<p><strong>ನವದೆಹಲಿ:</strong> 2020–21ರ ಬೆಳೆ ವರ್ಷದಲ್ಲಿ ಕೃಷಿ ಉತ್ಪಾದನೆಯನ್ನು 63.5 ಲಕ್ಷ ಟನ್ಗಳಷ್ಟು ಹೆಚ್ಚಿಸುವ ಗುರಿ ಹಾಕಿಕೊಂಡಿರುವ ಕೃಷಿ ಸಚಿವಾಲಯವು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ಒಟ್ಟಾರೆ ಉತ್ಪಾದನೆಯು ದಾಖಲೆ ಪ್ರಮಾಣದ 29.83 ಕೋಟಿ ಟನ್ಗಳಿಗೆ ತಲುಪಲಿದೆ ಎಂದು ಅಂದಾಜಿಸಿದೆ.</p>.<p>ಸಚಿವಾಲಯವು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ಎರಡನೇ ಮುಂಗಡ ಅಂದಾಜಿನ ಪ್ರಕಾರ, 2019–20ರ ಬೆಳೆ ವರ್ಷದಲ್ಲಿನ (ಜುಲೈನಿಂದ ಜೂನ್) ಕೃಷಿ ಉತ್ಪಾದನೆಯು 29.19 ಕೋಟಿ ಟನ್ಗಳಷ್ಟು ಇರುವ ನಿರೀಕ್ಷೆ ಇದೆ.</p>.<p>‘ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಾದ್ಯಂತ ಸುರಿಯಲಿರುವ ನೈರುತ್ಯ ಮುಂಗಾರು ಮಳೆಯು ಈ ಬಾರಿ ಸಮೃದ್ಧವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದು ಮಳೆ ಆಧಾರಿತ ಮುಂಗಾರು ಫಸಲಿನ ಉತ್ಪಾದನೆಗೆ ಸಂಬಂಧಿಸಿದ ಶುಭ ಸೂಚನೆಯಾಗಿದೆ’ ಎಂದು ಕೃಷಿ ಕಮಿಷನರ್ ಎಸ್. ಕೆ. ಮಲ್ಹೋತ್ರಾ ಹೇಳಿದ್ದಾರೆ.</p>.<p>ಮುಂಗಾರು ಬಿತ್ತನೆ ಕುರಿತು ರಾಜ್ಯ ಸರ್ಕಾರಗಳ ಜತೆ ನಡೆದ ರಾಷ್ಟ್ರೀಯ ಮಟ್ಟದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.</p>.<p>‘ಕೋವಿಡ್–19’ ದಿಗ್ಬಂಧನ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ವಿನಾಯ್ತಿ ನೀಡಲಾಗಿದೆ. ಬಿತ್ತನೆ ಚಟುವಟಿಕೆ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವ ಮತ್ತು ನೈರ್ಮಲ್ಯದ ನಿಯಮಗಳನ್ನು ಪಾಲಿಸುವ ಬಗ್ಗೆ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.</p>.<p>ದೇಶದ ಕೆಲ ಭಾಗಗಳಲ್ಲಿ ಈಗಾಗಲೇ ಮುಂಗಾರು ಪೂರ್ವ ಬಿತ್ತನೆ ಕಾರ್ಯ ಆರಂಭಗೊಂಡಿವೆ. ಶೇ 50ರಷ್ಟು ಸಾಗುವಳಿ ಭೂ ಪ್ರದೇಶವು ಮುಂಗಾರು ಮಳೆ ಆಧರಿಸಿದೆ. ಮಳೆಯು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿ ಕ್ಷೇತ್ರದ ಜೀವನಾಧಾರವಾಗಿದೆ.</p>.<p>ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಭತ್ತ, ಬೇಳೆ, ಎಣ್ಣೆಬೀಜ ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ, ಸಕ್ಕರೆ ಬೆಳೆಯಲಾಗುತ್ತದೆ.</p>.<p><strong>ಮಾರ್ಗದರ್ಶಿ ಸೂತ್ರಗಳು</strong></p>.<p>ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ರೈತರುಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿರ್ದಿಷ್ಟ ನಿಯಮಗಳ ಸಂಬಂಧ ಕೃಷಿ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.</p>.<p>* ಅಂತರ ಕಾಯ್ದುಕೊಂಡು ಮುಖಗವಸು ಧರಿಸಿ ಬಿತ್ತನೆ</p>.<p>* ಊಟ ಮತ್ತು ವಿಶ್ರಾಂತಿಗಾಗಿ ಗದ್ದೆಯಿಂದ ಹೊರಬಂದಾಗ ಕೈ, ಕಾಲು ಮತ್ತು ಮುಖವನ್ನುಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು</p>.<p>* ಭೂಮಿ ಹದಗೊಳಿಸಲು, ಬಿತ್ತನೆ ಮತ್ತು ರಸಗೊಬ್ಬರ ಸಿಂಪಡನೆಗೆ ಕಾರ್ಮಿಕರ ಬಳಕೆಗೆ ಮಿತಿ ವಿಧಿಸಿ, ಯಂತ್ರೋಪಕರಣ ಬಳಕೆ ಹೆಚ್ಚಿಸಿ</p>.<p>* 1 ರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಿ</p>.<p>* ಬಳಕೆ ಮುನ್ನ ಕೃಷಿ ಯಂತ್ರೋಪಕರಣ ಸ್ವಚ್ಛಗೊಳಿಸಿ</p>.<p>* ಕಳೆ ತೆಗೆಯುವಾಗ, ಕೀಟನಾಶಕ, ರಸಗೊಬ್ಬರ ಬಳಸುವಾಗ ಸ್ವಚ್ಛತಾ ನಿಯಮ ಪಾಲಿಸಿ</p>.<p>* ಕೀಟನಾಶಕಗಳ ಖಾಲಿ ಪ್ಯಾಕೆಟ್ಗಳನ್ನು ಬೆಂಕಿಗೆ ಹಾಕಬೇಕು ಇಲ್ಲವೆ ಮಣ್ಣಿನಲ್ಲಿ ಹೂಳಬೇಕು</p>.<p>* ಬೀಜದ ಪ್ಯಾಕೆಟ್ಗಳನ್ನು ಎರಡು ದಿನ ಬಿಸಿಲಲ್ಲಿ ಒಣಗಿಸಿ ಮರು ಬಳಕೆ ಮಾಡಿ</p>.<p>* ದಿನದ ಕೆಲಸ ಮುಗಿದ ನಂತರ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸೋಪ್ನಿಂದ ಸ್ವಚ್ಛಗೊಳಿಸಬೇಕು</p>.<p>* ಬೆಳೆ ಕಟಾವು, ಒಕ್ಕಲು ಮತ್ತು ಧಾನ್ಯಗಳನ್ನು ಚೀಲಕ್ಕೆ ತುಂಬುವಾಗ ಅಂತರ ಕಾಯ್ದುಕೊಳ್ಳಬೇಕು</p>.<p>* ಫಸಲನ್ನು ದಾಸ್ತಾನು ಮಾಡುವ ಮುನ್ನ 48 ಗಂಟೆಗಳ ಕಾಲ ಬಿಸಿಲಲ್ಲಿ ಒಣಗಿಸಬೇಕು</p>.<p><strong>ಅಂಕಿ ಅಂಶ</strong></p>.<p>ಆಹಾರ ಧಾನ್ಯ ಉತ್ಪಾದನೆ ಗುರಿ (ಕೋಟಿ ಟನ್ಗಳಲ್ಲಿ)</p>.<p>ಮುಂಗಾರು;14.99</p>.<p>ಹಿಂಗಾರು;14.84</p>.<p>ಒಟ್ಟು; 29.83</p>.<p>***</p>.<p>ಫಸಲು;2019–20ರ ಉತ್ಪಾದನೆ ಅಂದಾಜು;2020–21ರ ಗುರಿ (ಕೋಟಿ ಟನ್ಗಳಲ್ಲಿ)</p>.<p>ಭತ್ತ;11.74;11.75</p>.<p>ಗೋಧಿ;10.65;10.65</p>.<p>ಒರಟು ಧಾನ್ಯ;4.52;4.87</p>.<p>ಬೇಳೆ;2.30;2.56</p>.<p>***</p>.<p>(ಕೋಟಿ ಟನ್)</p>.<p>ಎಣ್ಣೆಬೀಜ;3.41;3.66</p>.<p>ಸಕ್ಕರೆ;35.38;39.00</p>.<p>***</p>.<p>ಹತ್ತಿ;3.49* ಲಕ್ಷ ಬೇಲ್ಸ್*;3.60* ಲಕ್ಷ ಬೇಲ್ಸ್</p>.<p>(* ಒಂದು ಬೇಲ್ = 170 ಕೆಜಿ)</p>.<p>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 2020–21ರ ಬೆಳೆ ವರ್ಷದಲ್ಲಿ ಕೃಷಿ ಉತ್ಪಾದನೆಯನ್ನು 63.5 ಲಕ್ಷ ಟನ್ಗಳಷ್ಟು ಹೆಚ್ಚಿಸುವ ಗುರಿ ಹಾಕಿಕೊಂಡಿರುವ ಕೃಷಿ ಸಚಿವಾಲಯವು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ಒಟ್ಟಾರೆ ಉತ್ಪಾದನೆಯು ದಾಖಲೆ ಪ್ರಮಾಣದ 29.83 ಕೋಟಿ ಟನ್ಗಳಿಗೆ ತಲುಪಲಿದೆ ಎಂದು ಅಂದಾಜಿಸಿದೆ.</p>.<p>ಸಚಿವಾಲಯವು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ಎರಡನೇ ಮುಂಗಡ ಅಂದಾಜಿನ ಪ್ರಕಾರ, 2019–20ರ ಬೆಳೆ ವರ್ಷದಲ್ಲಿನ (ಜುಲೈನಿಂದ ಜೂನ್) ಕೃಷಿ ಉತ್ಪಾದನೆಯು 29.19 ಕೋಟಿ ಟನ್ಗಳಷ್ಟು ಇರುವ ನಿರೀಕ್ಷೆ ಇದೆ.</p>.<p>‘ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಾದ್ಯಂತ ಸುರಿಯಲಿರುವ ನೈರುತ್ಯ ಮುಂಗಾರು ಮಳೆಯು ಈ ಬಾರಿ ಸಮೃದ್ಧವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದು ಮಳೆ ಆಧಾರಿತ ಮುಂಗಾರು ಫಸಲಿನ ಉತ್ಪಾದನೆಗೆ ಸಂಬಂಧಿಸಿದ ಶುಭ ಸೂಚನೆಯಾಗಿದೆ’ ಎಂದು ಕೃಷಿ ಕಮಿಷನರ್ ಎಸ್. ಕೆ. ಮಲ್ಹೋತ್ರಾ ಹೇಳಿದ್ದಾರೆ.</p>.<p>ಮುಂಗಾರು ಬಿತ್ತನೆ ಕುರಿತು ರಾಜ್ಯ ಸರ್ಕಾರಗಳ ಜತೆ ನಡೆದ ರಾಷ್ಟ್ರೀಯ ಮಟ್ಟದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.</p>.<p>‘ಕೋವಿಡ್–19’ ದಿಗ್ಬಂಧನ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ವಿನಾಯ್ತಿ ನೀಡಲಾಗಿದೆ. ಬಿತ್ತನೆ ಚಟುವಟಿಕೆ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವ ಮತ್ತು ನೈರ್ಮಲ್ಯದ ನಿಯಮಗಳನ್ನು ಪಾಲಿಸುವ ಬಗ್ಗೆ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.</p>.<p>ದೇಶದ ಕೆಲ ಭಾಗಗಳಲ್ಲಿ ಈಗಾಗಲೇ ಮುಂಗಾರು ಪೂರ್ವ ಬಿತ್ತನೆ ಕಾರ್ಯ ಆರಂಭಗೊಂಡಿವೆ. ಶೇ 50ರಷ್ಟು ಸಾಗುವಳಿ ಭೂ ಪ್ರದೇಶವು ಮುಂಗಾರು ಮಳೆ ಆಧರಿಸಿದೆ. ಮಳೆಯು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿ ಕ್ಷೇತ್ರದ ಜೀವನಾಧಾರವಾಗಿದೆ.</p>.<p>ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಭತ್ತ, ಬೇಳೆ, ಎಣ್ಣೆಬೀಜ ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ, ಸಕ್ಕರೆ ಬೆಳೆಯಲಾಗುತ್ತದೆ.</p>.<p><strong>ಮಾರ್ಗದರ್ಶಿ ಸೂತ್ರಗಳು</strong></p>.<p>ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ರೈತರುಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿರ್ದಿಷ್ಟ ನಿಯಮಗಳ ಸಂಬಂಧ ಕೃಷಿ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.</p>.<p>* ಅಂತರ ಕಾಯ್ದುಕೊಂಡು ಮುಖಗವಸು ಧರಿಸಿ ಬಿತ್ತನೆ</p>.<p>* ಊಟ ಮತ್ತು ವಿಶ್ರಾಂತಿಗಾಗಿ ಗದ್ದೆಯಿಂದ ಹೊರಬಂದಾಗ ಕೈ, ಕಾಲು ಮತ್ತು ಮುಖವನ್ನುಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು</p>.<p>* ಭೂಮಿ ಹದಗೊಳಿಸಲು, ಬಿತ್ತನೆ ಮತ್ತು ರಸಗೊಬ್ಬರ ಸಿಂಪಡನೆಗೆ ಕಾರ್ಮಿಕರ ಬಳಕೆಗೆ ಮಿತಿ ವಿಧಿಸಿ, ಯಂತ್ರೋಪಕರಣ ಬಳಕೆ ಹೆಚ್ಚಿಸಿ</p>.<p>* 1 ರಿಂದ 2 ಮೀಟರ್ ಅಂತರ ಕಾಯ್ದುಕೊಳ್ಳಿ</p>.<p>* ಬಳಕೆ ಮುನ್ನ ಕೃಷಿ ಯಂತ್ರೋಪಕರಣ ಸ್ವಚ್ಛಗೊಳಿಸಿ</p>.<p>* ಕಳೆ ತೆಗೆಯುವಾಗ, ಕೀಟನಾಶಕ, ರಸಗೊಬ್ಬರ ಬಳಸುವಾಗ ಸ್ವಚ್ಛತಾ ನಿಯಮ ಪಾಲಿಸಿ</p>.<p>* ಕೀಟನಾಶಕಗಳ ಖಾಲಿ ಪ್ಯಾಕೆಟ್ಗಳನ್ನು ಬೆಂಕಿಗೆ ಹಾಕಬೇಕು ಇಲ್ಲವೆ ಮಣ್ಣಿನಲ್ಲಿ ಹೂಳಬೇಕು</p>.<p>* ಬೀಜದ ಪ್ಯಾಕೆಟ್ಗಳನ್ನು ಎರಡು ದಿನ ಬಿಸಿಲಲ್ಲಿ ಒಣಗಿಸಿ ಮರು ಬಳಕೆ ಮಾಡಿ</p>.<p>* ದಿನದ ಕೆಲಸ ಮುಗಿದ ನಂತರ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸೋಪ್ನಿಂದ ಸ್ವಚ್ಛಗೊಳಿಸಬೇಕು</p>.<p>* ಬೆಳೆ ಕಟಾವು, ಒಕ್ಕಲು ಮತ್ತು ಧಾನ್ಯಗಳನ್ನು ಚೀಲಕ್ಕೆ ತುಂಬುವಾಗ ಅಂತರ ಕಾಯ್ದುಕೊಳ್ಳಬೇಕು</p>.<p>* ಫಸಲನ್ನು ದಾಸ್ತಾನು ಮಾಡುವ ಮುನ್ನ 48 ಗಂಟೆಗಳ ಕಾಲ ಬಿಸಿಲಲ್ಲಿ ಒಣಗಿಸಬೇಕು</p>.<p><strong>ಅಂಕಿ ಅಂಶ</strong></p>.<p>ಆಹಾರ ಧಾನ್ಯ ಉತ್ಪಾದನೆ ಗುರಿ (ಕೋಟಿ ಟನ್ಗಳಲ್ಲಿ)</p>.<p>ಮುಂಗಾರು;14.99</p>.<p>ಹಿಂಗಾರು;14.84</p>.<p>ಒಟ್ಟು; 29.83</p>.<p>***</p>.<p>ಫಸಲು;2019–20ರ ಉತ್ಪಾದನೆ ಅಂದಾಜು;2020–21ರ ಗುರಿ (ಕೋಟಿ ಟನ್ಗಳಲ್ಲಿ)</p>.<p>ಭತ್ತ;11.74;11.75</p>.<p>ಗೋಧಿ;10.65;10.65</p>.<p>ಒರಟು ಧಾನ್ಯ;4.52;4.87</p>.<p>ಬೇಳೆ;2.30;2.56</p>.<p>***</p>.<p>(ಕೋಟಿ ಟನ್)</p>.<p>ಎಣ್ಣೆಬೀಜ;3.41;3.66</p>.<p>ಸಕ್ಕರೆ;35.38;39.00</p>.<p>***</p>.<p>ಹತ್ತಿ;3.49* ಲಕ್ಷ ಬೇಲ್ಸ್*;3.60* ಲಕ್ಷ ಬೇಲ್ಸ್</p>.<p>(* ಒಂದು ಬೇಲ್ = 170 ಕೆಜಿ)</p>.<p>***</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>