<p><strong>ನವದೆಹಲಿ: </strong>ಜೆಟ್ ಏರ್ವೇಸ್ನಲ್ಲಿನ ಬಂಡವಾಳದ ಹರಾಜು ಪ್ರಕ್ರಿಯೆ ವಿಫಲವಾದರೆ, ದಿವಾಳಿ ಸಂಹಿತೆಯ (ಐಬಿಸಿ ಕಾಯ್ದೆ) ವ್ಯಾಪ್ತಿಯ ಹೊರಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್ಗಳ ಒಕ್ಕೂಟ ಚಿಂತಿಸುತ್ತಿದೆ.</p>.<p>ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದಲ್ಲಿನ ಏಳು ಬ್ಯಾಂಕ್ಗಳ ಒಕ್ಕೂಟವು, ನಷ್ಟಪೀಡಿತ ವಿಮಾನಯಾನ ಸಂಸ್ಥೆಗೆ ತಾನು ನೀಡಿರುವ ಸಾಲ ವಸೂಲಾತಿಗೆ ಬಿಡ್ಗಳನ್ನು ಆಹ್ವಾನಿಸಿದೆ. ₹ 13,500 ಕೋಟಿಗೂ ಹೆಚ್ಚಿನ ಪ್ರಮಾಣದ ಸಾಲದ ಸುಳಿಗೆ ಸಿಲುಕಿರುವ ಜೆಟ್ ಏರ್ವೇಸ್ ಈಗಾಗಲೇ ತನ್ನ ವಿಮಾನಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.</p>.<p>ಸಂಸ್ಥೆಗೆ ತುರ್ತು ಹಣಕಾಸು ನೆರವು ನೀಡಲು ನಿರಾಕರಿಸಿರುವ ಬ್ಯಾಂಕ್ಗಳ ಒಕ್ಕೂಟವು ಆಹ್ವಾನಿಸಿರುವ ಬಿಡ್ ಪ್ರಕ್ರಿಯೆಯ ಹಣೆಬರಹವು ಮೇ 10ರಂದು ಸ್ಪಷ್ಟಗೊಳ್ಳಲಿದೆ. ಈ ಹರಾಜು ಪ್ರಕ್ರಿಯೆ ಯಶಸ್ವಿಯಾಗುವ ಬಗ್ಗೆ ಒಕ್ಕೂಟವು ಆಶಾವಾದ ತಳೆದಿದೆ. ಆದರೆ, ನಿರೀಕ್ಷಿಸಿದಂತೆ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆಯದಿದ್ದರೆ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (ಐಬಿಸಿ) ಚೌಕಟ್ಟಿನ ಹೊರಗೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್ ಒಕ್ಕೂಟ ಉದ್ದೇಶಿಸಿದೆ.</p>.<p>ಸಂಸ್ಥೆಗೆ ಸೇರಿದ ಕಟ್ಟಡ, ಮೂಲಸೌಕರ್ಯ, ಭೂಮಿ ಮುಂತಾದ ಸ್ಥಿರಾಸ್ತಿಗಳನ್ನು ಆಧರಿಸಿ ಪರಿಹಾರಕ್ಕೆ ಯತ್ನಿಸುವುದು ಅದರ ಇನ್ನೊಂದು ಆಯ್ಕೆಯಾಗಿದೆ.</p>.<p>ದಿವಾಳಿ ಸಂಹಿತೆಯಡಿ ಪರಿಹಾರ ಕಂಡುಕೊಳ್ಳಲು ಮುಂದಾದರೆ, ಅದಕ್ಕೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯ (ಎನ್ಸಿಎಲ್ಟಿ) ಅನುಮೋದನೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಮಾರುಕಟ್ಟೆ ಆಧಾರಿತವಾಗಿದ್ದು, ನಿರ್ದಿಷ್ಟ ಕಾಲಮಿತಿಗೆ ಒಳಪಟ್ಟಿರುತ್ತದೆ.</p>.<p class="Subhead"><strong>ಪರ್ಯಾಯ ಮಾರ್ಗ: </strong>ಪರ್ಯಾಯ ಮಾರ್ಗೋಪಾಯಗಳಡಿ, ‘ದಿವಾಳಿ ಸಂಹಿತೆ’ಯ ಕಾರ್ಯವ್ಯಾಪ್ತಿಯ ಹೊರಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಆಯ್ಕೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಬ್ಯಾಂಕ್ಗಳು ವಿಮಾನಯಾನ ಸಂಸ್ಥೆಯ ಸ್ಥಿರಾಸ್ತಿಯಿಂದ ಉತ್ತಮ ಪರಿಹಾರ ಪಡೆದುಕೊಳ್ಳಲಿವೆ.</p>.<p>ಸಂಸ್ಥೆಯ ಒಡೆತನದಲ್ಲಿ ಇರುವ 16 ವಿಮಾನಗಳನ್ನು ಬಳಸಿಕೊಂಡು ನಿಧಿ ಸಂಗ್ರಹಿಸಲೂ ಬ್ಯಾಂಕ್ಗಳೂ ಚಿಂತನೆ ನಡೆಸುತ್ತಿವೆ.</p>.<p>ಜೆಟ್ ಏರ್ವೇಸ್ನಲ್ಲಿನ ಪಾಲು ಬಂಡವಾಳ ಖರೀದಿಸಲು ಎತಿಹಾದ್ ಏರ್ವೇಸ್, ಟಿಪಿಜಿ ಕ್ಯಾಪಿಟಲ್, ಇಂಡಿಗೊ ಪಾರ್ಟನರ್ಸ್ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್ಐಐಎಫ್) ಆಸಕ್ತಿ ವ್ಯಕ್ತಪಡಿಸಿವೆ.</p>.<p><strong>ಪ್ರವರ್ತಕರ ವಿಳಂಬ ಧೋರಣೆ</strong></p>.<p>ಈ ಬಿಕ್ಕಟ್ಟಿಗೆ ಬ್ಯಾಂಕ್ಗಳು ಹೊಣೆಯಲ್ಲ. ಒಂಬತ್ತು ತಿಂಗಳಿನಿಂದ ಸಂಸ್ಥೆಯು ನಗದು ಬಿಕ್ಕಟ್ಟು ಎದುರಿಸುತ್ತಿತ್ತು. ನಿರ್ದಿಷ್ಟ ಪರಿಹಾರ ಸೂತ್ರ ಮುಂದಿಟ್ಟುಕೊಂಡು ಚರ್ಚೆಗೆ ಬರಲು ಬ್ಯಾಂಕ್ಗಳು ಸಂಸ್ಥೆಯ ನಿರ್ದೇಶಕ ಮಂಡಳಿಗೆ ಒತ್ತಾಯಿಸುತ್ತಿದ್ದವು.</p>.<p>ಆಡಳಿತ ಮಂಡಳಿ ಮತ್ತು ಸಂಸ್ಥೆಯ ಪ್ರವರ್ತಕರು ಖಚಿತ ತೀರ್ಮಾನಕ್ಕೆ ಬರಲು ವಿಳಂಬ ಮಾಡಿದ್ದರಿಂದ ಸದ್ಯದ ಬಿಕ್ಕಟ್ಟು ಉದ್ಭವವಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಜೆಟ್ ಏರ್ವೇಸ್ನಲ್ಲಿನ ಬಂಡವಾಳದ ಹರಾಜು ಪ್ರಕ್ರಿಯೆ ವಿಫಲವಾದರೆ, ದಿವಾಳಿ ಸಂಹಿತೆಯ (ಐಬಿಸಿ ಕಾಯ್ದೆ) ವ್ಯಾಪ್ತಿಯ ಹೊರಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್ಗಳ ಒಕ್ಕೂಟ ಚಿಂತಿಸುತ್ತಿದೆ.</p>.<p>ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದಲ್ಲಿನ ಏಳು ಬ್ಯಾಂಕ್ಗಳ ಒಕ್ಕೂಟವು, ನಷ್ಟಪೀಡಿತ ವಿಮಾನಯಾನ ಸಂಸ್ಥೆಗೆ ತಾನು ನೀಡಿರುವ ಸಾಲ ವಸೂಲಾತಿಗೆ ಬಿಡ್ಗಳನ್ನು ಆಹ್ವಾನಿಸಿದೆ. ₹ 13,500 ಕೋಟಿಗೂ ಹೆಚ್ಚಿನ ಪ್ರಮಾಣದ ಸಾಲದ ಸುಳಿಗೆ ಸಿಲುಕಿರುವ ಜೆಟ್ ಏರ್ವೇಸ್ ಈಗಾಗಲೇ ತನ್ನ ವಿಮಾನಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.</p>.<p>ಸಂಸ್ಥೆಗೆ ತುರ್ತು ಹಣಕಾಸು ನೆರವು ನೀಡಲು ನಿರಾಕರಿಸಿರುವ ಬ್ಯಾಂಕ್ಗಳ ಒಕ್ಕೂಟವು ಆಹ್ವಾನಿಸಿರುವ ಬಿಡ್ ಪ್ರಕ್ರಿಯೆಯ ಹಣೆಬರಹವು ಮೇ 10ರಂದು ಸ್ಪಷ್ಟಗೊಳ್ಳಲಿದೆ. ಈ ಹರಾಜು ಪ್ರಕ್ರಿಯೆ ಯಶಸ್ವಿಯಾಗುವ ಬಗ್ಗೆ ಒಕ್ಕೂಟವು ಆಶಾವಾದ ತಳೆದಿದೆ. ಆದರೆ, ನಿರೀಕ್ಷಿಸಿದಂತೆ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆಯದಿದ್ದರೆ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (ಐಬಿಸಿ) ಚೌಕಟ್ಟಿನ ಹೊರಗೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್ ಒಕ್ಕೂಟ ಉದ್ದೇಶಿಸಿದೆ.</p>.<p>ಸಂಸ್ಥೆಗೆ ಸೇರಿದ ಕಟ್ಟಡ, ಮೂಲಸೌಕರ್ಯ, ಭೂಮಿ ಮುಂತಾದ ಸ್ಥಿರಾಸ್ತಿಗಳನ್ನು ಆಧರಿಸಿ ಪರಿಹಾರಕ್ಕೆ ಯತ್ನಿಸುವುದು ಅದರ ಇನ್ನೊಂದು ಆಯ್ಕೆಯಾಗಿದೆ.</p>.<p>ದಿವಾಳಿ ಸಂಹಿತೆಯಡಿ ಪರಿಹಾರ ಕಂಡುಕೊಳ್ಳಲು ಮುಂದಾದರೆ, ಅದಕ್ಕೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯ (ಎನ್ಸಿಎಲ್ಟಿ) ಅನುಮೋದನೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಮಾರುಕಟ್ಟೆ ಆಧಾರಿತವಾಗಿದ್ದು, ನಿರ್ದಿಷ್ಟ ಕಾಲಮಿತಿಗೆ ಒಳಪಟ್ಟಿರುತ್ತದೆ.</p>.<p class="Subhead"><strong>ಪರ್ಯಾಯ ಮಾರ್ಗ: </strong>ಪರ್ಯಾಯ ಮಾರ್ಗೋಪಾಯಗಳಡಿ, ‘ದಿವಾಳಿ ಸಂಹಿತೆ’ಯ ಕಾರ್ಯವ್ಯಾಪ್ತಿಯ ಹೊರಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಆಯ್ಕೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಬ್ಯಾಂಕ್ಗಳು ವಿಮಾನಯಾನ ಸಂಸ್ಥೆಯ ಸ್ಥಿರಾಸ್ತಿಯಿಂದ ಉತ್ತಮ ಪರಿಹಾರ ಪಡೆದುಕೊಳ್ಳಲಿವೆ.</p>.<p>ಸಂಸ್ಥೆಯ ಒಡೆತನದಲ್ಲಿ ಇರುವ 16 ವಿಮಾನಗಳನ್ನು ಬಳಸಿಕೊಂಡು ನಿಧಿ ಸಂಗ್ರಹಿಸಲೂ ಬ್ಯಾಂಕ್ಗಳೂ ಚಿಂತನೆ ನಡೆಸುತ್ತಿವೆ.</p>.<p>ಜೆಟ್ ಏರ್ವೇಸ್ನಲ್ಲಿನ ಪಾಲು ಬಂಡವಾಳ ಖರೀದಿಸಲು ಎತಿಹಾದ್ ಏರ್ವೇಸ್, ಟಿಪಿಜಿ ಕ್ಯಾಪಿಟಲ್, ಇಂಡಿಗೊ ಪಾರ್ಟನರ್ಸ್ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್ಐಐಎಫ್) ಆಸಕ್ತಿ ವ್ಯಕ್ತಪಡಿಸಿವೆ.</p>.<p><strong>ಪ್ರವರ್ತಕರ ವಿಳಂಬ ಧೋರಣೆ</strong></p>.<p>ಈ ಬಿಕ್ಕಟ್ಟಿಗೆ ಬ್ಯಾಂಕ್ಗಳು ಹೊಣೆಯಲ್ಲ. ಒಂಬತ್ತು ತಿಂಗಳಿನಿಂದ ಸಂಸ್ಥೆಯು ನಗದು ಬಿಕ್ಕಟ್ಟು ಎದುರಿಸುತ್ತಿತ್ತು. ನಿರ್ದಿಷ್ಟ ಪರಿಹಾರ ಸೂತ್ರ ಮುಂದಿಟ್ಟುಕೊಂಡು ಚರ್ಚೆಗೆ ಬರಲು ಬ್ಯಾಂಕ್ಗಳು ಸಂಸ್ಥೆಯ ನಿರ್ದೇಶಕ ಮಂಡಳಿಗೆ ಒತ್ತಾಯಿಸುತ್ತಿದ್ದವು.</p>.<p>ಆಡಳಿತ ಮಂಡಳಿ ಮತ್ತು ಸಂಸ್ಥೆಯ ಪ್ರವರ್ತಕರು ಖಚಿತ ತೀರ್ಮಾನಕ್ಕೆ ಬರಲು ವಿಳಂಬ ಮಾಡಿದ್ದರಿಂದ ಸದ್ಯದ ಬಿಕ್ಕಟ್ಟು ಉದ್ಭವವಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>