<p><strong>ಸಾಲ ಭಾಗ್ಯ ಕರುಣಿಸಿದ ಮುಖ್ಯಮಂತ್ರಿ</strong></p><p>ತಮ್ಮ ಮೊದಲ ಅವಧಿಯಲ್ಲಿ ಸಾಲ ಮಾಡಿ ಪ್ರತಿ ಪ್ರಜೆಯ ತಲೆಯ ಮೇಲೆ ₹44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೊರಿಸಿ, ರಾಜ್ಯದ ಜನತೆಯ ಮೇಲೆ ‘ಸಾಲ ಭಾಗ್ಯ’ ಕರುಣಿಸಿದ್ದರು. ಇವರ ಅವಧಿಯಲ್ಲಿ ಹಳಿ ತಪ್ಪಿದ್ದ ಆರ್ಥಿಕತೆಯನ್ನು ನಮ್ಮ ಸರ್ಕಾರ ಬಂದ ಮೇಲೆ ಸರಿ ಮಾಡಿತ್ತು. ಈಗ ಮತ್ತೆ ₹1 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬುದು, ಈ ಸರ್ಕಾರದಲ್ಲಿ ‘ಸರ್ವರಿಗೂ ತೆರಿಗೆ ಸರ್ವರಿಗೂ ಸಾಲದ ಹೊರೆ’ ಎಂಬಂತಾಗಿದೆ. 2021 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಜೆಟ್ ಭಾಷಣವನ್ನು ಬಹಿಷ್ಕರಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸದಸ್ಯರು ಹೊರನಡೆದಿದ್ದು ಅವರಿಗೆ ನೆನಪಿಲ್ಲವೆ</p><p>-ಆರ್.ಅಶೋಕ, ವಿರೋಧಪಕ್ಷದ ನಾಯಕ, ವಿಧಾನಸಭೆ</p><p>****</p><p><strong>ಬಜೆಟ್ ಪಾವಿತ್ರ್ಯ ಹಾಳು ಮಾಡಿದ್ದಾರೆ</strong></p><p>15 ಬಾರಿ ಬಜೆಟ್ ಮಂಡಿಸಿ ₹1.5 ಲಕ್ಷ ಕೋಟಿ ಸಾಲ ಮಾಡಿ ದಾಖಲೆ ಸೃಷ್ಟಿಸಿರುವ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ವಿರೋಧಿಸಲು ಬಜೆಟ್ ಬಳಸಿಕೊಂಡಿದ್ದಾರೆ. ಈ ಮೂಲಕ ಬಜೆಟ್ನ ಪಾವಿತ್ರ್ಯ<br>ವನ್ನೇ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರದ ಅನುದಾನ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್ಟಿ ಕೌನ್ಸಿಲ್ ಇದೆ. ನೀತಿ ಆಯೋಗ ಇದೆ. ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್ನಲ್ಲಿ ಕೇಂದ್ರ ಸರ್ಕಾರ ವಿರೋಧಿಸುತ್ತಿರುವುದು ಅಪ್ಪಟ ರಾಜಕೀಯ. </p><p>-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ</p><p>****</p><p>ನಮ್ಮ ಬಜೆಟ್ನ ಅಂಕಿ-ಅಂಶಗಳನ್ನು ನೋಡಿ ವಿರೋಧ ಪಕ್ಷಗಳ ನಾಯಕರಿಗೆ ಸಂಕಟದಿಂದ ಕೂರಲು ಆಗಲಿಲ್ಲ. ಗ್ಯಾರಂಟಿಗಳಿಗೆ ಹಣ ಕೊಟ್ಟು ಇಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರಲ್ಲ ಎಂದು ಅಸೂಯೆಯಿಂದ ಬಜೆಟ್ ಧಿಕ್ಕರಿಸಿ ಎದ್ದು ಹೋದರು.</p><p>-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ</p><p>****</p><p>ಕ್ರಿಯಾಶೀಲತೆ, ದೂರದೃಷ್ಟಿ, ಪ್ರಗತಿಯ ಮುನ್ನೋಟ ಇಲ್ಲದ ಬಜೆಟ್. ಯುವ ಜನರಿಗೆ, ಉತ್ತರ ಕರ್ನಾಟಕಕ್ಕೆ ಒಂದೇ ಒಂದು ಕಾರ್ಯಕ್ರಮ, ಯೋಜನೆ ಪ್ರಕಟಿಸಿಲ್ಲ. ವೈಫಲ್ಯ ಮುಚ್ಚಿಕೊಳ್ಳಲು ಸಮಯ ವ್ಯರ್ಥ ಮಾಡಿದ್ದಾರೆ.</p><p>-ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ ಘಟಕ</p><p>****</p><p>ಸರ್ಕಾರದಿಂದ ಯಾವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸುತ್ತಾರೆ. ಡಿಪಿಆರ್ ಆದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಬಜೆಟ್ ಕೂಡ ಹಾಗೆಯೇ ಇದೆ</p><p>-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ</p><p>****</p><p>ಮನಸ್ಸಿದ್ದರೆ, ಜೀವಪರ ಕಾಳಜಿ ಇದ್ದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಈ ಬಜೆಟ್ ಉತ್ತಮ ಉದಾಹರಣೆ. ರಾಜ್ಯ ದಿವಾಳಿಯಾಗುತ್ತದೆ ಎಂಬ ಆರೋಪಕ್ಕೆ ತಕ್ಕ ಉತ್ತರ ಬಜೆಟ್ನಲ್ಲಿದೆ</p><p>-ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ</p><p>****</p><p>ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಬೆಂಗಳೂರು ನಗರದ ಹೊರಗೆ ಮಾಡುವುದು, ಯಶವಂತಪುರ ಜನರ ಸಮಸ್ಯೆಗೆ ಪರಿಹಾರ, ನೂರತ್ತಲ್ಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿ ಅನೇಕ ಉತ್ತಮ ಘೋಷಣೆಗಳಿರುವ ಬಜೆಟ್.</p><p>-ಎಸ್.ಟಿ. ಸೋಮಶೇಖರ್, ಬಿಜೆಪಿ ಶಾಸಕ, ಯಶವಂತಪುರ</p><p>****</p><p>ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಈಗ ಸುಮ್ಮನಿದೆ.</p><p>-‘ಮುಖ್ಯಮಂತ್ರಿ’ ಚಂದ್ರು, ರಾಜ್ಯಾಧ್ಯಕ್ಷ, ಆಮ್ ಆದ್ಮಿ ಪಾರ್ಟಿ</p><p>****</p><p>ಅಭಿವೃದ್ಧಿ ಮತ್ತು ಜನರ ಮನಸ್ಸಿನಲ್ಲಿ ಉಳಿಯುವ ಬಜೆಟ್ ಅಲ್ಲ. ರಾಜ್ಯದ ಅಭಿವೃದ್ಧಿ, ಆಡಳಿತ ಸುಧಾರಣೆಗೆ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಯಾವುದೇ ಯೋಜನೆ ಅಥವಾ ಕ್ರಮಗಳಿಲ್ಲ.</p><p>-ದೀಪಕ್ ಸಿ.ಎನ್., ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆಆರ್ಎಸ್ ಪಕ್ಷ</p><p>****</p><p>ಬಜೆಟ್ನಲ್ಲಿ ಆರ್ಥಿಕ ಶಿಸ್ತಿಲ್ಲ, ಮುಂದಾಲೋಚನೆ ಇಲ್ಲ. ರಾಜ್ಯದ ಬಗ್ಗೆ ಕಾಳಜಿ ಇಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ರೀತಿಯ ಬೋಗಸ್ ಬಜೆಟ್ ಇದಾಗಿದೆ. </p><p>-ಎನ್.ರವಿಕುಮಾರ್, ಸಚೇತಕ, ಬಿಜೆಪಿ </p><p>****</p><p><strong>ಸರ್ವತೋಮುಖ ಅಭಿವೃದ್ಧಿಗೆ ಪೂರಕ</strong></p><p>ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಸರ್ಕಾರಿ ಶಾಲೆ, ಕಾಲೇಜು ಉಳಿವಿಗೆ ಮುಂದಾಗಿರುವುದು ಮಾದರಿ ಕಾರ್ಯ. ಗ್ರಾಮೀಣ ಕೆಫೆ ಪ್ರಾರಂಭದ ಚಿಂತನೆ ಸರ್ವತೋಮುಖ ಅಭಿವೃದ್ಧಿಗೆ ಪೂರಕ.</p><p>-ಟಿ.ದಿಲೀಪ್ ಕುಮಾರ್, ಚಿತ್ರದುರ್ಗ</p><p> ****<br>ಶಿಕ್ಷಣ, ನಗರಾಭಿವೃದ್ಧಿ, ಕೃಷಿಗೆ ಒತ್ತು ನೀಡಲಾಗಿದೆ. ಕ್ರೀಡೆಗೆ ಇನ್ನಷ್ಟು ಬೆಂಬಲ ಬೇಕಿತ್ತು. ಹಣಕಾಸು ಹೊಂದಾಣಿಕೆಗೆ ಕ್ರಮಬದ್ಧ ಯೋಜನೆಗಳನ್ನು ಮಾಡಿ ಬಜೆಟ್ನ ಘೋಷಣೆಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಬೇಕು.</p><p>-ಎಚ್.ವಿ.ಯಶಸ್ವಿನಿ, ಶಿವಮೊಗ್ಗ </p><p>****</p><p>ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉದ್ಯಮಿಗಳು ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಹಾಗೂ ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ಉನ್ನತೀಕರಣಕ್ಕೆ ಶೇ 6ರ ಬಡ್ಡಿ ದರದಲ್ಲಿ ₹10ಕೋಟಿವರೆಗೆ ಸಾಲ ನೀಡಿಕೆ ನಿರ್ಧಾರ ಸ್ವಾಗತಾರ್ಹ.</p><p>–ಮಕ್ಮೂರ್ ಅಹಮದ್ ಖಾನ್, ಸಾರ್ವಜನಿಕ ಉಡುಪಿ</p><p>****</p><p>ಸಾಮಾನ್ಯ ವರ್ಗದವರಿಗೆ ಬಜೆಟ್ನಲ್ಲಿ ಯಾವುದೇ ಕೊಡುಗೆ ಸಿಕ್ಕಿಲ್ಲ. ಚಿಕ್ಕಮಗಳೂರಿಗೆ ಸ್ಪೈಸ್ ಪಾರ್ಕ್ ಬರಲಿದೆ ಎಂಬುದನ್ನು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಈ ಬಾರಿಯೂ ಪ್ರಸ್ತಾಪಿಸಲಾಗಿದ್ದು, ಅದು ಜಾರಿಯಾಗಲಿ.</p><p>–ಸುಮಾ ಪ್ರಸಾದ್, ಚಿಕ್ಕಮಗಳೂರು</p><p>****</p><p><strong>ರೈತರಿಗೆ ಅನುಕೂಲ</strong></p><p>ಈ ಬಾರಿಯ ಬಜೆಟ್ನಲ್ಲಿ ರೈತರ ಬಗ್ಗೆ ಕಾಳಜಿ ವಹಿಸಿ ₹27 ಸಾವಿರ ಕೋಟಿ ಬೆಳೆ ಸಾಲ ವಿತರಣೆ ಗುರಿ ಹೊಂದಿರುವುದು ಸ್ವಾಗತಾರ್ಹ. ಬೆಂಬಲ ಬೆಲೆ ಶೇ 50ರಷ್ಟು ಲಾಭಾಂಶ ಆಧಾರದಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಒಳ್ಳೆಯ ಬೆಳವಣಿಗೆ.</p><p>– ರಮೇಶ, ಯಾದಗಿರಿ ನಿವಾಸಿ</p><p>***</p><p> <strong>ಕೌಶಲ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು</strong></p><p>ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಘೋಷಿಸಿದ್ದು ಖುಷಿ ನೀಡಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿರುವ ಕಾರಣ ಯುವಜನತೆಯಲ್ಲಿ ಕೌಶಲ ಅಭಿವೃದ್ಧಿಗೆ ಸಾಕಷ್ಟು ಒತ್ತುಕೊಡಬೇಕಿತ್ತು. ಉದ್ಯೋಗ ಸೃಜನೆ ಆದ್ಯತೆಯಾಗಬೇಕಾಗಿತ್ತು.</p><p>– ಪ್ರತಿಮಾ ಪಟ್ಟಣಶೆಟ್ಟಿ, ಗೃಹಿಣಿ, ಕೊಪ್ಪಳ</p><p>***</p><p>ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳನ್ನೇ ಕೇಂದ್ರೀಕರಿಸಿಕೊಂಡು ಬಜೆಟ್ ಮಂಡಿಸಿದ್ದಾರೆ. ಸಾಧಾರಣ ಬಜೆಟ್ ಎನಿಸಿದರೂ ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳಿಗೆ, ಬಡವರಿಗೆ ತುಂಬಾ ಅನುಕೂಲವಾಗಿದೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಯೋಜನೆಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ವಿರೋಧ ಮಾಡುವುದು ಸರಿ ಅಲ್ಲ</p><p>–ವಿ.ಗೀತಾ, ಜನವಾದಿ ಮಹಿಳಾ ಸಂಘಟನೆ, ಕೋಲಾರ</p><p>***</p><p>ಬಡ, ಮಧ್ಯಮ ಕೂಲಿ ಕಾರ್ಮಿಕರ ಬದುಕನ್ನು ಉತ್ತಮಗೊಳಿಸುವ ಆಶಾದಾಯಕ ಬಜೆಟ್ ಇದಾಗಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ದೃಷ್ಟಿಕೋನದಿಂದ ನೋಡುವುದಾದರೆ ಅಭಿವೃದ್ಧಿಯ ಮುನ್ನೋಟದ ಸರ್ವಸ್ಪರ್ಶಿ ಬಜೆಟ್ ಇದಾಗಿದೆ.</p><p>-ಜಿ.ವಿ.ಗಂಗಪ್ಪ, ಗುಡಿಬಂಡೆ</p><p>***</p><p><strong>ನೀರಿನ ವಿಚಾರದಲ್ಲಿ ಮೋಸ</strong></p><p>ನೀರಾವರಿ ವಿಚಾರದಲ್ಲಿ ಬಯಲುಸೀಮೆಗೆ ಬಜೆಟ್ ಮೋಸದ ಪರಾಕಾಷ್ಠೆ ಎನಿಸಿದೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ತಿಲಾಂಜಲಿ ಇಡಲಾಗಿದೆ. ಯಾವುದೇ ಲಾಭವಿಲ್ಲದ ಎತ್ತಿನಹೊಳೆ ಯೋಜನೆಯ ಜಪ ಮುಂದುವರಿದಿದೆ. ಕೆರೆ, ಕುಂಟೆ, ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ.</p><p>-ಆಂಜನೇಯ ರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ</p><p>***</p><p>ಎಲ್ಲಾ ಕ್ಷೇತ್ರ ಹಾಗೂ ಸಮುದಾಯಗಳ ಜನರನ್ನು ಸಮಾನತೆ ಮತ್ತು ಸಮೃದ್ಧಿಯತ್ತ ಕರೆದೊಯ್ಯುವ ಬಜೆಟ್ ಇದಾಗಿದೆ. ಸ್ವರಾಜ್ಯದ ಸುಸ್ಥಿರ ಹಾಗೂ ಸ್ವಾಭಿಮಾನ ಉತ್ತೇಜನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದ್ಯತೆ ನೀಡಿದ್ದಾರೆ.</p><p>– ಜಿ. ಶಿವಣ್ಣ, ಅರ್ಥಶಾಸ್ತ್ರ ಪ್ರಾಧ್ಯಾಪಕ, ರಾಮನಗರ </p><p>***</p><p>ರಾಜ್ಯ ಬಜೆಟ್ ಜನಪರವಾಗಿದ್ದರೂ ಅಭಿವೃದ್ಧಿಯ ದೂರದೃಷ್ಟಿ ಇಲ್ಲ. ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಕೊಟ್ಟಿರುವ ಆದ್ಯತೆಯನ್ನು ರಾಜ್ಯದ ಅಭಿವೃದ್ಧಿ ಹಾಗೂ ತ್ವರಿತ ಆರ್ಥಿಕ ಬೆಳವಣಿಗೆ ಕಡೆಗೂ ಕೊಡಬೇಕು.</p><p>– ಪ್ರಶಾಂತ್, ಅಧ್ಯಕ್ಷ, ರಾಮನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ</p><p>***</p><p>ಸಾಮಾಜಿಕ ನ್ಯಾಯ, ಸಮನ್ವಯ ದೃಷ್ಟಿಗೆ ಬಜೆಟ್ ಪೂರಕವಾಗಿದೆ. ಮಕ್ಕಳ ಶಿಕ್ಷಣ, ವಸತಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಘೋಷಿಸಿದ ಕಾರ್ಯಕ್ರಮಗಳು ಸಕಾಲದಲ್ಲಿ ಅನುಷ್ಠಾನ ಆಗಬೇಕು.</p><p>– ಅನಿತಾ ಪರ್ವತಿಕರ, ಶಿರಸಿ, ಉತ್ತರ ಕನ್ನಡ ಜಿಲ್ಲೆ</p><p>******</p><p>ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾರಿಗೆ, ವಾಣಿಜ್ಯ, ಆಸ್ತಿ ತೆರಿಗೆ ಹೆಚ್ಚು ಮಾಡಿ, ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದಾರೆ.</p><p>–ವಿಶ್ವನಾಥ ಖಾನಾಪುರ, ಗದಗ</p><p>***</p><p>ರಾಜ್ಯದಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಸಾರಿಗೆ ಕಲ್ಪಿಸಲಾಗಿದ್ದು, ಬಹಳಷ್ಟು ಮಹಿಳೆಯರಿಗೆ ಅನುಕೂಲವಾಗಿದೆ. ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗೆ ವೆಹಿಕಲ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್ ಜಾರಿಗೊಳಿಸುತ್ತಿರುವುದು ಉತ್ತಮ</p><p>-ಸೌಮ್ಯ, ಮಲ್ಲೇಶ್ವರ</p><p>******</p><p>ಬಜೆಟ್ನಲ್ಲಿ ಘೋಷಿಸಿದ ಎಲ್ಲಾ ಅಭಿವೃದ್ಧಿ ಯೋಜನೆಗಳು ಗ್ಯಾರಂಟಿಯಾಗಿ ರಾಜ್ಯದ ಜನರನ್ನ ತಲುಪಿಸಬೇಕು. ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಿಸಲು ಸುರಂಗ ಮಾರ್ಗವನ್ನು ಪ್ರಾಯೋಗಿಕವಾಕ ಹೆಬ್ಬಾಳ ಜಂಕ್ಷನ್ನಲ್ಲಿ ಮಾಡುತ್ತಿರುವುದು ಶ್ಲಾಘನೀಯ</p><p>-ಅರ್ಚನಾ ಆರ್, ಸಹಾಯಕ ಪ್ರಾಧ್ಯಾಪಕಿ, ವಿಜಯ ಪದವಿಪೂರ್ವ ಕಾಲೇಜು </p><p>******</p><p>ಪ್ರವಾಸೋದ್ಯಮ ಹಾಗೂ ಬೆಂಗಳೂರು ಅಭಿವೃದ್ಧಿಗೆ ಬಜೆಟ್ನಲ್ಲಿ ಮುನ್ನೋಟ ಮಾತ್ರ ಇದೆ. ಬಜೆಟ್ನಲ್ಲಿ ಪೂರ್ತಿ ಭರವಸೆಗಳೇ ಇwದ್ದು, ಅವುಗಳನ್ನು ಅನುಷ್ಠಾನ ಮಾಡುವುದು ಅನುಮಾನ. ಆದ್ದರಿಂದ, ಸರ್ಕಾರ ಯೋಜನೆಗಳು ಜನರಿಗೆ ತಲುಪುವಂತಾಗಲಿ</p><p>-ಬಿ. ಆಶಿಕಾ, ರಾಜರಾಜೇಶ್ವರಿನಗರ </p><p>******</p><p>ಕನ್ನಡ ಅಭಿವೃದ್ಧಿ ವಿಷಯದಲ್ಲಿ ನಿರಾಸೆ ಮೂಡಿಸಿದ ಬಜೆಟ್. ಶಿಕ್ಷಣ, ವಿದ್ಯುತ್, ಆರೋಗ್ಯ ಇಲಾಖೆಯ ಯೋಜನೆಗಳ ಘೋಷಣೆ ಪ್ರತಿವರ್ಷದಂತೆ ಈ ವರ್ಷವೂ ಯಥಾಪ್ರಕಾರ ಮುಂದುವರಿದಿದೆ. ಇವೆಲ್ಲವೂ ಸಮರ್ಪಕವಾಗಿ ಜಾರಿಗೆ ಬರಬೇಕು. ಕೊನೆ ಹಂತದ ಜನರಿಗೂ ಯೋಜನೆಗಳು ತಲುಪುವಂತಾಗಬೇಕು</p><p>-ಎನ್. ಮುನಿರಾಜು, ಹೆಣ್ಣೂರು </p><p>******</p><p>ಸರ್ಕಾರಕ್ಕೆ ಬೇಡವಾದ ಅಂಗವಿಕಲರ ಸಮುದಾಯ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದಷ್ಟು ಪ್ರಾಮುಖ್ಯವನ್ನು ಅಂಗವಿಕಲರ ಸಬಲೀಕರಣಕ್ಕೆ ನೀಡದಿರುವುದು ವಿಪರ್ಯಾಸ. ಇವರಿಗೆ ಯಾವುದೇ ನೇರ ಸೌಲಭ್ಯ ಯೋಜನೆ ಘೋಷಿಸದೆ ನಿರೀಕ್ಷೆಗಳನ್ನು ಹುಸಿಮಾಡಿದೆ</p><p>-ಚಂದ್ರಶೇಖರ ಪುಟ್ಟಪ್ಪ, ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ </p><p>******</p><p>ಐಐಎಸ್ಸಿ, ಐಐಟಿ ಸಂಸ್ಥೆಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ತರಬೇತಿ ಪಡೆಯುವ ಪರಿಶಿಷ್ಟ ಪಂಗಡಗಳ ಎಂಜಿನಿಯರಿಂಗ್ ಪದವೀಧರರಿಗೆ ₹ 15 ಸಾವಿರ ಶಿಷ್ಯವೇತನ ನೀಡಿವುದುದನ್ನು ಸ್ವಾಗತಾರ್ಹ. ಈ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಪದವೀಧರರಿಗೂ ವಿಸ್ತರಿಸಿದ್ದರೆ ಅನುಕೂಲವಾಗುತ್ತಿತ್ತು</p><p>-ರವಿಚಂದ್ರ ಗಗನಮಾಲಿ, ಚಿಕ್ಕಬಿದರಕಲ್ಲು </p><p>******</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಲ ಭಾಗ್ಯ ಕರುಣಿಸಿದ ಮುಖ್ಯಮಂತ್ರಿ</strong></p><p>ತಮ್ಮ ಮೊದಲ ಅವಧಿಯಲ್ಲಿ ಸಾಲ ಮಾಡಿ ಪ್ರತಿ ಪ್ರಜೆಯ ತಲೆಯ ಮೇಲೆ ₹44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೊರಿಸಿ, ರಾಜ್ಯದ ಜನತೆಯ ಮೇಲೆ ‘ಸಾಲ ಭಾಗ್ಯ’ ಕರುಣಿಸಿದ್ದರು. ಇವರ ಅವಧಿಯಲ್ಲಿ ಹಳಿ ತಪ್ಪಿದ್ದ ಆರ್ಥಿಕತೆಯನ್ನು ನಮ್ಮ ಸರ್ಕಾರ ಬಂದ ಮೇಲೆ ಸರಿ ಮಾಡಿತ್ತು. ಈಗ ಮತ್ತೆ ₹1 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಕರ್ನಾಟಕವನ್ನು ಸಾಲದ ಸುಳಿಗೆ ಸಿಲುಕಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬುದು, ಈ ಸರ್ಕಾರದಲ್ಲಿ ‘ಸರ್ವರಿಗೂ ತೆರಿಗೆ ಸರ್ವರಿಗೂ ಸಾಲದ ಹೊರೆ’ ಎಂಬಂತಾಗಿದೆ. 2021 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಜೆಟ್ ಭಾಷಣವನ್ನು ಬಹಿಷ್ಕರಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸದಸ್ಯರು ಹೊರನಡೆದಿದ್ದು ಅವರಿಗೆ ನೆನಪಿಲ್ಲವೆ</p><p>-ಆರ್.ಅಶೋಕ, ವಿರೋಧಪಕ್ಷದ ನಾಯಕ, ವಿಧಾನಸಭೆ</p><p>****</p><p><strong>ಬಜೆಟ್ ಪಾವಿತ್ರ್ಯ ಹಾಳು ಮಾಡಿದ್ದಾರೆ</strong></p><p>15 ಬಾರಿ ಬಜೆಟ್ ಮಂಡಿಸಿ ₹1.5 ಲಕ್ಷ ಕೋಟಿ ಸಾಲ ಮಾಡಿ ದಾಖಲೆ ಸೃಷ್ಟಿಸಿರುವ ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ವಿರೋಧಿಸಲು ಬಜೆಟ್ ಬಳಸಿಕೊಂಡಿದ್ದಾರೆ. ಈ ಮೂಲಕ ಬಜೆಟ್ನ ಪಾವಿತ್ರ್ಯ<br>ವನ್ನೇ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಕೇಂದ್ರದ ಅನುದಾನ ಪಡೆಯಲು ಅನೇಕ ವೇದಿಕೆಗಳಿವೆ. ಜಿಎಸ್ಟಿ ಕೌನ್ಸಿಲ್ ಇದೆ. ನೀತಿ ಆಯೋಗ ಇದೆ. ಒಂದು ಬಾರಿಯೂ ನೀತಿ ಆಯೋಗದ ಸಭೆಗೆ ಹಾಜರಾಗದೇ ಆ ಸಂದರ್ಭದಲ್ಲಿ ಮಾತನಾಡದೇ ಬಜೆಟ್ನಲ್ಲಿ ಕೇಂದ್ರ ಸರ್ಕಾರ ವಿರೋಧಿಸುತ್ತಿರುವುದು ಅಪ್ಪಟ ರಾಜಕೀಯ. </p><p>-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ</p><p>****</p><p>ನಮ್ಮ ಬಜೆಟ್ನ ಅಂಕಿ-ಅಂಶಗಳನ್ನು ನೋಡಿ ವಿರೋಧ ಪಕ್ಷಗಳ ನಾಯಕರಿಗೆ ಸಂಕಟದಿಂದ ಕೂರಲು ಆಗಲಿಲ್ಲ. ಗ್ಯಾರಂಟಿಗಳಿಗೆ ಹಣ ಕೊಟ್ಟು ಇಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರಲ್ಲ ಎಂದು ಅಸೂಯೆಯಿಂದ ಬಜೆಟ್ ಧಿಕ್ಕರಿಸಿ ಎದ್ದು ಹೋದರು.</p><p>-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ</p><p>****</p><p>ಕ್ರಿಯಾಶೀಲತೆ, ದೂರದೃಷ್ಟಿ, ಪ್ರಗತಿಯ ಮುನ್ನೋಟ ಇಲ್ಲದ ಬಜೆಟ್. ಯುವ ಜನರಿಗೆ, ಉತ್ತರ ಕರ್ನಾಟಕಕ್ಕೆ ಒಂದೇ ಒಂದು ಕಾರ್ಯಕ್ರಮ, ಯೋಜನೆ ಪ್ರಕಟಿಸಿಲ್ಲ. ವೈಫಲ್ಯ ಮುಚ್ಚಿಕೊಳ್ಳಲು ಸಮಯ ವ್ಯರ್ಥ ಮಾಡಿದ್ದಾರೆ.</p><p>-ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ ಘಟಕ</p><p>****</p><p>ಸರ್ಕಾರದಿಂದ ಯಾವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸುತ್ತಾರೆ. ಡಿಪಿಆರ್ ಆದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಬಜೆಟ್ ಕೂಡ ಹಾಗೆಯೇ ಇದೆ</p><p>-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ</p><p>****</p><p>ಮನಸ್ಸಿದ್ದರೆ, ಜೀವಪರ ಕಾಳಜಿ ಇದ್ದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಈ ಬಜೆಟ್ ಉತ್ತಮ ಉದಾಹರಣೆ. ರಾಜ್ಯ ದಿವಾಳಿಯಾಗುತ್ತದೆ ಎಂಬ ಆರೋಪಕ್ಕೆ ತಕ್ಕ ಉತ್ತರ ಬಜೆಟ್ನಲ್ಲಿದೆ</p><p>-ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ</p><p>****</p><p>ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಬೆಂಗಳೂರು ನಗರದ ಹೊರಗೆ ಮಾಡುವುದು, ಯಶವಂತಪುರ ಜನರ ಸಮಸ್ಯೆಗೆ ಪರಿಹಾರ, ನೂರತ್ತಲ್ಲಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿ ಅನೇಕ ಉತ್ತಮ ಘೋಷಣೆಗಳಿರುವ ಬಜೆಟ್.</p><p>-ಎಸ್.ಟಿ. ಸೋಮಶೇಖರ್, ಬಿಜೆಪಿ ಶಾಸಕ, ಯಶವಂತಪುರ</p><p>****</p><p>ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಈಗ ಸುಮ್ಮನಿದೆ.</p><p>-‘ಮುಖ್ಯಮಂತ್ರಿ’ ಚಂದ್ರು, ರಾಜ್ಯಾಧ್ಯಕ್ಷ, ಆಮ್ ಆದ್ಮಿ ಪಾರ್ಟಿ</p><p>****</p><p>ಅಭಿವೃದ್ಧಿ ಮತ್ತು ಜನರ ಮನಸ್ಸಿನಲ್ಲಿ ಉಳಿಯುವ ಬಜೆಟ್ ಅಲ್ಲ. ರಾಜ್ಯದ ಅಭಿವೃದ್ಧಿ, ಆಡಳಿತ ಸುಧಾರಣೆಗೆ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಯಾವುದೇ ಯೋಜನೆ ಅಥವಾ ಕ್ರಮಗಳಿಲ್ಲ.</p><p>-ದೀಪಕ್ ಸಿ.ಎನ್., ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆಆರ್ಎಸ್ ಪಕ್ಷ</p><p>****</p><p>ಬಜೆಟ್ನಲ್ಲಿ ಆರ್ಥಿಕ ಶಿಸ್ತಿಲ್ಲ, ಮುಂದಾಲೋಚನೆ ಇಲ್ಲ. ರಾಜ್ಯದ ಬಗ್ಗೆ ಕಾಳಜಿ ಇಲ್ಲ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ರೀತಿಯ ಬೋಗಸ್ ಬಜೆಟ್ ಇದಾಗಿದೆ. </p><p>-ಎನ್.ರವಿಕುಮಾರ್, ಸಚೇತಕ, ಬಿಜೆಪಿ </p><p>****</p><p><strong>ಸರ್ವತೋಮುಖ ಅಭಿವೃದ್ಧಿಗೆ ಪೂರಕ</strong></p><p>ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಸರ್ಕಾರಿ ಶಾಲೆ, ಕಾಲೇಜು ಉಳಿವಿಗೆ ಮುಂದಾಗಿರುವುದು ಮಾದರಿ ಕಾರ್ಯ. ಗ್ರಾಮೀಣ ಕೆಫೆ ಪ್ರಾರಂಭದ ಚಿಂತನೆ ಸರ್ವತೋಮುಖ ಅಭಿವೃದ್ಧಿಗೆ ಪೂರಕ.</p><p>-ಟಿ.ದಿಲೀಪ್ ಕುಮಾರ್, ಚಿತ್ರದುರ್ಗ</p><p> ****<br>ಶಿಕ್ಷಣ, ನಗರಾಭಿವೃದ್ಧಿ, ಕೃಷಿಗೆ ಒತ್ತು ನೀಡಲಾಗಿದೆ. ಕ್ರೀಡೆಗೆ ಇನ್ನಷ್ಟು ಬೆಂಬಲ ಬೇಕಿತ್ತು. ಹಣಕಾಸು ಹೊಂದಾಣಿಕೆಗೆ ಕ್ರಮಬದ್ಧ ಯೋಜನೆಗಳನ್ನು ಮಾಡಿ ಬಜೆಟ್ನ ಘೋಷಣೆಗಳನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಬೇಕು.</p><p>-ಎಚ್.ವಿ.ಯಶಸ್ವಿನಿ, ಶಿವಮೊಗ್ಗ </p><p>****</p><p>ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉದ್ಯಮಿಗಳು ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಹಾಗೂ ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ಉನ್ನತೀಕರಣಕ್ಕೆ ಶೇ 6ರ ಬಡ್ಡಿ ದರದಲ್ಲಿ ₹10ಕೋಟಿವರೆಗೆ ಸಾಲ ನೀಡಿಕೆ ನಿರ್ಧಾರ ಸ್ವಾಗತಾರ್ಹ.</p><p>–ಮಕ್ಮೂರ್ ಅಹಮದ್ ಖಾನ್, ಸಾರ್ವಜನಿಕ ಉಡುಪಿ</p><p>****</p><p>ಸಾಮಾನ್ಯ ವರ್ಗದವರಿಗೆ ಬಜೆಟ್ನಲ್ಲಿ ಯಾವುದೇ ಕೊಡುಗೆ ಸಿಕ್ಕಿಲ್ಲ. ಚಿಕ್ಕಮಗಳೂರಿಗೆ ಸ್ಪೈಸ್ ಪಾರ್ಕ್ ಬರಲಿದೆ ಎಂಬುದನ್ನು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಈ ಬಾರಿಯೂ ಪ್ರಸ್ತಾಪಿಸಲಾಗಿದ್ದು, ಅದು ಜಾರಿಯಾಗಲಿ.</p><p>–ಸುಮಾ ಪ್ರಸಾದ್, ಚಿಕ್ಕಮಗಳೂರು</p><p>****</p><p><strong>ರೈತರಿಗೆ ಅನುಕೂಲ</strong></p><p>ಈ ಬಾರಿಯ ಬಜೆಟ್ನಲ್ಲಿ ರೈತರ ಬಗ್ಗೆ ಕಾಳಜಿ ವಹಿಸಿ ₹27 ಸಾವಿರ ಕೋಟಿ ಬೆಳೆ ಸಾಲ ವಿತರಣೆ ಗುರಿ ಹೊಂದಿರುವುದು ಸ್ವಾಗತಾರ್ಹ. ಬೆಂಬಲ ಬೆಲೆ ಶೇ 50ರಷ್ಟು ಲಾಭಾಂಶ ಆಧಾರದಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಒಳ್ಳೆಯ ಬೆಳವಣಿಗೆ.</p><p>– ರಮೇಶ, ಯಾದಗಿರಿ ನಿವಾಸಿ</p><p>***</p><p> <strong>ಕೌಶಲ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು</strong></p><p>ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಘೋಷಿಸಿದ್ದು ಖುಷಿ ನೀಡಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿರುವ ಕಾರಣ ಯುವಜನತೆಯಲ್ಲಿ ಕೌಶಲ ಅಭಿವೃದ್ಧಿಗೆ ಸಾಕಷ್ಟು ಒತ್ತುಕೊಡಬೇಕಿತ್ತು. ಉದ್ಯೋಗ ಸೃಜನೆ ಆದ್ಯತೆಯಾಗಬೇಕಾಗಿತ್ತು.</p><p>– ಪ್ರತಿಮಾ ಪಟ್ಟಣಶೆಟ್ಟಿ, ಗೃಹಿಣಿ, ಕೊಪ್ಪಳ</p><p>***</p><p>ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳನ್ನೇ ಕೇಂದ್ರೀಕರಿಸಿಕೊಂಡು ಬಜೆಟ್ ಮಂಡಿಸಿದ್ದಾರೆ. ಸಾಧಾರಣ ಬಜೆಟ್ ಎನಿಸಿದರೂ ಗ್ಯಾರಂಟಿಗಳಿಂದ ಹೆಣ್ಣು ಮಕ್ಕಳಿಗೆ, ಬಡವರಿಗೆ ತುಂಬಾ ಅನುಕೂಲವಾಗಿದೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಯೋಜನೆಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ವಿರೋಧ ಮಾಡುವುದು ಸರಿ ಅಲ್ಲ</p><p>–ವಿ.ಗೀತಾ, ಜನವಾದಿ ಮಹಿಳಾ ಸಂಘಟನೆ, ಕೋಲಾರ</p><p>***</p><p>ಬಡ, ಮಧ್ಯಮ ಕೂಲಿ ಕಾರ್ಮಿಕರ ಬದುಕನ್ನು ಉತ್ತಮಗೊಳಿಸುವ ಆಶಾದಾಯಕ ಬಜೆಟ್ ಇದಾಗಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ದೃಷ್ಟಿಕೋನದಿಂದ ನೋಡುವುದಾದರೆ ಅಭಿವೃದ್ಧಿಯ ಮುನ್ನೋಟದ ಸರ್ವಸ್ಪರ್ಶಿ ಬಜೆಟ್ ಇದಾಗಿದೆ.</p><p>-ಜಿ.ವಿ.ಗಂಗಪ್ಪ, ಗುಡಿಬಂಡೆ</p><p>***</p><p><strong>ನೀರಿನ ವಿಚಾರದಲ್ಲಿ ಮೋಸ</strong></p><p>ನೀರಾವರಿ ವಿಚಾರದಲ್ಲಿ ಬಯಲುಸೀಮೆಗೆ ಬಜೆಟ್ ಮೋಸದ ಪರಾಕಾಷ್ಠೆ ಎನಿಸಿದೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ತಿಲಾಂಜಲಿ ಇಡಲಾಗಿದೆ. ಯಾವುದೇ ಲಾಭವಿಲ್ಲದ ಎತ್ತಿನಹೊಳೆ ಯೋಜನೆಯ ಜಪ ಮುಂದುವರಿದಿದೆ. ಕೆರೆ, ಕುಂಟೆ, ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ.</p><p>-ಆಂಜನೇಯ ರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ</p><p>***</p><p>ಎಲ್ಲಾ ಕ್ಷೇತ್ರ ಹಾಗೂ ಸಮುದಾಯಗಳ ಜನರನ್ನು ಸಮಾನತೆ ಮತ್ತು ಸಮೃದ್ಧಿಯತ್ತ ಕರೆದೊಯ್ಯುವ ಬಜೆಟ್ ಇದಾಗಿದೆ. ಸ್ವರಾಜ್ಯದ ಸುಸ್ಥಿರ ಹಾಗೂ ಸ್ವಾಭಿಮಾನ ಉತ್ತೇಜನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದ್ಯತೆ ನೀಡಿದ್ದಾರೆ.</p><p>– ಜಿ. ಶಿವಣ್ಣ, ಅರ್ಥಶಾಸ್ತ್ರ ಪ್ರಾಧ್ಯಾಪಕ, ರಾಮನಗರ </p><p>***</p><p>ರಾಜ್ಯ ಬಜೆಟ್ ಜನಪರವಾಗಿದ್ದರೂ ಅಭಿವೃದ್ಧಿಯ ದೂರದೃಷ್ಟಿ ಇಲ್ಲ. ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಕೊಟ್ಟಿರುವ ಆದ್ಯತೆಯನ್ನು ರಾಜ್ಯದ ಅಭಿವೃದ್ಧಿ ಹಾಗೂ ತ್ವರಿತ ಆರ್ಥಿಕ ಬೆಳವಣಿಗೆ ಕಡೆಗೂ ಕೊಡಬೇಕು.</p><p>– ಪ್ರಶಾಂತ್, ಅಧ್ಯಕ್ಷ, ರಾಮನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ</p><p>***</p><p>ಸಾಮಾಜಿಕ ನ್ಯಾಯ, ಸಮನ್ವಯ ದೃಷ್ಟಿಗೆ ಬಜೆಟ್ ಪೂರಕವಾಗಿದೆ. ಮಕ್ಕಳ ಶಿಕ್ಷಣ, ವಸತಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಘೋಷಿಸಿದ ಕಾರ್ಯಕ್ರಮಗಳು ಸಕಾಲದಲ್ಲಿ ಅನುಷ್ಠಾನ ಆಗಬೇಕು.</p><p>– ಅನಿತಾ ಪರ್ವತಿಕರ, ಶಿರಸಿ, ಉತ್ತರ ಕನ್ನಡ ಜಿಲ್ಲೆ</p><p>******</p><p>ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾರಿಗೆ, ವಾಣಿಜ್ಯ, ಆಸ್ತಿ ತೆರಿಗೆ ಹೆಚ್ಚು ಮಾಡಿ, ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದಾರೆ.</p><p>–ವಿಶ್ವನಾಥ ಖಾನಾಪುರ, ಗದಗ</p><p>***</p><p>ರಾಜ್ಯದಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಸಾರಿಗೆ ಕಲ್ಪಿಸಲಾಗಿದ್ದು, ಬಹಳಷ್ಟು ಮಹಿಳೆಯರಿಗೆ ಅನುಕೂಲವಾಗಿದೆ. ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗೆ ವೆಹಿಕಲ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್ ಜಾರಿಗೊಳಿಸುತ್ತಿರುವುದು ಉತ್ತಮ</p><p>-ಸೌಮ್ಯ, ಮಲ್ಲೇಶ್ವರ</p><p>******</p><p>ಬಜೆಟ್ನಲ್ಲಿ ಘೋಷಿಸಿದ ಎಲ್ಲಾ ಅಭಿವೃದ್ಧಿ ಯೋಜನೆಗಳು ಗ್ಯಾರಂಟಿಯಾಗಿ ರಾಜ್ಯದ ಜನರನ್ನ ತಲುಪಿಸಬೇಕು. ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಿಸಲು ಸುರಂಗ ಮಾರ್ಗವನ್ನು ಪ್ರಾಯೋಗಿಕವಾಕ ಹೆಬ್ಬಾಳ ಜಂಕ್ಷನ್ನಲ್ಲಿ ಮಾಡುತ್ತಿರುವುದು ಶ್ಲಾಘನೀಯ</p><p>-ಅರ್ಚನಾ ಆರ್, ಸಹಾಯಕ ಪ್ರಾಧ್ಯಾಪಕಿ, ವಿಜಯ ಪದವಿಪೂರ್ವ ಕಾಲೇಜು </p><p>******</p><p>ಪ್ರವಾಸೋದ್ಯಮ ಹಾಗೂ ಬೆಂಗಳೂರು ಅಭಿವೃದ್ಧಿಗೆ ಬಜೆಟ್ನಲ್ಲಿ ಮುನ್ನೋಟ ಮಾತ್ರ ಇದೆ. ಬಜೆಟ್ನಲ್ಲಿ ಪೂರ್ತಿ ಭರವಸೆಗಳೇ ಇwದ್ದು, ಅವುಗಳನ್ನು ಅನುಷ್ಠಾನ ಮಾಡುವುದು ಅನುಮಾನ. ಆದ್ದರಿಂದ, ಸರ್ಕಾರ ಯೋಜನೆಗಳು ಜನರಿಗೆ ತಲುಪುವಂತಾಗಲಿ</p><p>-ಬಿ. ಆಶಿಕಾ, ರಾಜರಾಜೇಶ್ವರಿನಗರ </p><p>******</p><p>ಕನ್ನಡ ಅಭಿವೃದ್ಧಿ ವಿಷಯದಲ್ಲಿ ನಿರಾಸೆ ಮೂಡಿಸಿದ ಬಜೆಟ್. ಶಿಕ್ಷಣ, ವಿದ್ಯುತ್, ಆರೋಗ್ಯ ಇಲಾಖೆಯ ಯೋಜನೆಗಳ ಘೋಷಣೆ ಪ್ರತಿವರ್ಷದಂತೆ ಈ ವರ್ಷವೂ ಯಥಾಪ್ರಕಾರ ಮುಂದುವರಿದಿದೆ. ಇವೆಲ್ಲವೂ ಸಮರ್ಪಕವಾಗಿ ಜಾರಿಗೆ ಬರಬೇಕು. ಕೊನೆ ಹಂತದ ಜನರಿಗೂ ಯೋಜನೆಗಳು ತಲುಪುವಂತಾಗಬೇಕು</p><p>-ಎನ್. ಮುನಿರಾಜು, ಹೆಣ್ಣೂರು </p><p>******</p><p>ಸರ್ಕಾರಕ್ಕೆ ಬೇಡವಾದ ಅಂಗವಿಕಲರ ಸಮುದಾಯ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದಷ್ಟು ಪ್ರಾಮುಖ್ಯವನ್ನು ಅಂಗವಿಕಲರ ಸಬಲೀಕರಣಕ್ಕೆ ನೀಡದಿರುವುದು ವಿಪರ್ಯಾಸ. ಇವರಿಗೆ ಯಾವುದೇ ನೇರ ಸೌಲಭ್ಯ ಯೋಜನೆ ಘೋಷಿಸದೆ ನಿರೀಕ್ಷೆಗಳನ್ನು ಹುಸಿಮಾಡಿದೆ</p><p>-ಚಂದ್ರಶೇಖರ ಪುಟ್ಟಪ್ಪ, ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ </p><p>******</p><p>ಐಐಎಸ್ಸಿ, ಐಐಟಿ ಸಂಸ್ಥೆಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ತರಬೇತಿ ಪಡೆಯುವ ಪರಿಶಿಷ್ಟ ಪಂಗಡಗಳ ಎಂಜಿನಿಯರಿಂಗ್ ಪದವೀಧರರಿಗೆ ₹ 15 ಸಾವಿರ ಶಿಷ್ಯವೇತನ ನೀಡಿವುದುದನ್ನು ಸ್ವಾಗತಾರ್ಹ. ಈ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಪದವೀಧರರಿಗೂ ವಿಸ್ತರಿಸಿದ್ದರೆ ಅನುಕೂಲವಾಗುತ್ತಿತ್ತು</p><p>-ರವಿಚಂದ್ರ ಗಗನಮಾಲಿ, ಚಿಕ್ಕಬಿದರಕಲ್ಲು </p><p>******</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>