<p><strong>ಬೆಂಗಳೂರು:</strong> ಸಮೃದ್ಧಿ ಮತ್ತು ಅದೃಷ್ಟದ ಪವಿತ್ರ ದಿನ ಎಂದು ಪರಿಗಣಿಸಲಾಗಿರುವ ಅಕ್ಷಯ ತೃತೀಯ (ಮಂಗಳವಾರ) ಸಂದರ್ಭದಲ್ಲಿ ಈ ಬಾರಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಿನ್ನಾಭರಣಗಳ ಖರೀದಿ ಭರ್ಜರಿಯಾಗಿ ನಡೆಯಲಿದೆ ಎಂದು ವರ್ತಕರು ನಿರೀಕ್ಷಿಸಿದ್ದಾರೆ.</p>.<p>ನೋಟು ರದ್ದತಿ ಮತ್ತು ಜಿಎಸ್ಟಿ ನಂತರ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರಿಂದ ಈ ಬಾರಿ ನಡೆಯಲಿರುವ ಖರೀದಿ ಬಗ್ಗೆ ಚಿನ್ನಾಭರಣ ಮಾರಾಟ ಸಂಸ್ಥೆಗಳಲ್ಲಿ ಹೆಚ್ಚಿನ ನಿರೀಕ್ಷೆ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿರುವುದು ಕೂಡ ಸಹಜವಾಗಿಯೇ ಗ್ರಾಹಕರ ಉತ್ಸಾಹವನ್ನೂ ಹೆಚ್ಚಿಸಿದೆ.</p>.<p>‘ಮಾರುಕಟ್ಟೆಯಲ್ಲಿನ ಒಂದು ವಾರದಿಂದೀಚೆಗಿನ ಚಟುವಟಿಕೆಗಳನ್ನು ಗಮನಿಸಿದರೆ, ಈ ಬಾರಿಯ ವಹಿವಾಟು ತುಂಬ ಚೆನ್ನಾಗಿರಲಿದೆ. ಚಿನ್ನದ ಬೆಲೆ ಶೇ 8ರಷ್ಟು ಕಡಿಮೆಯಾಗಿರುವುದು ಖಂಡಿತವಾಗಿಯೂ ಗ್ರಾಹಕರನ್ನು ಉತ್ತೇಜಿಸಲಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಬಾಬು ಹೇಳಿದ್ದಾರೆ.</p>.<p>ದೀರ್ಘ ಸಮಯದ ನಂತರ ವಹಿವಾಟು ಎರಡಂಕಿಯ ಪ್ರಗತಿ ಕಾಣಲಿದೆ ಎನ್ನುವುದು ಚಿನಿವಾರ ಪೇಟೆಯ ವರ್ತಕರ ಎಣಿಕೆಯಾಗಿದೆ. ಸದ್ಯಕ್ಕೆ ಚಿನ್ನದ ಚಿಲ್ಲರೆ ಮಾರಾಟ ದರವು ತಲಾ 10 ಗ್ರಾಂಗಳಿಗೆ ₹ 31,600ರ ಮಟ್ಟದಲ್ಲಿ ಇದೆ.</p>.<p>ಹಿಂದಿನ ವರ್ಷದ ಅಕ್ಷಯ ತೃತೀಯ ದಿನ ಚಿನ್ನದ ಬೆಲೆ ₹ 31,310ರಷ್ಟಿತ್ತು. ಈ ವರ್ಷದ ಫೆಬ್ರುವರಿ ತಿಂಗಳ ಮಧ್ಯಭಾಗದಲ್ಲಿ ಬೆಲೆಮಟ್ಟ ₹ ₹ 33,700ರ ಆಸುಪಾಸಿನಲ್ಲಿತ್ತು. ಅದಕ್ಕೆ ಹೋಲಿಸಿದರೆ ಸದ್ಯದ ಬೆಲೆ ₹ 2 ಸಾವಿರದಷ್ಟು ಅಗ್ಗವಾಗಿದೆ. ಶೇ 3ರಷ್ಟು ಜಿಎಸ್ಟಿ ಸೇರ್ಪಡೆಯಾಗಲಿರುವುದರಿಂದ ಬೆಲೆ ಮಟ್ಟವು ಕೊಂಚ ವ್ಯತ್ಯಾಸಗೊಳ್ಳಲಿದೆ.</p>.<p class="Subhead"><strong>ಆಕರ್ಷಕ ಕೊಡುಗೆ:</strong> ಸಂಘಟಿತ ರಿಟೇಲ್ ವರ್ತಕರು ಗ್ರಾಹಕರನ್ನು ಸೆಳೆಯಲು ಪೈಪೋಟಿ ಮೇಲೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿರುವುದು ಕೂಡ ವಹಿವಾಟು ಹೆಚ್ಚಳಕ್ಕೆ ಉತ್ತೇಜನಕಾರಿಯಾಗಿದೆ.</p>.<p>ಕೆಲ ಸಂಸ್ಥೆಗಳು ಮುಂಚಿತವಾಗಿಯೇ ಬುಕಿಂಗ್ ಸೌಲಭ್ಯ ಒದಗಿಸಿವೆ. ಗ್ರಾಹಕರು ತಮಗಿಷ್ಟದ ಆಭರಣಗಳನ್ನು ಅಕ್ಷಯ ತೃತೀಯ ದಿನ ಖರೀದಿಸಲು ಇದು ನೆರವಾಗಲಿದೆ. ಮುಂಗಡ ಖರೀದಿ ದಿನದ ಬೆಲೆಗೆ ಹೋಲಿಸಿದರೆ ಮಂಗಳವಾರದ ಚಿನ್ನದ ಬೆಲೆ<br />ಕಡಿಮೆಯಾಗಿದ್ದರೆ ಅದರ ಲಾಭವನ್ನೂ ಗ್ರಾಹಕರಿಗೆ ವರ್ಗಾಯಿಸಲೂ ಕೆಲ ಸಂಸ್ಥೆಗಳು ಮುಂದಾಗಿವೆ.</p>.<p>ಈ ನಿರೀಕ್ಷಿತ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ಕೆಲ ಚಿನ್ನಾಭರಣ ಮಾರಾಟ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ನವ ನವೀನ ವಿನ್ಯಾಸಗಳ ಆಭರಣಗಳನ್ನೂ ಪರಿಚಯಿಸಿವೆ. ಮಳಿಗೆಗಳಲ್ಲಿ ವಿಶೇಷ ಪೂಜೆಗೂ ವ್ಯವಸ್ಥೆ ಮಾಡಿವೆ. ತನಿಷ್ಕದ ಪಾಲುದಾರಿಕಾ ಸಂಸ್ಥೆ ಕ್ಯಾರಟ್ಲೇನ್ ಸಂಸ್ಥೆಯು 5 ಸಾವಿರ ಬಗೆಯ ಹೊಸ ವಿನ್ಯಾಸದ ಆಭರಣಗಳನ್ನು ಪರಿಚಯಿಸಿದೆ.</p>.<p>ರಿಲಯನ್ಸ್ ಜ್ಯುವೆಲ್ಸ್, ಚಿನ್ನ ಖರೀದಿ ಸಂಭ್ರಮ ಹೆಚ್ಚಿಸಲು ದೇವಾಲಯ ಮಾದರಿಯ ಆಕರ್ಷಕ ವಿನ್ಯಾಸದ ಚಿನ್ನದ ಆಭರಣಗಳ ಸಂಗ್ರಹ 'ಅಪೂರ್ವಂ' ಪರಿಚಯಿಸಿದೆ. ಚಿನ್ನ ಮತ್ತು ವಜ್ರಾಭರಣಗಳ ಮೇಕಿಂಗ್ ಮೇಲೆ ಶೇ 25 ಕಡಿತ ಪ್ರಕಟಿಸಿದೆ. ವಜ್ರಾಭರಣ ಸಂಸ್ಥೆ ಕೀರ್ತಿಲಾಲ್, ಪ್ರತಿ ಕ್ಯಾರಟ್ ವಜ್ರಕ್ಕೆ ₹ 14 ಸಾವಿರ ಕಡಿತ ಘೋಷಿಸಿದೆ.</p>.<p>***</p>.<p>ಬೆಲೆ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಆಸಕ್ತಿಯ ಕಾರಣಕ್ಕೆ ಚಿನ್ನಾಭರಣಗಳಿಗೆ ಶೇ 10ರಷ್ಟು ಬೇಡಿಕೆ ಹೆಚ್ಚುವ ಅಂದಾಜಿದೆ</p>.<p><strong>-ಅನಂತ್ ಪದ್ಮನಾಭನ್, ಅಖಿಲ ಭಾರತ ಚಿನ್ನಾಭರಣ ಮಂಡಳಿ ಅಧ್ಯಕ್ಷ</strong></p>.<p>ಚಿನ್ನಾಭರಣಗಳಿಗೆ ಶೇ 15ರಿಂದ 20ರಷ್ಟು ಬೇಡಿಕೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ<br /><strong>-ಸೌರಭ್ ಗಾಡ್ಗೀಳ್,ಭಾರತ ಚಿನ್ನಾಭರಣ ಸಂಘದ ರಾಷ್ಟ್ರೀಯ ಅಧ್ಯಕ್ಷ</strong></p>.<p>ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಡ ಬುಕಿಂಗ್ ಪ್ರಮಾಣ ಶೇ 30ರಷ್ಟು ಹೆಚ್ಚಳಗೊಂಡಿದೆ<br /><strong>-ಟಿ. ಎಸ್. ಕಲ್ಯಾಣರಾಮನ್,ಕಲ್ಯಾಣ್ ಜುವೆಲ್ಲರ್ಸ್ ಅಧ್ಯಕ್ಷ</strong></p>.<p>ಚಿನ್ನದ ಬೆಲೆ ಶೇ 8ರಷ್ಟು ಕಡಿಮೆಯಾಗಿರುವುದರಿಂದ ವಾರದಿಂದೀಚೆಗೆ ಚಿನ್ನಾಭರಣ ಮಾರುಕಟ್ಟೆಯಲ್ಲಿ ಚಟುವಟಿಕೆ ಜೋರಾಗಿದೆ<br /><strong>-ವೆಂಕಟೇಶ್ ಬಾಬು,ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಮೃದ್ಧಿ ಮತ್ತು ಅದೃಷ್ಟದ ಪವಿತ್ರ ದಿನ ಎಂದು ಪರಿಗಣಿಸಲಾಗಿರುವ ಅಕ್ಷಯ ತೃತೀಯ (ಮಂಗಳವಾರ) ಸಂದರ್ಭದಲ್ಲಿ ಈ ಬಾರಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಿನ್ನಾಭರಣಗಳ ಖರೀದಿ ಭರ್ಜರಿಯಾಗಿ ನಡೆಯಲಿದೆ ಎಂದು ವರ್ತಕರು ನಿರೀಕ್ಷಿಸಿದ್ದಾರೆ.</p>.<p>ನೋಟು ರದ್ದತಿ ಮತ್ತು ಜಿಎಸ್ಟಿ ನಂತರ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರಿಂದ ಈ ಬಾರಿ ನಡೆಯಲಿರುವ ಖರೀದಿ ಬಗ್ಗೆ ಚಿನ್ನಾಭರಣ ಮಾರಾಟ ಸಂಸ್ಥೆಗಳಲ್ಲಿ ಹೆಚ್ಚಿನ ನಿರೀಕ್ಷೆ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿರುವುದು ಕೂಡ ಸಹಜವಾಗಿಯೇ ಗ್ರಾಹಕರ ಉತ್ಸಾಹವನ್ನೂ ಹೆಚ್ಚಿಸಿದೆ.</p>.<p>‘ಮಾರುಕಟ್ಟೆಯಲ್ಲಿನ ಒಂದು ವಾರದಿಂದೀಚೆಗಿನ ಚಟುವಟಿಕೆಗಳನ್ನು ಗಮನಿಸಿದರೆ, ಈ ಬಾರಿಯ ವಹಿವಾಟು ತುಂಬ ಚೆನ್ನಾಗಿರಲಿದೆ. ಚಿನ್ನದ ಬೆಲೆ ಶೇ 8ರಷ್ಟು ಕಡಿಮೆಯಾಗಿರುವುದು ಖಂಡಿತವಾಗಿಯೂ ಗ್ರಾಹಕರನ್ನು ಉತ್ತೇಜಿಸಲಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಬಾಬು ಹೇಳಿದ್ದಾರೆ.</p>.<p>ದೀರ್ಘ ಸಮಯದ ನಂತರ ವಹಿವಾಟು ಎರಡಂಕಿಯ ಪ್ರಗತಿ ಕಾಣಲಿದೆ ಎನ್ನುವುದು ಚಿನಿವಾರ ಪೇಟೆಯ ವರ್ತಕರ ಎಣಿಕೆಯಾಗಿದೆ. ಸದ್ಯಕ್ಕೆ ಚಿನ್ನದ ಚಿಲ್ಲರೆ ಮಾರಾಟ ದರವು ತಲಾ 10 ಗ್ರಾಂಗಳಿಗೆ ₹ 31,600ರ ಮಟ್ಟದಲ್ಲಿ ಇದೆ.</p>.<p>ಹಿಂದಿನ ವರ್ಷದ ಅಕ್ಷಯ ತೃತೀಯ ದಿನ ಚಿನ್ನದ ಬೆಲೆ ₹ 31,310ರಷ್ಟಿತ್ತು. ಈ ವರ್ಷದ ಫೆಬ್ರುವರಿ ತಿಂಗಳ ಮಧ್ಯಭಾಗದಲ್ಲಿ ಬೆಲೆಮಟ್ಟ ₹ ₹ 33,700ರ ಆಸುಪಾಸಿನಲ್ಲಿತ್ತು. ಅದಕ್ಕೆ ಹೋಲಿಸಿದರೆ ಸದ್ಯದ ಬೆಲೆ ₹ 2 ಸಾವಿರದಷ್ಟು ಅಗ್ಗವಾಗಿದೆ. ಶೇ 3ರಷ್ಟು ಜಿಎಸ್ಟಿ ಸೇರ್ಪಡೆಯಾಗಲಿರುವುದರಿಂದ ಬೆಲೆ ಮಟ್ಟವು ಕೊಂಚ ವ್ಯತ್ಯಾಸಗೊಳ್ಳಲಿದೆ.</p>.<p class="Subhead"><strong>ಆಕರ್ಷಕ ಕೊಡುಗೆ:</strong> ಸಂಘಟಿತ ರಿಟೇಲ್ ವರ್ತಕರು ಗ್ರಾಹಕರನ್ನು ಸೆಳೆಯಲು ಪೈಪೋಟಿ ಮೇಲೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿರುವುದು ಕೂಡ ವಹಿವಾಟು ಹೆಚ್ಚಳಕ್ಕೆ ಉತ್ತೇಜನಕಾರಿಯಾಗಿದೆ.</p>.<p>ಕೆಲ ಸಂಸ್ಥೆಗಳು ಮುಂಚಿತವಾಗಿಯೇ ಬುಕಿಂಗ್ ಸೌಲಭ್ಯ ಒದಗಿಸಿವೆ. ಗ್ರಾಹಕರು ತಮಗಿಷ್ಟದ ಆಭರಣಗಳನ್ನು ಅಕ್ಷಯ ತೃತೀಯ ದಿನ ಖರೀದಿಸಲು ಇದು ನೆರವಾಗಲಿದೆ. ಮುಂಗಡ ಖರೀದಿ ದಿನದ ಬೆಲೆಗೆ ಹೋಲಿಸಿದರೆ ಮಂಗಳವಾರದ ಚಿನ್ನದ ಬೆಲೆ<br />ಕಡಿಮೆಯಾಗಿದ್ದರೆ ಅದರ ಲಾಭವನ್ನೂ ಗ್ರಾಹಕರಿಗೆ ವರ್ಗಾಯಿಸಲೂ ಕೆಲ ಸಂಸ್ಥೆಗಳು ಮುಂದಾಗಿವೆ.</p>.<p>ಈ ನಿರೀಕ್ಷಿತ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ಕೆಲ ಚಿನ್ನಾಭರಣ ಮಾರಾಟ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ನವ ನವೀನ ವಿನ್ಯಾಸಗಳ ಆಭರಣಗಳನ್ನೂ ಪರಿಚಯಿಸಿವೆ. ಮಳಿಗೆಗಳಲ್ಲಿ ವಿಶೇಷ ಪೂಜೆಗೂ ವ್ಯವಸ್ಥೆ ಮಾಡಿವೆ. ತನಿಷ್ಕದ ಪಾಲುದಾರಿಕಾ ಸಂಸ್ಥೆ ಕ್ಯಾರಟ್ಲೇನ್ ಸಂಸ್ಥೆಯು 5 ಸಾವಿರ ಬಗೆಯ ಹೊಸ ವಿನ್ಯಾಸದ ಆಭರಣಗಳನ್ನು ಪರಿಚಯಿಸಿದೆ.</p>.<p>ರಿಲಯನ್ಸ್ ಜ್ಯುವೆಲ್ಸ್, ಚಿನ್ನ ಖರೀದಿ ಸಂಭ್ರಮ ಹೆಚ್ಚಿಸಲು ದೇವಾಲಯ ಮಾದರಿಯ ಆಕರ್ಷಕ ವಿನ್ಯಾಸದ ಚಿನ್ನದ ಆಭರಣಗಳ ಸಂಗ್ರಹ 'ಅಪೂರ್ವಂ' ಪರಿಚಯಿಸಿದೆ. ಚಿನ್ನ ಮತ್ತು ವಜ್ರಾಭರಣಗಳ ಮೇಕಿಂಗ್ ಮೇಲೆ ಶೇ 25 ಕಡಿತ ಪ್ರಕಟಿಸಿದೆ. ವಜ್ರಾಭರಣ ಸಂಸ್ಥೆ ಕೀರ್ತಿಲಾಲ್, ಪ್ರತಿ ಕ್ಯಾರಟ್ ವಜ್ರಕ್ಕೆ ₹ 14 ಸಾವಿರ ಕಡಿತ ಘೋಷಿಸಿದೆ.</p>.<p>***</p>.<p>ಬೆಲೆ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಆಸಕ್ತಿಯ ಕಾರಣಕ್ಕೆ ಚಿನ್ನಾಭರಣಗಳಿಗೆ ಶೇ 10ರಷ್ಟು ಬೇಡಿಕೆ ಹೆಚ್ಚುವ ಅಂದಾಜಿದೆ</p>.<p><strong>-ಅನಂತ್ ಪದ್ಮನಾಭನ್, ಅಖಿಲ ಭಾರತ ಚಿನ್ನಾಭರಣ ಮಂಡಳಿ ಅಧ್ಯಕ್ಷ</strong></p>.<p>ಚಿನ್ನಾಭರಣಗಳಿಗೆ ಶೇ 15ರಿಂದ 20ರಷ್ಟು ಬೇಡಿಕೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ<br /><strong>-ಸೌರಭ್ ಗಾಡ್ಗೀಳ್,ಭಾರತ ಚಿನ್ನಾಭರಣ ಸಂಘದ ರಾಷ್ಟ್ರೀಯ ಅಧ್ಯಕ್ಷ</strong></p>.<p>ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಡ ಬುಕಿಂಗ್ ಪ್ರಮಾಣ ಶೇ 30ರಷ್ಟು ಹೆಚ್ಚಳಗೊಂಡಿದೆ<br /><strong>-ಟಿ. ಎಸ್. ಕಲ್ಯಾಣರಾಮನ್,ಕಲ್ಯಾಣ್ ಜುವೆಲ್ಲರ್ಸ್ ಅಧ್ಯಕ್ಷ</strong></p>.<p>ಚಿನ್ನದ ಬೆಲೆ ಶೇ 8ರಷ್ಟು ಕಡಿಮೆಯಾಗಿರುವುದರಿಂದ ವಾರದಿಂದೀಚೆಗೆ ಚಿನ್ನಾಭರಣ ಮಾರುಕಟ್ಟೆಯಲ್ಲಿ ಚಟುವಟಿಕೆ ಜೋರಾಗಿದೆ<br /><strong>-ವೆಂಕಟೇಶ್ ಬಾಬು,ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>