<p><strong>ಬೆಂಗಳೂರು:</strong> ಅಡಕೆ ಆರೋಗ್ಯಕ್ಕೆ ಹಾನಿಕಾರವಲ್ಲ ಎಂಬ ಕ್ಲಿನಿಕಲ್ ವರದಿ ತಯಾರಿಸಬೇಕು. ಈ ಮೂಲಕ ಅಡಕೆ ಬೆಳೆಗಾರರ ಆತಂಕವನ್ನು ದೂರ ಮಾಡಬೇಕು ಎಂದು ಅಡಕೆ ಕಾರ್ಯಪಡೆ ಸರ್ಕಾರದ ಮೇಲೆ ಒತ್ತಡ ಹೇರಿದೆ.</p>.<p>ವಿಧಾನಸೌಧದಲ್ಲಿ ಗುರುವಾರ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಅಡಕೆ ಕಾರ್ಯಪಡೆ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.</p>.<p>‘ಅಡಕೆ ವಿಷಯ ಸುಪ್ರೀಂಕೋರ್ಟ್ನಲ್ಲಿದ್ದು, ಈ ವಿಷಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ರಾಜ್ಯ ಸರ್ಕಾರವೇ ನೇಮಿಸಬೇಕು. ಇದರಿಂದ ಅಡಕೆ ಬೆಳೆಗಾರರಿಗೆ ಬಲ ಬಂದಂತಾಗುತ್ತದೆ. ಸರ್ಕಾರವೇ ಜವಾಬ್ದಾರಿ ತೆಗೆದುಕೊಂಡರೆ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ’ ಎಂದು ಕಾರ್ಯಪಡೆ ಸದಸ್ಯ ಹಾಗೂ ಹಿರಿಯ ಸಹಕಾರಿ ಮಂಜಪ್ಪ ತಿಳಿಸಿದರು.</p>.<p>‘ಅಡಕೆ ಹಾನಿಕಾರಕ ಅಲ್ಲ ಎಂಬುದನ್ನು ನಿರೂಪಿಸಲು ತಕ್ಷಣವೇ ತಜ್ಞರ ತಂಡವನ್ನು ರಚಿಸಬೇಕು. ತಂಡ ನೀಡುವ ವೈಜ್ಞಾನಿಕ ವರದಿಯಿಂದ ನ್ಯಾಯಾಲಯಕ್ಕೂ ಮನವರಿಕೆಯಾಗುತ್ತದೆ. ಅಲ್ಲದೆ, ಅಡಕೆಗೆ ಬಾಧಿಸುತ್ತಿರುವ ರೋಗಗಳು ಮತ್ತು ಅದಕ್ಕೆ ಪರಿಹಾರದ ಬಗ್ಗೆ ಸಂಶೋಧನೆಗಳನ್ನು ನಡೆಸಬೇಕಾಗಿದೆ. ಇದಕ್ಕಾಗಿ ಆಯ–ವ್ಯಯದಲ್ಲಿ ₹10 ಕೋಟಿ ನಿಗದಿ ಮಾಡಬೇಕು’ ಎಂದು ಮುಖ್ಯ<br />ಮಂತ್ರಿಯವರಿಗೆ ಮನವಿ ಮಾಡಿದ್ದಾಗಿ ಹೇಳಿದರು. ನಿಯೋಗದಲ್ಲಿ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ, ಕೊಂಕೋಡಿ ಪದ್ಮನಾಭ ಮತ್ತಿತರರು ಇದ್ದರು.</p>.<p><strong>ಜೀವ ವೈವಿಧ್ಯ ಮಂಡಳಿ ಬೇಡಿಕೆಗಳು:</strong></p>.<p>* ರಾಜ್ಯದಲ್ಲಿ 22 ಪ್ರಮುಖ ನದಿಗಳು ಮತ್ತು 180 ಉಪನದಿಗಳ ಮೂಲಗಳಿವೆ. ಈ ನದಿ ಮೂಲಗಳ ಸಂರಕ್ಷಣೆ ವಿಶೇಷ ಯೋಜನೆ ರೂಪಿಸಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಬೇಕು.</p>.<p>* ಉತ್ತರ ಕರ್ನಾಟಕ– ಕಲ್ಯಾಣ ಕರ್ನಾಟಕ ಸೇರಿ ಬಯಲು ಸೀಮೆ ಭೂ ಪ್ರದೇಶ ಮರುಭೂಮಿ ಆಗುವುದನ್ನು ತಪ್ಪಿಸಲು ಬಯಲುಸೀಮೆಯ ವನ ವಿಕಾಸ ಯೋಜನೆಯನ್ನು ಈ ಪ್ರದೇಶದಲ್ಲಿ ಜಾರಿ ಮಾಡಬೇಕು.</p>.<p>*ಉತ್ತರಕನ್ನಡ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದೆ. ರೈತರ ಸಹಭಾಗಿತ್ವದಲ್ಲಿ 5 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆ ಸೇರ್ಪಡೆ ಮಾಡಬೇಕು.</p>.<p>*ಕರಾವಳಿ ಪರಿಸರ ರಕ್ಷಣೆಗೆ ಮಹತ್ವದ ಕೊಡುಗೆ ನೀಡುವ ಮೀನುಗಾರರು, ರೈತರು, ರೈತರು ಇಷ್ಟಪಟ್ಟಿರುವ ಕರಾವಳಿ ಹಸಿರು ಕವಚ ಎಂಬ ವನೀಕರಣ ಯೋಜನೆಯನ್ನು ಪುನಃ ಜಾರಿಗೆ ತರಬೇಕು.</p>.<p>*ಕೇಂದ್ರ ಸರ್ಕಾರದ ಬಿದಿರು ಬೆಳೆಸುವ ಬಿದಿರು ಬಂಗಾರ ಯೋಜನೆಯನ್ನು ರಾಜ್ಯದಲ್ಲೂ ಜಾರಿ ಮಾಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಡಕೆ ಆರೋಗ್ಯಕ್ಕೆ ಹಾನಿಕಾರವಲ್ಲ ಎಂಬ ಕ್ಲಿನಿಕಲ್ ವರದಿ ತಯಾರಿಸಬೇಕು. ಈ ಮೂಲಕ ಅಡಕೆ ಬೆಳೆಗಾರರ ಆತಂಕವನ್ನು ದೂರ ಮಾಡಬೇಕು ಎಂದು ಅಡಕೆ ಕಾರ್ಯಪಡೆ ಸರ್ಕಾರದ ಮೇಲೆ ಒತ್ತಡ ಹೇರಿದೆ.</p>.<p>ವಿಧಾನಸೌಧದಲ್ಲಿ ಗುರುವಾರ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಅಡಕೆ ಕಾರ್ಯಪಡೆ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.</p>.<p>‘ಅಡಕೆ ವಿಷಯ ಸುಪ್ರೀಂಕೋರ್ಟ್ನಲ್ಲಿದ್ದು, ಈ ವಿಷಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ರಾಜ್ಯ ಸರ್ಕಾರವೇ ನೇಮಿಸಬೇಕು. ಇದರಿಂದ ಅಡಕೆ ಬೆಳೆಗಾರರಿಗೆ ಬಲ ಬಂದಂತಾಗುತ್ತದೆ. ಸರ್ಕಾರವೇ ಜವಾಬ್ದಾರಿ ತೆಗೆದುಕೊಂಡರೆ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ’ ಎಂದು ಕಾರ್ಯಪಡೆ ಸದಸ್ಯ ಹಾಗೂ ಹಿರಿಯ ಸಹಕಾರಿ ಮಂಜಪ್ಪ ತಿಳಿಸಿದರು.</p>.<p>‘ಅಡಕೆ ಹಾನಿಕಾರಕ ಅಲ್ಲ ಎಂಬುದನ್ನು ನಿರೂಪಿಸಲು ತಕ್ಷಣವೇ ತಜ್ಞರ ತಂಡವನ್ನು ರಚಿಸಬೇಕು. ತಂಡ ನೀಡುವ ವೈಜ್ಞಾನಿಕ ವರದಿಯಿಂದ ನ್ಯಾಯಾಲಯಕ್ಕೂ ಮನವರಿಕೆಯಾಗುತ್ತದೆ. ಅಲ್ಲದೆ, ಅಡಕೆಗೆ ಬಾಧಿಸುತ್ತಿರುವ ರೋಗಗಳು ಮತ್ತು ಅದಕ್ಕೆ ಪರಿಹಾರದ ಬಗ್ಗೆ ಸಂಶೋಧನೆಗಳನ್ನು ನಡೆಸಬೇಕಾಗಿದೆ. ಇದಕ್ಕಾಗಿ ಆಯ–ವ್ಯಯದಲ್ಲಿ ₹10 ಕೋಟಿ ನಿಗದಿ ಮಾಡಬೇಕು’ ಎಂದು ಮುಖ್ಯ<br />ಮಂತ್ರಿಯವರಿಗೆ ಮನವಿ ಮಾಡಿದ್ದಾಗಿ ಹೇಳಿದರು. ನಿಯೋಗದಲ್ಲಿ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ, ಕೊಂಕೋಡಿ ಪದ್ಮನಾಭ ಮತ್ತಿತರರು ಇದ್ದರು.</p>.<p><strong>ಜೀವ ವೈವಿಧ್ಯ ಮಂಡಳಿ ಬೇಡಿಕೆಗಳು:</strong></p>.<p>* ರಾಜ್ಯದಲ್ಲಿ 22 ಪ್ರಮುಖ ನದಿಗಳು ಮತ್ತು 180 ಉಪನದಿಗಳ ಮೂಲಗಳಿವೆ. ಈ ನದಿ ಮೂಲಗಳ ಸಂರಕ್ಷಣೆ ವಿಶೇಷ ಯೋಜನೆ ರೂಪಿಸಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಬೇಕು.</p>.<p>* ಉತ್ತರ ಕರ್ನಾಟಕ– ಕಲ್ಯಾಣ ಕರ್ನಾಟಕ ಸೇರಿ ಬಯಲು ಸೀಮೆ ಭೂ ಪ್ರದೇಶ ಮರುಭೂಮಿ ಆಗುವುದನ್ನು ತಪ್ಪಿಸಲು ಬಯಲುಸೀಮೆಯ ವನ ವಿಕಾಸ ಯೋಜನೆಯನ್ನು ಈ ಪ್ರದೇಶದಲ್ಲಿ ಜಾರಿ ಮಾಡಬೇಕು.</p>.<p>*ಉತ್ತರಕನ್ನಡ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಪ್ರದೇಶವಿದೆ. ರೈತರ ಸಹಭಾಗಿತ್ವದಲ್ಲಿ 5 ಸಾವಿರ ಹೆಕ್ಟೇರ್ ಸೊಪ್ಪಿನ ಬೆಟ್ಟ ಅಭಿವೃದ್ಧಿ ಯೋಜನೆ ಸೇರ್ಪಡೆ ಮಾಡಬೇಕು.</p>.<p>*ಕರಾವಳಿ ಪರಿಸರ ರಕ್ಷಣೆಗೆ ಮಹತ್ವದ ಕೊಡುಗೆ ನೀಡುವ ಮೀನುಗಾರರು, ರೈತರು, ರೈತರು ಇಷ್ಟಪಟ್ಟಿರುವ ಕರಾವಳಿ ಹಸಿರು ಕವಚ ಎಂಬ ವನೀಕರಣ ಯೋಜನೆಯನ್ನು ಪುನಃ ಜಾರಿಗೆ ತರಬೇಕು.</p>.<p>*ಕೇಂದ್ರ ಸರ್ಕಾರದ ಬಿದಿರು ಬೆಳೆಸುವ ಬಿದಿರು ಬಂಗಾರ ಯೋಜನೆಯನ್ನು ರಾಜ್ಯದಲ್ಲೂ ಜಾರಿ ಮಾಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>