<p><strong>ಮುಂಬೈ:</strong> ಕೊರೊನೋತ್ತರದ ನಂತರ ದೇಶದಲ್ಲಿ ಸಂಪತ್ತಿನ ಅಸಮಾನತೆಯ ಅಂತರ ಕಡಿಮೆಯಾಗಲಿದೆ.ಸಿರಿವಂತ ರಾಜ್ಯಗಳ ವರಮಾನವು ಬಡ ರಾಜ್ಯಗಳ ವರಮಾನಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಎಸ್ಬಿಐ ಅಧ್ಯಯನ ವರದಿ ತಿಳಿಸಿದೆ.</p>.<p>ಭಾರತದಲ್ಲಿ ತಲಾ ಆದಾಯ 2020–21ರಲ್ಲಿ ಶೇ 5.4ರಷ್ಟು ಇಳಿಕೆಯಾಗಲಿದ್ದು, ₹ 1.43 ಲಕ್ಷಕ್ಕೆ ತಲುಪಲಿದೆ.</p>.<p>ದೆಹಲಿ ಮತ್ತು ಚಂಡೀಗಢದಲ್ಲಿ ತಲಾ ಆದಾಯ ಕ್ರಮವಾಗಿ ಶೇ –15.4 ರಷ್ಟು ಮತ್ತುಶೇ –13.9ರಷ್ಟು ಇಳಿಕೆಯಾಗಿದೆ. ದೇಶದ ಒಟ್ಟಾರೆ ತಲಾ ಆದಾಯದಲ್ಲಿನ ಇಳಿಕೆಗಿಂತಲೂ (ಶೇ –5.4) ಮೂರು ಪಟ್ಟು ಹೆಚ್ಚು ಇಳಿಕೆಯಾಗಲಿದೆ.</p>.<p>ಒಟ್ಟಾರೆಯಾಗಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ ಆದಾಯ ಎರಡಂಕಿಯಷ್ಟು ಇಳಿಕೆಯಾಗಲಿದೆ. ಈ ರಾಜ್ಯಗಳು ದೇಶದ ಒಟ್ಟಾರೆ ಜಿಡಿಪಿಗೆ ಶೇ 47ರಷ್ಟು ಕೊಡುಗೆ ನೀಡುತ್ತಿವೆ.</p>.<p>ಪ್ರಸಕ್ತ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳ ತಲಾ ಆದಾಯದಲ್ಲಿ ಶೇ 10–12ರಷ್ಟು ಕಡಿಮೆಯಾಗಲಿದೆ. ಆದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿ ಇಳಿಕೆ ಪ್ರಮಾಣ ಶೇ 8ಕ್ಕಿಂತಲೂ ಕಡಿಮೆ ಇರಲಿದೆ ಎಂದು ವರದಿ ತಿಳಿಸಿದೆ.</p>.<p>ರೆಡ್ ಝೋನ್ ವ್ಯಾಪಿಗೆ ಬಂದಿರುವ ನಗರ ಪ್ರದೇಶಗಳಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಮಾರುಕಟ್ಟೆಗಳು, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್ಗಳನ್ನು ಮುಚ್ಚಿರುವುದು ಈ ರಾಜ್ಯಗಳ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.</p>.<p>ಮಾರುಕಟ್ಟೆಗಳು ನಿಧಾನವಾಗಿ ತೆರೆಯುತ್ತಿದ್ದರೂ ಗ್ರಾಹಕರ ಸಂಖ್ಯೆಯು ಕೋವಿಡ್ಗಿಂತಲೂ ಮುಂಚಿನ ಸ್ಥಿತಿಯ ಶೇ 70–80ರಷ್ಟು ಕಡಿಮೆ ಇದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಕೊರೊನೋತ್ತರದ ನಂತರ ದೇಶದಲ್ಲಿ ಸಂಪತ್ತಿನ ಅಸಮಾನತೆಯ ಅಂತರ ಕಡಿಮೆಯಾಗಲಿದೆ.ಸಿರಿವಂತ ರಾಜ್ಯಗಳ ವರಮಾನವು ಬಡ ರಾಜ್ಯಗಳ ವರಮಾನಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಎಸ್ಬಿಐ ಅಧ್ಯಯನ ವರದಿ ತಿಳಿಸಿದೆ.</p>.<p>ಭಾರತದಲ್ಲಿ ತಲಾ ಆದಾಯ 2020–21ರಲ್ಲಿ ಶೇ 5.4ರಷ್ಟು ಇಳಿಕೆಯಾಗಲಿದ್ದು, ₹ 1.43 ಲಕ್ಷಕ್ಕೆ ತಲುಪಲಿದೆ.</p>.<p>ದೆಹಲಿ ಮತ್ತು ಚಂಡೀಗಢದಲ್ಲಿ ತಲಾ ಆದಾಯ ಕ್ರಮವಾಗಿ ಶೇ –15.4 ರಷ್ಟು ಮತ್ತುಶೇ –13.9ರಷ್ಟು ಇಳಿಕೆಯಾಗಿದೆ. ದೇಶದ ಒಟ್ಟಾರೆ ತಲಾ ಆದಾಯದಲ್ಲಿನ ಇಳಿಕೆಗಿಂತಲೂ (ಶೇ –5.4) ಮೂರು ಪಟ್ಟು ಹೆಚ್ಚು ಇಳಿಕೆಯಾಗಲಿದೆ.</p>.<p>ಒಟ್ಟಾರೆಯಾಗಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ ಆದಾಯ ಎರಡಂಕಿಯಷ್ಟು ಇಳಿಕೆಯಾಗಲಿದೆ. ಈ ರಾಜ್ಯಗಳು ದೇಶದ ಒಟ್ಟಾರೆ ಜಿಡಿಪಿಗೆ ಶೇ 47ರಷ್ಟು ಕೊಡುಗೆ ನೀಡುತ್ತಿವೆ.</p>.<p>ಪ್ರಸಕ್ತ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳ ತಲಾ ಆದಾಯದಲ್ಲಿ ಶೇ 10–12ರಷ್ಟು ಕಡಿಮೆಯಾಗಲಿದೆ. ಆದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿ ಇಳಿಕೆ ಪ್ರಮಾಣ ಶೇ 8ಕ್ಕಿಂತಲೂ ಕಡಿಮೆ ಇರಲಿದೆ ಎಂದು ವರದಿ ತಿಳಿಸಿದೆ.</p>.<p>ರೆಡ್ ಝೋನ್ ವ್ಯಾಪಿಗೆ ಬಂದಿರುವ ನಗರ ಪ್ರದೇಶಗಳಲ್ಲಿ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಮಾರುಕಟ್ಟೆಗಳು, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್ಗಳನ್ನು ಮುಚ್ಚಿರುವುದು ಈ ರಾಜ್ಯಗಳ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.</p>.<p>ಮಾರುಕಟ್ಟೆಗಳು ನಿಧಾನವಾಗಿ ತೆರೆಯುತ್ತಿದ್ದರೂ ಗ್ರಾಹಕರ ಸಂಖ್ಯೆಯು ಕೋವಿಡ್ಗಿಂತಲೂ ಮುಂಚಿನ ಸ್ಥಿತಿಯ ಶೇ 70–80ರಷ್ಟು ಕಡಿಮೆ ಇದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>