<p><strong>ನವದೆಹಲಿ</strong>: ಜನಧನ ಯೋಜನೆಯ ಅಡಿಯಲ್ಲಿ ತೆರೆಯಲಾದ 15 ಕೋಟಿ ಖಾತೆಗಳು ನಿಷ್ಕ್ರಿಯವಾಗಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.</p>.<p>ಈ ಯೋಜನೆಯ ಅಡಿ ಒಟ್ಟು 57.07 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಶೇ 26ರಷ್ಟು ಖಾತೆಗಳು ನಿಷ್ಕ್ರಿಯವಾಗಿವೆ.</p>.<p>ಈ ವರ್ಷದ ಸೆಪ್ಟೆಂಬರ್ 30ರ ವೇಳೆಗೆ ದೇಶದ ಬ್ಯಾಂಕ್ಗಳು ಒಟ್ಟು 7.81 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಹೊಂದಿದ್ದವು, ಇವುಗಳ ಮೂಲಕ ನೀಡಿರುವ ಸಾಲದಲ್ಲಿ ಒಟ್ಟು ₹10.39 ಲಕ್ಷ ಕೋಟಿ ಅವುಗಳಿಗೆ ಬರಬೇಕಿದೆ ಎಂದು ಬೇರೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಚೌಧರಿ ತಿಳಿಸಿದ್ದಾರೆ.</p>.<p>ಸ್ಟ್ಯಾಂಡ್–ಅಪ್ ಇಂಡಿಯಾ ಯೋಜನೆಯ ಅಡಿಯಲ್ಲಿ ಬ್ಯಾಂಕ್ಗಳು ಒಟ್ಟು ₹62,791 ಕೋಟಿ ಮೊತ್ತದ 2.75 ಲಕ್ಷ ಸಾಲಗಳನ್ನು ನೀಡಿವೆ.</p>.<p>ವಹಿವಾಟಿನ ಗಾತ್ರದ ಆಧಾರದಲ್ಲಿ ಭಾರತದ ಯುಪಿಐ ವ್ಯವಸ್ಥೆಯು ಜಗತ್ತಿನ ಅತಿದೊಡ್ಡ ರಿಟೇಲ್ ತ್ವರಿತ ಪಾವತಿ ವ್ಯವಸ್ಥೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಹೇಳಿದೆ ಎಂದು ಸಚಿವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜನಧನ ಯೋಜನೆಯ ಅಡಿಯಲ್ಲಿ ತೆರೆಯಲಾದ 15 ಕೋಟಿ ಖಾತೆಗಳು ನಿಷ್ಕ್ರಿಯವಾಗಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.</p>.<p>ಈ ಯೋಜನೆಯ ಅಡಿ ಒಟ್ಟು 57.07 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಶೇ 26ರಷ್ಟು ಖಾತೆಗಳು ನಿಷ್ಕ್ರಿಯವಾಗಿವೆ.</p>.<p>ಈ ವರ್ಷದ ಸೆಪ್ಟೆಂಬರ್ 30ರ ವೇಳೆಗೆ ದೇಶದ ಬ್ಯಾಂಕ್ಗಳು ಒಟ್ಟು 7.81 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಹೊಂದಿದ್ದವು, ಇವುಗಳ ಮೂಲಕ ನೀಡಿರುವ ಸಾಲದಲ್ಲಿ ಒಟ್ಟು ₹10.39 ಲಕ್ಷ ಕೋಟಿ ಅವುಗಳಿಗೆ ಬರಬೇಕಿದೆ ಎಂದು ಬೇರೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಚೌಧರಿ ತಿಳಿಸಿದ್ದಾರೆ.</p>.<p>ಸ್ಟ್ಯಾಂಡ್–ಅಪ್ ಇಂಡಿಯಾ ಯೋಜನೆಯ ಅಡಿಯಲ್ಲಿ ಬ್ಯಾಂಕ್ಗಳು ಒಟ್ಟು ₹62,791 ಕೋಟಿ ಮೊತ್ತದ 2.75 ಲಕ್ಷ ಸಾಲಗಳನ್ನು ನೀಡಿವೆ.</p>.<p>ವಹಿವಾಟಿನ ಗಾತ್ರದ ಆಧಾರದಲ್ಲಿ ಭಾರತದ ಯುಪಿಐ ವ್ಯವಸ್ಥೆಯು ಜಗತ್ತಿನ ಅತಿದೊಡ್ಡ ರಿಟೇಲ್ ತ್ವರಿತ ಪಾವತಿ ವ್ಯವಸ್ಥೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಹೇಳಿದೆ ಎಂದು ಸಚಿವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>