<p>ಮುನುಷ್ಯನು ಮಾಡುವ ಕೆಲವು ತಪ್ಪುಗಳಿಂದ ದೋಷಗಳನ್ನು ಪಡೆಯುತ್ತಾನೆ. ದೋಷಗಳು ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ. ಜ್ಯೋತಿಷ್ಯದಲ್ಲಿ ಹಲವು ದೋಷಗಳನ್ನು ಕಾಣಬಹುದು. ಅವುಗಳಲ್ಲಿ ಮಾತೃ ಪಿತೃ ದೋಷ ಹಾಗೂ ಗುರು ದೋಷ ಪ್ರಮುಖವಾದವು. </p><p>ಈ ಎರಡು ಶಾಪಗಳಿಂದಾಗುವ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ..</p><p><strong>ತಂದೆ–ತಾಯಿ ಶಾಪ:</strong></p><ul><li><p>ಇದು ಅತ್ಯಂತ ಕಠಿಣವಾದ ಶಾಪವಾಗಿದೆ. ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಮ್ಮ ತಂದೆ ತಾಯಿಗಳನ್ನು ನೋಡಿಕೊಳ್ಳುವುದಿಲ್ಲವೋ ಅವರು ಈ ಶಾಪಕ್ಕೆ ಗುರಿಯಾಗುತ್ತಾರೆ. </p></li><li><p>ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಅವರನ್ನು ನಿರ್ಲಕ್ಷ ಮಾಡುವವರು.</p></li><li><p>ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳಿಗೆ ಮಾತೃಪಿತೃ ಶಾಪ ತಗಲುತ್ತದೆ.</p></li><li><p>ಮನೆಗೆ ಬಂದ ಸೊಸೆಯಂದಿರು ತಂದೆ ತಾಯಿಯರನ್ನು ಬೇರ್ಪಡಿಸಿದರೆ ಶಾಪ ದೊರೆಯಲಿದೆ. </p></li><li><p>ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು ಈ ಶಾಪಕ್ಕೆ ಒಳಗಾಗುತ್ತಾರೆ. </p></li></ul><p><strong>ಈ ದೋಷದ ಪರಿಣಾಮವೇನು?</strong> </p><p>ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ. ಮಕ್ಕಳ ಏಳಿಗೆಯಾಗುವುದಿಲ್ಲ. ಸಂತಾನ ದೋಷ ಪ್ರಾಪ್ತಿಯಾಗಬಹುದು. ನೆಮ್ಮದಿ ಇರದೆ ದಾರಿದ್ರ್ಯಕ್ಕೆ ಒಳಗಾಗಬಹುದು.</p><p><strong>ಗುರುಶಾಪ:</strong> </p><p>‘ಒಂದಕ್ಷರಂ ಕಲಿಸಿದಾತಂ ಗುರು‘ ಎಂಬ ಪ್ರಸಿದ್ಧ ಮಾತಿದೆ. ಗುರುಗಳನ್ನು ಪೂಜನೀಯ ಸ್ಥಾನದಲ್ಲಿಟ್ಟು ಪೂಜಿಸಬೇಕು. ಒಂದು ವೇಳೆ ತಿರಸ್ಕರಿಸಿದರೆ ಗುರುಶಾಪ ದೊರೆಯಲಿದೆ. </p><ul><li><p>ಗುರುವಿನಿಂದ ಮಂತ್ರ ದೀಕ್ಷೆ ಪಡೆದು ದಕ್ಷಿಣೆ ಕೊಡದಿದ್ದರೆ ದೋಷಕ್ಕೆ ಒಳಗಾಗ ಬೇಕಾಗುತ್ತದೆ. </p></li><li><p>ಗುರುವಿನ ನಿಂದನೆ ಮಾಡುವು ಗುರು ದೋಷವಾಗುತ್ತದೆ.</p></li><li><p>ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದೆ ಇರುವುದು. </p></li><li><p>ಗುರುವಿನಿಂದ ವಿದ್ಯೆ ಕಲಿತು ಗುರುವಿಗೆ ತಿರುಮಂತ್ರ ಹಾಕುವುದು.</p></li><li><p>ಗುರುಗಳು ನೊಂದುಕೊಳ್ಳುವಂತೆ ಮಾಡುವುದು.</p></li><li><p>ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು ಕೆಟ್ಟ ಕಾರ್ಯಗಳಿಗೆ ಉಪಯೋಗಿಸುವುದು.</p></li></ul><p><strong>ಈ ದೋಷದ ಪರಿಣಾಮವೇನು?</strong></p><p>ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವಲ್ಲಿ ವಿಫಲವಾಗುತ್ತಾರೆ. ಸಂತಾನ ದೋಷ ಪ್ರಾಪ್ತಿಯಾಗುತ್ತದೆ. ಮಕ್ಕಳಿಗೆ ವಿದ್ಯೆಯಲ್ಲಿ ನಿರಾಸಕ್ತಿ ಮೂಡುತ್ತದೆ. ಅಗೋಚರ ಕಾಯಿಲೆಗಳಿಗೆ ತುತ್ತಾಗುವ ಸಂಭವವಿರುತ್ತದೆ. ವಂಶವು ಅಧಃಪತನವಾಗುವುದು.</p><p>ನಾವು ನಿತ್ಯ ಮಾಡುವ ಕೆಲಸ ಕಾರ್ಯಗಳು ನಮ್ಮ ಕರ್ಮ ಫಲಗಳನ್ನು ಆಧರಿಸಿರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದು ಒಳ್ಳೆಯದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುನುಷ್ಯನು ಮಾಡುವ ಕೆಲವು ತಪ್ಪುಗಳಿಂದ ದೋಷಗಳನ್ನು ಪಡೆಯುತ್ತಾನೆ. ದೋಷಗಳು ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ. ಜ್ಯೋತಿಷ್ಯದಲ್ಲಿ ಹಲವು ದೋಷಗಳನ್ನು ಕಾಣಬಹುದು. ಅವುಗಳಲ್ಲಿ ಮಾತೃ ಪಿತೃ ದೋಷ ಹಾಗೂ ಗುರು ದೋಷ ಪ್ರಮುಖವಾದವು. </p><p>ಈ ಎರಡು ಶಾಪಗಳಿಂದಾಗುವ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ..</p><p><strong>ತಂದೆ–ತಾಯಿ ಶಾಪ:</strong></p><ul><li><p>ಇದು ಅತ್ಯಂತ ಕಠಿಣವಾದ ಶಾಪವಾಗಿದೆ. ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಮ್ಮ ತಂದೆ ತಾಯಿಗಳನ್ನು ನೋಡಿಕೊಳ್ಳುವುದಿಲ್ಲವೋ ಅವರು ಈ ಶಾಪಕ್ಕೆ ಗುರಿಯಾಗುತ್ತಾರೆ. </p></li><li><p>ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಅವರನ್ನು ನಿರ್ಲಕ್ಷ ಮಾಡುವವರು.</p></li><li><p>ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳಿಗೆ ಮಾತೃಪಿತೃ ಶಾಪ ತಗಲುತ್ತದೆ.</p></li><li><p>ಮನೆಗೆ ಬಂದ ಸೊಸೆಯಂದಿರು ತಂದೆ ತಾಯಿಯರನ್ನು ಬೇರ್ಪಡಿಸಿದರೆ ಶಾಪ ದೊರೆಯಲಿದೆ. </p></li><li><p>ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು ಈ ಶಾಪಕ್ಕೆ ಒಳಗಾಗುತ್ತಾರೆ. </p></li></ul><p><strong>ಈ ದೋಷದ ಪರಿಣಾಮವೇನು?</strong> </p><p>ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ. ಮಕ್ಕಳ ಏಳಿಗೆಯಾಗುವುದಿಲ್ಲ. ಸಂತಾನ ದೋಷ ಪ್ರಾಪ್ತಿಯಾಗಬಹುದು. ನೆಮ್ಮದಿ ಇರದೆ ದಾರಿದ್ರ್ಯಕ್ಕೆ ಒಳಗಾಗಬಹುದು.</p><p><strong>ಗುರುಶಾಪ:</strong> </p><p>‘ಒಂದಕ್ಷರಂ ಕಲಿಸಿದಾತಂ ಗುರು‘ ಎಂಬ ಪ್ರಸಿದ್ಧ ಮಾತಿದೆ. ಗುರುಗಳನ್ನು ಪೂಜನೀಯ ಸ್ಥಾನದಲ್ಲಿಟ್ಟು ಪೂಜಿಸಬೇಕು. ಒಂದು ವೇಳೆ ತಿರಸ್ಕರಿಸಿದರೆ ಗುರುಶಾಪ ದೊರೆಯಲಿದೆ. </p><ul><li><p>ಗುರುವಿನಿಂದ ಮಂತ್ರ ದೀಕ್ಷೆ ಪಡೆದು ದಕ್ಷಿಣೆ ಕೊಡದಿದ್ದರೆ ದೋಷಕ್ಕೆ ಒಳಗಾಗ ಬೇಕಾಗುತ್ತದೆ. </p></li><li><p>ಗುರುವಿನ ನಿಂದನೆ ಮಾಡುವು ಗುರು ದೋಷವಾಗುತ್ತದೆ.</p></li><li><p>ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದೆ ಇರುವುದು. </p></li><li><p>ಗುರುವಿನಿಂದ ವಿದ್ಯೆ ಕಲಿತು ಗುರುವಿಗೆ ತಿರುಮಂತ್ರ ಹಾಕುವುದು.</p></li><li><p>ಗುರುಗಳು ನೊಂದುಕೊಳ್ಳುವಂತೆ ಮಾಡುವುದು.</p></li><li><p>ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು ಕೆಟ್ಟ ಕಾರ್ಯಗಳಿಗೆ ಉಪಯೋಗಿಸುವುದು.</p></li></ul><p><strong>ಈ ದೋಷದ ಪರಿಣಾಮವೇನು?</strong></p><p>ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವಲ್ಲಿ ವಿಫಲವಾಗುತ್ತಾರೆ. ಸಂತಾನ ದೋಷ ಪ್ರಾಪ್ತಿಯಾಗುತ್ತದೆ. ಮಕ್ಕಳಿಗೆ ವಿದ್ಯೆಯಲ್ಲಿ ನಿರಾಸಕ್ತಿ ಮೂಡುತ್ತದೆ. ಅಗೋಚರ ಕಾಯಿಲೆಗಳಿಗೆ ತುತ್ತಾಗುವ ಸಂಭವವಿರುತ್ತದೆ. ವಂಶವು ಅಧಃಪತನವಾಗುವುದು.</p><p>ನಾವು ನಿತ್ಯ ಮಾಡುವ ಕೆಲಸ ಕಾರ್ಯಗಳು ನಮ್ಮ ಕರ್ಮ ಫಲಗಳನ್ನು ಆಧರಿಸಿರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವುದು ಒಳ್ಳೆಯದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>