<p><strong>ನವದೆಹಲಿ:</strong> ಭಾರತ್ ಸಂಚಾರ ನಿಗಮ ಲಿಮಿಟೆಡ್ನ (ಬಿಎಸ್ಎನ್ಎಲ್) ಜಾಲವನ್ನು ಉತ್ತಮಪಡಿಸಲು ₹47 ಸಾವಿರ ಕೋಟಿಯ ಬಂಡವಾಳ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಇಲಾಖೆ ಹೇಳಿದೆ.</p>.<p>ಕಳೆದ ವರ್ಷ 4ಜಿ ಮೊಬೈಲ್ ಸೇವೆಗಳನ್ನು ಒದಗಿಸಲು 1 ಲಕ್ಷ ಟವರ್ ಸ್ಥಾಪಿಸಲಾಗಿತ್ತು. ಇದಕ್ಕಾಗಿ ಬಿಎಸ್ಎನ್ಎಲ್ ₹25 ಸಾವಿರ ಕೋಟಿ ವ್ಯಯಿಸಿತ್ತು. ಈಗ ₹47 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉಲ್ಲೇಖಿಸಿ ಇಲಾಖೆಯು ‘ಎಕ್ಸ್’ ಮೂಲಕ ತಿಳಿಸಿದೆ.</p>.<p>ಮುಂದಿನ ವರ್ಷದ ವೇಳೆಗೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಮೊಬೈಲ್ ಸೇವೆಗಳ ವಹಿವಾಟಿನಲ್ಲಿ ಶೇ 50ರಷ್ಟು ಬೆಳವಣಿಗೆ ಸಾಧಿಸಬೇಕು ಎಂದು ಬಿಎಸ್ಎನ್ಎಲ್ನ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.</p>.<p>ಕಳೆದ ತಿಂಗಳು ಬಿಎಸ್ಎನ್ಎಲ್ ವಲಯ ಮತ್ತು ವ್ಯಾಪಾರ ಘಟಕದ ಮುಖ್ಯಸ್ಥರ ಜೊತೆ ಸಿಂಧಿಯಾ ಪರಿಶೀಲನಾ ಸಭೆ ನಡೆಸಿದ್ದರು.</p>.<p>ಬಿಎಸ್ಎನ್ಎಲ್ ಕಂಪನಿಯು ಪ್ರತಿ ಗ್ರಾಹಕನಿಂದ ತಿಂಗಳೊಂದರಲ್ಲಿ ಪಡೆಯುತ್ತಿರುವ ಸರಾಸರಿ ವರಮಾನವು (ಎಆರ್ಪಿಯು) ವಲಯದಿಂದ ವಲಯಕ್ಕೆ ಭಿನ್ನವಾಗಿದೆ. ಇದು ₹40ರಿಂದ ಆರಂಭವಾಗಿ ₹175ಕ್ಕಿಂತ ಹೆಚ್ಚಿನ ಮಟ್ಟದವರೆಗೆ ಇದೆ. ಗ್ರಾಹಕರಿಗೆ ಉತ್ತಮವಾದ ಸೇವೆ ನೀಡಿ, ಹೆಚ್ಚಿನ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡು ವರಮಾನ ಹೆಚ್ಚಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.</p>.<p>ಆದರೆ, ಜಿಯೊ ಕಂಪನಿಯ ಎಆರ್ಪಿಯು ₹208ರಷ್ಟು, ಏರ್ಟೆಲ್ ಕಂಪನಿಯ ಎಆರ್ಪಿಯು ₹250ರಷ್ಟು ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ್ ಸಂಚಾರ ನಿಗಮ ಲಿಮಿಟೆಡ್ನ (ಬಿಎಸ್ಎನ್ಎಲ್) ಜಾಲವನ್ನು ಉತ್ತಮಪಡಿಸಲು ₹47 ಸಾವಿರ ಕೋಟಿಯ ಬಂಡವಾಳ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಇಲಾಖೆ ಹೇಳಿದೆ.</p>.<p>ಕಳೆದ ವರ್ಷ 4ಜಿ ಮೊಬೈಲ್ ಸೇವೆಗಳನ್ನು ಒದಗಿಸಲು 1 ಲಕ್ಷ ಟವರ್ ಸ್ಥಾಪಿಸಲಾಗಿತ್ತು. ಇದಕ್ಕಾಗಿ ಬಿಎಸ್ಎನ್ಎಲ್ ₹25 ಸಾವಿರ ಕೋಟಿ ವ್ಯಯಿಸಿತ್ತು. ಈಗ ₹47 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉಲ್ಲೇಖಿಸಿ ಇಲಾಖೆಯು ‘ಎಕ್ಸ್’ ಮೂಲಕ ತಿಳಿಸಿದೆ.</p>.<p>ಮುಂದಿನ ವರ್ಷದ ವೇಳೆಗೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಮೊಬೈಲ್ ಸೇವೆಗಳ ವಹಿವಾಟಿನಲ್ಲಿ ಶೇ 50ರಷ್ಟು ಬೆಳವಣಿಗೆ ಸಾಧಿಸಬೇಕು ಎಂದು ಬಿಎಸ್ಎನ್ಎಲ್ನ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.</p>.<p>ಕಳೆದ ತಿಂಗಳು ಬಿಎಸ್ಎನ್ಎಲ್ ವಲಯ ಮತ್ತು ವ್ಯಾಪಾರ ಘಟಕದ ಮುಖ್ಯಸ್ಥರ ಜೊತೆ ಸಿಂಧಿಯಾ ಪರಿಶೀಲನಾ ಸಭೆ ನಡೆಸಿದ್ದರು.</p>.<p>ಬಿಎಸ್ಎನ್ಎಲ್ ಕಂಪನಿಯು ಪ್ರತಿ ಗ್ರಾಹಕನಿಂದ ತಿಂಗಳೊಂದರಲ್ಲಿ ಪಡೆಯುತ್ತಿರುವ ಸರಾಸರಿ ವರಮಾನವು (ಎಆರ್ಪಿಯು) ವಲಯದಿಂದ ವಲಯಕ್ಕೆ ಭಿನ್ನವಾಗಿದೆ. ಇದು ₹40ರಿಂದ ಆರಂಭವಾಗಿ ₹175ಕ್ಕಿಂತ ಹೆಚ್ಚಿನ ಮಟ್ಟದವರೆಗೆ ಇದೆ. ಗ್ರಾಹಕರಿಗೆ ಉತ್ತಮವಾದ ಸೇವೆ ನೀಡಿ, ಹೆಚ್ಚಿನ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡು ವರಮಾನ ಹೆಚ್ಚಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.</p>.<p>ಆದರೆ, ಜಿಯೊ ಕಂಪನಿಯ ಎಆರ್ಪಿಯು ₹208ರಷ್ಟು, ಏರ್ಟೆಲ್ ಕಂಪನಿಯ ಎಆರ್ಪಿಯು ₹250ರಷ್ಟು ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>