ಈ ನಿರ್ಧಾರದಿಂದ ಸಕ್ಕರೆ ಕಾರ್ಖಾನೆಗಳ ಕಬ್ಬು ಅರೆಯುವ ಸಾಮರ್ಥ್ಯವು ಗಣನೀಯವಾಗಿ ತಗ್ಗಲಿದೆ. ಕಾರ್ಖಾನೆಗಳಿಗಷ್ಟೇ ಅಲ್ಲದೆ ರೈತರಿಗೂ ನಷ್ಟ ಆಗಲಿದೆ. ರೈತರಿಗೆ ಕಬ್ಬು ಬಾಕಿ ಪಾವತಿಯೂ ವಿಳಂಬ ಆಗಲಿದೆೆ. ಹೀಗಾಗಿ ಸರ್ಕಾರವು ದರ ಹೆಚ್ಚಳವನ್ನು ಪರಿಗಣಿಸಬೇಕು. ಕಬ್ಬು ಬೆಳೆಗಾರರ ಹಣಕಾಸಿನ ಅಗತ್ಯಗಳನ್ನು ಈಡೇರಿಸಲು ಸಕ್ಕರೆ ಕಾರ್ಖಾನೆಗಳಿಗೆ ಬೇಕಿರುವಷ್ಟು ಹಣ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ.