<p><strong>ಬೆಂಗಳೂರು/ನವದೆಹಲಿ (ರಾಯಿಟರ್ಸ್/ಪಿಟಿಐ):</strong> ವೇದಾಂತ ಲಿಮಿಟೆಡ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ಅಜಯ್ ಗೋಯಲ್ ಅವರು ಇದೇ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.</p>.<p>ಏಪ್ರಿಲ್ನಲ್ಲಿ ಅವರು ಕಂಪನಿ ತೊರೆದು ಬೈಜೂಸ್ನಲ್ಲಿ ಸಿಎಫ್ಒ ಹೊಣೆಗಾರಿಕೆ ವಹಿಸಿಕೊಂಡಿದ್ದರು. ವೇದಾಂತ ಸಿಎಫ್ಒ ಸೋನಾಲ್ ಶ್ರೀವಾಸ್ತವ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರಿಂದ ಅಜಯ್ ಅವರನ್ನು ನೇಮಿಸಲಾಗಿದೆ. ಬೈಜೂಸ್ನ 2022ನೇ ಹಣಕಾಸು ವರ್ಷದ ಲೆಕ್ಕಪರಿಶೋಧನೆ ಪೂರ್ಣಗೊಂಡ ಬಳಿಕ ಅವರು ವೇದಾಂತ ಕಂಪನಿಗೆ ಮರಳಲಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ವೇದಾಂತ ಸಮೂಹವು ತನ್ನ ವಹಿವಾಟುಗಳನ್ನು ಪುನರ್ರಚನೆ ಮಾಡುವುದಾಗಿ ಕಳೆದ ತಿಂಗಳು ಘೋಷಣೆ ಮಾಡಿದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿವೆ. ಶ್ರೀವಾಸ್ತವ ಅವರು ಜೂನ್ನಲ್ಲಿ ವೇದಾಂತ ಸೇರಿದ್ದರು.</p>.<p>ಅಜಯ್ ಗೋಯಲ್ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಬೈಜೂಸ್ನ ಹಾಲಿ ಹಣಕಾಸು ಅಧ್ಯಕ್ಷವ ನಿತಿನ್ ಗೋಲಾನಿ ಅವರಿಗೆ ಹೆಚ್ಚುವರಿಯಾಗಿ ಸಿಎಫ್ಒ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಬೈಜೂಸ್ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು/ನವದೆಹಲಿ (ರಾಯಿಟರ್ಸ್/ಪಿಟಿಐ):</strong> ವೇದಾಂತ ಲಿಮಿಟೆಡ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ಅಜಯ್ ಗೋಯಲ್ ಅವರು ಇದೇ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.</p>.<p>ಏಪ್ರಿಲ್ನಲ್ಲಿ ಅವರು ಕಂಪನಿ ತೊರೆದು ಬೈಜೂಸ್ನಲ್ಲಿ ಸಿಎಫ್ಒ ಹೊಣೆಗಾರಿಕೆ ವಹಿಸಿಕೊಂಡಿದ್ದರು. ವೇದಾಂತ ಸಿಎಫ್ಒ ಸೋನಾಲ್ ಶ್ರೀವಾಸ್ತವ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರಿಂದ ಅಜಯ್ ಅವರನ್ನು ನೇಮಿಸಲಾಗಿದೆ. ಬೈಜೂಸ್ನ 2022ನೇ ಹಣಕಾಸು ವರ್ಷದ ಲೆಕ್ಕಪರಿಶೋಧನೆ ಪೂರ್ಣಗೊಂಡ ಬಳಿಕ ಅವರು ವೇದಾಂತ ಕಂಪನಿಗೆ ಮರಳಲಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ವೇದಾಂತ ಸಮೂಹವು ತನ್ನ ವಹಿವಾಟುಗಳನ್ನು ಪುನರ್ರಚನೆ ಮಾಡುವುದಾಗಿ ಕಳೆದ ತಿಂಗಳು ಘೋಷಣೆ ಮಾಡಿದ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿವೆ. ಶ್ರೀವಾಸ್ತವ ಅವರು ಜೂನ್ನಲ್ಲಿ ವೇದಾಂತ ಸೇರಿದ್ದರು.</p>.<p>ಅಜಯ್ ಗೋಯಲ್ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಬೈಜೂಸ್ನ ಹಾಲಿ ಹಣಕಾಸು ಅಧ್ಯಕ್ಷವ ನಿತಿನ್ ಗೋಲಾನಿ ಅವರಿಗೆ ಹೆಚ್ಚುವರಿಯಾಗಿ ಸಿಎಫ್ಒ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಬೈಜೂಸ್ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>