<p><strong>ನವದೆಹಲಿ :</strong> ಠೇವಣಿದಾರರನ್ನು ಆಕರ್ಷಿಸುವ ಸಂಬಂಧ ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಅಧ್ಯಕ್ಷ ಸಿ.ಎಸ್. ಸೆಟ್ಟಿ ತಿಳಿಸಿದ್ದಾರೆ.</p><p>ನಿಶ್ಚಿತ ಠೇವಣಿ (ಆರ್.ಡಿ) ಮತ್ತು ವ್ಯವಸ್ಥಿತ ಹೂಡಿಕೆ (ಎಸ್ಐಪಿ) ಸಂಯೋಜಿತ ಹೊಸ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.</p><p>ಗ್ರಾಹಕರಿಗೆ ಹಣಕಾಸಿನ ವ್ಯವಹಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದೆ. ಇದಕ್ಕೆ ಪೂರಕವಾಗಿ ಬೇಡಿಕೆ ಕೂಡ ಮಂಡಿಸುತ್ತಾರೆ. ಹಾಗಾಗಿ, ನಾವು ಹೊಸ ಹೂಡಿಕೆಯ ವಿಧಾನ ಅನುಸರಿಸುವತ್ತ<br>ದೃಷ್ಟಿ ಹರಿಸಿದ್ದೇವೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p><p>ಆರ್ಥಿಕ ಸಾಕ್ಷರತೆ ಹೆಚ್ಚಾದಂತೆ ಗ್ರಾಹಕರು ಬ್ಯಾಂಕ್ನಿಂದ ದೊರೆಯುವ ಪ್ರಯೋಜನಗಳತ್ತ ಎದುರು ನೋಡು ತ್ತಾರೆ. ಯಾರೊಬ್ಬರು ಅಪಾಯಕ್ಕೆ ಸಿಲುಕುವ ಸ್ವತ್ತಿನಲ್ಲಿ ಹೂಡಿಕೆಗೆ<br>ಇಚ್ಛಿಸುವುದಿಲ್ಲ. ಗ್ರಾಹಕರಿಗೆ ಇಷ್ಟವಾಗು ವಂತಹ ಯೋಜನೆಗಳನ್ನೇ ನಾವು ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.</p><p>ಠೇವಣಿ ಸಂಗ್ರಹ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನ ಅನುಸರಿಸಲು ಮುಂದಾಗಿದ್ದೇವೆ. ಇದರಲ್ಲಿಯೇ ಕೆಲವು ಬದಲಾವಣೆ ತರಲಾಗುವುದು. ಸ್ಥಿರ ಠೇವಣಿ/ ನಿಶ್ಚಿತ ಠೇವಣಿ ಹಾಗೂ ಎಸ್ಐಪಿ ಸಂಯೋಜಿತ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಹಕರಿಗೆ ಡಿಜಿಟಲ್ ಮೂಲಕ ಪಾವತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.</p><p>ಹೊಸ ತಲೆಮಾರಿನ ಜನರಲ್ಲೂ ಠೇವಣಿ ಯೋಜನೆಗಳನ್ನು ಜನಪ್ರಿಯಗೊಳಿಸಲು ಬ್ಯಾಂಕ್ ತೀರ್ಮಾನಿಸಿದೆ. ಠೇವಣಿ ಸಂಗ್ರಹ ಹೆಚ್ಚಳಕ್ಕೆ ಬೃಹತ್ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ :</strong> ಠೇವಣಿದಾರರನ್ನು ಆಕರ್ಷಿಸುವ ಸಂಬಂಧ ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಅಧ್ಯಕ್ಷ ಸಿ.ಎಸ್. ಸೆಟ್ಟಿ ತಿಳಿಸಿದ್ದಾರೆ.</p><p>ನಿಶ್ಚಿತ ಠೇವಣಿ (ಆರ್.ಡಿ) ಮತ್ತು ವ್ಯವಸ್ಥಿತ ಹೂಡಿಕೆ (ಎಸ್ಐಪಿ) ಸಂಯೋಜಿತ ಹೊಸ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.</p><p>ಗ್ರಾಹಕರಿಗೆ ಹಣಕಾಸಿನ ವ್ಯವಹಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದೆ. ಇದಕ್ಕೆ ಪೂರಕವಾಗಿ ಬೇಡಿಕೆ ಕೂಡ ಮಂಡಿಸುತ್ತಾರೆ. ಹಾಗಾಗಿ, ನಾವು ಹೊಸ ಹೂಡಿಕೆಯ ವಿಧಾನ ಅನುಸರಿಸುವತ್ತ<br>ದೃಷ್ಟಿ ಹರಿಸಿದ್ದೇವೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p><p>ಆರ್ಥಿಕ ಸಾಕ್ಷರತೆ ಹೆಚ್ಚಾದಂತೆ ಗ್ರಾಹಕರು ಬ್ಯಾಂಕ್ನಿಂದ ದೊರೆಯುವ ಪ್ರಯೋಜನಗಳತ್ತ ಎದುರು ನೋಡು ತ್ತಾರೆ. ಯಾರೊಬ್ಬರು ಅಪಾಯಕ್ಕೆ ಸಿಲುಕುವ ಸ್ವತ್ತಿನಲ್ಲಿ ಹೂಡಿಕೆಗೆ<br>ಇಚ್ಛಿಸುವುದಿಲ್ಲ. ಗ್ರಾಹಕರಿಗೆ ಇಷ್ಟವಾಗು ವಂತಹ ಯೋಜನೆಗಳನ್ನೇ ನಾವು ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.</p><p>ಠೇವಣಿ ಸಂಗ್ರಹ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನ ಅನುಸರಿಸಲು ಮುಂದಾಗಿದ್ದೇವೆ. ಇದರಲ್ಲಿಯೇ ಕೆಲವು ಬದಲಾವಣೆ ತರಲಾಗುವುದು. ಸ್ಥಿರ ಠೇವಣಿ/ ನಿಶ್ಚಿತ ಠೇವಣಿ ಹಾಗೂ ಎಸ್ಐಪಿ ಸಂಯೋಜಿತ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಹಕರಿಗೆ ಡಿಜಿಟಲ್ ಮೂಲಕ ಪಾವತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.</p><p>ಹೊಸ ತಲೆಮಾರಿನ ಜನರಲ್ಲೂ ಠೇವಣಿ ಯೋಜನೆಗಳನ್ನು ಜನಪ್ರಿಯಗೊಳಿಸಲು ಬ್ಯಾಂಕ್ ತೀರ್ಮಾನಿಸಿದೆ. ಠೇವಣಿ ಸಂಗ್ರಹ ಹೆಚ್ಚಳಕ್ಕೆ ಬೃಹತ್ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>