<p><strong>ನವದೆಹಲಿ:</strong> ವಾರ್ಷಿಕ ವೇತನ ಹೆಚ್ಚಳದ ದಿನಾಂಕಕ್ಕೆ ಒಂದು ದಿನ ಮೊದಲೇ ನಿವೃತ್ತಿ ಹೊಂದುವ ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುವ ಪಿಂಚಣಿಯನ್ನು ಲೆಕ್ಕ ಹಾಕಲು, ಕಾಲ್ಪನಿಕ ವೇತನವನ್ನು ಮಾನದಂಡವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.</p>.<p>ಸುಪ್ರೀಂ ಕೋರ್ಟ್ನ ಆದೇಶದ ಅನ್ವಯ ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. ಇದರಿಂದ 48.66 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. </p>.<p>ಜುಲೈ 1 ಅಥವಾ ಜನವರಿ 1 ಅನ್ನು ವೇತನ ಹೆಚ್ಚಳದ ದಿನಾಂಕವನ್ನಾಗಿ ಪರಿಗಣಿಸಬಹುದು ಎಂದು ಫೆಬ್ರುವರಿ 20ರಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತ್ತು. ಅಂದರೆ ಜೂನ್ 30 ಅಥವಾ ಡಿಸೆಂಬರ್ 31ರಂದು ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರ ಪಿಂಚಣಿ ಲೆಕ್ಕ ಹಾಕಲು ಈ ದಿನಾಂಕಗಳನ್ನು ಪರಿಗಣಿಸುವಂತೆ ಸೂಚಿಸಿತ್ತು.</p>.<p>ಇನ್ನು ಮುಂದೆ ಜುಲೈ 1 ಅಥವಾ ಜನವರಿ 1 ಅನ್ನು ತಮ್ಮ ವೇತನ ಬಡ್ತಿಯ ದಿನಾಂಕವಾಗಿ ಆಯ್ಕೆ ಮಾಡಲು ನೌಕರರಿಗೆ ಅವಕಾಶ ಸಿಗಲಿದೆ. </p>.<p>ಆದರೆ, ಈ ದಿನಾಂಕಗಳಂದು ನೀಡಲಾಗುವ ಕಾಲ್ಪನಿಕ ವೇತನ ಹೆಚ್ಚಳವನ್ನು ಇತರೆ ಪಿಂಚಣಿ ಸೌಲಭ್ಯ ಪಡೆಯುವ ಸಂಬಂಧ ಲೆಕ್ಕ ಹಾಕಲು ಮಾನದಂಡವಾಗಿ ಪರಿಣಿಸುವಂತಿಲ್ಲ. ತಮಗೆ ಸ್ವೀಕಾರಾರ್ಹವಾಗಿರುವ ಪಿಂಚಣಿ ಲೆಕ್ಕ ಮಾಡುವ ಉದ್ದೇಶಕ್ಕಾಗಿಯಷ್ಟೇ ಪರಿಗಣಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ನ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. </p>.<p>ಸರ್ಕಾರದ ಆದೇಶವು ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೂ ಕಾಲ್ಪನಿಕ ವೇತನದ ಪ್ರಯೋಜನವನ್ನು ವಿಸ್ತರಿಸಬೇಕು ಎಂದು ಅಖಿಲ ಭಾರತ ಎನ್ಪಿಎಸ್ ನೌಕರರ ಒಕ್ಕೂಟದ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಾರ್ಷಿಕ ವೇತನ ಹೆಚ್ಚಳದ ದಿನಾಂಕಕ್ಕೆ ಒಂದು ದಿನ ಮೊದಲೇ ನಿವೃತ್ತಿ ಹೊಂದುವ ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುವ ಪಿಂಚಣಿಯನ್ನು ಲೆಕ್ಕ ಹಾಕಲು, ಕಾಲ್ಪನಿಕ ವೇತನವನ್ನು ಮಾನದಂಡವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.</p>.<p>ಸುಪ್ರೀಂ ಕೋರ್ಟ್ನ ಆದೇಶದ ಅನ್ವಯ ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. ಇದರಿಂದ 48.66 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. </p>.<p>ಜುಲೈ 1 ಅಥವಾ ಜನವರಿ 1 ಅನ್ನು ವೇತನ ಹೆಚ್ಚಳದ ದಿನಾಂಕವನ್ನಾಗಿ ಪರಿಗಣಿಸಬಹುದು ಎಂದು ಫೆಬ್ರುವರಿ 20ರಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತ್ತು. ಅಂದರೆ ಜೂನ್ 30 ಅಥವಾ ಡಿಸೆಂಬರ್ 31ರಂದು ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರ ಪಿಂಚಣಿ ಲೆಕ್ಕ ಹಾಕಲು ಈ ದಿನಾಂಕಗಳನ್ನು ಪರಿಗಣಿಸುವಂತೆ ಸೂಚಿಸಿತ್ತು.</p>.<p>ಇನ್ನು ಮುಂದೆ ಜುಲೈ 1 ಅಥವಾ ಜನವರಿ 1 ಅನ್ನು ತಮ್ಮ ವೇತನ ಬಡ್ತಿಯ ದಿನಾಂಕವಾಗಿ ಆಯ್ಕೆ ಮಾಡಲು ನೌಕರರಿಗೆ ಅವಕಾಶ ಸಿಗಲಿದೆ. </p>.<p>ಆದರೆ, ಈ ದಿನಾಂಕಗಳಂದು ನೀಡಲಾಗುವ ಕಾಲ್ಪನಿಕ ವೇತನ ಹೆಚ್ಚಳವನ್ನು ಇತರೆ ಪಿಂಚಣಿ ಸೌಲಭ್ಯ ಪಡೆಯುವ ಸಂಬಂಧ ಲೆಕ್ಕ ಹಾಕಲು ಮಾನದಂಡವಾಗಿ ಪರಿಣಿಸುವಂತಿಲ್ಲ. ತಮಗೆ ಸ್ವೀಕಾರಾರ್ಹವಾಗಿರುವ ಪಿಂಚಣಿ ಲೆಕ್ಕ ಮಾಡುವ ಉದ್ದೇಶಕ್ಕಾಗಿಯಷ್ಟೇ ಪರಿಗಣಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ನ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. </p>.<p>ಸರ್ಕಾರದ ಆದೇಶವು ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೂ ಕಾಲ್ಪನಿಕ ವೇತನದ ಪ್ರಯೋಜನವನ್ನು ವಿಸ್ತರಿಸಬೇಕು ಎಂದು ಅಖಿಲ ಭಾರತ ಎನ್ಪಿಎಸ್ ನೌಕರರ ಒಕ್ಕೂಟದ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>