<p><strong>ಹನುಮಸಾಗರ:</strong> ಸಮೀಪದ ಹೊಸಹಳ್ಳಿ ಗ್ರಾಮ ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದೆ. ಹತ್ತಾರು ಗ್ರಾಮಗಳು ಈ ಗ್ರಾಮದ ಕಡೆ ತಲೆ ಎತ್ತಿ ನೋಡುವಂತಹ ವಿಶಿಷ್ಟತೆಯೂ ಈ ಗ್ರಾಮದಲ್ಲಿದೆ ಹಾಗೂ ಕೆಲ ಸಮಸ್ಯೆಗಳಿಂದಲೂ ನರಳುತ್ತಿದೆ.<br /> <br /> ಈ ಗ್ರಾಮದ ಯುವಕರು ನಾಲ್ಕಾರು ವರ್ಷಗಳ ಹಿಂದೆ ಹೆಜ್ಜೆ ಕುಣಿತದಲ್ಲಿ ಹೊಸ ಶೈಲಿ ಅಳವಡಿಸಿಕೊಂಡು ಕಠಿಣ ತಾಲೀಮು ಮಾಡಿದ ಪ್ರರಿಣಾಮ ಹೆಜ್ಜೆ ಕುಣಿತ ಸದ್ಯ ರಾಜ್ಯಮಟ್ಟದವರೆಗೂ ಹೆಸರು ಇದೆ. ಅಲ್ಲದೆ ಈ ಹಳ್ಳಿಯಲ್ಲಿ ಪ್ರತಿವರ್ಷ ನಡೆಯುವ ಯುಗಾದಿ ಪಾಡ್ಯ ಹಾಗೂ ಮಾರುತೇಶ್ವರ ಕಾರ್ತಿಕೋತ್ಸವ ಅಷ್ಟೇ ವೈಶಿಷ್ಠತೆಯಿಂದ ಕೂಡಿದೆ.<br /> <br /> ಇಂತಹ ವೈವಿಧ್ಯತೆ ಹೊಂದಿದ ಈ ಹಳ್ಳಿಯಲ್ಲಿ ಅಲೆದಾಡಿದರೆ ಹತ್ತಾರು ಸಮಸ್ಯೆಗಳು ಕಣ್ಣಿಗೆ ಗೋಚರಿಸುತ್ತವೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಈ ಗ್ರಾಮವನ್ನು ಪ್ರತಿನಿಧಿಸುವ ಅಡವಿಭಾವಿ ಗ್ರಾಮ ಪಂಚಾಯಿತಿ ಗಮನಹರಿಸದಿರುವುದೇ ಈ ಸಮಸ್ಯೆಗಳು ಪರಿಹಾರವಾಗದೆ ಹಾಗೆ ಉಳಿಯಲು ಕಾರಣವಾಗಿದೆ.<br /> <br /> ಗ್ರಾಮದಲ್ಲಿ ಚರಂಡಿ ನಿರ್ಮಿಸದಿರುವುದರಿಂದ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು ಜನ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.<br /> <br /> ಇಂತಹ ರಸ್ತೆಗಳು ಕಾಣುತ್ತವೆ. ಇತ್ತೀಚೆಗೆ ಇಲ್ಲಿ ಮಲೇರಿಯಾ ಹರಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.<br /> <br /> ಸ್ವಂತ ಮನೆಯ ಸೂರಿನ ಕನಸು ಕಾಣುತ್ತಿರುವ ಅನೇಕ ಫಲಾನುಭವಿಗಳು ಸ್ಥಳೀಯವಾಗಿ ಪಡೆದು ಬುನಾದಿವರೆಗೆ ಮನೆ ಕಟ್ಟಿಕೊಂಡಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಯವರು ಕೇಳಿದಾಗೊಮ್ಮೆ ದಾಖಲೆಗಳನ್ನು ನೀಡಿದ್ದಾರೆ. ಆದರೆ ಇದುವರೆಗೂ ಹಣ ಮಾತ್ರ ಬಿಡುಗಡೆಯಾಗಿಲ್ಲ.<br /> <br /> ಗ್ರಾಮದ ಬೀದಿಗಳಲ್ಲಿ ಹೆಜ್ಜೆ ಊರಲು ಸಾಧ್ಯವಿಲ್ಲದಂತೆ ಕೆಸರಿದೆ. ಸಿಸಿ ರಸ್ತೆ ಮಾಡೋದು ಬ್ಯಾಡ್ರಿ, ಹಾಸುಬಂಡಿ ಹಾಕಿ ಕೊಡ್ರಿ ಶಾಶ್ವತವಾಗಿರ್ತಾವ ಅಂತ ಹಲವಾರು ಬಾರಿ ಮನವಿ ಮಾಡಿಕೊಂಡರೂ ನಮ್ಮೂರ ರಸ್ತೆಗಳಿಗೆ ಸಿಸಿ ಬರಲಿಲ್ಲ. ಇತ್ತ ಹಾಸುಬಂಡಿನೂ ಬರಲಿಲ್ಲ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.<br /> <br /> ಗ್ರಾಮಸ್ಥರು ದುಡಿಮೆ ಅರಸಿ ಗುಳೆ ಹೋಗುತ್ತಾರೆ ಬೇಗನೆ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕೊಡಿ ಎಂದು ಜನ ಕೇಳುತ್ತಿದ್ದಾರೆ. ಈ ಹಿಂದೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿನ ಕಾಮಗಾರಿಗಳು ಅರ್ಧಂಬರ್ಧಕ್ಕೆ ನಿಂತಿವೆ ಕನಿಷ್ಠ ಪಕ್ಷ ಅವುಗಳನ್ನಾದರೂ ಪೂರ್ಣಗೊಳಿಸಿ ಎಂದು ಜನ ಒತ್ತಾಯಿಸುತ್ತಾರೆ.<br /> <br /> ಈ ಭಾಗದ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದೂ ತಮ್ಮೂರಿಗೆ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿ ಎಂದು ಸಾಕಷ್ಟು ಬಾರಿ ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.<br /> <br /> <strong>‘ಸಂಪೂರ್ಣಗೊಂಡಿಲ್ಲ’</strong></p>.<p>ನಮ್ಮ ಊರಾಗ ಯಾವ ಕೆಲಸಗಳೂ ಸಂಪೂರ್ಣಗೊಂಡಿಲ್ಲ, ಎಲ್ಲವೂ ಅರ್ಧಂಬರ್ಧ. ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ.<br /> <strong>–ಪರಸಪ್ಪ ಬಲಕುಂದಿ</strong><br /> <br /> <strong>‘ನಿರ್ವಹಣೆ ಇಲ್ಲದ ಶೌಚಾಲಯ’</strong><br /> ಮಹಿಳೆಯರಿಗಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಶೌಚಾಲಯದ ಸುತ್ತಲೂ ಜಾಲಿಮುಳ್ಳು ಬೆಳೆದಿದೆ. ಊರ ಕೊಳಚೆ ಹರಿದು ಅಲ್ಲಿಯೇ ಸಂಗ್ರಹವಾಗುತ್ತದೆ. ಮಹಿಳೆಯರು ಶೌಚಕ್ಕೆ ಹೋಗಬೇಕಾದರೆ ಇದೆಲ್ಲವನ್ನು ದಾಟಿಕೊಂಡು ಹೋಗಬೇಕು.<br /> <strong>–ಹುಲಿಗೆಮ್ಮ ಹರಿಜನ<br /> <br /> ‘ನನೆಗುದಿ ಬಿದ್ದಿದೆ’</strong><br /> ವಿವಿಧ ವಸತಿ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ಸಾಲ ಮಾಡಿ ಬುನಾದಿಯವರೆಗೆ ನಾವೇ ಮನೆ ನಿರ್ಮಿಸಿಕೊಂಡಿದ್ದೇವೆ. ಆದರೆ ಈವರೆಗೂ ಸಹಾಯ ಧನ ಮಂಜೂರಾಗದ ಕಾರಣ ಮನೆಗಳ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿವೆ.<br /> <strong>–ಶರಣಪ್ಪ ಹೇರೂರ<br /> <br /> ‘ಕಳಪೆ ಕಾಮಗಾರಿ’</strong><br /> ಹಲವಾರು ವರ್ಷಗಳ ಹಿಂದೆ ನೀರಿನ ಮೇಲ್ತೊಟ್ಟೆ ನಿರ್ಮಿಸಲಾಗಿದೆ. ಆದರೆ ನಿರ್ಮಾಣಗೊಳಿಸಿದ ನಂತರ ಇಲ್ಲಿವರೆಗೆ ಒಂದು ಬಾರಿಯೂ ಅದನ್ನು ತೊಳೆದಿಲ್ಲ. ಕಳಪೆ ಕಾಮಗಾರಿಯಿಂದಾಗಿ ಅದೀಗ ಮುರಿದು ಬೀಳುವ ಸ್ಥಿತಿಯಲ್ಲಿದೆ.<br /> <strong>–ಹನುಮಂತಪ್ಪ ಗುಡಲದಿನ್ನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ಸಮೀಪದ ಹೊಸಹಳ್ಳಿ ಗ್ರಾಮ ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದೆ. ಹತ್ತಾರು ಗ್ರಾಮಗಳು ಈ ಗ್ರಾಮದ ಕಡೆ ತಲೆ ಎತ್ತಿ ನೋಡುವಂತಹ ವಿಶಿಷ್ಟತೆಯೂ ಈ ಗ್ರಾಮದಲ್ಲಿದೆ ಹಾಗೂ ಕೆಲ ಸಮಸ್ಯೆಗಳಿಂದಲೂ ನರಳುತ್ತಿದೆ.<br /> <br /> ಈ ಗ್ರಾಮದ ಯುವಕರು ನಾಲ್ಕಾರು ವರ್ಷಗಳ ಹಿಂದೆ ಹೆಜ್ಜೆ ಕುಣಿತದಲ್ಲಿ ಹೊಸ ಶೈಲಿ ಅಳವಡಿಸಿಕೊಂಡು ಕಠಿಣ ತಾಲೀಮು ಮಾಡಿದ ಪ್ರರಿಣಾಮ ಹೆಜ್ಜೆ ಕುಣಿತ ಸದ್ಯ ರಾಜ್ಯಮಟ್ಟದವರೆಗೂ ಹೆಸರು ಇದೆ. ಅಲ್ಲದೆ ಈ ಹಳ್ಳಿಯಲ್ಲಿ ಪ್ರತಿವರ್ಷ ನಡೆಯುವ ಯುಗಾದಿ ಪಾಡ್ಯ ಹಾಗೂ ಮಾರುತೇಶ್ವರ ಕಾರ್ತಿಕೋತ್ಸವ ಅಷ್ಟೇ ವೈಶಿಷ್ಠತೆಯಿಂದ ಕೂಡಿದೆ.<br /> <br /> ಇಂತಹ ವೈವಿಧ್ಯತೆ ಹೊಂದಿದ ಈ ಹಳ್ಳಿಯಲ್ಲಿ ಅಲೆದಾಡಿದರೆ ಹತ್ತಾರು ಸಮಸ್ಯೆಗಳು ಕಣ್ಣಿಗೆ ಗೋಚರಿಸುತ್ತವೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಈ ಗ್ರಾಮವನ್ನು ಪ್ರತಿನಿಧಿಸುವ ಅಡವಿಭಾವಿ ಗ್ರಾಮ ಪಂಚಾಯಿತಿ ಗಮನಹರಿಸದಿರುವುದೇ ಈ ಸಮಸ್ಯೆಗಳು ಪರಿಹಾರವಾಗದೆ ಹಾಗೆ ಉಳಿಯಲು ಕಾರಣವಾಗಿದೆ.<br /> <br /> ಗ್ರಾಮದಲ್ಲಿ ಚರಂಡಿ ನಿರ್ಮಿಸದಿರುವುದರಿಂದ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು ಜನ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.<br /> <br /> ಇಂತಹ ರಸ್ತೆಗಳು ಕಾಣುತ್ತವೆ. ಇತ್ತೀಚೆಗೆ ಇಲ್ಲಿ ಮಲೇರಿಯಾ ಹರಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.<br /> <br /> ಸ್ವಂತ ಮನೆಯ ಸೂರಿನ ಕನಸು ಕಾಣುತ್ತಿರುವ ಅನೇಕ ಫಲಾನುಭವಿಗಳು ಸ್ಥಳೀಯವಾಗಿ ಪಡೆದು ಬುನಾದಿವರೆಗೆ ಮನೆ ಕಟ್ಟಿಕೊಂಡಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಯವರು ಕೇಳಿದಾಗೊಮ್ಮೆ ದಾಖಲೆಗಳನ್ನು ನೀಡಿದ್ದಾರೆ. ಆದರೆ ಇದುವರೆಗೂ ಹಣ ಮಾತ್ರ ಬಿಡುಗಡೆಯಾಗಿಲ್ಲ.<br /> <br /> ಗ್ರಾಮದ ಬೀದಿಗಳಲ್ಲಿ ಹೆಜ್ಜೆ ಊರಲು ಸಾಧ್ಯವಿಲ್ಲದಂತೆ ಕೆಸರಿದೆ. ಸಿಸಿ ರಸ್ತೆ ಮಾಡೋದು ಬ್ಯಾಡ್ರಿ, ಹಾಸುಬಂಡಿ ಹಾಕಿ ಕೊಡ್ರಿ ಶಾಶ್ವತವಾಗಿರ್ತಾವ ಅಂತ ಹಲವಾರು ಬಾರಿ ಮನವಿ ಮಾಡಿಕೊಂಡರೂ ನಮ್ಮೂರ ರಸ್ತೆಗಳಿಗೆ ಸಿಸಿ ಬರಲಿಲ್ಲ. ಇತ್ತ ಹಾಸುಬಂಡಿನೂ ಬರಲಿಲ್ಲ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.<br /> <br /> ಗ್ರಾಮಸ್ಥರು ದುಡಿಮೆ ಅರಸಿ ಗುಳೆ ಹೋಗುತ್ತಾರೆ ಬೇಗನೆ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕೊಡಿ ಎಂದು ಜನ ಕೇಳುತ್ತಿದ್ದಾರೆ. ಈ ಹಿಂದೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿನ ಕಾಮಗಾರಿಗಳು ಅರ್ಧಂಬರ್ಧಕ್ಕೆ ನಿಂತಿವೆ ಕನಿಷ್ಠ ಪಕ್ಷ ಅವುಗಳನ್ನಾದರೂ ಪೂರ್ಣಗೊಳಿಸಿ ಎಂದು ಜನ ಒತ್ತಾಯಿಸುತ್ತಾರೆ.<br /> <br /> ಈ ಭಾಗದ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದೂ ತಮ್ಮೂರಿಗೆ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿ ಎಂದು ಸಾಕಷ್ಟು ಬಾರಿ ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.<br /> <br /> <strong>‘ಸಂಪೂರ್ಣಗೊಂಡಿಲ್ಲ’</strong></p>.<p>ನಮ್ಮ ಊರಾಗ ಯಾವ ಕೆಲಸಗಳೂ ಸಂಪೂರ್ಣಗೊಂಡಿಲ್ಲ, ಎಲ್ಲವೂ ಅರ್ಧಂಬರ್ಧ. ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ.<br /> <strong>–ಪರಸಪ್ಪ ಬಲಕುಂದಿ</strong><br /> <br /> <strong>‘ನಿರ್ವಹಣೆ ಇಲ್ಲದ ಶೌಚಾಲಯ’</strong><br /> ಮಹಿಳೆಯರಿಗಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಶೌಚಾಲಯದ ಸುತ್ತಲೂ ಜಾಲಿಮುಳ್ಳು ಬೆಳೆದಿದೆ. ಊರ ಕೊಳಚೆ ಹರಿದು ಅಲ್ಲಿಯೇ ಸಂಗ್ರಹವಾಗುತ್ತದೆ. ಮಹಿಳೆಯರು ಶೌಚಕ್ಕೆ ಹೋಗಬೇಕಾದರೆ ಇದೆಲ್ಲವನ್ನು ದಾಟಿಕೊಂಡು ಹೋಗಬೇಕು.<br /> <strong>–ಹುಲಿಗೆಮ್ಮ ಹರಿಜನ<br /> <br /> ‘ನನೆಗುದಿ ಬಿದ್ದಿದೆ’</strong><br /> ವಿವಿಧ ವಸತಿ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ಸಾಲ ಮಾಡಿ ಬುನಾದಿಯವರೆಗೆ ನಾವೇ ಮನೆ ನಿರ್ಮಿಸಿಕೊಂಡಿದ್ದೇವೆ. ಆದರೆ ಈವರೆಗೂ ಸಹಾಯ ಧನ ಮಂಜೂರಾಗದ ಕಾರಣ ಮನೆಗಳ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿವೆ.<br /> <strong>–ಶರಣಪ್ಪ ಹೇರೂರ<br /> <br /> ‘ಕಳಪೆ ಕಾಮಗಾರಿ’</strong><br /> ಹಲವಾರು ವರ್ಷಗಳ ಹಿಂದೆ ನೀರಿನ ಮೇಲ್ತೊಟ್ಟೆ ನಿರ್ಮಿಸಲಾಗಿದೆ. ಆದರೆ ನಿರ್ಮಾಣಗೊಳಿಸಿದ ನಂತರ ಇಲ್ಲಿವರೆಗೆ ಒಂದು ಬಾರಿಯೂ ಅದನ್ನು ತೊಳೆದಿಲ್ಲ. ಕಳಪೆ ಕಾಮಗಾರಿಯಿಂದಾಗಿ ಅದೀಗ ಮುರಿದು ಬೀಳುವ ಸ್ಥಿತಿಯಲ್ಲಿದೆ.<br /> <strong>–ಹನುಮಂತಪ್ಪ ಗುಡಲದಿನ್ನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>