ದೇಶದಲ್ಲಿ 2014ರ ನಂತರ ಬೇರೆ ಬೇರೆ ಸಂದರ್ಭಗಳಲ್ಲಿ ಘೋಷಣೆಯಾದ ಕೃಷಿ ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಅರ್ಹವಾಗಿದ್ದ ಸಾಲದ ಖಾತೆಗಳ ಪೈಕಿ ಹೆಚ್ಚಿನವು ‘ಎನ್ಪಿಎ’ (ವಸೂಲಾಗದ) ಎಂದು ವರ್ಗೀಕೃತವಾಗಿರಲಿಲ್ಲ. ಕರ್ನಾಟಕದಲ್ಲಿ ಈ ಯೋಜನೆಗೆ ಅರ್ಹವೆಂದು ಗುರುತಿಸಲಾಗಿದ್ದ 50 ಲಕ್ಷ ರೈತರ ಖಾತೆಗಳ ಪೈಕಿ ಶೇ 46ರಷ್ಟು ಖಾತೆಗಳು ಎನ್ಪಿಎ ಆಗಿರಲಿಲ್ಲ ಎಂದು ಎಸ್ಬಿಐ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯಲ್ಲಿ ವಿವರಿಸಲಾಗಿದೆ.