<p><strong>ರಬಕವಿಬನಹಟ್ಟಿ (ಬಾಗಲಕೋಟೆ ಜಿಲ್ಲೆ):</strong> ರಬಕವಿ ಬನಹಟ್ಟಿ ವ್ಯಾಪ್ತಿಯಲ್ಲಿ ಬೆಳೆದ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೇ, ರೈತರು ಪರದಾಡುವಂತಾಗಿದೆ.</p><p>ಮಹಾರಾಷ್ಟ್ರದ ಅಡತಿಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 1,890 ದರ ನಿಗದಿಯಾಗಿದ್ದರೆ, ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ₹1,700ಕ್ಕೆ ಕುಸಿದಿದೆ. ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೆಕ್ಕೆಜೋಳ ಕ್ವಿಂಟಲ್ಗೆ ₹3,000ದಿಂದ ₹3,100ರವರೆಗೆ ಮಾರಾಟವಾಗಿತ್ತು’ ಎಂದು ರೈತ ಸದಾಶಿವ ಬಂಗಿ ತಿಳಿಸಿದರು.</p><p>‘ಸರ್ಕಾರ ಸಾಧ್ಯವಾದಷ್ಟು ಬೇಗ ಬೆಂಬಲ ಬೆಲೆ ಘೋಷಿಸಿ, ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗಲಿದೆ’ ಎಂದು ರೈತ ಸಿದ್ದು ಗೌಡಪ್ಪನವರ ಆತಂಕ ವ್ಯಕ್ತಪಡಿಸಿದರು.</p><p>‘ಕಾಳು ಖರೀದಿ, ಗೊಬ್ಬರ, ಔಷಧ ಸೇರಿದಂತೆ ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಕೃಷಿಗೆ ಅಂದಾಜು ₹35 ಸಾವಿರ ಖರ್ಚಾಗುತ್ತದೆ. ಆದರೆ, ಬೆಲೆ ಹೀಗೆ ಕುಸಿದರೆ ಏನು ಮಾಡುವುದು? ನಮಗೆ ದಿಕ್ಕೇ ತೋಚುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.</p><p>‘ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿ ಸಲಾಗುತ್ತಿದೆ. ರಫ್ತು ಆಗುತಿತ್ತು. ಈಗ ಎರಡೂ ಸ್ಥಗಿತಗೊಂಡಿದೆ. ಈ ಬಾರಿ ಉತ್ತಮ ಇಳುವರಿ ಬಂದಿದೆ. ಅದರೆ ಬೆಲೆ ಕುಸಿದಿದೆ’ ಎಂದರು.</p><p><strong>ಇಂದು ಲಕ್ಷ್ಮೇಶ್ವರ ಬಂದ್ </strong></p><p>ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ಮೆಕ್ಕೆಜೋಳ ಖರೀದಿಗೆ ಕೇಂದ್ರ ಆರಂಭಕ್ಕೆ ಆಗ್ರಹಿಸಿ ರೈತರು ಐದು ದಿನದಿಂದ ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಗುರುವಾರ ಲಕ್ಷ್ಮೇಶ್ವರ ಬಂದ್ಗೆ ಕರೆ ಕೊಟ್ಟಿದ್ದಾರೆ.</p><p>‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕ್ವಿಂಟಲ್ಗೆ ₹ 1,700 ರಿಂದ ₹1,400ಕ್ಕೆ ಕುಸಿದಿದೆ. ಸರ್ಕಾರ ತಕ್ಷಣವೇ ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಾಗಬೇಕು’ ಎಂದು ರೈತ ಮುಖಂಡ ಮಂಜುನಾಥ ಮಾಗಡಿ ಒತ್ತಾಯಿಸಿದರು.</p>.<div><blockquote>ರಬಕವಿ ವ್ಯಾಪ್ತಿಯಲ್ಲಿ ಸದ್ಯ 80 ಕ್ವಿಂಟಲ್ಗೂ ಹೆಚ್ಚು ಮೆಕ್ಕೆಜೋಳ ದಾಸ್ತಾನಿದೆ. ಸೂಕ್ತ ಬೆಲೆ ಇಲ್ಲ. ಅವುಗಳ ರಕ್ಷಣೆಯೇ ಸಮಸ್ಯೆಯಾಗಿದೆ.</blockquote><span class="attribution">ಧರೆಪ್ಪ ಉಳ್ಳಾಗಡ್ಡಿ, ರೈತ</span></div>.<div><blockquote>ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಬೆಂಬಲ ಬೆಲೆ ಕ್ವಿಂಟಲ್ಗೆ ₹2,400 ನಿಗದಿ ಆಗಿದೆ.</blockquote><span class="attribution">ವಿ.ಡಿ.ಪಾಟೀಲ, ಕೃಷಿ ಮಾರಾಟ ಸಹಾಯಕ ನಿರ್ದೇಶಕ, ಎಪಿಎಂಸಿ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿಬನಹಟ್ಟಿ (ಬಾಗಲಕೋಟೆ ಜಿಲ್ಲೆ):</strong> ರಬಕವಿ ಬನಹಟ್ಟಿ ವ್ಯಾಪ್ತಿಯಲ್ಲಿ ಬೆಳೆದ ಸಾವಿರಾರು ಕ್ವಿಂಟಲ್ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೇ, ರೈತರು ಪರದಾಡುವಂತಾಗಿದೆ.</p><p>ಮಹಾರಾಷ್ಟ್ರದ ಅಡತಿಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 1,890 ದರ ನಿಗದಿಯಾಗಿದ್ದರೆ, ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ₹1,700ಕ್ಕೆ ಕುಸಿದಿದೆ. ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೆಕ್ಕೆಜೋಳ ಕ್ವಿಂಟಲ್ಗೆ ₹3,000ದಿಂದ ₹3,100ರವರೆಗೆ ಮಾರಾಟವಾಗಿತ್ತು’ ಎಂದು ರೈತ ಸದಾಶಿವ ಬಂಗಿ ತಿಳಿಸಿದರು.</p><p>‘ಸರ್ಕಾರ ಸಾಧ್ಯವಾದಷ್ಟು ಬೇಗ ಬೆಂಬಲ ಬೆಲೆ ಘೋಷಿಸಿ, ಮೆಕ್ಕೆಜೋಳ ಖರೀದಿಗೆ ಮುಂದಾಗಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗಲಿದೆ’ ಎಂದು ರೈತ ಸಿದ್ದು ಗೌಡಪ್ಪನವರ ಆತಂಕ ವ್ಯಕ್ತಪಡಿಸಿದರು.</p><p>‘ಕಾಳು ಖರೀದಿ, ಗೊಬ್ಬರ, ಔಷಧ ಸೇರಿದಂತೆ ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಕೃಷಿಗೆ ಅಂದಾಜು ₹35 ಸಾವಿರ ಖರ್ಚಾಗುತ್ತದೆ. ಆದರೆ, ಬೆಲೆ ಹೀಗೆ ಕುಸಿದರೆ ಏನು ಮಾಡುವುದು? ನಮಗೆ ದಿಕ್ಕೇ ತೋಚುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.</p><p>‘ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿ ಸಲಾಗುತ್ತಿದೆ. ರಫ್ತು ಆಗುತಿತ್ತು. ಈಗ ಎರಡೂ ಸ್ಥಗಿತಗೊಂಡಿದೆ. ಈ ಬಾರಿ ಉತ್ತಮ ಇಳುವರಿ ಬಂದಿದೆ. ಅದರೆ ಬೆಲೆ ಕುಸಿದಿದೆ’ ಎಂದರು.</p><p><strong>ಇಂದು ಲಕ್ಷ್ಮೇಶ್ವರ ಬಂದ್ </strong></p><p>ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ಮೆಕ್ಕೆಜೋಳ ಖರೀದಿಗೆ ಕೇಂದ್ರ ಆರಂಭಕ್ಕೆ ಆಗ್ರಹಿಸಿ ರೈತರು ಐದು ದಿನದಿಂದ ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಗುರುವಾರ ಲಕ್ಷ್ಮೇಶ್ವರ ಬಂದ್ಗೆ ಕರೆ ಕೊಟ್ಟಿದ್ದಾರೆ.</p><p>‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕ್ವಿಂಟಲ್ಗೆ ₹ 1,700 ರಿಂದ ₹1,400ಕ್ಕೆ ಕುಸಿದಿದೆ. ಸರ್ಕಾರ ತಕ್ಷಣವೇ ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಾಗಬೇಕು’ ಎಂದು ರೈತ ಮುಖಂಡ ಮಂಜುನಾಥ ಮಾಗಡಿ ಒತ್ತಾಯಿಸಿದರು.</p>.<div><blockquote>ರಬಕವಿ ವ್ಯಾಪ್ತಿಯಲ್ಲಿ ಸದ್ಯ 80 ಕ್ವಿಂಟಲ್ಗೂ ಹೆಚ್ಚು ಮೆಕ್ಕೆಜೋಳ ದಾಸ್ತಾನಿದೆ. ಸೂಕ್ತ ಬೆಲೆ ಇಲ್ಲ. ಅವುಗಳ ರಕ್ಷಣೆಯೇ ಸಮಸ್ಯೆಯಾಗಿದೆ.</blockquote><span class="attribution">ಧರೆಪ್ಪ ಉಳ್ಳಾಗಡ್ಡಿ, ರೈತ</span></div>.<div><blockquote>ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಬೆಂಬಲ ಬೆಲೆ ಕ್ವಿಂಟಲ್ಗೆ ₹2,400 ನಿಗದಿ ಆಗಿದೆ.</blockquote><span class="attribution">ವಿ.ಡಿ.ಪಾಟೀಲ, ಕೃಷಿ ಮಾರಾಟ ಸಹಾಯಕ ನಿರ್ದೇಶಕ, ಎಪಿಎಂಸಿ ಬಾಗಲಕೋಟೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>