ಹೊಟೇಲ್ಗಳು ಮುಚ್ಚಿವೆ. ಸಿಹಿ ತಿನಿಸುಗಳನ್ನು ಮಾರುವ ಅಂಗಡಿಗಳು, ಬೇಕರಿಗಳು ಬಂದ್ ಆಗಿವೆ. ಐಸ್ ಕ್ರೀಂ ಪಾರ್ಲರ್ಗಳು ತೆರೆದಿಲ್ಲ. ಜನರ ಓಡಾಟದ ಮೇಲಿನ ನಿರ್ಬಂಧದಿಂದ ಪೆಟ್ರೋಲ್ಗೂ ಬೇಡಿಕೆ ಇಲ್ಲ. ಹೀಗಾಗಿ ಇಥೆನಾಲ್ ಮಾರಾಟವಾಗುತ್ತಿಲ್ಲ ಎಂದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷ ಹಾಗೂ ಪ್ರಭು ಸಕ್ಕರೆ ಕಾರ್ಖಾನೆ ಸಿಎಂಡಿ ಜಗದೀಶ್ ಗುಡಗುಂಟಿ ತಿಳಿಸಿದ್ದಾರೆ.