ಉತ್ತಮ ಆಡಳಿತಕ್ಕೆ ಸಂದ ಜಯ: ಸೈರಸ್ ಮಿಸ್ತ್ರಿ

ನವದೆಹಲಿ: ‘ಇದು ವೈಯಕ್ತಿಕ ಜಯ ಅಲ್ಲ. ಉತ್ತಮ ಆಡಳಿತ ಮತ್ತು ಕಡಿಮೆ ಷೇರು ಪಾಲು ಹೊಂದಿರುವವರ ಹಕ್ಕಿಗೆ ದೊರೆತಿರುವ ಜಯ’ ಎಂದು ಎನ್ಸಿಎಲ್ಎಟಿ ಆದೇಶದ ಕುರಿತು ಸೈರಸ್ ಮಿಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
‘ನಮ್ಮೆಲ್ಲರನ್ನೂ ಪೋಷಿಸುತ್ತಿರುವ ಟಾಟಾ ಸಮೂಹದ ಸುಸ್ಥಿರ ಬೆಳವಣಿಗೆಗಾಗಿ ಒಂದುಗೂಡಿ ಕೆಲಸ ಮಾಡೋಣ. ಟಾಟಾ ಸನ್ಸ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಷೇರುಪಾಲು ಹೊಂದಿದ್ದರು ಸಹ 50ಕ್ಕೂ ಅಧಿಕ ವರ್ಷಗಳಿಂದ ಮಿಸ್ತ್ರಿ ಕುಟುಂಬವು ಸಂಸ್ಥೆಯನ್ನು ರಕ್ಷಿಸುವ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಾ ಬಂದಿದೆ’ ಎಂದು ತಿಳಿಸಿದ್ದಾರೆ.
2016ರಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿ ಅವರು ಸಲ್ಲಿಸಿದ್ದ ಅಹವಾಲನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್ಸಿಎಲ್ಟಿ) 2018ರ ಜುಲೈನಲ್ಲಿ ತಳ್ಳಿ ಹಾಕಿತ್ತು. ಆ ಬಳಿಕ 2018ರ ಆಗಸ್ಟ್ನಲ್ಲಿ ಎನ್ಸಿಎಲ್ಎಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಕಾನೂನು ಬಾಹಿರ: ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಸನ್ಸ್ ಅನ್ನು ಪ್ರೈವೇಟ್ ಲಿಮಿಟೆಡ್ ಕಂಪೆನಿಯಾಗಿ ಪರಿವರ್ತನೆ ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಎನ್ಸಿಎಲ್ಎಟಿ ಹೇಳಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.