<p><strong>ಬೆಂಗಳೂರು:</strong> ಹೆಣ್ಣೂರಿನ ಮುಖ್ಯರಸ್ತೆ ಯಲ್ಲಿ ಬಿದ್ದಿದ್ದ ಗುಂಡಿಗಳು ಕಾಣೆ ಯಾಗಿದ್ದು, ದೂಳು ಸಹ ಮಾಯವಾಗಿದೆ. ಕೊಳಚೆ ನೀರು ಹರಿಯವುದು ಸ್ಥಗಿತಗೊಂಡಿದ್ದು, ಡಾಂಬರು ಹೊದಿಕೆಯನ್ನೂ ಕಂಡಿರುವ ರಸ್ತೆ, ಹೊಸ ರೂಪ ಪಡೆದಿದೆ.<br /> <br /> ಮೂರು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆ ಯಿಂದ ಹೆಣ್ಣೂರು ಭಾಗದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸು ತ್ತಿದ್ದರು. ಈ ಕುರಿತು ‘ಪ್ರಜಾವಾಣಿ’ ಅ.24ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅಲ್ಲಿನ ಜನರ ನರಕ ಯಾತನೆ ಮೇಲೆ ಬೆಳಕು ಚೆಲ್ಲಿತ್ತು. ಅದಕ್ಕೆ ಸ್ಪಂದಿಸಿರುವ ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ (ಬಿಬಿ ಎಂಪಿ) ರಸ್ತೆಯನ್ನು ದುರಸ್ತಿಗೊಳಿಸಿದೆ.<br /> <br /> ಬೃಹತ್ ಕಾಮಗಾರಿ ಯೋಜನೆ ಅಡಿಯಲ್ಲಿ ರಸ್ತೆಯ ಸುಧಾರಣೆಗೆ ಮೂರು ವರ್ಷಗಳ ಹಿಂದೆಯೇ ₨ 3.85 ಕೋಟಿ ಮಂಜೂರಾಗಿದ್ದರೂ ರಸ್ತೆ ಸುಧಾರಣೆ ಆಗಿರಲಿಲ್ಲ. ರಸ್ತೆ ದುರಸ್ತಿ ಮತ್ತು ಚರಂಡಿ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದರು. ಈ ಸಂಗತಿ ಮೇಲೂ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ರಸ್ತೆ ದುರಸ್ತಿ ಆಗಿರುವು ದರಿಂದ ಹೆಣ್ಣೂರು ಭಾಗದ ಜನ ಸಂತಸಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೆಣ್ಣೂರಿನ ಮುಖ್ಯರಸ್ತೆ ಯಲ್ಲಿ ಬಿದ್ದಿದ್ದ ಗುಂಡಿಗಳು ಕಾಣೆ ಯಾಗಿದ್ದು, ದೂಳು ಸಹ ಮಾಯವಾಗಿದೆ. ಕೊಳಚೆ ನೀರು ಹರಿಯವುದು ಸ್ಥಗಿತಗೊಂಡಿದ್ದು, ಡಾಂಬರು ಹೊದಿಕೆಯನ್ನೂ ಕಂಡಿರುವ ರಸ್ತೆ, ಹೊಸ ರೂಪ ಪಡೆದಿದೆ.<br /> <br /> ಮೂರು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆ ಯಿಂದ ಹೆಣ್ಣೂರು ಭಾಗದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸು ತ್ತಿದ್ದರು. ಈ ಕುರಿತು ‘ಪ್ರಜಾವಾಣಿ’ ಅ.24ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅಲ್ಲಿನ ಜನರ ನರಕ ಯಾತನೆ ಮೇಲೆ ಬೆಳಕು ಚೆಲ್ಲಿತ್ತು. ಅದಕ್ಕೆ ಸ್ಪಂದಿಸಿರುವ ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ (ಬಿಬಿ ಎಂಪಿ) ರಸ್ತೆಯನ್ನು ದುರಸ್ತಿಗೊಳಿಸಿದೆ.<br /> <br /> ಬೃಹತ್ ಕಾಮಗಾರಿ ಯೋಜನೆ ಅಡಿಯಲ್ಲಿ ರಸ್ತೆಯ ಸುಧಾರಣೆಗೆ ಮೂರು ವರ್ಷಗಳ ಹಿಂದೆಯೇ ₨ 3.85 ಕೋಟಿ ಮಂಜೂರಾಗಿದ್ದರೂ ರಸ್ತೆ ಸುಧಾರಣೆ ಆಗಿರಲಿಲ್ಲ. ರಸ್ತೆ ದುರಸ್ತಿ ಮತ್ತು ಚರಂಡಿ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದರು. ಈ ಸಂಗತಿ ಮೇಲೂ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ರಸ್ತೆ ದುರಸ್ತಿ ಆಗಿರುವು ದರಿಂದ ಹೆಣ್ಣೂರು ಭಾಗದ ಜನ ಸಂತಸಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>