<p><strong>ಮುಂಬೈ</strong>: ಹೊಸದಾಗಿ ಜಾರಿಗೆ ಬಂದಿರುವ ಕಾರ್ಮಿಕ ಸಂಹಿತೆಗಳು ದೇಶದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ₹75 ಸಾವಿರ ಕೋಟಿಯಷ್ಟು ಹೆಚ್ಚು ಮಾಡಲಿವೆ ಎಂದು ಎಸ್ಬಿಐ ರಿಸರ್ಚ್ನ ಸಂಶೋಧನಾ ವರದಿಯೊಂದು ಅಂದಾಜು ಮಾಡಿದೆ.</p>.<p>ಅಲ್ಲದೆ, ಈ ಸಂಹಿತೆಗಳು ಸಂಘಟಿತ ವಲಯದ ಕಾರ್ಮಿಕರ ಪ್ರಮಾಣವನ್ನು ಕನಿಷ್ಠ ಶೇ 15ರಷ್ಟು ಹೆಚ್ಚು ಮಾಡಲಿವೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.</p>.<p class="bodytext">ಕಾರ್ಮಿಕ ಸಂಹಿತೆಗಳನ್ನು ನವೆಂಬರ್ 21ರಿಂದ ಜಾರಿಗೆ ತರಲಾಗಿದೆ. ಇವು ಮಧ್ಯಮ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣವನ್ನು ಶೇ 1.3ರಷ್ಟು ಕಡಿಮೆ ಮಾಡುವ ಅಂದಾಜು ಇದೆ ಎಂದು ಎಸ್ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.</p>.<p class="bodytext">ನಾಲ್ಕು ಸಂಹಿತೆಗಳು ಕಾರ್ಮಿಕರನ್ನೂ ಉದ್ಯೋಗದಾತರನ್ನೂ ಬಲಪಡಿಸುವ ಕೆಲಸ ಮಾಡಲಿವೆ. ರಕ್ಷಣೆ ಇರುವ, ಉತ್ಪಾದಕತೆಯನ್ನು ತೋರಿಸುವ, ಕೆಲಸದ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿರುವ ಕಾರ್ಮಿಕ ಶಕ್ತಿಯನ್ನು ಈ ಸಂಹಿತೆಗಳು ರೂಪಿಸಲಿವೆ ಎಂದು ವರದಿ ಹೇಳಿದೆ.</p>.<p class="bodytext">ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಸಂಹಿತೆಗಳು ಹೆಚ್ಚು ಮಾಡುತ್ತವೆ ಎಂಬ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ. ದೇಶದ ಅಸಂಘಟಿತ ವಲಯದಲ್ಲಿ ಈಗ ಅಂದಾಜು 44 ಕೋಟಿ ಮಂದಿ ಇದ್ದಾರೆ. ಈ ಪೈಕಿ ಅಂದಾಜು 31 ಕೋಟಿ ಮಂದಿ ಇ–ಶ್ರಮ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ.</p>.<p class="bodytext">ಶೇ 20ರಷ್ಟು ಮಂದಿ ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಬರುತ್ತಾರೆ ಎಂದು ಅಂದಾಜಿಸುವುದಾದರೆ, ಈ ಸಂಹಿತೆಗಳಿಂದಾಗಿ 10 ಕೋಟಿ ಮಂದಿಗೆ ಅನುಕೂಲ ಆಗಲಿದೆ. ಇದರಿಂದಾಗಿ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಯು ಮುಂದಿನ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಶೇ 80ರಿಂದ ಶೇ 85ರವರೆಗೆ ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ.</p>.<p class="bodytext">ಕಾರ್ಮಿಕ ಸಂಹಿತೆಗಳ ಅನುಷ್ಠಾನ, ಕಂಪನಿಗಳ ಮಟ್ಟದಲ್ಲಿ ಆಗುವ ವೆಚ್ಚ ಹಾಗೂ ರಾಜ್ಯಗಳು ಈ ಸಂಹಿತೆಗೆ ಪೂರಕವಾಗಿ ತರುವ ನಿಯಮಗಳನ್ನು ಆಧರಿಸಿ ನಿರುದ್ಯೋಗದ ಪ್ರಮಾಣವು ಕಡಿಮೆ ಆಗಲಿದೆ ಎಂದು ಅದು ಹೇಳಿದೆ.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಹೊಸದಾಗಿ ಜಾರಿಗೆ ಬಂದಿರುವ ಕಾರ್ಮಿಕ ಸಂಹಿತೆಗಳು ದೇಶದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ₹75 ಸಾವಿರ ಕೋಟಿಯಷ್ಟು ಹೆಚ್ಚು ಮಾಡಲಿವೆ ಎಂದು ಎಸ್ಬಿಐ ರಿಸರ್ಚ್ನ ಸಂಶೋಧನಾ ವರದಿಯೊಂದು ಅಂದಾಜು ಮಾಡಿದೆ.</p>.<p>ಅಲ್ಲದೆ, ಈ ಸಂಹಿತೆಗಳು ಸಂಘಟಿತ ವಲಯದ ಕಾರ್ಮಿಕರ ಪ್ರಮಾಣವನ್ನು ಕನಿಷ್ಠ ಶೇ 15ರಷ್ಟು ಹೆಚ್ಚು ಮಾಡಲಿವೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.</p>.<p class="bodytext">ಕಾರ್ಮಿಕ ಸಂಹಿತೆಗಳನ್ನು ನವೆಂಬರ್ 21ರಿಂದ ಜಾರಿಗೆ ತರಲಾಗಿದೆ. ಇವು ಮಧ್ಯಮ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣವನ್ನು ಶೇ 1.3ರಷ್ಟು ಕಡಿಮೆ ಮಾಡುವ ಅಂದಾಜು ಇದೆ ಎಂದು ಎಸ್ಬಿಐನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.</p>.<p class="bodytext">ನಾಲ್ಕು ಸಂಹಿತೆಗಳು ಕಾರ್ಮಿಕರನ್ನೂ ಉದ್ಯೋಗದಾತರನ್ನೂ ಬಲಪಡಿಸುವ ಕೆಲಸ ಮಾಡಲಿವೆ. ರಕ್ಷಣೆ ಇರುವ, ಉತ್ಪಾದಕತೆಯನ್ನು ತೋರಿಸುವ, ಕೆಲಸದ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿರುವ ಕಾರ್ಮಿಕ ಶಕ್ತಿಯನ್ನು ಈ ಸಂಹಿತೆಗಳು ರೂಪಿಸಲಿವೆ ಎಂದು ವರದಿ ಹೇಳಿದೆ.</p>.<p class="bodytext">ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಸಂಹಿತೆಗಳು ಹೆಚ್ಚು ಮಾಡುತ್ತವೆ ಎಂಬ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ. ದೇಶದ ಅಸಂಘಟಿತ ವಲಯದಲ್ಲಿ ಈಗ ಅಂದಾಜು 44 ಕೋಟಿ ಮಂದಿ ಇದ್ದಾರೆ. ಈ ಪೈಕಿ ಅಂದಾಜು 31 ಕೋಟಿ ಮಂದಿ ಇ–ಶ್ರಮ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ.</p>.<p class="bodytext">ಶೇ 20ರಷ್ಟು ಮಂದಿ ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಬರುತ್ತಾರೆ ಎಂದು ಅಂದಾಜಿಸುವುದಾದರೆ, ಈ ಸಂಹಿತೆಗಳಿಂದಾಗಿ 10 ಕೋಟಿ ಮಂದಿಗೆ ಅನುಕೂಲ ಆಗಲಿದೆ. ಇದರಿಂದಾಗಿ ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಯು ಮುಂದಿನ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಶೇ 80ರಿಂದ ಶೇ 85ರವರೆಗೆ ಹೆಚ್ಚಲಿದೆ ಎಂದು ಅಂದಾಜು ಮಾಡಲಾಗಿದೆ.</p>.<p class="bodytext">ಕಾರ್ಮಿಕ ಸಂಹಿತೆಗಳ ಅನುಷ್ಠಾನ, ಕಂಪನಿಗಳ ಮಟ್ಟದಲ್ಲಿ ಆಗುವ ವೆಚ್ಚ ಹಾಗೂ ರಾಜ್ಯಗಳು ಈ ಸಂಹಿತೆಗೆ ಪೂರಕವಾಗಿ ತರುವ ನಿಯಮಗಳನ್ನು ಆಧರಿಸಿ ನಿರುದ್ಯೋಗದ ಪ್ರಮಾಣವು ಕಡಿಮೆ ಆಗಲಿದೆ ಎಂದು ಅದು ಹೇಳಿದೆ.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>