<p><strong>ಕಾರವಾರ:</strong> ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದುಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮತ್ತೆ ಗುಂಡಿಗಳ ದರ್ಶನ ಆರಂಭವಾಗಿದೆ. <br /> <br /> ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 17, 206, 63 ಹಾದು ಹೋಗಿದ್ದು ಒಟ್ಟು 324 ಕಿ.ಮೀ ಉದ್ದವಿದೆ. ಈ ರಸ್ತೆಗಳು ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದಷ್ಟೇ ಮರುಡಾಂಬರೀಕರಣ ಮಾಡಲಾಗಿತ್ತು. ಈಗ ಅವು ಮತ್ತೆ ಬಾಯ್ತೆರೆದು ನಿಂತಿವೆ. ಈ ಮೂರೂ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಭಾರಿ ಪ್ರಯಾಸದಾಯಕವಾಗಿದೆ.<br /> <br /> ರಾಷ್ಟ್ರೀಯ ಹೆದ್ದಾರಿ -63ರಲ್ಲಿ ಮಾಸ್ತಿಕಟ್ಟೆ, ಸುಂಕಸಾಳ, ಹೆಬ್ಬುಳ ಮತ್ತು ಅರಬೈಲ ಘಟ್ಟದ ಕೆಲವೆಡೆಗಳಲ್ಲಿ ಡಾಂಬರು ಕಿತ್ತು ಹೋಗಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಿರಂತವಾಗಿ ಮಳೆ ಸುರಿದಿದ್ದರಿಂದ ಗುಂಡಿಗಳು ಇಡೀ ರಸ್ತೆಯನ್ನು ವ್ಯಾಪಿಸಿವೆ. <br /> <br /> ರಾಷ್ಟ್ರೀಯ ಹೆದ್ದಾರಿ-17 ಪಣಜಿ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿಯಲ್ಲಿ ರಾಜ್ಯದ ಗಡಿ ಮಾಜಾಳಿ (ಅಬಕಾರಿ ತನಿಖಾ ಠಾಣೆ)ಯಿಂದ ಕಾರವಾರ ವಾಣಿಜ್ಯ ಬಂದರುವರೆಗೆ ಡಾಂಬರು ಕಿತ್ತು ಗುಂಡಿಗಳು ಬಿದ್ದಿದ್ದು ಗುಂಡಿ ತಪ್ಪಿಸಲು ವಾಹನಗಳ ಚಾಲಕರು ಸರ್ಕಸ್ ಮಾಡಬೇಕಿದೆ.<br /> <br /> ಅಂಕೋಲಾದಿಂದ ಭಟ್ಕಳ ಗಡಿವರೆಗೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದ ಈ ರಸ್ತೆಯನ್ನು ಮೇ ತಿಂಗಳಲ್ಲಷ್ಟೇ ದುರಸ್ತಿ ಮಾಡಲಾಗಿತ್ತು. ಮಿತಿಗಿಂತ ಹೆಚ್ಚು ಭಾರದ ಮ್ಯಾಂಗನೀಸ್ ಅದಿರು ತುಂಬಿದ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದರು.<br /> <br /> ಆದರೆ, ಒಂದು ವರ್ಷದಿಂದ ಅದಿರು ಲಾರಿಗಳ ಸಂಚಾರ ಬಂದ್ ಆಗಿದ್ದರೂ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಿಂದ ಅಪ್ಸರಕೊಂಡ (ಹೊನ್ನಾವರ) ತಿರುವಿನವರೆಗೆ ರಸ್ತೆಯಲ್ಲಿ ಸಿಕ್ಕಾಪಟ್ಟೆ ಗುಂಡಿಗಳು ಬಿದ್ದಿವೆ. ಈ ಗುಂಡಿಗಳನ್ನು ತಪ್ಪಿಸಲು ವಾಹನಗಳು ವಿರುದ್ಧ ಬದಿಯಲ್ಲಿ ಚಲಿಸುವುದರಿಂದ ಆಗಾಗ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ.<br /> <br /> ~ರಸ್ತೆಯ ದುಃಸ್ಥಿತಿಯಿಂದ ಪ್ರಯಾಣಿಕರಷ್ಟೇ ಅಲ್ಲ ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಮ್ಯಾಕ್ಸಿಕ್ಯಾಬ್ ಪದೇಪದೇ ಕೆಟ್ಟು ನಿಲ್ಲುತ್ತಿವೆ. ಎಂಜಿನ್ನಲ್ಲಿ ಪದೇಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಗದಿತ ವೇಳೆಯೊಳಗೆ ನಿಗದಿತ ಸ್ಥಳ ತಲುಪುವ ಧಾವಂತದಿಂದ ಗುಂಡಿಗಳನ್ನು ಲೆಕ್ಕಿಸದೆ ವಾಹನ ಓಡಿಸುವ ಅನಿವಾರ್ಯತೆ ಇದೆ. ಒಮ್ಮಮ್ಮೆ ದಿನದ ದುಡಿಮೆಯೆಲ್ಲ ವಾಹನ ರಿಪೇರಿಗೇ ಹೋಗುತ್ತದೆ~ ಎನ್ನುತ್ತಾರೆ ಮ್ಯಾಕ್ಸಿಕ್ಯಾಬ್ ಮಾಲೀಕರು.<br /> <br /> ಹೊನ್ನಾವರ-ಕುಮಟಾ- ಅಂಕೋಲಾ ಮಧ್ಯೆಯೂ ಹೆದ್ದಾರಿ ತೀವ್ರ ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ 50, 100 ಮೀಟರ್ ಉದ್ದ ಡಾಂಬರು ಕಿತ್ತು ಹೋಗಿದ್ದು ಬರೀ ಜಲ್ಲಿ ಕಾಣಿಸುತ್ತಿವೆ. ಇದರ ಮೇಲೆ ಭಾರಿ ವಾಹನಗಳು ಹೋದಾಗ ದೂಳು ಎದ್ದು ವಾತಾವರಣವೆಲ್ಲ ಕಲುಷಿತಗೊಳ್ಳುತ್ತಿದೆ. <br /> <br /> ಅರಬೈಲ ಘಟ್ಟ-ಮಾಸ್ತಿಕಟ್ಟೆ-ಸುಂಕಸಾಳವರೆಗೆ ಒಟ್ಟು 31 ಕಿ.ಮೀ ರಸ್ತೆ ಮರು ಡಾಂಬರೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ಉಪವಿಭಾಗವು 18 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸಾರಿಗೆ ಇಲಾಖೆ ಕಳುಹಿಸಿದ್ದೆ. ಅನುಮೋದನೆ ಇನ್ನೂ ಸಿಕ್ಕಿಲ್ಲ.<br /> <br /> ~ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿರುವ ಬಗ್ಗೆ ದೂರುಗಳು ಬರುತ್ತಿವೆ. ತುರ್ತು ದುರಸ್ತಿ ಕೈಗೊಳ್ಳಲಾಗುತ್ತಿದೆ. ಮಣ್ಣು ಹಾಕಿ ಗುಂಡಿ ಮುಚ್ಚಿದರೆ ಮಳೆ ಬಂದಾಗ ನೀರಿನೊಂದಿಗೆ ಹರಿದು ಹೋಗುತ್ತದೆ. ಮಳೆ ಇಳಿಮುಖವಾದ ನಂತರ ದುರಸ್ತಿ ಕೈಗೊಳ್ಳಲಾಗುವುದು~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ~ಪ್ರಜಾವಾಣಿ~ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದುಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮತ್ತೆ ಗುಂಡಿಗಳ ದರ್ಶನ ಆರಂಭವಾಗಿದೆ. <br /> <br /> ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 17, 206, 63 ಹಾದು ಹೋಗಿದ್ದು ಒಟ್ಟು 324 ಕಿ.ಮೀ ಉದ್ದವಿದೆ. ಈ ರಸ್ತೆಗಳು ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದಷ್ಟೇ ಮರುಡಾಂಬರೀಕರಣ ಮಾಡಲಾಗಿತ್ತು. ಈಗ ಅವು ಮತ್ತೆ ಬಾಯ್ತೆರೆದು ನಿಂತಿವೆ. ಈ ಮೂರೂ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಭಾರಿ ಪ್ರಯಾಸದಾಯಕವಾಗಿದೆ.<br /> <br /> ರಾಷ್ಟ್ರೀಯ ಹೆದ್ದಾರಿ -63ರಲ್ಲಿ ಮಾಸ್ತಿಕಟ್ಟೆ, ಸುಂಕಸಾಳ, ಹೆಬ್ಬುಳ ಮತ್ತು ಅರಬೈಲ ಘಟ್ಟದ ಕೆಲವೆಡೆಗಳಲ್ಲಿ ಡಾಂಬರು ಕಿತ್ತು ಹೋಗಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ನಿರಂತವಾಗಿ ಮಳೆ ಸುರಿದಿದ್ದರಿಂದ ಗುಂಡಿಗಳು ಇಡೀ ರಸ್ತೆಯನ್ನು ವ್ಯಾಪಿಸಿವೆ. <br /> <br /> ರಾಷ್ಟ್ರೀಯ ಹೆದ್ದಾರಿ-17 ಪಣಜಿ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿಯಲ್ಲಿ ರಾಜ್ಯದ ಗಡಿ ಮಾಜಾಳಿ (ಅಬಕಾರಿ ತನಿಖಾ ಠಾಣೆ)ಯಿಂದ ಕಾರವಾರ ವಾಣಿಜ್ಯ ಬಂದರುವರೆಗೆ ಡಾಂಬರು ಕಿತ್ತು ಗುಂಡಿಗಳು ಬಿದ್ದಿದ್ದು ಗುಂಡಿ ತಪ್ಪಿಸಲು ವಾಹನಗಳ ಚಾಲಕರು ಸರ್ಕಸ್ ಮಾಡಬೇಕಿದೆ.<br /> <br /> ಅಂಕೋಲಾದಿಂದ ಭಟ್ಕಳ ಗಡಿವರೆಗೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದ ಈ ರಸ್ತೆಯನ್ನು ಮೇ ತಿಂಗಳಲ್ಲಷ್ಟೇ ದುರಸ್ತಿ ಮಾಡಲಾಗಿತ್ತು. ಮಿತಿಗಿಂತ ಹೆಚ್ಚು ಭಾರದ ಮ್ಯಾಂಗನೀಸ್ ಅದಿರು ತುಂಬಿದ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದರು.<br /> <br /> ಆದರೆ, ಒಂದು ವರ್ಷದಿಂದ ಅದಿರು ಲಾರಿಗಳ ಸಂಚಾರ ಬಂದ್ ಆಗಿದ್ದರೂ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಿಂದ ಅಪ್ಸರಕೊಂಡ (ಹೊನ್ನಾವರ) ತಿರುವಿನವರೆಗೆ ರಸ್ತೆಯಲ್ಲಿ ಸಿಕ್ಕಾಪಟ್ಟೆ ಗುಂಡಿಗಳು ಬಿದ್ದಿವೆ. ಈ ಗುಂಡಿಗಳನ್ನು ತಪ್ಪಿಸಲು ವಾಹನಗಳು ವಿರುದ್ಧ ಬದಿಯಲ್ಲಿ ಚಲಿಸುವುದರಿಂದ ಆಗಾಗ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ.<br /> <br /> ~ರಸ್ತೆಯ ದುಃಸ್ಥಿತಿಯಿಂದ ಪ್ರಯಾಣಿಕರಷ್ಟೇ ಅಲ್ಲ ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಮ್ಯಾಕ್ಸಿಕ್ಯಾಬ್ ಪದೇಪದೇ ಕೆಟ್ಟು ನಿಲ್ಲುತ್ತಿವೆ. ಎಂಜಿನ್ನಲ್ಲಿ ಪದೇಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಗದಿತ ವೇಳೆಯೊಳಗೆ ನಿಗದಿತ ಸ್ಥಳ ತಲುಪುವ ಧಾವಂತದಿಂದ ಗುಂಡಿಗಳನ್ನು ಲೆಕ್ಕಿಸದೆ ವಾಹನ ಓಡಿಸುವ ಅನಿವಾರ್ಯತೆ ಇದೆ. ಒಮ್ಮಮ್ಮೆ ದಿನದ ದುಡಿಮೆಯೆಲ್ಲ ವಾಹನ ರಿಪೇರಿಗೇ ಹೋಗುತ್ತದೆ~ ಎನ್ನುತ್ತಾರೆ ಮ್ಯಾಕ್ಸಿಕ್ಯಾಬ್ ಮಾಲೀಕರು.<br /> <br /> ಹೊನ್ನಾವರ-ಕುಮಟಾ- ಅಂಕೋಲಾ ಮಧ್ಯೆಯೂ ಹೆದ್ದಾರಿ ತೀವ್ರ ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ 50, 100 ಮೀಟರ್ ಉದ್ದ ಡಾಂಬರು ಕಿತ್ತು ಹೋಗಿದ್ದು ಬರೀ ಜಲ್ಲಿ ಕಾಣಿಸುತ್ತಿವೆ. ಇದರ ಮೇಲೆ ಭಾರಿ ವಾಹನಗಳು ಹೋದಾಗ ದೂಳು ಎದ್ದು ವಾತಾವರಣವೆಲ್ಲ ಕಲುಷಿತಗೊಳ್ಳುತ್ತಿದೆ. <br /> <br /> ಅರಬೈಲ ಘಟ್ಟ-ಮಾಸ್ತಿಕಟ್ಟೆ-ಸುಂಕಸಾಳವರೆಗೆ ಒಟ್ಟು 31 ಕಿ.ಮೀ ರಸ್ತೆ ಮರು ಡಾಂಬರೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ಉಪವಿಭಾಗವು 18 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸಾರಿಗೆ ಇಲಾಖೆ ಕಳುಹಿಸಿದ್ದೆ. ಅನುಮೋದನೆ ಇನ್ನೂ ಸಿಕ್ಕಿಲ್ಲ.<br /> <br /> ~ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿರುವ ಬಗ್ಗೆ ದೂರುಗಳು ಬರುತ್ತಿವೆ. ತುರ್ತು ದುರಸ್ತಿ ಕೈಗೊಳ್ಳಲಾಗುತ್ತಿದೆ. ಮಣ್ಣು ಹಾಕಿ ಗುಂಡಿ ಮುಚ್ಚಿದರೆ ಮಳೆ ಬಂದಾಗ ನೀರಿನೊಂದಿಗೆ ಹರಿದು ಹೋಗುತ್ತದೆ. ಮಳೆ ಇಳಿಮುಖವಾದ ನಂತರ ದುರಸ್ತಿ ಕೈಗೊಳ್ಳಲಾಗುವುದು~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ~ಪ್ರಜಾವಾಣಿ~ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>