<p>ಸಿನಿಮಾ ಹೆಸರು ಮೀಟ್ರು. ಕಾಂಟೆಂಪರರಿ ಆಗಿರಲಿ ಎಂದು ಈ ಹೆಸರನ್ನು ಇಟ್ಟಿರುವ ನಿರ್ದೇಶಕರ ಹೆಸರು ಸೂರಿ. ಪೋಸ್ಟರ್ಗಳಲ್ಲಿ ದುನಿಯಾ ಸೂರಿ ತಮ್ಮ ಹೆಸರಿನ ಅಕ್ಷರಗಳನ್ನು ಯಾವ ಸ್ವರೂಪದಲ್ಲಿ ಬರೆಸುತ್ತಾರೋ ಇವರೂ ಅದನ್ನೇ ಕಾಪಿ ಹೊಡೆದಿದ್ದಾರೆ. ಅಂದರೆ, ಸೂರಿಯಂತೆ ನಿರ್ದೇಶಕರಾಗಿ ಬೆಳೆಯುವುದು ಇವರ ಬಯಕೆ. ಈ ನಿರ್ದೇಶಕರ ನಿಜನಾಮ ಸುರೇಶ್. <br /> <br /> `ಹುಡುಗರು~, `ಯುಗಯುಗಗಳೆ ಸಾಗಲಿ~, `ಪರಿಚಯ~ ಹೀಗೆ ಸುಮಾರು 80 ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿಯೋ, ನೆರವು ನೀಡಿಯೋ ಅನುಭವ ಇರುವ ಸೂರಿ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. <br /> <br /> `ಇದು ಮಾಸ್ ಕಥೆ. ನಾಯಕ-ನಾಯಕಿ ಇಬ್ಬರೂ ಕಾಲೇಜು ಹುಡುಗ-ಹುಡುಗಿ. ನಮ್ ಸಿನಿಮಾದಲ್ಲಿ ಹೈ ಕ್ಲಾಸ್ ಏರಿಯಾ, ಲೋ ಕ್ಲಾಸ್ ಸ್ಲಮ್ಮು ಎರಡೂ ತೋರಿಸ್ತೀವಿ. ಒಟ್ಟಾರೆ ಇದು ಮಾಸ್ ಬೇಸ್ಡ್ ಕ್ಯೂಟ್ ಲವ್ ಸ್ಟೋರಿ~ ಎಂದು ಸೂರಿ ತಮ್ಮ ಸಿನಿಮಾ ವಸ್ತುವಿನ ಒನ್ಲೈನರ್ ಹೇಳಿದರು. ಒಂದೇ ಹಂತದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಸುವುದು ಅವರ ಯೋಜನೆ. <br /> <br /> ಎರಡು ಹಾಡುಗಳಿಗೆ ವಿದೇಶಕ್ಕೆ ಹೋಗಬೇಕೆಂದು ಕೂಡ ಯೋಚಿಸಿದ್ದಾರೆ. ಎಲ್ಲಿಗೆ, ಯಾವಾಗ ಎಂಬುದಿನ್ನೂ ತೀರ್ಮಾನವಾಗಿಲ್ಲ. ಶ್ರೀವತ್ಸ ಎಂಬ ಹೊಸಬರು ಸಂಗೀತ ಸಂಯೋಜನೆ ಮಾಡಿದ್ದಾರೆ. ತಲಕಾಡಿನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸಲು ನಿರ್ಧರಿಸಿದ್ದು, ಅಂತ್ಯ ಸೂಪರ್ರಾಗಿದೆ ಎಂದು ಸೂರಿ ಕಣ್ಣರಳಿಸಿದರು. <br /> <br /> ಚಿತ್ರದ ನಾಯಕ ರಾಕಿ. ಕಲ್ಯಾಣನಗರದಲ್ಲಿ ಬಿ.ಕಾಂ. ಅಂತಿಮ ಸೆಮಿಸ್ಟರ್ ಓದುತ್ತಿರುವ ಈ ಹುಡುಗ `ಸ್ಟಾರ್ ಕ್ರಿಯೇಟರ್ಸ್~ನಲ್ಲಿ ಅಭಿನಯ ಸೇರಿದಂತೆ ಸಿನಿಮಾಗೆ ಬೇಕಾದ ವರಸೆಗಳನ್ನು ಕಲಿತುಕೊಂಡಿದ್ದಾರೆ. ಅಲ್ಟಿಮೇಟ್ ಶಿವು ಅವರಲ್ಲಿ ಆರು ತಿಂಗಳು ಫೈಟಿಂಗ್ ತಾಲೀಮನ್ನೂ ನಡೆಸಿದ್ದು, ಚೆನ್ನಾಗಿ ನಟಿಸಬೇಕೆಂಬುದು ಹೆಬ್ಬಯಕೆ. <br /> <br /> ನಿರ್ಮಾಪಕರಾದ ರಘುರಾಜ್, ಚೈತನ್ಯ ಪ್ರಸಾದ್ ಸ್ನೇಹ ಇವರಿಗೆ ವರದಾನ. `ಸ್ಲಂ~ ಎಂಬ ಚಿತ್ರದಲ್ಲಿ ಖಳನ ಪಾತ್ರ ನಿರ್ವಹಿಸಿದ್ದು, ಆ ಸಿನಿಮಾದ ಮೂರು ದಿನಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ನಿರ್ದೇಶಕರು ಈ ಕಾಲದ ನಾಡಿಮಿಡಿತ ತಿಳಿದುಕೊಂಡೇ ಸ್ಕ್ರಿಪ್ಟ್ ಮಾಡಿದ್ದಾರೆ ಅಂತಾರೆ ರಾಕಿ. <br /> <br /> `ರಣ~ ಚಿತ್ರಕ್ಕೆ ಕೆಲಸ ಮಾಡಿದ್ದ ರಾಜರತ್ನಂ ಈ ಚಿತ್ರದ ಛಾಯಾಗ್ರಾಹಕ. ನಟ-ನಟಿಯರನ್ನು ಲೊಕೇಷನ್ಗಳನ್ನು ಚೆಂಗಾಣಿಸುವುದು ಅವರ ಸಂಕಲ್ಪ. ನಾಗೇಂದ್ರ ಪ್ರಸಾದ್, ಕವಿರಾಜ್, ಅರಸು ಅಂತಾರೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. <br /> <br /> ಡೈಲಾಗ್ ಕಿಂಗ್ ಸಾಯಿಕುಮಾರ್ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ನಟಿಸುತ್ತಾರಂತೆ. ಉಳಿದಂತೆ ರಂಗಾಯಣ ರಘು, ಶರತ್ಲೋಹಿತಾಶ್ವ, ಸಾಧುಕೋಕಿಲಾ, ಸುನೇತ್ರ ಪಂಡಿತ್, ಸಂಗೀತಾ ಮೊದಲಾದವರ ಅಭಿನಯವಿದೆ. <br /> <br /> ನಾಯಕಿ ಹರ್ಷಿಕಾ ಪೂಣಚ್ಚ ಮೇಕಪ್ ಹಾಕಿಸಿಕೊಳ್ಳುವುದರಲ್ಲಿ ಬಿಜಿಯಾಗಿದ್ದರು. ಈ ಚಿತ್ರದಲ್ಲೂ ಚೆನ್ನಾಗಿ ಅಭಿನಯಿಸಬೇಕೆಂಬುದು ಅವರ ಕಾಳಜಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿನಿಮಾ ಹೆಸರು ಮೀಟ್ರು. ಕಾಂಟೆಂಪರರಿ ಆಗಿರಲಿ ಎಂದು ಈ ಹೆಸರನ್ನು ಇಟ್ಟಿರುವ ನಿರ್ದೇಶಕರ ಹೆಸರು ಸೂರಿ. ಪೋಸ್ಟರ್ಗಳಲ್ಲಿ ದುನಿಯಾ ಸೂರಿ ತಮ್ಮ ಹೆಸರಿನ ಅಕ್ಷರಗಳನ್ನು ಯಾವ ಸ್ವರೂಪದಲ್ಲಿ ಬರೆಸುತ್ತಾರೋ ಇವರೂ ಅದನ್ನೇ ಕಾಪಿ ಹೊಡೆದಿದ್ದಾರೆ. ಅಂದರೆ, ಸೂರಿಯಂತೆ ನಿರ್ದೇಶಕರಾಗಿ ಬೆಳೆಯುವುದು ಇವರ ಬಯಕೆ. ಈ ನಿರ್ದೇಶಕರ ನಿಜನಾಮ ಸುರೇಶ್. <br /> <br /> `ಹುಡುಗರು~, `ಯುಗಯುಗಗಳೆ ಸಾಗಲಿ~, `ಪರಿಚಯ~ ಹೀಗೆ ಸುಮಾರು 80 ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿಯೋ, ನೆರವು ನೀಡಿಯೋ ಅನುಭವ ಇರುವ ಸೂರಿ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. <br /> <br /> `ಇದು ಮಾಸ್ ಕಥೆ. ನಾಯಕ-ನಾಯಕಿ ಇಬ್ಬರೂ ಕಾಲೇಜು ಹುಡುಗ-ಹುಡುಗಿ. ನಮ್ ಸಿನಿಮಾದಲ್ಲಿ ಹೈ ಕ್ಲಾಸ್ ಏರಿಯಾ, ಲೋ ಕ್ಲಾಸ್ ಸ್ಲಮ್ಮು ಎರಡೂ ತೋರಿಸ್ತೀವಿ. ಒಟ್ಟಾರೆ ಇದು ಮಾಸ್ ಬೇಸ್ಡ್ ಕ್ಯೂಟ್ ಲವ್ ಸ್ಟೋರಿ~ ಎಂದು ಸೂರಿ ತಮ್ಮ ಸಿನಿಮಾ ವಸ್ತುವಿನ ಒನ್ಲೈನರ್ ಹೇಳಿದರು. ಒಂದೇ ಹಂತದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಸುವುದು ಅವರ ಯೋಜನೆ. <br /> <br /> ಎರಡು ಹಾಡುಗಳಿಗೆ ವಿದೇಶಕ್ಕೆ ಹೋಗಬೇಕೆಂದು ಕೂಡ ಯೋಚಿಸಿದ್ದಾರೆ. ಎಲ್ಲಿಗೆ, ಯಾವಾಗ ಎಂಬುದಿನ್ನೂ ತೀರ್ಮಾನವಾಗಿಲ್ಲ. ಶ್ರೀವತ್ಸ ಎಂಬ ಹೊಸಬರು ಸಂಗೀತ ಸಂಯೋಜನೆ ಮಾಡಿದ್ದಾರೆ. ತಲಕಾಡಿನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸಲು ನಿರ್ಧರಿಸಿದ್ದು, ಅಂತ್ಯ ಸೂಪರ್ರಾಗಿದೆ ಎಂದು ಸೂರಿ ಕಣ್ಣರಳಿಸಿದರು. <br /> <br /> ಚಿತ್ರದ ನಾಯಕ ರಾಕಿ. ಕಲ್ಯಾಣನಗರದಲ್ಲಿ ಬಿ.ಕಾಂ. ಅಂತಿಮ ಸೆಮಿಸ್ಟರ್ ಓದುತ್ತಿರುವ ಈ ಹುಡುಗ `ಸ್ಟಾರ್ ಕ್ರಿಯೇಟರ್ಸ್~ನಲ್ಲಿ ಅಭಿನಯ ಸೇರಿದಂತೆ ಸಿನಿಮಾಗೆ ಬೇಕಾದ ವರಸೆಗಳನ್ನು ಕಲಿತುಕೊಂಡಿದ್ದಾರೆ. ಅಲ್ಟಿಮೇಟ್ ಶಿವು ಅವರಲ್ಲಿ ಆರು ತಿಂಗಳು ಫೈಟಿಂಗ್ ತಾಲೀಮನ್ನೂ ನಡೆಸಿದ್ದು, ಚೆನ್ನಾಗಿ ನಟಿಸಬೇಕೆಂಬುದು ಹೆಬ್ಬಯಕೆ. <br /> <br /> ನಿರ್ಮಾಪಕರಾದ ರಘುರಾಜ್, ಚೈತನ್ಯ ಪ್ರಸಾದ್ ಸ್ನೇಹ ಇವರಿಗೆ ವರದಾನ. `ಸ್ಲಂ~ ಎಂಬ ಚಿತ್ರದಲ್ಲಿ ಖಳನ ಪಾತ್ರ ನಿರ್ವಹಿಸಿದ್ದು, ಆ ಸಿನಿಮಾದ ಮೂರು ದಿನಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ನಿರ್ದೇಶಕರು ಈ ಕಾಲದ ನಾಡಿಮಿಡಿತ ತಿಳಿದುಕೊಂಡೇ ಸ್ಕ್ರಿಪ್ಟ್ ಮಾಡಿದ್ದಾರೆ ಅಂತಾರೆ ರಾಕಿ. <br /> <br /> `ರಣ~ ಚಿತ್ರಕ್ಕೆ ಕೆಲಸ ಮಾಡಿದ್ದ ರಾಜರತ್ನಂ ಈ ಚಿತ್ರದ ಛಾಯಾಗ್ರಾಹಕ. ನಟ-ನಟಿಯರನ್ನು ಲೊಕೇಷನ್ಗಳನ್ನು ಚೆಂಗಾಣಿಸುವುದು ಅವರ ಸಂಕಲ್ಪ. ನಾಗೇಂದ್ರ ಪ್ರಸಾದ್, ಕವಿರಾಜ್, ಅರಸು ಅಂತಾರೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. <br /> <br /> ಡೈಲಾಗ್ ಕಿಂಗ್ ಸಾಯಿಕುಮಾರ್ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ನಟಿಸುತ್ತಾರಂತೆ. ಉಳಿದಂತೆ ರಂಗಾಯಣ ರಘು, ಶರತ್ಲೋಹಿತಾಶ್ವ, ಸಾಧುಕೋಕಿಲಾ, ಸುನೇತ್ರ ಪಂಡಿತ್, ಸಂಗೀತಾ ಮೊದಲಾದವರ ಅಭಿನಯವಿದೆ. <br /> <br /> ನಾಯಕಿ ಹರ್ಷಿಕಾ ಪೂಣಚ್ಚ ಮೇಕಪ್ ಹಾಕಿಸಿಕೊಳ್ಳುವುದರಲ್ಲಿ ಬಿಜಿಯಾಗಿದ್ದರು. ಈ ಚಿತ್ರದಲ್ಲೂ ಚೆನ್ನಾಗಿ ಅಭಿನಯಿಸಬೇಕೆಂಬುದು ಅವರ ಕಾಳಜಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>