<p><strong>ನ್ಯೂಯಾರ್ಕ್:</strong> ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುವ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್ವಿಬಿ) ಆರ್ಥಿಕ ಸಂಕಷ್ಟದಿಂದಾಗಿ ಬಾಗಿಲು ಮುಚ್ಚಿದೆ. 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅತಿದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ.</p>.<p>ಕ್ಯಾಲಿಫೋರ್ನಿಯಾದ ಡಿಪಾರ್ಟ್ಮೆಂಟ್ ಆಫ್ ಫೈನಾನ್ಶಿಯಲ್ ಪ್ರೊಟೆಕ್ಷನ್ ಆ್ಯಂಡ್ ಇನೊವೇಷನ್ (ಡಿಎಫ್ಪಿಐ), ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಬಾಗಿಲು ಮುಚ್ಚುವ ನಿರ್ಧಾರವನ್ನು ಶುಕ್ರವಾರ ಘೋಷಿಸಿತು. ಬ್ಯಾಂಕ್ನ ನಿಯಂತ್ರಣವನ್ನು ಫೆಡರಲ್ ಡೆಪಾಸಿಟ್ ಇನ್ಶುರನ್ಸ್ ಕಾರ್ಪೊರೇಷನ್ಗೆ (ಎಫ್ಡಿಐಸಿ) ನೀಡಲಾಗಿದೆ.</p>.<p>ಒಂದು ಖಾತೆಯಲ್ಲಿ 2.5 ಲಕ್ಷ ಡಾಲರ್ವರೆಗೆ ಠೇವಣಿ ಹೊಂದಿರುವವರಿಗೆ ಮಾತ್ರವೇ ವಿಮೆ ಸಿಗಲಿದೆ. 2022ರ ಅಂತ್ಯದ ವೇಳೆಗೆ, ಬ್ಯಾಂಕ್ನಲ್ಲಿ ₹14.35 ಲಕ್ಷ ಕೋಟಿ ಮೌಲ್ಯದ ಠೇವಣಿ ಇದ್ದು, ಅದರಲ್ಲಿ ಶೇ 89ರಷ್ಟು ವಿಮೆಗೆ ಒಳಪಟ್ಟಿಲ್ಲ. ಸೋಮವಾರ ಬ್ಯಾಂಕ್ ತೆರೆಯಲಿದ್ದು, ವಿಮೆ ಮಾಡಿಸಿರುವ ಠೇವಣಿದಾರರು ಹಣ ಹಿಂದಕ್ಕೆ ಪಡೆಯಬಹುದು ಎಂದು ಎಫ್ಡಿಐಸಿ ಭರವಸೆ ನೀಡಿದೆ. ವಿಮೆ ಮಾಡಿಸದೇ ಇರುವ ಠೇವಣಿಗಳಿಗೆ ಬ್ಯಾಂಕ್ನ ಆಸ್ತಿಗಳು ಮಾರಾಟ ಆದ ಬಳಿಕ ಹಣ ನೀಡುವುದಾಗಿ ಅದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್:</strong> ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುವ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್ವಿಬಿ) ಆರ್ಥಿಕ ಸಂಕಷ್ಟದಿಂದಾಗಿ ಬಾಗಿಲು ಮುಚ್ಚಿದೆ. 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅತಿದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ.</p>.<p>ಕ್ಯಾಲಿಫೋರ್ನಿಯಾದ ಡಿಪಾರ್ಟ್ಮೆಂಟ್ ಆಫ್ ಫೈನಾನ್ಶಿಯಲ್ ಪ್ರೊಟೆಕ್ಷನ್ ಆ್ಯಂಡ್ ಇನೊವೇಷನ್ (ಡಿಎಫ್ಪಿಐ), ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಬಾಗಿಲು ಮುಚ್ಚುವ ನಿರ್ಧಾರವನ್ನು ಶುಕ್ರವಾರ ಘೋಷಿಸಿತು. ಬ್ಯಾಂಕ್ನ ನಿಯಂತ್ರಣವನ್ನು ಫೆಡರಲ್ ಡೆಪಾಸಿಟ್ ಇನ್ಶುರನ್ಸ್ ಕಾರ್ಪೊರೇಷನ್ಗೆ (ಎಫ್ಡಿಐಸಿ) ನೀಡಲಾಗಿದೆ.</p>.<p>ಒಂದು ಖಾತೆಯಲ್ಲಿ 2.5 ಲಕ್ಷ ಡಾಲರ್ವರೆಗೆ ಠೇವಣಿ ಹೊಂದಿರುವವರಿಗೆ ಮಾತ್ರವೇ ವಿಮೆ ಸಿಗಲಿದೆ. 2022ರ ಅಂತ್ಯದ ವೇಳೆಗೆ, ಬ್ಯಾಂಕ್ನಲ್ಲಿ ₹14.35 ಲಕ್ಷ ಕೋಟಿ ಮೌಲ್ಯದ ಠೇವಣಿ ಇದ್ದು, ಅದರಲ್ಲಿ ಶೇ 89ರಷ್ಟು ವಿಮೆಗೆ ಒಳಪಟ್ಟಿಲ್ಲ. ಸೋಮವಾರ ಬ್ಯಾಂಕ್ ತೆರೆಯಲಿದ್ದು, ವಿಮೆ ಮಾಡಿಸಿರುವ ಠೇವಣಿದಾರರು ಹಣ ಹಿಂದಕ್ಕೆ ಪಡೆಯಬಹುದು ಎಂದು ಎಫ್ಡಿಐಸಿ ಭರವಸೆ ನೀಡಿದೆ. ವಿಮೆ ಮಾಡಿಸದೇ ಇರುವ ಠೇವಣಿಗಳಿಗೆ ಬ್ಯಾಂಕ್ನ ಆಸ್ತಿಗಳು ಮಾರಾಟ ಆದ ಬಳಿಕ ಹಣ ನೀಡುವುದಾಗಿ ಅದು ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>