<p><strong>ನವದೆಹಲಿ:</strong>‘ತೆರಿಗೆ ಬಾಕಿ, ರಿಟರ್ನ್ಸ್ ಸಲ್ಲಿಕೆಯಲ್ಲಿ ಲೋಪ ಅಥವಾ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ತಪ್ಪಾಗಿದ್ದರೆ ಆ ಕುರಿತು ಸಂಬಂಧಪಟ್ಟ ಸಂಸ್ಥೆಯ ಪ್ರವರ್ತಕರು, ನಿರ್ದೇಶಕರಿಗೆ ಸ್ವಯಂಚಾಲಿತವಾಗಿ ಎಸ್ಎಂಎಸ್ ರವಾನೆಯಾಗಲಿದೆ’ ಎಂದು ಜಿಎಸ್ಟಿಎನ್ನ ಸಿಇಒ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.</p>.<p>‘ಈ ವ್ಯವಸ್ಥೆಯನ್ನುಜಿಎಸ್ಟಿ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ. ಜಿಎಸ್ಟಿ ವ್ಯವಸ್ಥೆಯು ಎಚ್ಚರಿಕೆ ಸಂದೇಶವನ್ನುಸೃಷ್ಟಿಸಿದರೆ,ಈ ಮಾಹಿತಿಯು ರೆವಿನ್ಯೂ ಇಲಾಖೆಗೂ ಹೋಗಲಿದೆ. ಆಗ ಸೂಕ್ತ ಕ್ರಮ ಕೈಗೊಳ್ಳುವಂತೆ ತೆರಿಗೆ ಅಧಿಕಾರಿಗಳಿಗೆ ಸೂಚನೆ ದೊರೆಯುತ್ತದೆ’ ಎಂದೂ ಹೇಳಿದ್ದಾರೆ.</p>.<p>‘ಜಿಎಸ್ಟಿಆರ್–3ಬಿ ಮತ್ತು ಜಿಎಸ್ಟಿಆರ್–1, ಜಿಎಸ್ಟಿಆರ್–3ಬಿ ಮತ್ತು ಇ–ವೇ ಬಿಲ್ಗಳ ಮಧ್ಯೆ ವ್ಯತ್ಯಾಸ ಇದ್ದರೆ ಅಧಿಕೃತವಾಗಿ ಸಹಿ ಮಾಡಿರುವವರಿಗೆ ಮಾತ್ರವೇ ಎಸ್ಎಂಎಸ್ ರವಾನೆಯಾಗುವ ವ್ಯವಸ್ಥೆ ಸದ್ಯಕ್ಕೆ ಜಾರಿಯಲ್ಲಿದೆ. ರಿಟರ್ನ್ಸ್ ಸಲ್ಲಿಕೆ ಗಡುವಿಗಿಂತಲೂ ಮೂರು ದಿನ ಮುಂಚಿತವಾಗಿ ಎಸ್ಎಂಎಸ್ ಹೋಗಲಿದೆ.</p>.<p>‘ಬಹಳಷ್ಟು ಸಂದರ್ಭಗಳಲ್ಲಿ ರಿಟರ್ನ್ಸ್, ತೆರಿಗೆ ಪಾವತಿಯ ವಿಷಯಗಳುಸಂಸ್ಥೆಯ ಪ್ರವರ್ತಕರ ಗಮನಕ್ಕೆ ಬಂದಿರುವುದಿಲ್ಲ. ಏಕೆಂದರೆ ಅದಕ್ಕೆಂದೇ ಲೆಕ್ಕಪತ್ರ ಅಧಿಕಾರಿ ಅಥವಾ ಸಿಎಫ್ಒ ನೇಮಕ ಮಾಡಿಕೊಳ್ಳಲಾಗಿರುತ್ತದೆ. ಆದರೆ, ಜಿಎಸ್ಟಿ ವ್ಯವಸ್ಥೆಯಲ್ಲಿ ಪ್ರವರ್ತಕರಿಗೂ ಎಸ್ಎಂಎಸ್ ಕಳುಹಿಸಲಾಗುವುದು. ಇದರಿಂದ ರಿಟರ್ನ್ಸ್ ಸಲ್ಲಿಕೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಅನುಕೂಲವಾಗಲಿದೆ.</p>.<p>‘ಸತತ ಎರಡು ತಿಂಗಳವರೆಗೆ ಜಿಎಸ್ಟಿಆರ್–3ಬಿ ಸಲ್ಲಿಸದೇ ಇರುವ ಉದ್ದಿಮೆಗಳಿಗೆ ಇ–ವೇ ಬಿಲ್ ಸೃಷ್ಟಿಸಲು ಸಾಧ್ಯವಾಗದೇ ಇರುವಂತೆ ತಡೆ ಹಿಡಿಯಲಾಗುವುದು. ಇದು 2019ರ ಆಗಸ್ಟ್ 22ರಿಂದ ಜಾರಿಗೆ ಬರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>‘ತೆರಿಗೆ ಬಾಕಿ, ರಿಟರ್ನ್ಸ್ ಸಲ್ಲಿಕೆಯಲ್ಲಿ ಲೋಪ ಅಥವಾ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ತಪ್ಪಾಗಿದ್ದರೆ ಆ ಕುರಿತು ಸಂಬಂಧಪಟ್ಟ ಸಂಸ್ಥೆಯ ಪ್ರವರ್ತಕರು, ನಿರ್ದೇಶಕರಿಗೆ ಸ್ವಯಂಚಾಲಿತವಾಗಿ ಎಸ್ಎಂಎಸ್ ರವಾನೆಯಾಗಲಿದೆ’ ಎಂದು ಜಿಎಸ್ಟಿಎನ್ನ ಸಿಇಒ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.</p>.<p>‘ಈ ವ್ಯವಸ್ಥೆಯನ್ನುಜಿಎಸ್ಟಿ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ. ಜಿಎಸ್ಟಿ ವ್ಯವಸ್ಥೆಯು ಎಚ್ಚರಿಕೆ ಸಂದೇಶವನ್ನುಸೃಷ್ಟಿಸಿದರೆ,ಈ ಮಾಹಿತಿಯು ರೆವಿನ್ಯೂ ಇಲಾಖೆಗೂ ಹೋಗಲಿದೆ. ಆಗ ಸೂಕ್ತ ಕ್ರಮ ಕೈಗೊಳ್ಳುವಂತೆ ತೆರಿಗೆ ಅಧಿಕಾರಿಗಳಿಗೆ ಸೂಚನೆ ದೊರೆಯುತ್ತದೆ’ ಎಂದೂ ಹೇಳಿದ್ದಾರೆ.</p>.<p>‘ಜಿಎಸ್ಟಿಆರ್–3ಬಿ ಮತ್ತು ಜಿಎಸ್ಟಿಆರ್–1, ಜಿಎಸ್ಟಿಆರ್–3ಬಿ ಮತ್ತು ಇ–ವೇ ಬಿಲ್ಗಳ ಮಧ್ಯೆ ವ್ಯತ್ಯಾಸ ಇದ್ದರೆ ಅಧಿಕೃತವಾಗಿ ಸಹಿ ಮಾಡಿರುವವರಿಗೆ ಮಾತ್ರವೇ ಎಸ್ಎಂಎಸ್ ರವಾನೆಯಾಗುವ ವ್ಯವಸ್ಥೆ ಸದ್ಯಕ್ಕೆ ಜಾರಿಯಲ್ಲಿದೆ. ರಿಟರ್ನ್ಸ್ ಸಲ್ಲಿಕೆ ಗಡುವಿಗಿಂತಲೂ ಮೂರು ದಿನ ಮುಂಚಿತವಾಗಿ ಎಸ್ಎಂಎಸ್ ಹೋಗಲಿದೆ.</p>.<p>‘ಬಹಳಷ್ಟು ಸಂದರ್ಭಗಳಲ್ಲಿ ರಿಟರ್ನ್ಸ್, ತೆರಿಗೆ ಪಾವತಿಯ ವಿಷಯಗಳುಸಂಸ್ಥೆಯ ಪ್ರವರ್ತಕರ ಗಮನಕ್ಕೆ ಬಂದಿರುವುದಿಲ್ಲ. ಏಕೆಂದರೆ ಅದಕ್ಕೆಂದೇ ಲೆಕ್ಕಪತ್ರ ಅಧಿಕಾರಿ ಅಥವಾ ಸಿಎಫ್ಒ ನೇಮಕ ಮಾಡಿಕೊಳ್ಳಲಾಗಿರುತ್ತದೆ. ಆದರೆ, ಜಿಎಸ್ಟಿ ವ್ಯವಸ್ಥೆಯಲ್ಲಿ ಪ್ರವರ್ತಕರಿಗೂ ಎಸ್ಎಂಎಸ್ ಕಳುಹಿಸಲಾಗುವುದು. ಇದರಿಂದ ರಿಟರ್ನ್ಸ್ ಸಲ್ಲಿಕೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಅನುಕೂಲವಾಗಲಿದೆ.</p>.<p>‘ಸತತ ಎರಡು ತಿಂಗಳವರೆಗೆ ಜಿಎಸ್ಟಿಆರ್–3ಬಿ ಸಲ್ಲಿಸದೇ ಇರುವ ಉದ್ದಿಮೆಗಳಿಗೆ ಇ–ವೇ ಬಿಲ್ ಸೃಷ್ಟಿಸಲು ಸಾಧ್ಯವಾಗದೇ ಇರುವಂತೆ ತಡೆ ಹಿಡಿಯಲಾಗುವುದು. ಇದು 2019ರ ಆಗಸ್ಟ್ 22ರಿಂದ ಜಾರಿಗೆ ಬರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>