‘ಬಂಡವಾಳ ಮಾರುಕಟ್ಟೆಗೆ ಜನರು ಬರದೇ ಇರಲು ಮುಖ್ಯವಾಗಿ ನಾಲ್ಕು ಕಾರಣಗಳಿವೆ.ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಮೊದಲ ಕಾರಣ. ಹೀಗಾಗಿಯೇ ದೇಶದಲ್ಲಿ ಶೇಕಡ 6ರಷ್ಟು ಜನ ಮಾತ್ರ ಡಿಮ್ಯಾಟ್ ಖಾತೆ ಹೊಂದಿದ್ದಾರೆ. ಇವರಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿರುವವ ಶೇ 1ರಷ್ಟು ಮಾತ್ರ. ಎರಡನೆಯದು, ಎಫ್.ಡಿ. ತರಹದ ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಮಾತ್ರ ಹಣ ತೊಡಗಿಸುವ ಮನೋಭಾವ. ಮೂರನೆಯದು, ಚಿನ್ನ, ಆಸ್ತಿ ಖರೀದಿಗೆ ಆದ್ಯತೆ ನೀಡುತ್ತಿರವುದು. ನಾಲ್ಕನೆಯದು, ಮಾರುಕಟ್ಟೆಯ ಬಗ್ಗೆ ನಂಬಿಕೆ ಇಲ್ಲದಿರುವುದು’ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ದಿನೇಶ್ ಚಂದ್ರ ಪಟ್ವಾರಿ ತಿಳಿಸಿದರು.