿಂದಲೂ ಕೆರೆ ನೀರನ್ನು ಹರಿಸಲಾಗುತ್ತಿದೆ.<br /> <br /> ಈ ಹಿನ್ನೆಲೆಯಲ್ಲಿ ವರ್ಷದುದ್ದಕ್ಕೂ ಜನ ಜಾನುವಾರು ಸೇರಿದಂತೆ ಎರಡು ಬೆಳೆ ಬೆಳೆಯಲು ರೈತರಿಗೆ ಈ ಕೆರೆಯೇ ಆಧಾರವಾಗಿದೆ. <br /> ಅಲ್ಲದೆ ಹಿಂದೆ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಮಾದರಿ ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಆ ಯೋಜನೆ ಈವರೆಗೂ ಕಡತದಲ್ಲಿ ದೂಳು ತಿನ್ನುತ್ತಿದೆ. ಕಮಲಾಪುರ ರೈತ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಸೀತಾರಾಮಸಿಂಗ್ ಅವರು ಕೆರೆ ಒತ್ತುವರಿ ತೆರವುಗೊಳಿಸುವಂತೆ 1991ರಲ್ಲಿಯೆ ಹೋರಾಟಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೂ ಯಾವುದೇ ಪ್ರಯೋಜನವಿಲ್ಲ.<br /> <br /> ತಾಲ್ಲೂಕಿನಲ್ಲಿರುವ 14 ಸಣ್ಣ ಕೆರೆಗಳು ಸೇರಿದಂತೆ ಸಣ್ಣ ನೀರಾವರಿ ಇಲಾಖೆ 5 ದೊಡ್ಡ ಕೆರೆಗಳು ಮಳೆಗಾಲದಲ್ಲಿಯ ನೀರು ನಿಲ್ಲದಂತಹ ಪರಿಸ್ಥಿತಿಗೆ ಬಂದು ತಲುಪಿರುವಾಗ ಅಂತರ್ಜಲ ವೃದ್ಧಿಯ ಮೂಲವೂ ದಿನೇ ದಿನೇ ಕ್ಷೀಣಿಸುತ್ತಿದೆ.<br /> <br /> ಕೃಷಿ, ಕುಡಿಯುವ ನೀರು, ಪಕ್ಷಿ ಸಂಕುಲ, ಜನ ಜಾನುವಾರುಗಳ ಆಶ್ರಯ ತಾಣವಾದ ಕಮಲಾಪುರ ಕೆರೆ ರಕ್ಷಿಸುವ ನಿಟ್ಟಿನಲ್ಲಿ ಹಿಂದೆಯೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೆ ಸರ್ಕಾರದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎನ್.ಕುಲಕರ್ಣಿ <strong>‘ಪ್ರಜಾವಾಣಿ’</strong>ಗೆ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ (ಹೊಸಪೇಟೆ): </strong>ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಕಮಲಾಪುರ ಕೆರೆಗೆ ಒತ್ತುವರಿ ಮತ್ತು ಹೂಳು ಎಂಬ ಭೂತಗಳು ಬೆಂಬಿಡದೆ ಕಾಡುತ್ತಿವೆ.<br /> <br /> ಒಟ್ಟು 476 ಎಕರೆ ಪ್ರದೇಶದಲ್ಲಿ ಹರಿಡಿಕೊಂಡಿದ್ದ ಈ ಕೆರೆ ಒಂದು ಕಾಲದಲ್ಲಿ ವಿಜಯನಗರ ಅರಸರ ರಾಜಧಾನಿ ಹಂಪಿ ಜನರ ಜೀವನಾಡಿಯಾಗಿತ್ತು. ಅಂದಿನಿಂದಲೂ ಈ ಪ್ರದೇಶದ 1200ಗೂ ಎಕರೆಗೂ ಅಧಿಕ ಪ್ರದೇಶಕ್ಕೆ ನೀರಾವರಿ ಹಾಗೂ ಮೀನುಗಾರಿಕೆ ಅನುಕೂಲ ಕಲ್ಪಿಸಿತ್ತು. ಆದರೆ, ಕೆರೆಯಲ್ಲಿ ಹೂಳು ಹಾಗೂ ಒತ್ತುವರಿಯಿಂದಾಗಿ ಕೆರೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ.<br /> <br /> ಈ ಕುರಿತು ಸಣ್ಣ ನೀರಾವರಿ ಇಲಾಖೆ ನಾಲ್ಕು ವರ್ಷಗಳ ಹಿಂದೆಯೆ ವರದಿ ಸಲ್ಲಿಸಿದೆ. ಅದರೆ, ಸರ್ಕಾರ ಅಥವಾ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.<br /> <br /> ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿರುವ ಕೃಷಿ ಚಟುವಟಿಕೆಗಳಿಂದಾಗಿ ವೇಗವಾಗಿ ಹೂಳು ತುಂಬಲಾರಂಭಿಸಿದೆ. ಆರಂಭದಲ್ಲಿ ಒಟ್ಟು 28 ಅಡಿ ಆಳವಿದ್ದ ಈ ಕೆರೆ 1950ರ ಮಾಹಿತಿಯಂತೆ 6 ಅಡಿ, 1991ರಲ್ಲಿ 12 ಮತ್ತು ಸದ್ಯ ಅಂದಾಜು 15 ಅಡಿಯಷ್ಟು ಹೂಳು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ. <br /> <br /> ಮಳೆಯ ನೀರು ಸೇರಿದಂತೆ ವರ್ಷದ 11 ತಿಂಗಳು ನೀರು ಕೊಡುವ ರಾಯ, ಬಸವಣ್ಣ ಹೆಸರಿನ ವಿಜಯನಗರ ಕಾಲದ ಕಾಲುವೆಗಳು ಸೇರಿದಂತೆ ತುಂಗಭದ್ರಾ ಜಲಾಶಯದ ಪವರ್ ಕೆನಾಲ್ ತೂಬಿನಿಂದಲೂ ಕೆರೆ ನೀರನ್ನು ಹರಿಸಲಾಗುತ್ತಿದೆ.<br /> <br /> ಈ ಹಿನ್ನೆಲೆಯಲ್ಲಿ ವರ್ಷದುದ್ದಕ್ಕೂ ಜನ ಜಾನುವಾರು ಸೇರಿದಂತೆ ಎರಡು ಬೆಳೆ ಬೆಳೆಯಲು ರೈತರಿಗೆ ಈ ಕೆರೆಯೇ ಆಧಾರವಾಗಿದೆ. <br /> ಅಲ್ಲದೆ ಹಿಂದೆ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಮಾದರಿ ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಆ ಯೋಜನೆ ಈವರೆಗೂ ಕಡತದಲ್ಲಿ ದೂಳು ತಿನ್ನುತ್ತಿದೆ. ಕಮಲಾಪುರ ರೈತ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಸೀತಾರಾಮಸಿಂಗ್ ಅವರು ಕೆರೆ ಒತ್ತುವರಿ ತೆರವುಗೊಳಿಸುವಂತೆ 1991ರಲ್ಲಿಯೆ ಹೋರಾಟಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೂ ಯಾವುದೇ ಪ್ರಯೋಜನವಿಲ್ಲ.<br /> <br /> ತಾಲ್ಲೂಕಿನಲ್ಲಿರುವ 14 ಸಣ್ಣ ಕೆರೆಗಳು ಸೇರಿದಂತೆ ಸಣ್ಣ ನೀರಾವರಿ ಇಲಾಖೆ 5 ದೊಡ್ಡ ಕೆರೆಗಳು ಮಳೆಗಾಲದಲ್ಲಿಯ ನೀರು ನಿಲ್ಲದಂತಹ ಪರಿಸ್ಥಿತಿಗೆ ಬಂದು ತಲುಪಿರುವಾಗ ಅಂತರ್ಜಲ ವೃದ್ಧಿಯ ಮೂಲವೂ ದಿನೇ ದಿನೇ ಕ್ಷೀಣಿಸುತ್ತಿದೆ.<br /> <br /> ಕೃಷಿ, ಕುಡಿಯುವ ನೀರು, ಪಕ್ಷಿ ಸಂಕುಲ, ಜನ ಜಾನುವಾರುಗಳ ಆಶ್ರಯ ತಾಣವಾದ ಕಮಲಾಪುರ ಕೆರೆ ರಕ್ಷಿಸುವ ನಿಟ್ಟಿನಲ್ಲಿ ಹಿಂದೆಯೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೆ ಸರ್ಕಾರದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎನ್.ಕುಲಕರ್ಣಿ <strong>‘ಪ್ರಜಾವಾಣಿ’</strong>ಗೆ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>