<p><strong>ನವದೆಹಲಿ:</strong> ಇಸ್ರೇಲ್ನ ವಿಮಾನ ನಿಲ್ದಾಣದ ಸಮೀಪ ಕ್ಷಿಪಣಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಟೆಲ್ ಅವಿವ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅಬುಧಾಬಿಗೆ ಮಾರ್ಗ ಬದಲಿಸಿದೆ ಎಂದು ಮೂಲಗಳು ಇಂದು (ಭಾನುವಾರ) ತಿಳಿಸಿವೆ. </p><p>ಏರ್ ಇಂಡಿಯಾದ ಬೋಯಿಂಗ್ 787 ವಿಮಾನವು, ಟೆಲ್ ಅವಿವ್ನಲ್ಲಿ ಇಳಿಯಲು ಇನ್ನೇನು ಒಂದು ತಾಸಿಗೂ ಕಡಿಮೆ ಅವಧಿ ಇದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. </p><p>ಪ್ರಸ್ತುತ ಎಐ 139 ವಿಮಾನವು ದೆಹಲಿಗೆ ಹಿಂತಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>ವಿಮಾನಗಳ ಟ್ರ್ಯಾಕಿಂಗ್ ವೆಬ್ಸೈಟ್ ಆದ <a href="https://flightradar24.com/">Flightradar24.com</a> ಪರಿಶೀಲಿಸಿದಾಗ ಈ ವಿಮಾನವು ಅಬುಧಾಬಿಗೆ ಮಾರ್ಗ ಬದಲಿಸುವಾಗ ಜೋರ್ಡನ್ನ ವಾಯುಪ್ರದೇಶದಲ್ಲಿತ್ತು. </p><p>ಮತ್ತೊಂದೆಡೆ ಟೆಲ್ ಅವಿವ್ನಿಂದ ದೆಹಲಿಯತ್ತ ಇಂದು ಪ್ರಯಾಣಿಸಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. </p><p>ಯೆಮನ್ ಉಡಾಯಿಸಿದ ಕ್ಷಿಪಣಿ ಟೆಲ್ ಅವಿವ್ ವಿಮಾನ ನಿಲ್ದಾಣದ ಸಮೀಪ ಅಪ್ಪಳಿಸಿದ ಪರಿಣಾಮ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಧಗಿತಗೊಳಿಸಲಾಗಿದೆ. </p>.ಗಾಲಿಕುರ್ಚಿ ಒದಗಿಸದ ಸಿಬ್ಬಂದಿ: ಏರ್ ಇಂಡಿಯಾ ವಿರುದ್ಧ ನಟ ವೀರ್ ದಾಸ್ ಕಿಡಿ.ದೆಹಲಿ: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಪೈಲಟ್ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಇಸ್ರೇಲ್ನ ವಿಮಾನ ನಿಲ್ದಾಣದ ಸಮೀಪ ಕ್ಷಿಪಣಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಟೆಲ್ ಅವಿವ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅಬುಧಾಬಿಗೆ ಮಾರ್ಗ ಬದಲಿಸಿದೆ ಎಂದು ಮೂಲಗಳು ಇಂದು (ಭಾನುವಾರ) ತಿಳಿಸಿವೆ. </p><p>ಏರ್ ಇಂಡಿಯಾದ ಬೋಯಿಂಗ್ 787 ವಿಮಾನವು, ಟೆಲ್ ಅವಿವ್ನಲ್ಲಿ ಇಳಿಯಲು ಇನ್ನೇನು ಒಂದು ತಾಸಿಗೂ ಕಡಿಮೆ ಅವಧಿ ಇದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. </p><p>ಪ್ರಸ್ತುತ ಎಐ 139 ವಿಮಾನವು ದೆಹಲಿಗೆ ಹಿಂತಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>ವಿಮಾನಗಳ ಟ್ರ್ಯಾಕಿಂಗ್ ವೆಬ್ಸೈಟ್ ಆದ <a href="https://flightradar24.com/">Flightradar24.com</a> ಪರಿಶೀಲಿಸಿದಾಗ ಈ ವಿಮಾನವು ಅಬುಧಾಬಿಗೆ ಮಾರ್ಗ ಬದಲಿಸುವಾಗ ಜೋರ್ಡನ್ನ ವಾಯುಪ್ರದೇಶದಲ್ಲಿತ್ತು. </p><p>ಮತ್ತೊಂದೆಡೆ ಟೆಲ್ ಅವಿವ್ನಿಂದ ದೆಹಲಿಯತ್ತ ಇಂದು ಪ್ರಯಾಣಿಸಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. </p><p>ಯೆಮನ್ ಉಡಾಯಿಸಿದ ಕ್ಷಿಪಣಿ ಟೆಲ್ ಅವಿವ್ ವಿಮಾನ ನಿಲ್ದಾಣದ ಸಮೀಪ ಅಪ್ಪಳಿಸಿದ ಪರಿಣಾಮ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಧಗಿತಗೊಳಿಸಲಾಗಿದೆ. </p>.ಗಾಲಿಕುರ್ಚಿ ಒದಗಿಸದ ಸಿಬ್ಬಂದಿ: ಏರ್ ಇಂಡಿಯಾ ವಿರುದ್ಧ ನಟ ವೀರ್ ದಾಸ್ ಕಿಡಿ.ದೆಹಲಿ: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಪೈಲಟ್ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>