<p><strong>ನವದೆಹಲಿ: </strong>ತೆರಿಗೆ, ತೆರಿಗೆಯೇತರ ವರಮಾನ ಸಂಗ್ರಹದಲ್ಲಿನ ಕುಸಿತ ಮತ್ತು ರೈತರ ಸಾಲ ಮನ್ನಾ ನಿರ್ಧಾರವು ಕರ್ನಾಟಕ ಸರ್ಕಾರದ ಬೊಕ್ಕಸದ ಪಾಲಿಗೆ ಭಾರಿ ಹೊರೆಯಾಗಿ ಪರಿಣಮಿಸಿವೆ.</p>.<p>ಈ ಕಾರಣಕ್ಕೆ ವೆಚ್ಚಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಮಾರುಕಟ್ಟೆಯಿಂದ ಸಂಗ್ರಹಿಸುವ ಸಾಲದ ಪ್ರಮಾಣವು 2018–19ರಲ್ಲಿ (ವರ್ಷದಿಂದ ವರ್ಷಕ್ಕೆ) ಶೇ 81ರಷ್ಟು ಹೆಚ್ಚಳಗೊಂಡಿರುವುದು ಭಾರತೀಯ ರಿಸರ್ವ್ ಬ್ಯಾಂಕ್ನ ಅಂಕಿಅಂಶಗಳಿಂದ ತಿಳಿದು ಬರುತ್ತದೆ.</p>.<p>ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು ಮಾರುಕಟ್ಟೆಯಿಂದ ಎತ್ತಿರುವ ಸಾಲದ ಪ್ರಮಾಣವು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಎಸ್ಡಿಪಿ) ಶೇಕಡಾವಾರು ಲೆಕ್ಕದಲ್ಲಿ ಸುಸ್ಥಿರ ಏರಿಕೆ ದಾಖಲಿಸಿದೆ.</p>.<p class="Subhead">ತೆರಿಗೆ ಸಂಗ್ರಹ ಕುಸಿತ: ರಾಜ್ಯದಲ್ಲಿನ ತೆರಿಗೆ ವರಮಾನವು ರಾಜ್ಯದ ಒಟ್ಟಾರೆ ಆರ್ಥಿಕತೆಯ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿದೆ. 2011–12ರಲ್ಲಿ ಶೇ 16ರಷ್ಟಿದ್ದ ಇದು, 2017–18ರಲ್ಲಿ ಶೇ 11ಕ್ಕೆ ಇಳಿದಿದೆ.</p>.<p>ರಾಜ್ಯದ ತೆರಿಗೆಯೇತರ ವರಮಾನದ ‘ಜಿಎಸ್ಡಿಪಿ’ ಶೇಕಡಾವಾರು ಪ್ರಮಾಣವೂ ಕುಸಿತ ಕಂಡಿದೆ. 2011–12ರಲ್ಲಿ ಶೇ 11ರಷ್ಟು ಏರಿಕೆಯಾಗಿದ್ದ ಈ ವರಮಾನವು 2018–19ರಲ್ಲಿ ಶೇ 7ರಷ್ಟಾಗಿದೆ.</p>.<p class="Subhead">ವಿತ್ತೀಯ ಕೊರತೆ ಹೆಚ್ಚಳ: 2019–20ರ ಸಾಲಿನ ಬಜೆಟ್ನಲ್ಲಿ ಸರ್ಕಾರದ ಒಟ್ಟಾರೆ ವರಮಾನವು ₹ 1.66 ಲಕ್ಷ ಕೋಟಿಗಳಷ್ಟಿದ್ದರೆ, ಒಟ್ಟಾರೆ ವೆಚ್ಚವು ₹ 2.17 ಲಕ್ಷ ಕೋಟಿಗಳಷ್ಟಾಗಿದೆ. ವಿತ್ತೀಯ ಕೊರತೆಯು ಬಜೆಟ್ ಅಂದಾಜಿಗಿಂತ ಹೆಚ್ಚಾಗಿದೆ.</p>.<p>ವಿತ್ತೀಯ ಕೊರತೆಯು ಗಮನಾರ್ಹವಾಗಿ ಹೆಚ್ಚಳಗೊಳ್ಳಲು ₹ 47 ಸಾವಿರ ಕೋಟಿಗಳ ಸಾಲ ಮನ್ನಾ ನಿರ್ಧಾರವೇ ಪ್ರಮುಖ ಕಾರಣ. ಇದರಿಂದಾಗಿ ಭೂಮಿ, ಕಟ್ಟಡ, ಯಂತ್ರೋಪಕರಣ ಮತ್ತಿತರ ಮೂಲ ಸೌಕರ್ಯಗಳಿಗೆ ಮಾಡುವ ಬಂಡವಾಳ ವೆಚ್ಚವು ಕಡಿಮೆಯಾಗಲಿದೆ.</p>.<p>ಇದರ ಜತೆಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದಲೂ ರಾಜ್ಯವು ಶೇ 20ರಷ್ಟು ವರಮಾನ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕೆ ಜಿಎಸ್ಟಿ ಪರಿಹಾರ ಯೋಜನೆಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.</p>.<p class="Subhead">ಮುಂಚೂಣಿಯಲ್ಲಿ: ವೆಚ್ಚದ ವಿಷಯದಲ್ಲಿ ಅದರಲ್ಲೂ ವಿಶೇಷವಾಗಿ ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚದಲ್ಲಿ ರಾಜ್ಯವು, ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿ ಇದೆ.</p>.<p>2011–12 ಮತ್ತು 2018–19ರ ಅವಧಿಯಲ್ಲಿ ಈ ವಲಯಕ್ಕೆ ಮಾಡಿದ ವೆಚ್ಚವು ಶೇ 185ರಷ್ಟು ಏರಿಕೆಯಾಗಿದೆ. ಸರ್ಕಾರಿ ನೌಕರರ ವೇತನವೂ ಗಮನಾರ್ಹವಾಗಿ ಹೆಚ್ಚಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ತೆರಿಗೆ, ತೆರಿಗೆಯೇತರ ವರಮಾನ ಸಂಗ್ರಹದಲ್ಲಿನ ಕುಸಿತ ಮತ್ತು ರೈತರ ಸಾಲ ಮನ್ನಾ ನಿರ್ಧಾರವು ಕರ್ನಾಟಕ ಸರ್ಕಾರದ ಬೊಕ್ಕಸದ ಪಾಲಿಗೆ ಭಾರಿ ಹೊರೆಯಾಗಿ ಪರಿಣಮಿಸಿವೆ.</p>.<p>ಈ ಕಾರಣಕ್ಕೆ ವೆಚ್ಚಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಮಾರುಕಟ್ಟೆಯಿಂದ ಸಂಗ್ರಹಿಸುವ ಸಾಲದ ಪ್ರಮಾಣವು 2018–19ರಲ್ಲಿ (ವರ್ಷದಿಂದ ವರ್ಷಕ್ಕೆ) ಶೇ 81ರಷ್ಟು ಹೆಚ್ಚಳಗೊಂಡಿರುವುದು ಭಾರತೀಯ ರಿಸರ್ವ್ ಬ್ಯಾಂಕ್ನ ಅಂಕಿಅಂಶಗಳಿಂದ ತಿಳಿದು ಬರುತ್ತದೆ.</p>.<p>ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು ಮಾರುಕಟ್ಟೆಯಿಂದ ಎತ್ತಿರುವ ಸಾಲದ ಪ್ರಮಾಣವು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಎಸ್ಡಿಪಿ) ಶೇಕಡಾವಾರು ಲೆಕ್ಕದಲ್ಲಿ ಸುಸ್ಥಿರ ಏರಿಕೆ ದಾಖಲಿಸಿದೆ.</p>.<p class="Subhead">ತೆರಿಗೆ ಸಂಗ್ರಹ ಕುಸಿತ: ರಾಜ್ಯದಲ್ಲಿನ ತೆರಿಗೆ ವರಮಾನವು ರಾಜ್ಯದ ಒಟ್ಟಾರೆ ಆರ್ಥಿಕತೆಯ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿದೆ. 2011–12ರಲ್ಲಿ ಶೇ 16ರಷ್ಟಿದ್ದ ಇದು, 2017–18ರಲ್ಲಿ ಶೇ 11ಕ್ಕೆ ಇಳಿದಿದೆ.</p>.<p>ರಾಜ್ಯದ ತೆರಿಗೆಯೇತರ ವರಮಾನದ ‘ಜಿಎಸ್ಡಿಪಿ’ ಶೇಕಡಾವಾರು ಪ್ರಮಾಣವೂ ಕುಸಿತ ಕಂಡಿದೆ. 2011–12ರಲ್ಲಿ ಶೇ 11ರಷ್ಟು ಏರಿಕೆಯಾಗಿದ್ದ ಈ ವರಮಾನವು 2018–19ರಲ್ಲಿ ಶೇ 7ರಷ್ಟಾಗಿದೆ.</p>.<p class="Subhead">ವಿತ್ತೀಯ ಕೊರತೆ ಹೆಚ್ಚಳ: 2019–20ರ ಸಾಲಿನ ಬಜೆಟ್ನಲ್ಲಿ ಸರ್ಕಾರದ ಒಟ್ಟಾರೆ ವರಮಾನವು ₹ 1.66 ಲಕ್ಷ ಕೋಟಿಗಳಷ್ಟಿದ್ದರೆ, ಒಟ್ಟಾರೆ ವೆಚ್ಚವು ₹ 2.17 ಲಕ್ಷ ಕೋಟಿಗಳಷ್ಟಾಗಿದೆ. ವಿತ್ತೀಯ ಕೊರತೆಯು ಬಜೆಟ್ ಅಂದಾಜಿಗಿಂತ ಹೆಚ್ಚಾಗಿದೆ.</p>.<p>ವಿತ್ತೀಯ ಕೊರತೆಯು ಗಮನಾರ್ಹವಾಗಿ ಹೆಚ್ಚಳಗೊಳ್ಳಲು ₹ 47 ಸಾವಿರ ಕೋಟಿಗಳ ಸಾಲ ಮನ್ನಾ ನಿರ್ಧಾರವೇ ಪ್ರಮುಖ ಕಾರಣ. ಇದರಿಂದಾಗಿ ಭೂಮಿ, ಕಟ್ಟಡ, ಯಂತ್ರೋಪಕರಣ ಮತ್ತಿತರ ಮೂಲ ಸೌಕರ್ಯಗಳಿಗೆ ಮಾಡುವ ಬಂಡವಾಳ ವೆಚ್ಚವು ಕಡಿಮೆಯಾಗಲಿದೆ.</p>.<p>ಇದರ ಜತೆಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದಲೂ ರಾಜ್ಯವು ಶೇ 20ರಷ್ಟು ವರಮಾನ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕೆ ಜಿಎಸ್ಟಿ ಪರಿಹಾರ ಯೋಜನೆಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.</p>.<p class="Subhead">ಮುಂಚೂಣಿಯಲ್ಲಿ: ವೆಚ್ಚದ ವಿಷಯದಲ್ಲಿ ಅದರಲ್ಲೂ ವಿಶೇಷವಾಗಿ ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚದಲ್ಲಿ ರಾಜ್ಯವು, ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿ ಇದೆ.</p>.<p>2011–12 ಮತ್ತು 2018–19ರ ಅವಧಿಯಲ್ಲಿ ಈ ವಲಯಕ್ಕೆ ಮಾಡಿದ ವೆಚ್ಚವು ಶೇ 185ರಷ್ಟು ಏರಿಕೆಯಾಗಿದೆ. ಸರ್ಕಾರಿ ನೌಕರರ ವೇತನವೂ ಗಮನಾರ್ಹವಾಗಿ ಹೆಚ್ಚಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>