<p><strong>ಮುಂಬೈ</strong>: ನಷ್ಟದಲ್ಲಿರುವ ಜೆಟ್ಏರ್ವೇಸ್ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತಿಳಿಸಲು ನೀಡಲಾಗಿದ್ದು ಗಡುವನ್ನು ಆಗಸ್ಟ್ 3ರಿಂದ ಆಗಸ್ಟ್ 10ಕ್ಕೆ ವಿಸ್ತರಿಸಲಾಗಿದೆ.</p>.<p>ದಿವಾಳಿ ಪ್ರಕ್ರಿಯೆ ನಡೆಸಲು26 ಬ್ಯಾಂಕ್ಗಳ ಒಕ್ಕೂಟದಿಂದ ನೆಮಕಗೊಂಡಿರುವ ಗ್ರ್ಯಾಂಟ್ ಥಾರ್ನ್ಟನ್ ಕಂಪನಿಯಆಶಿಶ್ಚೌಚರಿಯಾ ಈ ಮೊದಲು ಆಗಸ್ಟ್ 3ರ ಗಡುವು ನೀಡಿದ್ದರು.</p>.<p>ಇಲ್ಲಿಯವರೆಗೆ ಖರೀದಿಸುವ ಆಸಕ್ತಿ ವ್ಯಕ್ತಪಡಿಸಿ ನಾಲ್ಕು ಅರ್ಜಿಗಳು ಸಂಸ್ಥೆಯ ಜಾಲತಾಣದಲ್ಲಿ ಸಲ್ಲಿಕೆಯಾಗಿವೆ. ಈ ಅರ್ಜಿದಾರರು ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಒಕ್ಕೂಟವು ಷೇರುಪೇಟೆಗೆ ಮಾಹಿತಿ ನೀಡಿದೆ.</p>.<p>₹ 8,500 ಕೋಟಿ ಸಾಲ ವಸೂಲಿಗಾಗಿ ಒಕ್ಕೂಟವು ಸಂಸ್ಥೆಯನ್ನು ಎನ್ಸಿಎಲ್ಟಿಯಡಿ ದಿವಾಳಿ ಪ್ರಕ್ರಿಯೆಗೆ ಒಳಪಡಿಸಿದೆ.</p>.<p>ಸಿಬ್ಬಂದಿಯ ವೇತನದ ಬಗ್ಗೆ ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರ (ಎನ್ಸಿಎಲ್ಟಿ) ಜುಲೈ 23ರಂದು ಸೂಚನೆ ನೀಡಿತ್ತು. ಹೀಗಾಗಿಎಸ್ಬಿಐ ಈಗಾಗಲೇ ₹ 10 ಕೋಟಿ ಮಧ್ಯಂತರ ಹಣಕಾಸಿನ ನೆರವು ನೀಡಲು ಒಪ್ಪಿಗೆ ನೀಡಿದೆ. ಇನ್ನುಳಿದ ಬ್ಯಾಂಕ್ಗಳು ಸಹ ನೆರವು ನೀಡುವ ಪ್ರಕ್ರಿಯೆಯಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ನಷ್ಟದಲ್ಲಿರುವ ಜೆಟ್ಏರ್ವೇಸ್ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತಿಳಿಸಲು ನೀಡಲಾಗಿದ್ದು ಗಡುವನ್ನು ಆಗಸ್ಟ್ 3ರಿಂದ ಆಗಸ್ಟ್ 10ಕ್ಕೆ ವಿಸ್ತರಿಸಲಾಗಿದೆ.</p>.<p>ದಿವಾಳಿ ಪ್ರಕ್ರಿಯೆ ನಡೆಸಲು26 ಬ್ಯಾಂಕ್ಗಳ ಒಕ್ಕೂಟದಿಂದ ನೆಮಕಗೊಂಡಿರುವ ಗ್ರ್ಯಾಂಟ್ ಥಾರ್ನ್ಟನ್ ಕಂಪನಿಯಆಶಿಶ್ಚೌಚರಿಯಾ ಈ ಮೊದಲು ಆಗಸ್ಟ್ 3ರ ಗಡುವು ನೀಡಿದ್ದರು.</p>.<p>ಇಲ್ಲಿಯವರೆಗೆ ಖರೀದಿಸುವ ಆಸಕ್ತಿ ವ್ಯಕ್ತಪಡಿಸಿ ನಾಲ್ಕು ಅರ್ಜಿಗಳು ಸಂಸ್ಥೆಯ ಜಾಲತಾಣದಲ್ಲಿ ಸಲ್ಲಿಕೆಯಾಗಿವೆ. ಈ ಅರ್ಜಿದಾರರು ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಒಕ್ಕೂಟವು ಷೇರುಪೇಟೆಗೆ ಮಾಹಿತಿ ನೀಡಿದೆ.</p>.<p>₹ 8,500 ಕೋಟಿ ಸಾಲ ವಸೂಲಿಗಾಗಿ ಒಕ್ಕೂಟವು ಸಂಸ್ಥೆಯನ್ನು ಎನ್ಸಿಎಲ್ಟಿಯಡಿ ದಿವಾಳಿ ಪ್ರಕ್ರಿಯೆಗೆ ಒಳಪಡಿಸಿದೆ.</p>.<p>ಸಿಬ್ಬಂದಿಯ ವೇತನದ ಬಗ್ಗೆ ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರ (ಎನ್ಸಿಎಲ್ಟಿ) ಜುಲೈ 23ರಂದು ಸೂಚನೆ ನೀಡಿತ್ತು. ಹೀಗಾಗಿಎಸ್ಬಿಐ ಈಗಾಗಲೇ ₹ 10 ಕೋಟಿ ಮಧ್ಯಂತರ ಹಣಕಾಸಿನ ನೆರವು ನೀಡಲು ಒಪ್ಪಿಗೆ ನೀಡಿದೆ. ಇನ್ನುಳಿದ ಬ್ಯಾಂಕ್ಗಳು ಸಹ ನೆರವು ನೀಡುವ ಪ್ರಕ್ರಿಯೆಯಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>