<p><strong>ಹೊಸದುರ್ಗ: </strong>ಕಳೆದ ವರ್ಷ ಒಂದು ಕ್ವಿಂಟಲ್ಗೆ ₹ 4,500 ಇದ್ದ ಕಡಲೆಕಾಳು ಬೆಲೆ ಈ ಬಾರಿ ₹ 3,500ಕ್ಕೆ ಕುಸಿತಗೊಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಪ್ರತಿ ಕ್ವಿಂಟಲ್ಗೆ ₹ 4,000 ಬೆಲೆ ಇರುವುದರಿಂದ ಒಳ್ಳೆಯ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಿದ್ದರು. ಆದರೆ, ಇದೀಗ ದರ ಕುಸಿದಿರುವುದು ಆಘಾತ<br />ತಂದಿದೆ.</p>.<p>‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕಡಲೆ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಬೆಲೆ ಕುಸಿದಿರುವುದು ಬೇಸರ ಮೂಡಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಏಕೆ ಬೆಲೆ ಕುಸಿತವಾಗಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಬೆಳೆಗಾರ ಬಾಗೂರು ಆರ್.ವೆಂಕಟೇಶ್ ಹೇಳಿದರು.</p>.<p>ಅಕ್ಟೋಬರ್ನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಈರುಳ್ಳಿ ಬೆಳೆ ಬಹುತೇಕ ಕೊಳೆತು ಹೋಗಿತ್ತು. ಪ್ರತಿ ವರ್ಷ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ಕಟಾವು ಮಾಡಿದ ನಂತರ ಅದೇ ಜಮೀನಿಗೆ ಹಿಂಗಾರಿನಲ್ಲಿ ಮತ್ತೆ ಕಡಲೆ ಬಿತ್ತನೆ ಮಾಡುವುದು ವಾಡಿಕೆ. ಈರುಳ್ಳಿ ಕೊಳೆತಿದ್ದರಿಂದ ಈ ಬಾರಿ ವಾಡಿಕೆಗಿಂತ ಹೆಚ್ಚು ಪ್ರದೇಶದಲ್ಲಿ ರೈತರು ಕಡಲೆ ಕಾಳು ಬಿತ್ತನೆ ಮಾಡಿದ್ದರು. ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಈ ಬಾರಿ 1,786 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ.</p>.<p>ಈ ಬಾರಿ ಜಮೀನಿನಲ್ಲಿ ತೇವಾಂಶ ಹೆಚ್ಚಿದ್ದರಿಂದ ಬೆಳೆ ಹುಲುಸಾಗಿ ಬಂದಿತ್ತು. ಬೆಳೆಗಾರರು ಒಕ್ಕಲು ಕಾರ್ಯ ಮಾಡುತ್ತಿದ್ದಾರೆ. ಎಕರೆಗೆ 5ರಿಂದ 6 ಕ್ವಿಂಟಲ್ ಇಳುವರಿ ಬಂದಿದೆ. ಮಧ್ಯವರ್ತಿಗಳು ಜಮೀನಿಗೆ ಬಂದು ಒಂದು ಕ್ವಿಂಟಲ್ ಕಡಲೆಕಾಳನ್ನು<br />₹ 3,200ರಿಂದ ₹ 3,500ಕ್ಕೆ ಖರೀದಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆದಿರುವ ಬೆಳೆ ಆದಾಯ ಕೈಸೇರುವ ಹೊತ್ತಿನಲ್ಲಿ ಬೆಲೆ ಕುಸಿತವಾಗಿರುವುದರಿಂದ ದಿಕ್ಕು ತೋಚದಂತಾಗಿದೆ’ ಎನ್ನುತ್ತಾರೆ ಬೆಳೆಗಾರ ಚಂದ್ರಪ್ಪ.</p>.<p class="Subhead"><strong>ಎಕರೆಗೆ ₹ 10 ಸಾವಿರ ಖರ್ಚು</strong>: ‘ಕಡಲೆ ಬಿತ್ತನೆ ಮಾಡುವ ಒಂದು ಎಕರೆ ಜಮೀನಿನಲ್ಲಿ ನೇಗಿಲು ಹೊಡೆಸಿದ್ದು, ಬಿತ್ತನೆ ಬೀಜ ಖರೀದಿಸಿದ್ದು, ಬಿತ್ತನೆ ಮಾಡಲು ಟ್ರ್ಯಾಕ್ಟರ್ ಹಾಗೂ ಇಬ್ಬರು ಕೂಲಿಯವರಿಗೆ ಕೊಟ್ಟಿದ್ದು, ಬಿತ್ತನೆ ನಂತರ ಟ್ರ್ಯಾಕ್ಟರ್ ಕುಂಟೆ ಹೊಡೆಸಿದ್ದು, ಕೀಟಬಾಧೆ ನಿಯಂತ್ರಣ, 3 ಬಾರಿ ಔಷಧ ಸಿಂಪಡಣೆ ಹಾಗೂ ಕೂಲಿಯವರಿಗೆ ಕೊಟ್ಟಿದ್ದು, ಕಟಾವಿಗೆ ಬಂದ ಬೆಳೆ ಕೀಳಿಸಲು ಕಾರ್ಮಿಕರಿಗೆ ಕೂಲಿ, ಒಕ್ಕಣೆ ಮಾಡುವ ಯಂತ್ರದವರಿಗೆ ಹಣ ಕೊಟ್ಟಿರುವುದು ಸೇರಿ ಎಕರೆಗೆ ₹ 10 ಸಾವಿರ ಖರ್ಚಾಗಿದೆ’ ಎಂದು ರೈತ ಮಲ್ಲೇಪ್ಪ ಲೆಕ್ಕ ಒಪ್ಪಿಸಿದರು.</p>.<p>ಪ್ರಸ್ತುತ ಮಾರುಕಟ್ಟೆ ದರದಿಂದ ನಿರೀಕ್ಷಿಸಿದಷ್ಟು ಆದಾಯ ಸಿಗದಂತಾಗಿದೆ. ಹೀಗಾಗಿ ರೈತರ ಹಿತ ಕಾಪಾಡಲು ಪ್ರತಿ ಕ್ವಿಂಟಲ್ ಕಡಲೆಕಾಳನ್ನು ₹ 5,000 ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕಿನ ರೈತರ ಮನವಿ ಮಾಡಿದ್ದಾರೆ.</p>.<p>*<br />ರೈತರು ಬೆಳೆ ಬೆಳೆಯದಿದ್ದಾಗ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವುದು, ಹೆಚ್ಚು ಬೆಳೆ ಬೆಳೆದಾಗ ಬೆಲೆ ಕುಸಿತವಾಗುವುದು ವಿಪರ್ಯಾಸ.<br /><em><strong>-ಎ.ಎನ್. ಮಲ್ಲೇಶಪ್ಪ, ನಿವೃತ್ತ ಆಡಿಟರ್ ಹೊಸದುರ್ಗ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ: </strong>ಕಳೆದ ವರ್ಷ ಒಂದು ಕ್ವಿಂಟಲ್ಗೆ ₹ 4,500 ಇದ್ದ ಕಡಲೆಕಾಳು ಬೆಲೆ ಈ ಬಾರಿ ₹ 3,500ಕ್ಕೆ ಕುಸಿತಗೊಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಪ್ರತಿ ಕ್ವಿಂಟಲ್ಗೆ ₹ 4,000 ಬೆಲೆ ಇರುವುದರಿಂದ ಒಳ್ಳೆಯ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಿದ್ದರು. ಆದರೆ, ಇದೀಗ ದರ ಕುಸಿದಿರುವುದು ಆಘಾತ<br />ತಂದಿದೆ.</p>.<p>‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕಡಲೆ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಬೆಲೆ ಕುಸಿದಿರುವುದು ಬೇಸರ ಮೂಡಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಏಕೆ ಬೆಲೆ ಕುಸಿತವಾಗಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಬೆಳೆಗಾರ ಬಾಗೂರು ಆರ್.ವೆಂಕಟೇಶ್ ಹೇಳಿದರು.</p>.<p>ಅಕ್ಟೋಬರ್ನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಈರುಳ್ಳಿ ಬೆಳೆ ಬಹುತೇಕ ಕೊಳೆತು ಹೋಗಿತ್ತು. ಪ್ರತಿ ವರ್ಷ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ಕಟಾವು ಮಾಡಿದ ನಂತರ ಅದೇ ಜಮೀನಿಗೆ ಹಿಂಗಾರಿನಲ್ಲಿ ಮತ್ತೆ ಕಡಲೆ ಬಿತ್ತನೆ ಮಾಡುವುದು ವಾಡಿಕೆ. ಈರುಳ್ಳಿ ಕೊಳೆತಿದ್ದರಿಂದ ಈ ಬಾರಿ ವಾಡಿಕೆಗಿಂತ ಹೆಚ್ಚು ಪ್ರದೇಶದಲ್ಲಿ ರೈತರು ಕಡಲೆ ಕಾಳು ಬಿತ್ತನೆ ಮಾಡಿದ್ದರು. ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಈ ಬಾರಿ 1,786 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ.</p>.<p>ಈ ಬಾರಿ ಜಮೀನಿನಲ್ಲಿ ತೇವಾಂಶ ಹೆಚ್ಚಿದ್ದರಿಂದ ಬೆಳೆ ಹುಲುಸಾಗಿ ಬಂದಿತ್ತು. ಬೆಳೆಗಾರರು ಒಕ್ಕಲು ಕಾರ್ಯ ಮಾಡುತ್ತಿದ್ದಾರೆ. ಎಕರೆಗೆ 5ರಿಂದ 6 ಕ್ವಿಂಟಲ್ ಇಳುವರಿ ಬಂದಿದೆ. ಮಧ್ಯವರ್ತಿಗಳು ಜಮೀನಿಗೆ ಬಂದು ಒಂದು ಕ್ವಿಂಟಲ್ ಕಡಲೆಕಾಳನ್ನು<br />₹ 3,200ರಿಂದ ₹ 3,500ಕ್ಕೆ ಖರೀದಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆದಿರುವ ಬೆಳೆ ಆದಾಯ ಕೈಸೇರುವ ಹೊತ್ತಿನಲ್ಲಿ ಬೆಲೆ ಕುಸಿತವಾಗಿರುವುದರಿಂದ ದಿಕ್ಕು ತೋಚದಂತಾಗಿದೆ’ ಎನ್ನುತ್ತಾರೆ ಬೆಳೆಗಾರ ಚಂದ್ರಪ್ಪ.</p>.<p class="Subhead"><strong>ಎಕರೆಗೆ ₹ 10 ಸಾವಿರ ಖರ್ಚು</strong>: ‘ಕಡಲೆ ಬಿತ್ತನೆ ಮಾಡುವ ಒಂದು ಎಕರೆ ಜಮೀನಿನಲ್ಲಿ ನೇಗಿಲು ಹೊಡೆಸಿದ್ದು, ಬಿತ್ತನೆ ಬೀಜ ಖರೀದಿಸಿದ್ದು, ಬಿತ್ತನೆ ಮಾಡಲು ಟ್ರ್ಯಾಕ್ಟರ್ ಹಾಗೂ ಇಬ್ಬರು ಕೂಲಿಯವರಿಗೆ ಕೊಟ್ಟಿದ್ದು, ಬಿತ್ತನೆ ನಂತರ ಟ್ರ್ಯಾಕ್ಟರ್ ಕುಂಟೆ ಹೊಡೆಸಿದ್ದು, ಕೀಟಬಾಧೆ ನಿಯಂತ್ರಣ, 3 ಬಾರಿ ಔಷಧ ಸಿಂಪಡಣೆ ಹಾಗೂ ಕೂಲಿಯವರಿಗೆ ಕೊಟ್ಟಿದ್ದು, ಕಟಾವಿಗೆ ಬಂದ ಬೆಳೆ ಕೀಳಿಸಲು ಕಾರ್ಮಿಕರಿಗೆ ಕೂಲಿ, ಒಕ್ಕಣೆ ಮಾಡುವ ಯಂತ್ರದವರಿಗೆ ಹಣ ಕೊಟ್ಟಿರುವುದು ಸೇರಿ ಎಕರೆಗೆ ₹ 10 ಸಾವಿರ ಖರ್ಚಾಗಿದೆ’ ಎಂದು ರೈತ ಮಲ್ಲೇಪ್ಪ ಲೆಕ್ಕ ಒಪ್ಪಿಸಿದರು.</p>.<p>ಪ್ರಸ್ತುತ ಮಾರುಕಟ್ಟೆ ದರದಿಂದ ನಿರೀಕ್ಷಿಸಿದಷ್ಟು ಆದಾಯ ಸಿಗದಂತಾಗಿದೆ. ಹೀಗಾಗಿ ರೈತರ ಹಿತ ಕಾಪಾಡಲು ಪ್ರತಿ ಕ್ವಿಂಟಲ್ ಕಡಲೆಕಾಳನ್ನು ₹ 5,000 ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕಿನ ರೈತರ ಮನವಿ ಮಾಡಿದ್ದಾರೆ.</p>.<p>*<br />ರೈತರು ಬೆಳೆ ಬೆಳೆಯದಿದ್ದಾಗ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವುದು, ಹೆಚ್ಚು ಬೆಳೆ ಬೆಳೆದಾಗ ಬೆಲೆ ಕುಸಿತವಾಗುವುದು ವಿಪರ್ಯಾಸ.<br /><em><strong>-ಎ.ಎನ್. ಮಲ್ಲೇಶಪ್ಪ, ನಿವೃತ್ತ ಆಡಿಟರ್ ಹೊಸದುರ್ಗ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>