<p><strong>ನವದೆಹಲಿ: ಸ</strong>ರ್ಕಾರವು ಉದ್ದಿಮೆಗಳನ್ನು ನಡೆಸಬಾರದು. ಏಕೆಂದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಸಮರ್ಥವಾಗಿದ್ದು, ಅವುಗಳ ಬೆಳವಣಿಗೆಗೆ ಬೇಕಾದಷ್ಟು ವರಮಾನ ಸೃಷ್ಟಿಸುತ್ತಿಲ್ಲ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ. ಭಾರ್ಗವ್ ಹೇಳಿದ್ದಾರೆ.</p>.<p>ಸರ್ಕಾರಿ ವಲಯದ ಕಂಪನಿಗಳ ಬೆಳವಣಿಗೆಗೆ ಎಲ್ಲಾ ಕಾಲಕ್ಕೂ ಸರ್ಕಾರದ ಬೆಂಬಲ ಮತ್ತು ಹಣಕಾಸಿನ ನೆರವು ಬೇಕು ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p>.<p>ಸರ್ಕಾರ ನಡೆಸುತ್ತಿರುವ ಕಂಪನಿಗಳು ಸಮರ್ಥವಾಗಿಲ್ಲ. ಉತ್ಪಾದಕತೆಯನ್ನು ಹೊಂದಿಲ್ಲ. ಲಾಭ ಗಳಿಸುತ್ತಿಲ್ಲ. ಸಂಪನ್ಮೂಲವನ್ನೂ ಸೃಷ್ಟಿಸುತ್ತಿಲ್ಲ. ಬೆಳವಣಿಗೆಯನ್ನೂ ಸಾಧಿಸುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.</p>.<p>ಸಾರ್ವಜನಿಕ ವಲಯದ ವೈಫಲ್ಯವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್ನಲ್ಲೂ ಆಗಿವೆ. ಈ ದೇಶಗಳಲ್ಲಿ ಪ್ರತಿಯೊಬ್ಬರೂ ಸಾರ್ವಜನಿಕ ವಲಯದಿಂದ ಹೊರಬರುತ್ತಿದ್ದಾರೆ ಎಂದು ಭಾರ್ಗವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: ಸ</strong>ರ್ಕಾರವು ಉದ್ದಿಮೆಗಳನ್ನು ನಡೆಸಬಾರದು. ಏಕೆಂದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಸಮರ್ಥವಾಗಿದ್ದು, ಅವುಗಳ ಬೆಳವಣಿಗೆಗೆ ಬೇಕಾದಷ್ಟು ವರಮಾನ ಸೃಷ್ಟಿಸುತ್ತಿಲ್ಲ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ. ಭಾರ್ಗವ್ ಹೇಳಿದ್ದಾರೆ.</p>.<p>ಸರ್ಕಾರಿ ವಲಯದ ಕಂಪನಿಗಳ ಬೆಳವಣಿಗೆಗೆ ಎಲ್ಲಾ ಕಾಲಕ್ಕೂ ಸರ್ಕಾರದ ಬೆಂಬಲ ಮತ್ತು ಹಣಕಾಸಿನ ನೆರವು ಬೇಕು ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p>.<p>ಸರ್ಕಾರ ನಡೆಸುತ್ತಿರುವ ಕಂಪನಿಗಳು ಸಮರ್ಥವಾಗಿಲ್ಲ. ಉತ್ಪಾದಕತೆಯನ್ನು ಹೊಂದಿಲ್ಲ. ಲಾಭ ಗಳಿಸುತ್ತಿಲ್ಲ. ಸಂಪನ್ಮೂಲವನ್ನೂ ಸೃಷ್ಟಿಸುತ್ತಿಲ್ಲ. ಬೆಳವಣಿಗೆಯನ್ನೂ ಸಾಧಿಸುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.</p>.<p>ಸಾರ್ವಜನಿಕ ವಲಯದ ವೈಫಲ್ಯವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ರಷ್ಯಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್ನಲ್ಲೂ ಆಗಿವೆ. ಈ ದೇಶಗಳಲ್ಲಿ ಪ್ರತಿಯೊಬ್ಬರೂ ಸಾರ್ವಜನಿಕ ವಲಯದಿಂದ ಹೊರಬರುತ್ತಿದ್ದಾರೆ ಎಂದು ಭಾರ್ಗವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>