ರಾಜ್ಯದಲ್ಲಿ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಡಿ ರಫ್ತು ಮಾಡಲು ಗಮನ ಹರಿಸಬೇಕಿದೆ. ಆಯಾ ಜಿಲ್ಲೆಗಳ ನಿರ್ದಿಷ್ಟ ಉತ್ಪನ್ನಕ್ಕೆ ಸಂಸ್ಕರಣೆ, ದಾಸ್ತಾನು, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿ ಅದನ್ನು ಬೇರೆ ದೇಶಗಳಿಗೆ ತಲುಪಿಸುವ ಯೋಜನೆ ರೂಪಿಸಬೇಕಿದೆ. ಮಂಡ್ಯದ ಬೆಲ್ಲವನ್ನು, ಚಾಮರಾಜನಗರದ ಅರಿಸಿನವನ್ನು ರಾಸಾಯನಿಕ ಇಲ್ಲದೇ ತಯಾರಿಸಿದರೆ ಅದನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಬಹುದು ಎಂದರು.