ಡಿಜಿಟಲ್ ವಹಿವಾಟಿನ ಕುರಿತು ಮಾಹಿತಿ ಇರದ ಗ್ರಾಮೀಣ ಭಾಗದ ಜನರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಾತ್ರವೇ ಬ್ಯಾಂಕ್ ಶಾಖೆಗಳು ಕಾರ್ಯಾಚರಣೆ ನಡೆಸಲಿವೆ. ಕೋವಿಡ್–19 ಪರಿಣಾಮ ಸರ್ಕಾರ ಬಡವರಿಗಾಗಿ ಪರಿಹಾರ ರೂಪದಲ್ಲಿ ಯಾವುದೇ ಪ್ಯಾಕೇಜ್ ಘೋಷಣೆಯಾದರೂ, ಅದು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸೇರಲಿದೆ. ಇದರಿಂದಾಗಿ ಬ್ಯಾಂಕ್ಗಳಲ್ಲಿ ಹಣ ಪಡೆಯಲು ನೂಕು ನುಗ್ಗಲು ನಿರ್ಮಾಣವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.