<p><strong>ಮುಂಬೈ:</strong> ವೇತನ ಬಾಕಿ ವಿಷಯವಾಗಿ ಜೆಟ್ ಏರ್ವೇಸ್ನ ದೇಶಿ ಪೈಲಟ್ಗಳ ಅಂಗಸಂಸ್ಥೆ ‘ನ್ಯಾಷನಲ್ ಏವಿಯೇಟರ್ಸ್ ಗೈಡ್’ (ಎನ್ಎಜಿ), ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರಿಗೆ ಇಮೇಲ್ ಬರೆದಿದೆ.</p>.<p>ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು ಸಂಸ್ಥೆಯನ್ನು ನಿಯಂತ್ರಣಕ್ಕೆ ಪಡೆದ ನಂತರದ ದಿನವೇ ಪೈಲಟ್ಗಳು ರಜನೀಶ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.</p>.<p>‘ಹೊಸ ಆಡಳಿತ ಮಂಡಳಿಯು ವಿಳಂಬ ಮಾಡದೇ ಆದಷ್ಟೂ ಬೇಗ ಬಾಕಿ ವೇತನ ಪಾವತಿಸುವ ಮೂಲಕಪೈಲಟ್ಗಳು ಮತ್ತು ಎಂಜಿನಿ<br />ಯರ್ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ’ಎಂದು ಎನ್ಎಜಿ ಪ್ರಧಾನ ಕಾರ್ಯದರ್ಶಿ ತೇಜ್ ಸೂದ್ ಅವರು ಎಸ್ಬಿಐ ಅಧ್ಯಕ್ಷರಿಗೆ ಕಳುಹಿಸಿರುವ ಇ–ಮೇಲ್ನಲ್ಲಿ ಬರೆದಿದ್ದಾರೆ.</p>.<p>ಜೆಟ್ ಏರ್ವೇಸ್ ಪುನಶ್ಚೇತನಕ್ಕೆ ನಿರ್ಧರಿಸಿರುವ ಎಸ್ಬಿಐಗೆ ಧನ್ಯವಾದ ಸೂಚಿಸಿರುವ ಅವರು, ಪುನಶ್ಚೇತನದ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಭೇಟಿಗೆ ಅವಕಾಶ ನೀಡಿದರೆ ಅದರಿಂದ ನಮ್ಮಲ್ಲಿರುವ ಅನಿಶ್ಚಿತತೆ ದೂರಾಗಿ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದಿದ್ದಾರೆ.</p>.<p>ಸಂಸ್ಥೆಯಲ್ಲಿ ಒಟ್ಟಾರೆ 1,600 ಪೈಲಟ್ಗಳಿದ್ದು, ಅವರಲ್ಲಿ 1,100 ಪೈಲಟ್ಗಳು ‘ಎನ್ಎಜಿ’ದಲ್ಲಿದ್ದಾರೆ. ಮಾರ್ಚ್ ಒಳಗಾಗಿ ವೇತನ ಪಾವತಿಸದೇ ಇದ್ದರೆ ಏಪ್ರಿಲ್ 1 ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಎನ್ಎಜಿನಲ್ಲಿ ಇರುವ ಪೈಲಟ್ಗಳಲ್ಲಿಬಹಳಷ್ಟು ಮಂದಿಗೆ ಇಂಡಿಗೊ ಮತ್ತು ಸ್ಪೈಸ್ಜೆಟ್ ಸಂಸ್ಥೆಗಳು ಕೆಲಸಕ್ಕಾಗಿ ಆಹ್ವಾನಿಸಿವೆ ಎನ್ನುವ ವರದಿಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ವೇತನ ಬಾಕಿ ವಿಷಯವಾಗಿ ಜೆಟ್ ಏರ್ವೇಸ್ನ ದೇಶಿ ಪೈಲಟ್ಗಳ ಅಂಗಸಂಸ್ಥೆ ‘ನ್ಯಾಷನಲ್ ಏವಿಯೇಟರ್ಸ್ ಗೈಡ್’ (ಎನ್ಎಜಿ), ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರಿಗೆ ಇಮೇಲ್ ಬರೆದಿದೆ.</p>.<p>ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು ಸಂಸ್ಥೆಯನ್ನು ನಿಯಂತ್ರಣಕ್ಕೆ ಪಡೆದ ನಂತರದ ದಿನವೇ ಪೈಲಟ್ಗಳು ರಜನೀಶ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.</p>.<p>‘ಹೊಸ ಆಡಳಿತ ಮಂಡಳಿಯು ವಿಳಂಬ ಮಾಡದೇ ಆದಷ್ಟೂ ಬೇಗ ಬಾಕಿ ವೇತನ ಪಾವತಿಸುವ ಮೂಲಕಪೈಲಟ್ಗಳು ಮತ್ತು ಎಂಜಿನಿ<br />ಯರ್ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ’ಎಂದು ಎನ್ಎಜಿ ಪ್ರಧಾನ ಕಾರ್ಯದರ್ಶಿ ತೇಜ್ ಸೂದ್ ಅವರು ಎಸ್ಬಿಐ ಅಧ್ಯಕ್ಷರಿಗೆ ಕಳುಹಿಸಿರುವ ಇ–ಮೇಲ್ನಲ್ಲಿ ಬರೆದಿದ್ದಾರೆ.</p>.<p>ಜೆಟ್ ಏರ್ವೇಸ್ ಪುನಶ್ಚೇತನಕ್ಕೆ ನಿರ್ಧರಿಸಿರುವ ಎಸ್ಬಿಐಗೆ ಧನ್ಯವಾದ ಸೂಚಿಸಿರುವ ಅವರು, ಪುನಶ್ಚೇತನದ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಭೇಟಿಗೆ ಅವಕಾಶ ನೀಡಿದರೆ ಅದರಿಂದ ನಮ್ಮಲ್ಲಿರುವ ಅನಿಶ್ಚಿತತೆ ದೂರಾಗಿ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದಿದ್ದಾರೆ.</p>.<p>ಸಂಸ್ಥೆಯಲ್ಲಿ ಒಟ್ಟಾರೆ 1,600 ಪೈಲಟ್ಗಳಿದ್ದು, ಅವರಲ್ಲಿ 1,100 ಪೈಲಟ್ಗಳು ‘ಎನ್ಎಜಿ’ದಲ್ಲಿದ್ದಾರೆ. ಮಾರ್ಚ್ ಒಳಗಾಗಿ ವೇತನ ಪಾವತಿಸದೇ ಇದ್ದರೆ ಏಪ್ರಿಲ್ 1 ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಎನ್ಎಜಿನಲ್ಲಿ ಇರುವ ಪೈಲಟ್ಗಳಲ್ಲಿಬಹಳಷ್ಟು ಮಂದಿಗೆ ಇಂಡಿಗೊ ಮತ್ತು ಸ್ಪೈಸ್ಜೆಟ್ ಸಂಸ್ಥೆಗಳು ಕೆಲಸಕ್ಕಾಗಿ ಆಹ್ವಾನಿಸಿವೆ ಎನ್ನುವ ವರದಿಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>