ಈ ಎರಡು ಕಂಪನಿಗಳು ಕರ್ನಾಟಕ ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದವು. ಆದರೆ, ಹೊಸೂರು–ಕೃಷ್ಣಗಿರಿ ಪ್ರದೇಶದಲ್ಲಿ ಆಟೊಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ಪೂರೈಕೆದಾರರ ನೆಲೆ ಚೆನ್ನಾಗಿರುವುದು, ‘ಭೂಬ್ಯಾಂಕ್’ ನೀತಿಯ ಮೂಲಕ ಜಮೀನು ಲಭ್ಯವಿರುವುದು, ಹಣಕಾಸಿನ ಕೊಡುಗೆಗಳು, ಬೆಂಗಳೂರಿಗೂ ಹತ್ತಿರ ಇರುವುದು ಆ ಕಂಪನಿಗಳು ತಮಿಳುನಾಡನ್ನು ಆಯ್ಕೆ ಮಾಡಿಕೊಳ್ಳಲು ಕಾರಣ.