ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಮರಳಿನ ಕೊರತೆ ನೀಗಿಸುವುದು ಹಾಗೂಲಕ್ಯಾ ಡ್ಯಾಂನಲ್ಲಿ ಸಂಗ್ರಹವಾಗಿರುವ ಸುಮಾರು 200 ಕೋಟಿ ಟನ್ ಅದಿರು ತ್ಯಾಜ್ಯಕ್ಕೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ನಗರದ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜು ಸಂಶೋಧನೆ ಆರಂಭಿಸಿದೆ.
ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆಯ ಅಂಗವಾಗಿದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಶುಕ್ರವಾರ ‘ರಾಷ್ಟ್ರೀಯ ವಿಚಾರಸಂಕಿರಣ’ ನಡೆಸಿತು.
ಅದಿರು ತ್ಯಾಜ್ಯದ ಮರುಬಳಕೆ ಸಂಬಂಧ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ (ಕೆಐಒಸಿ ಎಲ್) ಜತೆಗೆ ಕಾಲೇಜು ಒಪ್ಪಂದ ಮಾಡಿಕೊಂಡಿದೆ.
* ಕೆಐಒಸಿಎಲ್ ಸಹಯೋಗದಲ್ಲಿ ಕಾಲೇಜಿನಲ್ಲಿ ಗಣಿ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ ವಿಷಯದ ಮೇಲೆ ಕೋರ್ಸ್ಗಳನ್ನು ಆರಂಭಿಸಬೇಕು –ಆರ್. ಪ್ರಭಾಕರ್, ಬೆಳಗಾವಿಯ ವಿಟಿಯು ನಿವೃತ್ತ ಪ್ರಾಧ್ಯಾಪಕ