<p><strong>ಬೆಂಗಳೂರು/ಚೆನ್ನೈ: </strong>ಬೆಂಗಳೂರು ಮೂಲದ ಓಲಾ ಮತ್ತು ಏಥರ್ ಕಂಪನಿಗಳು ದ್ವಿಚಕ್ರ ವಾಹನ ತಯಾರಿಕಾ ಘಟಕಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಆರಂಭಿಸಲಿರುವುದು, ಆ ರಾಜ್ಯ ರೂಪಿಸಿರುವ ವಿದ್ಯುತ್ ಚಾಲಿತ ವಾಹನ ನೀತಿಯತ್ತ ಗಮನ ಹರಿಯುವಂತೆ ಮಾಡಿದೆ. ಈ ಎರಡು ಕಂಪನಿಗಳನ್ನು ತನ್ನತ್ತ ಸೆಳೆಯಲು ತಮಿಳುನಾಡು ಸರ್ಕಾರ, ಕಂಪನಿಗಳ ಅಗತ್ಯಕ್ಕೆ ಸೂಕ್ತವಾದ ಪ್ಯಾಕೇಜ್ಗಳನ್ನು ಕೂಡ ನೀಡಿದೆ.</p>.<p>‘ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಕೂಡ ತಮಿಳುನಾಡು ಮುಂಚೂಣಿಗೆ ಬರಬೇಕು ಎಂಬುದು ನಮ್ಮ ಬಯಕೆ. ಆಟೊಮೊಬೈಲ್ ಉದ್ಯಮದಲ್ಲಿ ರಾಜ್ಯವು ಈಗಾಗಲೇ ನಾಯಕತ್ವದ ಸ್ಥಾನದಲ್ಲಿದೆ’ ಎಂದು ಸರ್ಕಾರದ ಮೂಲವೊಂದು ‘ಪ್ರಜಾವಾಣಿ’ಗೆ ತಿಳಿಸಿದೆ.</p>.<p>ಈ ಎರಡು ಕಂಪನಿಗಳು ಕರ್ನಾಟಕ ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದವು. ಆದರೆ, ಹೊಸೂರು–ಕೃಷ್ಣಗಿರಿ ಪ್ರದೇಶದಲ್ಲಿ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ಪೂರೈಕೆದಾರರ ನೆಲೆ ಚೆನ್ನಾಗಿರುವುದು, ‘ಭೂಬ್ಯಾಂಕ್’ ನೀತಿಯ ಮೂಲಕ ಜಮೀನು ಲಭ್ಯವಿರುವುದು, ಹಣಕಾಸಿನ ಕೊಡುಗೆಗಳು, ಬೆಂಗಳೂರಿಗೂ ಹತ್ತಿರ ಇರುವುದು ಆ ಕಂಪನಿಗಳು ತಮಿಳುನಾಡನ್ನು ಆಯ್ಕೆ ಮಾಡಿಕೊಳ್ಳಲು ಕಾರಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು/ಚೆನ್ನೈ: </strong>ಬೆಂಗಳೂರು ಮೂಲದ ಓಲಾ ಮತ್ತು ಏಥರ್ ಕಂಪನಿಗಳು ದ್ವಿಚಕ್ರ ವಾಹನ ತಯಾರಿಕಾ ಘಟಕಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಆರಂಭಿಸಲಿರುವುದು, ಆ ರಾಜ್ಯ ರೂಪಿಸಿರುವ ವಿದ್ಯುತ್ ಚಾಲಿತ ವಾಹನ ನೀತಿಯತ್ತ ಗಮನ ಹರಿಯುವಂತೆ ಮಾಡಿದೆ. ಈ ಎರಡು ಕಂಪನಿಗಳನ್ನು ತನ್ನತ್ತ ಸೆಳೆಯಲು ತಮಿಳುನಾಡು ಸರ್ಕಾರ, ಕಂಪನಿಗಳ ಅಗತ್ಯಕ್ಕೆ ಸೂಕ್ತವಾದ ಪ್ಯಾಕೇಜ್ಗಳನ್ನು ಕೂಡ ನೀಡಿದೆ.</p>.<p>‘ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಕೂಡ ತಮಿಳುನಾಡು ಮುಂಚೂಣಿಗೆ ಬರಬೇಕು ಎಂಬುದು ನಮ್ಮ ಬಯಕೆ. ಆಟೊಮೊಬೈಲ್ ಉದ್ಯಮದಲ್ಲಿ ರಾಜ್ಯವು ಈಗಾಗಲೇ ನಾಯಕತ್ವದ ಸ್ಥಾನದಲ್ಲಿದೆ’ ಎಂದು ಸರ್ಕಾರದ ಮೂಲವೊಂದು ‘ಪ್ರಜಾವಾಣಿ’ಗೆ ತಿಳಿಸಿದೆ.</p>.<p>ಈ ಎರಡು ಕಂಪನಿಗಳು ಕರ್ನಾಟಕ ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದವು. ಆದರೆ, ಹೊಸೂರು–ಕೃಷ್ಣಗಿರಿ ಪ್ರದೇಶದಲ್ಲಿ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ಪೂರೈಕೆದಾರರ ನೆಲೆ ಚೆನ್ನಾಗಿರುವುದು, ‘ಭೂಬ್ಯಾಂಕ್’ ನೀತಿಯ ಮೂಲಕ ಜಮೀನು ಲಭ್ಯವಿರುವುದು, ಹಣಕಾಸಿನ ಕೊಡುಗೆಗಳು, ಬೆಂಗಳೂರಿಗೂ ಹತ್ತಿರ ಇರುವುದು ಆ ಕಂಪನಿಗಳು ತಮಿಳುನಾಡನ್ನು ಆಯ್ಕೆ ಮಾಡಿಕೊಳ್ಳಲು ಕಾರಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>