<p><strong>ನವದೆಹಲಿ:</strong> ಭಾರತವು ಜಾಗತಿಕ ಮಟ್ಟದಲ್ಲಿ ತಯಾರಿಕಾ ಕೇಂದ್ರವಾಗಿ ಬೆಳೆಯಬೇಕು ಎಂದಾದರೆ ಸಮಗ್ರ ಸ್ವರೂಪದ ಭೂಸುಧಾರಣೆಯ ಅಗತ್ಯ ಇದೆ ಎಂದು ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಹೇಳಿದೆ.</p>.<p>ಸಮನ್ವಯದ ಆಧಾರದಲ್ಲಿ, ಸಹಮತದ ಆಧಾರದಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಜಿಎಸ್ಟಿ ಮಂಡಳಿಯ ಮಾದರಿಯಲ್ಲಿ ಇದಕ್ಕೂ ಒಂದು ಮಂಡಳಿಯನ್ನು ರಚಿಸಬೇಕು. ಮುದ್ರಾಂಕ ಶುಲ್ಕವು ಭಾರತದಾದ್ಯಂತ ಒಂದೇ ಆಗಿರಬೇಕು, ಅದು ಶೇ 3–5ರ ಪ್ರಮಾಣದಲ್ಲಿ ಇರಬೇಕು ಎಂದು ಸಿಐಐ ಹೇಳಿದೆ.</p>.<p class="bodytext">ವಿವಿಧ ದೇಶಗಳು ಜಾರಿಗೆ ತರುತ್ತಿರುವ ಮಾರುಕಟ್ಟೆ ರಕ್ಷಣೆಯ ಕ್ರಮಗಳು ಹಾಗೂ ವಾಣಿಜ್ಯ ಸಮರವು ಸವಾಲನ್ನು ಸೃಷ್ಟಿಸುತ್ತದೆಯಾದರೂ, ಭಾರತವು ಸ್ಥಿರವಾದ ನೀತಿಗಳನ್ನು ಹೊಂದಿರುವ ಕಾರಣಕ್ಕೆ ದೇಶವು ಮುಂದೆಯೂ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ. </p>.<p class="bodytext">ಭೂಸುಧಾರಣಾ ಕಾರ್ಯತಂತ್ರವು ದೇಶ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ, ದೇಶದ ಬಗ್ಗೆ ಹೂಡಿಕೆದಾರರಿಗೆ ಇರುವ ವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸಿಐಐ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತವು ಜಾಗತಿಕ ಮಟ್ಟದಲ್ಲಿ ತಯಾರಿಕಾ ಕೇಂದ್ರವಾಗಿ ಬೆಳೆಯಬೇಕು ಎಂದಾದರೆ ಸಮಗ್ರ ಸ್ವರೂಪದ ಭೂಸುಧಾರಣೆಯ ಅಗತ್ಯ ಇದೆ ಎಂದು ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಹೇಳಿದೆ.</p>.<p>ಸಮನ್ವಯದ ಆಧಾರದಲ್ಲಿ, ಸಹಮತದ ಆಧಾರದಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಜಿಎಸ್ಟಿ ಮಂಡಳಿಯ ಮಾದರಿಯಲ್ಲಿ ಇದಕ್ಕೂ ಒಂದು ಮಂಡಳಿಯನ್ನು ರಚಿಸಬೇಕು. ಮುದ್ರಾಂಕ ಶುಲ್ಕವು ಭಾರತದಾದ್ಯಂತ ಒಂದೇ ಆಗಿರಬೇಕು, ಅದು ಶೇ 3–5ರ ಪ್ರಮಾಣದಲ್ಲಿ ಇರಬೇಕು ಎಂದು ಸಿಐಐ ಹೇಳಿದೆ.</p>.<p class="bodytext">ವಿವಿಧ ದೇಶಗಳು ಜಾರಿಗೆ ತರುತ್ತಿರುವ ಮಾರುಕಟ್ಟೆ ರಕ್ಷಣೆಯ ಕ್ರಮಗಳು ಹಾಗೂ ವಾಣಿಜ್ಯ ಸಮರವು ಸವಾಲನ್ನು ಸೃಷ್ಟಿಸುತ್ತದೆಯಾದರೂ, ಭಾರತವು ಸ್ಥಿರವಾದ ನೀತಿಗಳನ್ನು ಹೊಂದಿರುವ ಕಾರಣಕ್ಕೆ ದೇಶವು ಮುಂದೆಯೂ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ. </p>.<p class="bodytext">ಭೂಸುಧಾರಣಾ ಕಾರ್ಯತಂತ್ರವು ದೇಶ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ, ದೇಶದ ಬಗ್ಗೆ ಹೂಡಿಕೆದಾರರಿಗೆ ಇರುವ ವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸಿಐಐ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>