<p><strong>ಲಖನೌ</strong>: ಟರ್ಕಿಯಿಂದ ಭಾರತಕ್ಕೆ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಗೆ ತಟ್ಟಿರುವ ಬಹಿಷ್ಕಾರದ ಬಿಸಿಯು, ಈಗ ಆ ದೇಶದ ಚಿನ್ನಾಭರಣಗಳಿಗೂ ವಿಸ್ತರಿಸಿದೆ. </p>.<p>ಉತ್ತರ ಪ್ರದೇಶದ ಲಖನೌದಲ್ಲಿ ವರ್ತಕರು ಟರ್ಕಿ ಆಭರಣಗಳ ಖರೀದಿ, ಮಾರಾಟ ಮತ್ತು ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸಂಪೂರ್ಣವಾಗಿ ಅಲ್ಲಿನ ಆಭರಣಗಳ ಆಮದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. </p>.<p>ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತವು ‘ಸಿಂಧೂರ ಕಾರ್ಯಾಚರಣೆ’ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಟರ್ಕಿ ನಿರ್ಮಿಸಿದ ಡ್ರೋನ್ಗಳನ್ನು ಬಳಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿಯಿಂದ ಪೂರೈಕೆಯಾಗುವ ಸರಕುಗಳ ಬಹಿಷ್ಕಾರಕ್ಕೆ ಅಭಿಯಾನ ನಡೆಯುತ್ತಿದೆ. </p>.<p>‘ಅಕ್ಷಯ ತೃತೀಯದಂದು ಟರ್ಕಿ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಆ ದೇಶವು ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಟರ್ಕಿ ಆಭರಣಗಳ ಖರೀದಿಗೆ ಗ್ರಾಹಕರು ಮುಂದಾಗುವುದಿಲ್ಲ. ಹಾಗಾಗಿ, ಆಮದು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಲಖನೌ ಚೌಕ್ ಸರಾಫ್ ಅಸೋಸಿಯೇಷನ್ ಉಪಾಧ್ಯಕ್ಷ ಅದೀಶ್ ಜೈನ್ ಅವರು, ಪಿಟಿಐಗೆ ತಿಳಿಸಿದ್ದಾರೆ. </p>.<p>‘ಅಲ್ಲಿಂದ ಪ್ರಮುಖವಾಗಿ ನೆಕ್ಲೇಸ್, ಉಂಗುರ ಮತ್ತು ಕಿವಿಯೋಲೆ ಆಮದಾಗುತ್ತವೆ. ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿದಿನ ಮಾರಾಟವಾಗುವ 20 ನೆಕ್ಲೇಸ್ಗಳ ಪೈಕಿ 5 ಟರ್ಕಿ ನೆಕ್ಲೇಸ್ಗಳಿರುತ್ತವೆ’ ಎಂದು ವಿವರಿಸಿದ್ದಾರೆ.</p>.<p>‘ಟರ್ಕಿಯಿಂದ ವಿನ್ಯಾಸಗೊಂಡು ಬರುತ್ತಿದ್ದ ಆಭರಣಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೆವು. ಸದ್ಯ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮುಂದಾಗಿದ್ದೇವೆ’ ಎಂದು ಲಖನೌ ಮಹಾನಗರದ ಸರಾಫ್ ಅಸೋಸಿಯೇಷನ್ ಅಧ್ಯಕ್ಷ ಮನೀಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.</p>.<p><strong>ಸೇಬು ಮಾರಾಟ ಸ್ಥಗಿತ</strong></p><p>ಜೈಪುರ: ರಾಜಸ್ಥಾನದ ಆಳ್ವಾರ್ ಹಣ್ಣಿನ ಮಾರುಕಟ್ಟೆಯಲ್ಲಿ ವರ್ತಕರು, ಟರ್ಕಿ ಸೇಬುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ. </p><p>ಈ ಮೊದಲು ಅಜ್ಮೀರ್ನ ವರ್ತಕರು ಟರ್ಕಿಯ ಅಮೃತಶಿಲೆಗಳ ಮಾರಾಟವನ್ನು ಬಹಿಷ್ಕರಿಸಿದ್ದರು. </p><p>ಗ್ರಾಹಕರ ನಿಲುವಿಗೆ ನಾವು ಮನ್ನಣೆ ನೀಡಬೇಕಿದೆ. ಅಲ್ಲಿಂದ ಪೂರೈಕೆಯಾಗುವ ಸರಕುಗಳಿಗೆ ಬಹಿಷ್ಕಾರ ಹೇರಿ ಆ ದೇಶದ ಆರ್ಥಿಕತೆಗೆ ಪೆಟ್ಟು ನೀಡುವುದು ನಮ್ಮ ಗುರಿಯಾಗಿದೆ. ಹಾಗಾಗಿ, ಆಳ್ವಾರ್ನ ಹಣ್ಣಿನ ಮಾರುಕಟ್ಟೆ ಸಂಘವು ಈ ನಿರ್ಧಾರ ಕೈಗೊಂಡಿದೆ ಎಂದು ವರ್ತಕರು ತಿಳಿಸಿದ್ದಾರೆ.</p><p>‘ಮಾರ್ಚ್ನಿಂದ ಜೂನ್ವರೆಗೆ ಇಲ್ಲಿನ ಮಾರುಕಟ್ಟೆಗೆ ಪ್ರತಿ ದಿನ 15 ಟನ್ನಷ್ಟು ಟರ್ಕಿ ಸೇಬುಗಳು ಇಲ್ಲಿನ ಮಾರುಕಟ್ಟೆಗೆ ಆವಕವಾಗುತ್ತವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೌರಭ್ ಕಲ್ರಾ ತಿಳಿಸಿದ್ದಾರೆ.</p><p>‘ಶುಕ್ರವಾರದಿಂದಲೇ ಅಂಗಡಿಗಳ ಮುಂದೆ ಟರ್ಕಿ ಸೇಬಿಗೆ ಬಹಿಷ್ಕಾರದ ಫಲಕಗಳನ್ನು ಪ್ರದರ್ಶಿಸಿದ್ದೇವೆ. ಈ ಮೂಲಕ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.</p><p>‘ಟರ್ಕಿ ಸೇಬುಗಳ ಮಾರಾಟ ಸ್ಥಗಿತದಿಂದ ಮಾರುಕಟ್ಟೆಯಲ್ಲಿ ಆಗುವ ಕೊರತೆ ನೀಗಿಸಲು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ದಕ್ಷಿಣ ಆಫ್ರಿಕಾದ ಸೇಬುಗಳ ಮಾರಾಟಕ್ಕೆ ಮುಂದಾಗಿದ್ದೇವೆ. ಶೈತ್ಯಾಗಾರಗಳಲ್ಲಿ ಈ ಸೇಬುಗಳ ದಾಸ್ತಾನು ಸಾಕಷ್ಟಿದೆ’ ಎಂದು ಸಂಘದ ಕಾರ್ಯದರ್ಶಿ ಪಂಕಜ್ ಸೈನಿ ತಿಳಿಸಿದ್ದಾರೆ.</p>.<p><strong>ಜಿಜೆಸಿ, ಸಿಎಐಟಿ ಬೆಂಬಲ</strong></p><p>ಮುಂಬೈ: ಕೇಂದ್ರ ಸರ್ಕಾರವು ಟರ್ಕಿ ಮತ್ತು ಅಜರ್ಬೈಜಾನ್ ಜತೆಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಿದೆ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ಮಂಡಳಿ (ಜಿಜೆಸಿ) ಆಗ್ರಹಿಸಿದೆ. </p><p>‘ನಮಗೆ ರಾಷ್ಟ್ರದ ಹಿತಾಸಕ್ತಿ ಮುಖ್ಯವಾಗಿದೆ. ಹಾಗಾಗಿ, ಈ ಎರಡು ದೇಶಗಳ ಜೊತೆಗಿನ ಎಲ್ಲಾ ವಹಿವಾಟುಗಳನ್ನು<br>ಸ್ಥಗಿತಗೊಳಿಸಲು ಆಭರಣ ಮಾರಾಟಗಾರರು, ತಯಾರಕರು, ವರ್ತಕರು ಮತ್ತು ಸಗಟು ಮಾರಾಟಗಾರರಿಗೆ ಸೂಚಿಸಲಾಗಿದೆ’ ಎಂದು ಮಂಡಳಿ ಅಧ್ಯಕ್ಷ ರಾಜೇಶ್ ರೋಕ್ಡೆ ತಿಳಿಸಿದ್ದಾರೆ.</p><p>ಎರಡು ದೇಶಗಳ ಜೊತೆಗಿನ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಕೂಡ ಒತ್ತಾಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಟರ್ಕಿಯಿಂದ ಭಾರತಕ್ಕೆ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಗೆ ತಟ್ಟಿರುವ ಬಹಿಷ್ಕಾರದ ಬಿಸಿಯು, ಈಗ ಆ ದೇಶದ ಚಿನ್ನಾಭರಣಗಳಿಗೂ ವಿಸ್ತರಿಸಿದೆ. </p>.<p>ಉತ್ತರ ಪ್ರದೇಶದ ಲಖನೌದಲ್ಲಿ ವರ್ತಕರು ಟರ್ಕಿ ಆಭರಣಗಳ ಖರೀದಿ, ಮಾರಾಟ ಮತ್ತು ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸಂಪೂರ್ಣವಾಗಿ ಅಲ್ಲಿನ ಆಭರಣಗಳ ಆಮದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. </p>.<p>ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತವು ‘ಸಿಂಧೂರ ಕಾರ್ಯಾಚರಣೆ’ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಟರ್ಕಿ ನಿರ್ಮಿಸಿದ ಡ್ರೋನ್ಗಳನ್ನು ಬಳಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿಯಿಂದ ಪೂರೈಕೆಯಾಗುವ ಸರಕುಗಳ ಬಹಿಷ್ಕಾರಕ್ಕೆ ಅಭಿಯಾನ ನಡೆಯುತ್ತಿದೆ. </p>.<p>‘ಅಕ್ಷಯ ತೃತೀಯದಂದು ಟರ್ಕಿ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಆ ದೇಶವು ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಟರ್ಕಿ ಆಭರಣಗಳ ಖರೀದಿಗೆ ಗ್ರಾಹಕರು ಮುಂದಾಗುವುದಿಲ್ಲ. ಹಾಗಾಗಿ, ಆಮದು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಲಖನೌ ಚೌಕ್ ಸರಾಫ್ ಅಸೋಸಿಯೇಷನ್ ಉಪಾಧ್ಯಕ್ಷ ಅದೀಶ್ ಜೈನ್ ಅವರು, ಪಿಟಿಐಗೆ ತಿಳಿಸಿದ್ದಾರೆ. </p>.<p>‘ಅಲ್ಲಿಂದ ಪ್ರಮುಖವಾಗಿ ನೆಕ್ಲೇಸ್, ಉಂಗುರ ಮತ್ತು ಕಿವಿಯೋಲೆ ಆಮದಾಗುತ್ತವೆ. ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿದಿನ ಮಾರಾಟವಾಗುವ 20 ನೆಕ್ಲೇಸ್ಗಳ ಪೈಕಿ 5 ಟರ್ಕಿ ನೆಕ್ಲೇಸ್ಗಳಿರುತ್ತವೆ’ ಎಂದು ವಿವರಿಸಿದ್ದಾರೆ.</p>.<p>‘ಟರ್ಕಿಯಿಂದ ವಿನ್ಯಾಸಗೊಂಡು ಬರುತ್ತಿದ್ದ ಆಭರಣಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೆವು. ಸದ್ಯ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮುಂದಾಗಿದ್ದೇವೆ’ ಎಂದು ಲಖನೌ ಮಹಾನಗರದ ಸರಾಫ್ ಅಸೋಸಿಯೇಷನ್ ಅಧ್ಯಕ್ಷ ಮನೀಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.</p>.<p><strong>ಸೇಬು ಮಾರಾಟ ಸ್ಥಗಿತ</strong></p><p>ಜೈಪುರ: ರಾಜಸ್ಥಾನದ ಆಳ್ವಾರ್ ಹಣ್ಣಿನ ಮಾರುಕಟ್ಟೆಯಲ್ಲಿ ವರ್ತಕರು, ಟರ್ಕಿ ಸೇಬುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ. </p><p>ಈ ಮೊದಲು ಅಜ್ಮೀರ್ನ ವರ್ತಕರು ಟರ್ಕಿಯ ಅಮೃತಶಿಲೆಗಳ ಮಾರಾಟವನ್ನು ಬಹಿಷ್ಕರಿಸಿದ್ದರು. </p><p>ಗ್ರಾಹಕರ ನಿಲುವಿಗೆ ನಾವು ಮನ್ನಣೆ ನೀಡಬೇಕಿದೆ. ಅಲ್ಲಿಂದ ಪೂರೈಕೆಯಾಗುವ ಸರಕುಗಳಿಗೆ ಬಹಿಷ್ಕಾರ ಹೇರಿ ಆ ದೇಶದ ಆರ್ಥಿಕತೆಗೆ ಪೆಟ್ಟು ನೀಡುವುದು ನಮ್ಮ ಗುರಿಯಾಗಿದೆ. ಹಾಗಾಗಿ, ಆಳ್ವಾರ್ನ ಹಣ್ಣಿನ ಮಾರುಕಟ್ಟೆ ಸಂಘವು ಈ ನಿರ್ಧಾರ ಕೈಗೊಂಡಿದೆ ಎಂದು ವರ್ತಕರು ತಿಳಿಸಿದ್ದಾರೆ.</p><p>‘ಮಾರ್ಚ್ನಿಂದ ಜೂನ್ವರೆಗೆ ಇಲ್ಲಿನ ಮಾರುಕಟ್ಟೆಗೆ ಪ್ರತಿ ದಿನ 15 ಟನ್ನಷ್ಟು ಟರ್ಕಿ ಸೇಬುಗಳು ಇಲ್ಲಿನ ಮಾರುಕಟ್ಟೆಗೆ ಆವಕವಾಗುತ್ತವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೌರಭ್ ಕಲ್ರಾ ತಿಳಿಸಿದ್ದಾರೆ.</p><p>‘ಶುಕ್ರವಾರದಿಂದಲೇ ಅಂಗಡಿಗಳ ಮುಂದೆ ಟರ್ಕಿ ಸೇಬಿಗೆ ಬಹಿಷ್ಕಾರದ ಫಲಕಗಳನ್ನು ಪ್ರದರ್ಶಿಸಿದ್ದೇವೆ. ಈ ಮೂಲಕ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.</p><p>‘ಟರ್ಕಿ ಸೇಬುಗಳ ಮಾರಾಟ ಸ್ಥಗಿತದಿಂದ ಮಾರುಕಟ್ಟೆಯಲ್ಲಿ ಆಗುವ ಕೊರತೆ ನೀಗಿಸಲು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ದಕ್ಷಿಣ ಆಫ್ರಿಕಾದ ಸೇಬುಗಳ ಮಾರಾಟಕ್ಕೆ ಮುಂದಾಗಿದ್ದೇವೆ. ಶೈತ್ಯಾಗಾರಗಳಲ್ಲಿ ಈ ಸೇಬುಗಳ ದಾಸ್ತಾನು ಸಾಕಷ್ಟಿದೆ’ ಎಂದು ಸಂಘದ ಕಾರ್ಯದರ್ಶಿ ಪಂಕಜ್ ಸೈನಿ ತಿಳಿಸಿದ್ದಾರೆ.</p>.<p><strong>ಜಿಜೆಸಿ, ಸಿಎಐಟಿ ಬೆಂಬಲ</strong></p><p>ಮುಂಬೈ: ಕೇಂದ್ರ ಸರ್ಕಾರವು ಟರ್ಕಿ ಮತ್ತು ಅಜರ್ಬೈಜಾನ್ ಜತೆಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಿದೆ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ಮಂಡಳಿ (ಜಿಜೆಸಿ) ಆಗ್ರಹಿಸಿದೆ. </p><p>‘ನಮಗೆ ರಾಷ್ಟ್ರದ ಹಿತಾಸಕ್ತಿ ಮುಖ್ಯವಾಗಿದೆ. ಹಾಗಾಗಿ, ಈ ಎರಡು ದೇಶಗಳ ಜೊತೆಗಿನ ಎಲ್ಲಾ ವಹಿವಾಟುಗಳನ್ನು<br>ಸ್ಥಗಿತಗೊಳಿಸಲು ಆಭರಣ ಮಾರಾಟಗಾರರು, ತಯಾರಕರು, ವರ್ತಕರು ಮತ್ತು ಸಗಟು ಮಾರಾಟಗಾರರಿಗೆ ಸೂಚಿಸಲಾಗಿದೆ’ ಎಂದು ಮಂಡಳಿ ಅಧ್ಯಕ್ಷ ರಾಜೇಶ್ ರೋಕ್ಡೆ ತಿಳಿಸಿದ್ದಾರೆ.</p><p>ಎರಡು ದೇಶಗಳ ಜೊತೆಗಿನ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಕೂಡ ಒತ್ತಾಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>