<p><strong>ಹೊಳೆನರಸೀಪುರ:</strong> ಹಳ್ಳಿಮೈಸೂರು ತಾಲ್ಲೂಕಿನ ದೊಡ್ಡ ಹೋಬಳಿ. ಹೋಬಳಿ ಕೇಂದ್ರವಾದ ಹಳ್ಳಿಮೈಸೂರಿಗೆ ಪ್ರತಿ ದಿನ 50ಕ್ಕೂ ಹೆಚ್ಚು ಬಸ್ ಸೇರಿದಂತೆ ಟ್ರಾಕ್ಸ್, ಆಟೋ, ದ್ವಿಚಕ್ರವಾಹನಗಳ ಓಡಾಟವೂ ಹೆಚ್ಚಿದೆ.<br /> <br /> ಹಾಸನ-ಮೈಸೂರು ರಸ್ತೆಯ ತಿರುವಿನಿಂದ ಹಳ್ಳಿಮೈಸೂರಿನವರೆಗೂ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ. ಈ ರಸ್ತೆಯ ಗುಂಡಿಯಲ್ಲಿ ಹತ್ತಿ ಇಳಿದೇ ಎಲ್ಲಾ ವಾಹನಗಳು ಓಡಾಡ ಬೇಕು. ಗುಂಡಿಗಳನ್ನು ತಪ್ಪಿಸಿ ಒಡಾಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. <br /> <br /> ಪಟ್ಟಣದಿಂದ ಹಳ್ಳಿಮೈಸೂರಿಗೆ 18 ಕಿ.ಮೀ ಇದೆ ಈ ಊರು. ಇಷ್ಟು ಕಡಿಮೆ ದೂರವನ್ನು ಕ್ರಮಿಸಲು 45 ನಿಮಿಷ ಬೇಕೇ ಬೇಕು. ಈ ಮಾರ್ಗದಲ್ಲಿ ಓಡಾಡುವ ವಾಹನಗಳಲ್ಲಿ ಪ್ರತೀದಿನ ಏನಾದರೊಂದು ಮುರಿದಿರುತ್ತೆ. ಒಮ್ಮೆ ಬ್ಲೇಡ್ ಮುರಿದರೆ, ಮತ್ತೊಮ್ಮೆ ಟೈರ್ ಒಡೆಯುತ್ತೆ. ಇನ್ನೊಮ್ಮೆ ಇನ್ನೊಂದು ಅವಘಡವಾಗಿರುತ್ತೆ ಎನ್ನುತ್ತಾರೆ ಈ ಮಾರ್ಗದ ವಾಹನ ಚಾಲಕರು.<br /> <br /> `ನಾವು ಬಿಟ್ಟರೆ ಮತ್ತೊಬ್ಬರು ಈ ಮಾರ್ಗದಲ್ಲಿ ಓಡಿಸಲು ಸಿದ್ಧರಿರುತ್ತಾರೆ. ಆದ್ದರಿಂದ ನಮಗೆ ಈ ಮಾರ್ಗದಲ್ಲಿ ನಷ್ಟವಾಗುತ್ತಿದ್ದರೂ ಓಡಿಸುತ್ತೇವೆ~ ಎನ್ನುತ್ತಾರೆ ಮಾಲೀಕರುಗಳು.<br /> <br /> ಸಾರಿಗೆ ಸಂಸ್ಥೆ ಬಸ್ಗಳ ಚಾಲಕರೂ ಈ ಮಾರ್ಗದಲ್ಲಿ ಓಡಾಡಲು ಸಾಧ್ಯ ಇಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ನಮಗಾಗುವ ತೊಂದರೆ ಮರೆತು ಬಸ್ಗಳನ್ನು ಓಡಿಸುತ್ತೇವೆ ಎಂದರು. <br /> <br /> ಈ ಮಾರ್ಗದಲ್ಲಿ ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಶಾಶ್ವತ ಅಂಗವಿಕಲತೆಗೆ ತುತ್ತಾಗಿದ್ದಾರೆ. ಈ ಭಾಗದ ಪ್ರಯಾಣಿಕರು ಇಷ್ಟು ಸಂಕಷ್ಟ ಅನುಭವಿಸುತ್ತಿದ್ದರೂ ಶಾಸಕ ಎಚ್.ಡಿ. ರೇವಣ್ಣ ಅವರಾಗಲಿ, ಹಳ್ಳಿಮೈಸೂರು ಹೋಬಳಿ ಮತ ಕ್ಷೇತ್ರದ ಶಾಸಕ ಎ. ಮಂಜು ಅಗಾಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಸರಿಪಡಿಸುವ ಬಗ್ಗೆ ಯೋಚಿಸಿದಂತೆಯೇ ಇಲ್ಲ. ಈ ಭಾಗದ ಪ್ರಯಾಣಿಕರು ಶಾಸಕರ ನಿರ್ಲಕ್ಷತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಹಳ್ಳಿಮೈಸೂರು ತಾಲ್ಲೂಕಿನ ದೊಡ್ಡ ಹೋಬಳಿ. ಹೋಬಳಿ ಕೇಂದ್ರವಾದ ಹಳ್ಳಿಮೈಸೂರಿಗೆ ಪ್ರತಿ ದಿನ 50ಕ್ಕೂ ಹೆಚ್ಚು ಬಸ್ ಸೇರಿದಂತೆ ಟ್ರಾಕ್ಸ್, ಆಟೋ, ದ್ವಿಚಕ್ರವಾಹನಗಳ ಓಡಾಟವೂ ಹೆಚ್ಚಿದೆ.<br /> <br /> ಹಾಸನ-ಮೈಸೂರು ರಸ್ತೆಯ ತಿರುವಿನಿಂದ ಹಳ್ಳಿಮೈಸೂರಿನವರೆಗೂ ರಸ್ತೆಯಲ್ಲಿರುವ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ. ಈ ರಸ್ತೆಯ ಗುಂಡಿಯಲ್ಲಿ ಹತ್ತಿ ಇಳಿದೇ ಎಲ್ಲಾ ವಾಹನಗಳು ಓಡಾಡ ಬೇಕು. ಗುಂಡಿಗಳನ್ನು ತಪ್ಪಿಸಿ ಒಡಾಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. <br /> <br /> ಪಟ್ಟಣದಿಂದ ಹಳ್ಳಿಮೈಸೂರಿಗೆ 18 ಕಿ.ಮೀ ಇದೆ ಈ ಊರು. ಇಷ್ಟು ಕಡಿಮೆ ದೂರವನ್ನು ಕ್ರಮಿಸಲು 45 ನಿಮಿಷ ಬೇಕೇ ಬೇಕು. ಈ ಮಾರ್ಗದಲ್ಲಿ ಓಡಾಡುವ ವಾಹನಗಳಲ್ಲಿ ಪ್ರತೀದಿನ ಏನಾದರೊಂದು ಮುರಿದಿರುತ್ತೆ. ಒಮ್ಮೆ ಬ್ಲೇಡ್ ಮುರಿದರೆ, ಮತ್ತೊಮ್ಮೆ ಟೈರ್ ಒಡೆಯುತ್ತೆ. ಇನ್ನೊಮ್ಮೆ ಇನ್ನೊಂದು ಅವಘಡವಾಗಿರುತ್ತೆ ಎನ್ನುತ್ತಾರೆ ಈ ಮಾರ್ಗದ ವಾಹನ ಚಾಲಕರು.<br /> <br /> `ನಾವು ಬಿಟ್ಟರೆ ಮತ್ತೊಬ್ಬರು ಈ ಮಾರ್ಗದಲ್ಲಿ ಓಡಿಸಲು ಸಿದ್ಧರಿರುತ್ತಾರೆ. ಆದ್ದರಿಂದ ನಮಗೆ ಈ ಮಾರ್ಗದಲ್ಲಿ ನಷ್ಟವಾಗುತ್ತಿದ್ದರೂ ಓಡಿಸುತ್ತೇವೆ~ ಎನ್ನುತ್ತಾರೆ ಮಾಲೀಕರುಗಳು.<br /> <br /> ಸಾರಿಗೆ ಸಂಸ್ಥೆ ಬಸ್ಗಳ ಚಾಲಕರೂ ಈ ಮಾರ್ಗದಲ್ಲಿ ಓಡಾಡಲು ಸಾಧ್ಯ ಇಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ನಮಗಾಗುವ ತೊಂದರೆ ಮರೆತು ಬಸ್ಗಳನ್ನು ಓಡಿಸುತ್ತೇವೆ ಎಂದರು. <br /> <br /> ಈ ಮಾರ್ಗದಲ್ಲಿ ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಶಾಶ್ವತ ಅಂಗವಿಕಲತೆಗೆ ತುತ್ತಾಗಿದ್ದಾರೆ. ಈ ಭಾಗದ ಪ್ರಯಾಣಿಕರು ಇಷ್ಟು ಸಂಕಷ್ಟ ಅನುಭವಿಸುತ್ತಿದ್ದರೂ ಶಾಸಕ ಎಚ್.ಡಿ. ರೇವಣ್ಣ ಅವರಾಗಲಿ, ಹಳ್ಳಿಮೈಸೂರು ಹೋಬಳಿ ಮತ ಕ್ಷೇತ್ರದ ಶಾಸಕ ಎ. ಮಂಜು ಅಗಾಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಸರಿಪಡಿಸುವ ಬಗ್ಗೆ ಯೋಚಿಸಿದಂತೆಯೇ ಇಲ್ಲ. ಈ ಭಾಗದ ಪ್ರಯಾಣಿಕರು ಶಾಸಕರ ನಿರ್ಲಕ್ಷತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>