<p>ಈಶಾನ್ಯ ರಾಜ್ಯಗಳಲ್ಲಿ ಭಾರಿ ಜಲವಿದ್ಯುತ್ ಯೋಜನೆಗಳಿಂದಾಗುವ ಪರಿಣಾಮಗಳನ್ನು ಚರ್ಚಿಸಲು ಗುವಾಹಟಿಯಲ್ಲಿ 2010ರ ಸೆಪ್ಟೆಂಬರ್ನಲ್ಲಿ ಬೃಹತ್ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಆ ಸಭೆಯಲ್ಲಿ ಕೇಂದ್ರ ಸರ್ಕಾರದ ಆಗಿನ ಪರಿಸರ ಹಾಗೂ ಅರಣ್ಯ ಸಚಿವ ಜೈರಾಮ್ ರಮೇಶ್ ಅವರೂ ಇದ್ದರು.<br /> <br /> ಅರುಣಾಚಲ ಪ್ರದೇಶದಲ್ಲಿ ಯೋಜಿಸಲಾಗುತ್ತಿರುವ ನೂರಕ್ಕೂ ಹೆಚ್ಚಿನ ಅಣೆಕಟ್ಟುಗಳು ನೀರಿನ ಹರಿವನ್ನು ಕಡಿಮೆ ಮಾಡುತ್ತವೆ. ಪ್ರವಾಹದ ಸಾಧ್ಯತೆ ಹೆಚ್ಚಿಸುತ್ತವೆ. ಅಲ್ಲದೆ ಮೀನುಗಳ ಸಂತತಿಯನ್ನೂ ನಾಶ ಮಾಡುತ್ತವೆ ಎಂಬ ಬಗ್ಗೆ ಆತಂಕಗೊಂಡಿದ್ದ ಅಸ್ಸಾಂ ಜನರ ಮಾತುಗಳನ್ನು ಆ ಸಭೆಯಲ್ಲಿ ರಮೇಶ್ ಕೇಳಿಸಿಕೊಂಡಿದ್ದರು. <br /> <br /> ಅರುಣಾಚಲದ ಪ್ರತಿನಿಧಿಗಳಿಗೆ ಅವರದೇ ಕಾಳಜಿಗಳಿತ್ತು. ತಮ್ಮ ರಾಜ್ಯದಲ್ಲಿ ಕಟ್ಟಲಾಗುವ ಅಣೆಕಟ್ಟುಗಳು ಸ್ಥಳೀಯ ಸಮುದಾಯಗಳನ್ನು ಸ್ಥಳಾಂತರಿಸುತ್ತವೆ, ಅಮೂಲ್ಯ ಕಾಡುಗಳನ್ನು ಮುಳುಗಡೆ ಮಾಡುತ್ತವೆ ಹಾಗೂ ಭೂಕಂಪಗಳ ಅಪಾಯಗಳಿಗೆ ತಮ್ಮನ್ನು ಒಡ್ಡುತ್ತವೆ ಎಂಬ ಆತಂಕ ಅವರದಾಗಿತ್ತು. <br /> <br /> ಭಾರತ ಹಾಗೂ ಚೀನಾದ ಸ್ಪರ್ಧೆಯಲ್ಲಿ ಅರುಣಾಚಲದ ಜನತೆಯನ್ನು ದಾಳವಾಗಿಸಿಕೊಳ್ಳಲು ಕೇಂದ್ರ ಸರ್ಕಾರ ಸನ್ನದ್ಧವಾಗಿರುವಂತಿದೆ ಎಂದು ಕಾರ್ಯಕರ್ತರು ಸಚಿವರಿಗೆ ಹೇಳಿದ್ದರು.<br /> <br /> ಈ ಸಭೆಯ ನಂತರ, `ಗುವಾಹಟಿ ಸಭೆಯಲ್ಲಿ ವ್ಯಕ್ತವಾದ ಕೆಲವು ಕಾಳಜಿಗಳನ್ನು ಹಗುರವಾಗಿ ತಳ್ಳಿಹಾಕಲಾಗದು~ ಎಂದು ಪರಿಸರ ಸಚಿವರು ಪ್ರಧಾನಿಗೆ ಪತ್ರ ಬರೆದರು. `ಈ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷವಾಗಿ ಅಸ್ಸಾಂನಲ್ಲಿ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಸಮಾಜದ ವಿವಿಧ ವರ್ಗದವರನ್ನು ಈ ವಿಚಾರದಲ್ಲಿ ತೊಡಗಿಸಿಕೊಳ್ಳಬೇಕು.<br /> <br /> ಸದ್ಯಕ್ಕೆ ಭಾರತದ ಪ್ರಧಾನ ಭೂಭಾಗ ಈಶಾನ್ಯದ ಜಲ ಸಂಪನ್ಮೂಲಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಆದರೆ ಈ ಶೋಷಣೆಯ ವೆಚ್ಚವನ್ನು ಈಶಾನ್ಯ ಭಾಗದ ಜನರು ಭರಿಸುತ್ತಿದ್ದಾರೆ~ಎಂದು ಸಚಿವರು ವಿವರಿಸಿದ್ದರು.<br /> <br /> ಜೈರಾಂ ರಮೇಶ್ ಅವರ ಈ ವಿವೇಚನಾಪೂರ್ಣ, ಯುಕ್ತಾಯುಕ್ತ ಪರಿಜ್ಞಾನದ ಶಿಫಾರಸುಗಳು ದೆಹಲಿಯ ವೃತ್ತಪತ್ರಿಕೆಯೊಂದರಿಂದ ಭಾವೋದ್ರೇಕದ ಖಂಡನೆಗಳಿಗೆ ಕಾರಣವಾಗಿತ್ತು. `ಏನಾದರಾಗಲಿ ಅಭಿವೃದ್ಧಿ~ ಎಂಬಂತಹ ತತ್ವ ಈ ಪತ್ರಿಕೆಯದಾಗಿತ್ತು. <br /> <br /> `ಷೋಕಿಯ ಕಾಳಜಿಗಳ ಪ್ರಾಯೋಜನೆಗಳನ್ನು ಹುಡುಕುತ್ತ ಅಲೆಯುವವರು~ ಎಂದು ದೂಷಿಸಿದಂತಹ ಸಂಪಾದಕೀಯವನ್ನು ಭಾರತದ ಈ ಉತ್ಕೃಷ್ಟ ಹಾಗೂ ಸಮರ್ಥ ಪರಿಸರ ಸಚಿವರ ವಿರುದ್ಧ ಆ ಪತ್ರಿಕೆ ಬರೆಯಿತು. `ಇಡೀ ಪ್ರದೇಶದ ಅಭಿವೃದ್ಧಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ~ ಎಂಬಂತಹ ಆರೋಪವನ್ನೂ ಸಚಿವರ ವಿರುದ್ಧ ಮಾಡಲಾಯಿತು.<br /> <br /> ಕೆಲವು ದಿನಗಳ ನಂತರ ಮತ್ತೊಂದು ಸಂಪಾದಕೀಯ ಬರೆದ ಆ ಪತ್ರಿಕೆ ಅರುಣಾಚಲ ಪ್ರದೇಶದಲ್ಲಿ ಎಲ್ಲಾ ಅಣೆಕಟ್ಟು ಯೋಜನೆಗಳಿಗೆ ತಕ್ಷಣದ ಅನುಮೋದನೆ ನೀಡಬೇಕೆಂದು ಆಗ್ರಹಪಡಿಸಿತು. <br /> <br /> ರಾಷ್ಟ್ರದ ಆರ್ಥಿಕತೆ ಜೊತೆ ಮಿಳಿತವಾಗಲು ಹಾಗೂ ಈ ಪ್ರದೇಶದ ಸಮೃದ್ಧಿ ಹೆಚ್ಚಿಸುವ ಯತ್ನವಾಗಿ ಅರುಣಾಚಲ ಪ್ರದೇಶಕ್ಕೆ ಯೋಜಿಸಲಾಗಿದ್ದ ಸಣ್ಣ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಸರ ಸಚಿವಾಲಯದ ಧೋರಣೆ ಉಪೇಕ್ಷೆ ಹಾಗೂ ಅವಿವೇಕತನದ್ದಾಗಿದೆ ಎಂದು ಅದು ಪ್ರತಿಪಾದಿಸಿತ್ತು. <br /> <br /> ಅರುಣಾಚಲವನ್ನು `ಹಿಂದುಳಿದ~ ಪಟ್ಟಿಯಲ್ಲೇ ಉಳಿಸಲು ಯತ್ನಿಸುವ ಮೂಲಕ ರಮೇಶ್ ಅವರು ಚೀನೀಯರ ಕೈಗೊಂಬೆಯಾಗುತ್ತಿದ್ದಾರೆ ಅಷ್ಟೆ ಎಂದೂ ಈ ಸಂಪಾದಕೀಯ ಹೇಳಿತ್ತು.<br /> <br /> ನಿಜ ಹೇಳಬೇಕೆಂದರೆ, ಅಣೆಕಟ್ಟುಗಳೇ ಆ ಪ್ರದೇಶದ ಸುಭದ್ರತೆಯನ್ನು ಅಲುಗಾಡಿಸುವಂತಹದ್ದಾಗಿದ್ದವು. 1950 ಹಾಗೂ 60ರ ದಶಕಗಳಲ್ಲಿ ಮಾನವಶಾಸ್ತ್ರಜ್ಞ ವೆರ್ರಿಯರ್ ಎಲ್ವಿನ್ ಅವರು ರೂಪಿಸಿದ ವಿವೇಕಯುತ ನೀತಿಗಳಿಂದಾಗಿ ಈಶಾನ್ಯ ರಾಜ್ಯಗಳ ಪೈಕಿ ಕೇವಲ ಅರುಣಾಚಲದಲ್ಲಿ ಮಾತ್ರ ಈವರೆಗೆ ಯಾವುದೇ ದಂಗೆಯ ಅಲೆಗಳಿಲ್ಲ. <br /> <br /> ಏಕೆಂದರೆ ಈ ನೀತಿಗಳು ಭೂಮಿ ಹಾಗೂ ಅರಣ್ಯಗಳಲ್ಲಿನ ಆದಿವಾಸಿ ಹಕ್ಕುಗಳನ್ನು ರಕ್ಷಿಸಿದ್ದವಲ್ಲದೆ ಎಲ್ಲಾ ಧರ್ಮಗಳ ಧರ್ಮಪ್ರಚಾರಕರನ್ನೂ ರಾಜ್ಯದಿಂದ ದೂರ ಇರಿಸಿತ್ತು. <br /> <br /> ರಮೇಶ್ ಅವರ ಪ್ರಸ್ತಾವಗಳೂ ಆರೋಗ್ಯಕರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವಿವೇಕವನ್ನು ಪ್ರದರ್ಶಿಸಿದ್ದವು. ಅಣೆಕಟ್ಟುಗಳು ಸ್ಥಳೀಯ ರೈತರು,ದನಗಾಹಿಗಳು ಹಾಗೂ ಮೀನುಗಾರರನ್ನು ಸ್ಥಳಾಂತರಗೊಳಿಸುವುದಲ್ಲದೆ ಬಯಲುಸೀಮೆಯ ನಗರಗಳಿಗಷ್ಟೇ ಲಾಭವಾಗುವಂತಹದ್ದಾಗಿತ್ತು. <br /> <br /> ಅಲ್ಲದೆ, ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯ ಪೂರ್ವ ಹಿಮಾಲಯದಲ್ಲಿದೆ; ವಿಚಿತ್ರವೆಂದರೆ ಅವು ಭೂಕಂಪಗಳಿಗೂ ಪಕ್ಕಾಗುವಂತಿವೆ. ಬೃಹತ್ ಅಣೆಕಟ್ಟುಗಳನ್ನು ಕಟ್ಟುವ ಪ್ರಸ್ತಾವಗಳನ್ನು ಬಹಳ ಎಚ್ಚರದಿಂದ ಪಾಲಿಸಬೇಕೆಂಬುದನ್ನು ನಿಸರ್ಗ ಹಾಗೂ ಇಲ್ಲಿನ ಸಂಸ್ಕೃತಿಗಳು ಪ್ರತಿಪಾದಿಸಿವೆ. ಈಗಾಗಲೇ ಈ ವಿಚಾರದ ಬಗ್ಗೆ ಜನರ ಅಸಹನೆ ಬೆಳೆಯುತ್ತಿದೆ. <br /> <br /> ಪಾರದರ್ಶಕವಾದ ಸಾರ್ವಜನಿಕ ವಿಚಾರಣೆಗಳು ತುರ್ತಿನ ಅಗತ್ಯವಾಗಿದೆ. ಆ ಮೂಲಕ, ತಮಗೆ ಸಮೃದ್ಧಿ ಹಾಗೂ ಸಮನ್ವಯತೆಯನ್ನು ತಂದುಕೊಡುವಂತಹದ್ದು ಯಾವುದು ಎಂಬುದನ್ನು ನವದೆಹಲಿಯ ಯಾವುದೋ ಉದ್ಯಮ ಸ್ನೇಹಿ ವೃತ್ತಪತ್ರಿಕೆ ನಿರ್ಧರಿಸುವುದರ ಬದಲು ಅರುಣಾಚಲದ ಜನರೇ ನಿರ್ಧರಿಸಬಹುದು.<br /> <br /> ಈಶಾನ್ಯ ರಾಜ್ಯಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಯುಳ್ಳ ಇಬ್ಬರು ಪತ್ರಕರ್ತರ ಇತ್ತೀಚಿನ ಎರಡು ವರದಿಗಳು ರಮೇಶ್ ಅವರ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿ ಒದಗಿಸಿವೆ. ಕಳೆದ ತಿಂಗಳು `ದಿ ಹಿಂದೂ~ ಪತ್ರಿಕೆಯಲ್ಲಿ ಬರೆಯುತ್ತಾ ಸುಶಾಂತ ತಾಲೂಕ್ದಾರ್ ಅವರು `ಪರಿಸರ ದೃಷ್ಟಿಯಿಂದ ಸೂಕ್ಷ್ಮವಾಗಿರುವ ಅರುಣಾಚಲ ಪ್ರದೇಶ(ರಾಜ್ಯ)ವನ್ನು ರಾಷ್ಟ್ರದ ಶಕ್ತಿಕೇಂದ್ರವೆಂದು ಕೇಂದ್ರ ಸರ್ಕಾರ ಗುರುತಿಸಿದೆ~ ಎಂದಿದ್ದಾರೆ. <br /> <br /> `ಈವರೆಗೆ 133 ಅಣೆಕಟ್ಟು ಯೋಜನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಇವುಗಳಲ್ಲಿ 125 ಯೋಜನೆಗಳು ಖಾಸಗಿ ವಲಯದಲ್ಲಿವೆ. ಈಶಾನ್ಯ ರಾಜ್ಯಗಳಲ್ಲಿ 57,672 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ವಿದ್ಯುತ್ ಸಚಿವಾಲಯ ಉದ್ದೇಶಿಸಿದೆ.</p>.<p>ಇವುಗಳಲ್ಲಿ 45,977 ಮೆಗಾವಾಟ್ ವಿದ್ಯುತ್ ಅನ್ನು ಅರುಣಾಚಲಪ್ರದೇಶ ಒಂದರಲ್ಲಿಯೇ ಉತ್ಪಾದಿಸಲಾಗುವುದು ಎಂದು ವಿದ್ಯುತ್ ಸಚಿವಾಲಯದ 2011-12ರ ವಾರ್ಷಿಕ ವರದಿ ಪ್ರಸ್ತಾಪಿಸಿದೆ. ಇದರಿಂದ ಉಂಟಾಗುವ ಸಾಮಾಜಿಕ ಹಾಗೂ ಪರಿಸರ ಪಲ್ಲಟಗಳ ಕಾರಣಗಳಿಂದಾಗಿ ಅರುಣಾಚಲಿಗಳಲ್ಲಿ ಆಳವಾದ ಅಸಹನೆ ಸೃಷ್ಟಿಯಾಗಿದೆ~ ಎಂದು ಈ ಪತ್ರಕರ್ತ ಬರೆದಿದ್ದರು.<br /> <br /> ಹೀಗಾಗಿ `ಫೋರಮ್ ಫಾರ್ ಸಿಯಾಂಗ್ ಡಯಲಾಗ್~ ಎಂಬಂತಹ ಗುಂಪು, ಸುಂದರವಾದ ಸಿಯಾಂಗ್ ನದಿಯ ಮೇಲೆ ಅಣೆಕಟ್ಟುಗಳನ್ನು ಕಟ್ಟುವುದಕ್ಕೆ ವಿರೋಧ ತೋರುತ್ತಿದೆ.<br /> <br /> ಜನರಿಗೆ ಸರಿಯಾಗಿ ಮಾಹಿತಿ ನೀಡದೆ ಹಾಗೂ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆಗಳ ಸಮ್ಮುಖದಲ್ಲಿ ಸಾರ್ವಜನಿಕ ವಿಚಾರಣೆಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯದ ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಆರೋಪಿಸುತ್ತಿವೆ ಎಂದು ತಾಲೂಕ್ದಾರ್ ಬರೆದಿದ್ದಾರೆ. <br /> <br /> ಅರುಣಾಚಲ ಪ್ರದೇಶದಲ್ಲಿ ಅನಿಯಂತ್ರಿತ ಅಣೆಕಟ್ಟು ನಿರ್ಮಾಣದಿಂದ ಉಂಟಾಗುವ ಅಪಾಯಗಳ ಬಗ್ಗೆ 2012ರ ಮೇ ತಿಂಗಳಲ್ಲಿ `ಮಿಂಟ್~ ಪತ್ರಿಕೆಯಲ್ಲಿ ಸುದೀಪ್ ಚಕ್ರವರ್ತಿಯವರೂ ಲೇಖನವೊಂದನ್ನು ಬರೆದರು. ಈ ಪ್ರದೇಶವನ್ನು ಚೆನ್ನಾಗಿ ಬಲ್ಲ ಚಕ್ರವರ್ತಿ ಅವರು, `ಯೋಜನೆಗಳಿಗೆ ಭೂ ಹಂಚಿಕೆ ವಿಚಾರದಲ್ಲಿ ಭಾರತದಿಂದ ಕೆಟ್ಟ ಆಚರಣೆಗಳನ್ನು ಅರುಣಾಚಲ ಆಮದು ಮಾಡಿಕೊಂಡಿದೆ~ ಎಂದಿದ್ದರು.<br /> <br /> `ಇತ್ತೀಚಿನ ಪ್ರಕರಣ: ಏಪ್ರಿಲ್ ಮಧ್ಯಭಾಗದಲ್ಲಿ ಖಾಸಗಿ ವಲಯಕ್ಕೆ ಸೇರಿದ 2700 ಮೆಗಾವಾಟ್ ಲೋವರ್ ಸಿಯಾಂಗ್ ಜಲ ವಿದ್ಯುತ್ ಯೋಜನೆ ವಿರುದ್ಧ ಸೇರಿದ್ದ ಪ್ರತಿಭಟನಾಕಾರರನ್ನು ಸರ್ಕಾರ ಹಿಂಸೆ ಪ್ರಯೋಗಿಸಿ ಚದುರಿಸಿತ್ತು. ಇನ್ನೂ ಕೆಟ್ಟದ್ದು ಮುಂದಿನ ದಿನಗಳಲ್ಲಿ ಆಗಲಿದೆ~ ಎಂದಿದ್ದರು ಅವರು.<br /> <br /> ಅದು ಆಗುತ್ತಲೂ ಇದೆ. ಜೂನ್ ಆರಂಭದಲ್ಲಿ `ದಿ ಟೆಲಿಗ್ರಾಫ್~ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ಸ್ಥಳೀಯರ ಪ್ರತಿಭಟನೆಗಳಿಂದಾಗಿ 2000 ಮೆಗಾವಾಟ್ ಲೋವರ್ ಸುಬನ್ಸಿರಿ ಯೋಜನೆಯ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. <br /> <br /> ಇಪ್ಪತ್ತು ವರ್ಷಗಳ ಹಿಂದೆ, `ದಿಸ್ ಫಿಷರ್ಡ್ ಲ್ಯಾಂಡ್~ ಎಂಬ ಪುಸ್ತಕದಲ್ಲಿ ಮಾಧವ ಗಾಡ್ಗೀಳ್ ಮತ್ತು ನಾನು `ಯೂರೋಪ್ ಹಾಗೂ ಉತ್ತರ ಅಮೆರಿಕಗಳಿಗೆ ತಮ್ಮ ಕೈಗಾರಿಕೀಕರಣದ ಸಂದರ್ಭದಲ್ಲಿ ಇದ್ದಂತಹ ವಸಾಹತುಗಳನ್ನು ಗೆದ್ದು ನೆಲೆಯಾಗುವಂತಹ ಅವಕಾಶ ಭಾರತಕ್ಕೆ ಇಲ್ಲ. ಹೀಗಾಗಿ ರಾಷ್ಟ್ರದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ಹೆಚ್ಚಿನ ವಿವೇಕ, ವಿವೇಚನೆ ಹಾಗೂ ದಕ್ಷತೆ ಅಗತ್ಯವಾಗುತ್ತದೆ~ ಎಂದಿದ್ದೆವು. <br /> <br /> ದುರಂತವೆಂದರೆ, ಆರ್ಥಿಕ ಉದಾರೀಕರಣದ ನಂತರ, ಸಂಪನ್ಮೂಲ ಬಳಕೆಯಲ್ಲಿ ಹೆಚ್ಚು ದುಂದುಗಾರಿಕೆಯ ರೂಪುರೇಷೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಪರಿಸರ ಚಳವಳಿಯಿಂದಾಗಿ 1980ರ ದಶಕದಲ್ಲಿ ಅಳವಡಿಸಲಾದ ಹೊಸ ಶಾಸನಾತ್ಮಕ ರಕ್ಷಣೆಗಳನ್ನು ಕಡೆಗಣಿಸಲಾಗಿದೆ ಅಥವಾ ಕೈಬಿಡಲಾಗಿದೆ. <br /> <br /> ಜಲ ಸಂರಕ್ಷಣೆ, ಸುಸ್ಥಿರ ಇಂಧನಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ ಅಥವಾ ಅಂಚಿಗೆ ಒತ್ತರಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿರಂತರ ಬೇಡಿಕೆ ಸೃಷ್ಟಿಸುವ ಅಮೆರಿಕನ್ ಜೀವನ ಶೈಲಿಯ ಆಕರ್ಷಣೆ, ಸೆಳೆತ ಹೆಚ್ಚಾಗಿದೆ.<br /> <br /> ಒಂದು ಕಾಲಕ್ಕೆ ಹೆಚ್ಚಿನ ಗೌರವ ಹೊಂದಿದ್ದ ಆದರೂ ಎಲ್ಲೋ ಕೆಲವರು ಮಾತ್ರ ಅನುಸರಿಸುತ್ತಿದ್ದ ಬುದ್ಧ, ಗಾಂಧಿ ಪ್ರತಿಪಾದಿಸಿದ ಸರಳತೆ ಹಾಗೂ ಮಿತವ್ಯಯದ ಮೌಲ್ಯಗಳು ಈಗ ಪೂರ್ಣವಾಗಿ ಮಾಯವಾಗಿವೆ. ಈಗ ಎಲ್ಲೆಲ್ಲೂ ಗಟ್ಟಿಯಾಗಿ ಕೇಳಿಸುವುದು `ದಿಲ್ ಮಾಂಗೇ ಮಾರೋ~. <br /> <br /> ಕಾರ್ಪೊರೆಟ್ ವಲಯ ಹಾಗೂ ಗ್ರಾಹಕ ವರ್ಗಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಭಾರತದ ಮಧ್ಯ ಭಾಗ ಹಾಗೂ ಈಶಾನ್ಯ ಪ್ರದೇಶಗಳ ಆದಿವಾಸಿ ಪ್ರದೇಶಗಳಲ್ಲಿನ ಸಂಪನ್ಮೂಲಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡಿದೆ.<br /> <br /> ಗಣಿಗಾರಿಕೆ ಹಾಗೂ ಜಲವಿದ್ಯುತ್ ಯೋಜನೆಗಳ ಅಲೆ, ಸ್ಥಳೀಯ ಪರಿಸರವನ್ನು ಕಡೆಗಣಿಸಿ ಸ್ಥಳೀಯ ಸಮುದಾಯಗಳನ್ನು ಸ್ಥಳಾಂತರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ವಲಯಗಳು `ಆಂತರಿಕ ವಸಾಹತು~ಗಳಾಗುವ ಹಾದಿಯಲ್ಲಿದ್ದು ವ್ಯಾಪಕ ಅಸಾಮಾಧಾನ ಸೃಷ್ಟಿಯಾಗಿದೆ.<br /> <br /> ಒರಿಸ್ಸಾದಂತಹ ರಾಜ್ಯದಲ್ಲಿ ಹದಿನೈದು ವರ್ಷಗಳ ಹಿಂದೆ ನಕ್ಸಲೀಯರೇ ಇರಲಿಲ್ಲ; ಹೀಗಿದ್ದೂ ಆದಿವಾಸಿ ಭೂಮಿಗಳನ್ನು ಗಣಿ ಕಂಪೆನಿಗಳಿಗೆ ಹಸ್ತಾಂತರಿಸಿದ ಪರಿಣಾಮವಾಗಿ ಎಡ ಧೋರಣೆಯ ಬಂಡಾಯಗಾರರು ಅರ್ಧ ಡಜನ್ಗಳಷ್ಟು ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.<br /> <br /> ಈ ಮಧ್ಯೆ ಈಶಾನ್ಯ ರಾಜ್ಯಗಳಲ್ಲಿ ಅಣೆಕಟ್ಟು ಕಟ್ಟುವ ವೇಗ ಆ ಅಲಕ್ಷಿತ, ಶೋಷಿತ ವಲಯದ ಜನರಲ್ಲಿ ಅಸಮಾಧಾನದ ಅಲೆಯನ್ನು ಎಬ್ಬಿಸುತ್ತಿದೆ. ಏನೇ ಆಗಲಿ ಅಭಿವೃದ್ಧಿ ಎಂಬಂತಹ ತತ್ವಕ್ಕೆ ಬದ್ಧರಾದವರು ಪರಿಸರ ಹಾಗೂ ಅಭಿವೃದ್ಧಿ ಮಧ್ಯೆ ಇಲ್ಲದ ವಿರೋಧ ಸೃಷ್ಟಿಸಿದ್ದಾರೆ.<br /> <br /> ನಿಜ ಹೇಳಬೇಕೆಂದರೆ, ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಅಥವಾ ಬಡತನ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ಭಾರತದಲ್ಲಿ ಈಗ ಅನುಸರಿಸಲಾಗುತ್ತಿರುವ ಅಭಿವೃದ್ಧಿಯ ಪಥ ದೂರದೃಷ್ಟಿ ಇಲ್ಲದ್ದು, ವಿನಾಶಕಾರಿ ಹಾಗೂ ಸಾಮಾಜಿಕವಾಗಿ ಧ್ರುವೀಕರಣ ಮಾಡುವಂತಹದ್ದು.<br /> <br /> ಆದರೆ ದಿವಂಗತ ಎ.ಕೆ.ಎನ್. ರೆಡ್ಡಿ (<a href="http://www.amuly-areddy.org.in/">www.amuly-areddy.org.in</a>) ಹಾಗೂ ಪ್ರಯಾಸ್ ಗ್ರೂಪ್ನಂತಹ (<a href="http://www.prayas-pune.org/">www.prayas-pune.org</a> ) ತಜ್ಞರು ನಮ್ಮ ಇಂಧನ ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲು ದೊಡ್ಡ ಅಣೆಕಟ್ಟುಗಳು ಮಾತ್ರವೇ ಏಕೈಕ ಅಥವಾ ಉತ್ತಮ ಮಾರ್ಗ ಆಗಿರಬೇಕಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. <br /> <br /> ಭಾರತೀಯ ಸಂದರ್ಭಗಳಿಗೆ ಹೆಚ್ಚು ಸೂಕ್ತವಾದದ್ದು ಕಡಿಮೆ ಇಂಧನ ಬಳಸುವ ತಂತ್ರಜ್ಞಾನಗಳು ಹಾಗೂ ಇಂಧನ ಪೂರೈಕೆ ನಷ್ಟಗಳನ್ನು ಕಡಿಮೆ ಮಾಡುವಂತಹವು. <br /> <br /> ಕಿರು ಜಲ ವಿದ್ಯುತ್ ಯೋಜನೆಗಳು ಆರ್ಥಿಕವಾಗಿ ಕಾರ್ಯಸಾಧು, ಪರಿಸರ ದೃಷ್ಟಿಯಲ್ಲಿ ಸುಸ್ಥಿರ ಹಾಗೂ ದೊಡ್ಡ ಯೋಜನೆಗಳಿಗೆ ಸಾಮಾಜಿಕವಾಗಿ ಒಳಗೊಳ್ಳುವ ಪರ್ಯಾಯಗಳಾಗಬಹುದು.<br /> <br /> ಈ ಪರ್ಯಾಯಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿಲ್ಲ. ಕಾರಣ- ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿರುವ ಗುತ್ತಿಗೆದಾರ -ಪ್ರವರ್ತಕ- ರಾಜಕಾರಣಿ ನಡುವಿನ ಸಂಬಂಧಗಳ ಪ್ರಭಾವ.<br /> <br /> ಈ ಹಿತಾಸಕ್ತಿಗಳನ್ನು ಬಯಲುಗೊಳಿಸುವ ಬದಲು ಅವನ್ನೇ ಅನುಮೋದಿಸುವ ಅಥವಾ ಅವರಿಗೆ ಸಮರ್ಥನೆ ನೀಡುವ ಮೂಲಕ ರಾಷ್ಟ್ರದ ಇತರ ಭಾಗಗಳ ಆಶಯಗಳಿಗೆ ನವದೆಹಲಿಯಲ್ಲಿನ ಸಂಪಾದಕರು ಪರಕೀಯರಾಗಿದ್ದಾರೆ ಎಂಬುದಕ್ಕೆ ಇದು ದ್ಯೋತಕ.<br /> <br /> (ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a>)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಶಾನ್ಯ ರಾಜ್ಯಗಳಲ್ಲಿ ಭಾರಿ ಜಲವಿದ್ಯುತ್ ಯೋಜನೆಗಳಿಂದಾಗುವ ಪರಿಣಾಮಗಳನ್ನು ಚರ್ಚಿಸಲು ಗುವಾಹಟಿಯಲ್ಲಿ 2010ರ ಸೆಪ್ಟೆಂಬರ್ನಲ್ಲಿ ಬೃಹತ್ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಆ ಸಭೆಯಲ್ಲಿ ಕೇಂದ್ರ ಸರ್ಕಾರದ ಆಗಿನ ಪರಿಸರ ಹಾಗೂ ಅರಣ್ಯ ಸಚಿವ ಜೈರಾಮ್ ರಮೇಶ್ ಅವರೂ ಇದ್ದರು.<br /> <br /> ಅರುಣಾಚಲ ಪ್ರದೇಶದಲ್ಲಿ ಯೋಜಿಸಲಾಗುತ್ತಿರುವ ನೂರಕ್ಕೂ ಹೆಚ್ಚಿನ ಅಣೆಕಟ್ಟುಗಳು ನೀರಿನ ಹರಿವನ್ನು ಕಡಿಮೆ ಮಾಡುತ್ತವೆ. ಪ್ರವಾಹದ ಸಾಧ್ಯತೆ ಹೆಚ್ಚಿಸುತ್ತವೆ. ಅಲ್ಲದೆ ಮೀನುಗಳ ಸಂತತಿಯನ್ನೂ ನಾಶ ಮಾಡುತ್ತವೆ ಎಂಬ ಬಗ್ಗೆ ಆತಂಕಗೊಂಡಿದ್ದ ಅಸ್ಸಾಂ ಜನರ ಮಾತುಗಳನ್ನು ಆ ಸಭೆಯಲ್ಲಿ ರಮೇಶ್ ಕೇಳಿಸಿಕೊಂಡಿದ್ದರು. <br /> <br /> ಅರುಣಾಚಲದ ಪ್ರತಿನಿಧಿಗಳಿಗೆ ಅವರದೇ ಕಾಳಜಿಗಳಿತ್ತು. ತಮ್ಮ ರಾಜ್ಯದಲ್ಲಿ ಕಟ್ಟಲಾಗುವ ಅಣೆಕಟ್ಟುಗಳು ಸ್ಥಳೀಯ ಸಮುದಾಯಗಳನ್ನು ಸ್ಥಳಾಂತರಿಸುತ್ತವೆ, ಅಮೂಲ್ಯ ಕಾಡುಗಳನ್ನು ಮುಳುಗಡೆ ಮಾಡುತ್ತವೆ ಹಾಗೂ ಭೂಕಂಪಗಳ ಅಪಾಯಗಳಿಗೆ ತಮ್ಮನ್ನು ಒಡ್ಡುತ್ತವೆ ಎಂಬ ಆತಂಕ ಅವರದಾಗಿತ್ತು. <br /> <br /> ಭಾರತ ಹಾಗೂ ಚೀನಾದ ಸ್ಪರ್ಧೆಯಲ್ಲಿ ಅರುಣಾಚಲದ ಜನತೆಯನ್ನು ದಾಳವಾಗಿಸಿಕೊಳ್ಳಲು ಕೇಂದ್ರ ಸರ್ಕಾರ ಸನ್ನದ್ಧವಾಗಿರುವಂತಿದೆ ಎಂದು ಕಾರ್ಯಕರ್ತರು ಸಚಿವರಿಗೆ ಹೇಳಿದ್ದರು.<br /> <br /> ಈ ಸಭೆಯ ನಂತರ, `ಗುವಾಹಟಿ ಸಭೆಯಲ್ಲಿ ವ್ಯಕ್ತವಾದ ಕೆಲವು ಕಾಳಜಿಗಳನ್ನು ಹಗುರವಾಗಿ ತಳ್ಳಿಹಾಕಲಾಗದು~ ಎಂದು ಪರಿಸರ ಸಚಿವರು ಪ್ರಧಾನಿಗೆ ಪತ್ರ ಬರೆದರು. `ಈ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷವಾಗಿ ಅಸ್ಸಾಂನಲ್ಲಿ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಸಮಾಜದ ವಿವಿಧ ವರ್ಗದವರನ್ನು ಈ ವಿಚಾರದಲ್ಲಿ ತೊಡಗಿಸಿಕೊಳ್ಳಬೇಕು.<br /> <br /> ಸದ್ಯಕ್ಕೆ ಭಾರತದ ಪ್ರಧಾನ ಭೂಭಾಗ ಈಶಾನ್ಯದ ಜಲ ಸಂಪನ್ಮೂಲಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಆದರೆ ಈ ಶೋಷಣೆಯ ವೆಚ್ಚವನ್ನು ಈಶಾನ್ಯ ಭಾಗದ ಜನರು ಭರಿಸುತ್ತಿದ್ದಾರೆ~ಎಂದು ಸಚಿವರು ವಿವರಿಸಿದ್ದರು.<br /> <br /> ಜೈರಾಂ ರಮೇಶ್ ಅವರ ಈ ವಿವೇಚನಾಪೂರ್ಣ, ಯುಕ್ತಾಯುಕ್ತ ಪರಿಜ್ಞಾನದ ಶಿಫಾರಸುಗಳು ದೆಹಲಿಯ ವೃತ್ತಪತ್ರಿಕೆಯೊಂದರಿಂದ ಭಾವೋದ್ರೇಕದ ಖಂಡನೆಗಳಿಗೆ ಕಾರಣವಾಗಿತ್ತು. `ಏನಾದರಾಗಲಿ ಅಭಿವೃದ್ಧಿ~ ಎಂಬಂತಹ ತತ್ವ ಈ ಪತ್ರಿಕೆಯದಾಗಿತ್ತು. <br /> <br /> `ಷೋಕಿಯ ಕಾಳಜಿಗಳ ಪ್ರಾಯೋಜನೆಗಳನ್ನು ಹುಡುಕುತ್ತ ಅಲೆಯುವವರು~ ಎಂದು ದೂಷಿಸಿದಂತಹ ಸಂಪಾದಕೀಯವನ್ನು ಭಾರತದ ಈ ಉತ್ಕೃಷ್ಟ ಹಾಗೂ ಸಮರ್ಥ ಪರಿಸರ ಸಚಿವರ ವಿರುದ್ಧ ಆ ಪತ್ರಿಕೆ ಬರೆಯಿತು. `ಇಡೀ ಪ್ರದೇಶದ ಅಭಿವೃದ್ಧಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ~ ಎಂಬಂತಹ ಆರೋಪವನ್ನೂ ಸಚಿವರ ವಿರುದ್ಧ ಮಾಡಲಾಯಿತು.<br /> <br /> ಕೆಲವು ದಿನಗಳ ನಂತರ ಮತ್ತೊಂದು ಸಂಪಾದಕೀಯ ಬರೆದ ಆ ಪತ್ರಿಕೆ ಅರುಣಾಚಲ ಪ್ರದೇಶದಲ್ಲಿ ಎಲ್ಲಾ ಅಣೆಕಟ್ಟು ಯೋಜನೆಗಳಿಗೆ ತಕ್ಷಣದ ಅನುಮೋದನೆ ನೀಡಬೇಕೆಂದು ಆಗ್ರಹಪಡಿಸಿತು. <br /> <br /> ರಾಷ್ಟ್ರದ ಆರ್ಥಿಕತೆ ಜೊತೆ ಮಿಳಿತವಾಗಲು ಹಾಗೂ ಈ ಪ್ರದೇಶದ ಸಮೃದ್ಧಿ ಹೆಚ್ಚಿಸುವ ಯತ್ನವಾಗಿ ಅರುಣಾಚಲ ಪ್ರದೇಶಕ್ಕೆ ಯೋಜಿಸಲಾಗಿದ್ದ ಸಣ್ಣ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಸರ ಸಚಿವಾಲಯದ ಧೋರಣೆ ಉಪೇಕ್ಷೆ ಹಾಗೂ ಅವಿವೇಕತನದ್ದಾಗಿದೆ ಎಂದು ಅದು ಪ್ರತಿಪಾದಿಸಿತ್ತು. <br /> <br /> ಅರುಣಾಚಲವನ್ನು `ಹಿಂದುಳಿದ~ ಪಟ್ಟಿಯಲ್ಲೇ ಉಳಿಸಲು ಯತ್ನಿಸುವ ಮೂಲಕ ರಮೇಶ್ ಅವರು ಚೀನೀಯರ ಕೈಗೊಂಬೆಯಾಗುತ್ತಿದ್ದಾರೆ ಅಷ್ಟೆ ಎಂದೂ ಈ ಸಂಪಾದಕೀಯ ಹೇಳಿತ್ತು.<br /> <br /> ನಿಜ ಹೇಳಬೇಕೆಂದರೆ, ಅಣೆಕಟ್ಟುಗಳೇ ಆ ಪ್ರದೇಶದ ಸುಭದ್ರತೆಯನ್ನು ಅಲುಗಾಡಿಸುವಂತಹದ್ದಾಗಿದ್ದವು. 1950 ಹಾಗೂ 60ರ ದಶಕಗಳಲ್ಲಿ ಮಾನವಶಾಸ್ತ್ರಜ್ಞ ವೆರ್ರಿಯರ್ ಎಲ್ವಿನ್ ಅವರು ರೂಪಿಸಿದ ವಿವೇಕಯುತ ನೀತಿಗಳಿಂದಾಗಿ ಈಶಾನ್ಯ ರಾಜ್ಯಗಳ ಪೈಕಿ ಕೇವಲ ಅರುಣಾಚಲದಲ್ಲಿ ಮಾತ್ರ ಈವರೆಗೆ ಯಾವುದೇ ದಂಗೆಯ ಅಲೆಗಳಿಲ್ಲ. <br /> <br /> ಏಕೆಂದರೆ ಈ ನೀತಿಗಳು ಭೂಮಿ ಹಾಗೂ ಅರಣ್ಯಗಳಲ್ಲಿನ ಆದಿವಾಸಿ ಹಕ್ಕುಗಳನ್ನು ರಕ್ಷಿಸಿದ್ದವಲ್ಲದೆ ಎಲ್ಲಾ ಧರ್ಮಗಳ ಧರ್ಮಪ್ರಚಾರಕರನ್ನೂ ರಾಜ್ಯದಿಂದ ದೂರ ಇರಿಸಿತ್ತು. <br /> <br /> ರಮೇಶ್ ಅವರ ಪ್ರಸ್ತಾವಗಳೂ ಆರೋಗ್ಯಕರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವಿವೇಕವನ್ನು ಪ್ರದರ್ಶಿಸಿದ್ದವು. ಅಣೆಕಟ್ಟುಗಳು ಸ್ಥಳೀಯ ರೈತರು,ದನಗಾಹಿಗಳು ಹಾಗೂ ಮೀನುಗಾರರನ್ನು ಸ್ಥಳಾಂತರಗೊಳಿಸುವುದಲ್ಲದೆ ಬಯಲುಸೀಮೆಯ ನಗರಗಳಿಗಷ್ಟೇ ಲಾಭವಾಗುವಂತಹದ್ದಾಗಿತ್ತು. <br /> <br /> ಅಲ್ಲದೆ, ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯ ಪೂರ್ವ ಹಿಮಾಲಯದಲ್ಲಿದೆ; ವಿಚಿತ್ರವೆಂದರೆ ಅವು ಭೂಕಂಪಗಳಿಗೂ ಪಕ್ಕಾಗುವಂತಿವೆ. ಬೃಹತ್ ಅಣೆಕಟ್ಟುಗಳನ್ನು ಕಟ್ಟುವ ಪ್ರಸ್ತಾವಗಳನ್ನು ಬಹಳ ಎಚ್ಚರದಿಂದ ಪಾಲಿಸಬೇಕೆಂಬುದನ್ನು ನಿಸರ್ಗ ಹಾಗೂ ಇಲ್ಲಿನ ಸಂಸ್ಕೃತಿಗಳು ಪ್ರತಿಪಾದಿಸಿವೆ. ಈಗಾಗಲೇ ಈ ವಿಚಾರದ ಬಗ್ಗೆ ಜನರ ಅಸಹನೆ ಬೆಳೆಯುತ್ತಿದೆ. <br /> <br /> ಪಾರದರ್ಶಕವಾದ ಸಾರ್ವಜನಿಕ ವಿಚಾರಣೆಗಳು ತುರ್ತಿನ ಅಗತ್ಯವಾಗಿದೆ. ಆ ಮೂಲಕ, ತಮಗೆ ಸಮೃದ್ಧಿ ಹಾಗೂ ಸಮನ್ವಯತೆಯನ್ನು ತಂದುಕೊಡುವಂತಹದ್ದು ಯಾವುದು ಎಂಬುದನ್ನು ನವದೆಹಲಿಯ ಯಾವುದೋ ಉದ್ಯಮ ಸ್ನೇಹಿ ವೃತ್ತಪತ್ರಿಕೆ ನಿರ್ಧರಿಸುವುದರ ಬದಲು ಅರುಣಾಚಲದ ಜನರೇ ನಿರ್ಧರಿಸಬಹುದು.<br /> <br /> ಈಶಾನ್ಯ ರಾಜ್ಯಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಯುಳ್ಳ ಇಬ್ಬರು ಪತ್ರಕರ್ತರ ಇತ್ತೀಚಿನ ಎರಡು ವರದಿಗಳು ರಮೇಶ್ ಅವರ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿ ಒದಗಿಸಿವೆ. ಕಳೆದ ತಿಂಗಳು `ದಿ ಹಿಂದೂ~ ಪತ್ರಿಕೆಯಲ್ಲಿ ಬರೆಯುತ್ತಾ ಸುಶಾಂತ ತಾಲೂಕ್ದಾರ್ ಅವರು `ಪರಿಸರ ದೃಷ್ಟಿಯಿಂದ ಸೂಕ್ಷ್ಮವಾಗಿರುವ ಅರುಣಾಚಲ ಪ್ರದೇಶ(ರಾಜ್ಯ)ವನ್ನು ರಾಷ್ಟ್ರದ ಶಕ್ತಿಕೇಂದ್ರವೆಂದು ಕೇಂದ್ರ ಸರ್ಕಾರ ಗುರುತಿಸಿದೆ~ ಎಂದಿದ್ದಾರೆ. <br /> <br /> `ಈವರೆಗೆ 133 ಅಣೆಕಟ್ಟು ಯೋಜನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಇವುಗಳಲ್ಲಿ 125 ಯೋಜನೆಗಳು ಖಾಸಗಿ ವಲಯದಲ್ಲಿವೆ. ಈಶಾನ್ಯ ರಾಜ್ಯಗಳಲ್ಲಿ 57,672 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ವಿದ್ಯುತ್ ಸಚಿವಾಲಯ ಉದ್ದೇಶಿಸಿದೆ.</p>.<p>ಇವುಗಳಲ್ಲಿ 45,977 ಮೆಗಾವಾಟ್ ವಿದ್ಯುತ್ ಅನ್ನು ಅರುಣಾಚಲಪ್ರದೇಶ ಒಂದರಲ್ಲಿಯೇ ಉತ್ಪಾದಿಸಲಾಗುವುದು ಎಂದು ವಿದ್ಯುತ್ ಸಚಿವಾಲಯದ 2011-12ರ ವಾರ್ಷಿಕ ವರದಿ ಪ್ರಸ್ತಾಪಿಸಿದೆ. ಇದರಿಂದ ಉಂಟಾಗುವ ಸಾಮಾಜಿಕ ಹಾಗೂ ಪರಿಸರ ಪಲ್ಲಟಗಳ ಕಾರಣಗಳಿಂದಾಗಿ ಅರುಣಾಚಲಿಗಳಲ್ಲಿ ಆಳವಾದ ಅಸಹನೆ ಸೃಷ್ಟಿಯಾಗಿದೆ~ ಎಂದು ಈ ಪತ್ರಕರ್ತ ಬರೆದಿದ್ದರು.<br /> <br /> ಹೀಗಾಗಿ `ಫೋರಮ್ ಫಾರ್ ಸಿಯಾಂಗ್ ಡಯಲಾಗ್~ ಎಂಬಂತಹ ಗುಂಪು, ಸುಂದರವಾದ ಸಿಯಾಂಗ್ ನದಿಯ ಮೇಲೆ ಅಣೆಕಟ್ಟುಗಳನ್ನು ಕಟ್ಟುವುದಕ್ಕೆ ವಿರೋಧ ತೋರುತ್ತಿದೆ.<br /> <br /> ಜನರಿಗೆ ಸರಿಯಾಗಿ ಮಾಹಿತಿ ನೀಡದೆ ಹಾಗೂ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆಗಳ ಸಮ್ಮುಖದಲ್ಲಿ ಸಾರ್ವಜನಿಕ ವಿಚಾರಣೆಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯದ ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಆರೋಪಿಸುತ್ತಿವೆ ಎಂದು ತಾಲೂಕ್ದಾರ್ ಬರೆದಿದ್ದಾರೆ. <br /> <br /> ಅರುಣಾಚಲ ಪ್ರದೇಶದಲ್ಲಿ ಅನಿಯಂತ್ರಿತ ಅಣೆಕಟ್ಟು ನಿರ್ಮಾಣದಿಂದ ಉಂಟಾಗುವ ಅಪಾಯಗಳ ಬಗ್ಗೆ 2012ರ ಮೇ ತಿಂಗಳಲ್ಲಿ `ಮಿಂಟ್~ ಪತ್ರಿಕೆಯಲ್ಲಿ ಸುದೀಪ್ ಚಕ್ರವರ್ತಿಯವರೂ ಲೇಖನವೊಂದನ್ನು ಬರೆದರು. ಈ ಪ್ರದೇಶವನ್ನು ಚೆನ್ನಾಗಿ ಬಲ್ಲ ಚಕ್ರವರ್ತಿ ಅವರು, `ಯೋಜನೆಗಳಿಗೆ ಭೂ ಹಂಚಿಕೆ ವಿಚಾರದಲ್ಲಿ ಭಾರತದಿಂದ ಕೆಟ್ಟ ಆಚರಣೆಗಳನ್ನು ಅರುಣಾಚಲ ಆಮದು ಮಾಡಿಕೊಂಡಿದೆ~ ಎಂದಿದ್ದರು.<br /> <br /> `ಇತ್ತೀಚಿನ ಪ್ರಕರಣ: ಏಪ್ರಿಲ್ ಮಧ್ಯಭಾಗದಲ್ಲಿ ಖಾಸಗಿ ವಲಯಕ್ಕೆ ಸೇರಿದ 2700 ಮೆಗಾವಾಟ್ ಲೋವರ್ ಸಿಯಾಂಗ್ ಜಲ ವಿದ್ಯುತ್ ಯೋಜನೆ ವಿರುದ್ಧ ಸೇರಿದ್ದ ಪ್ರತಿಭಟನಾಕಾರರನ್ನು ಸರ್ಕಾರ ಹಿಂಸೆ ಪ್ರಯೋಗಿಸಿ ಚದುರಿಸಿತ್ತು. ಇನ್ನೂ ಕೆಟ್ಟದ್ದು ಮುಂದಿನ ದಿನಗಳಲ್ಲಿ ಆಗಲಿದೆ~ ಎಂದಿದ್ದರು ಅವರು.<br /> <br /> ಅದು ಆಗುತ್ತಲೂ ಇದೆ. ಜೂನ್ ಆರಂಭದಲ್ಲಿ `ದಿ ಟೆಲಿಗ್ರಾಫ್~ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ಸ್ಥಳೀಯರ ಪ್ರತಿಭಟನೆಗಳಿಂದಾಗಿ 2000 ಮೆಗಾವಾಟ್ ಲೋವರ್ ಸುಬನ್ಸಿರಿ ಯೋಜನೆಯ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. <br /> <br /> ಇಪ್ಪತ್ತು ವರ್ಷಗಳ ಹಿಂದೆ, `ದಿಸ್ ಫಿಷರ್ಡ್ ಲ್ಯಾಂಡ್~ ಎಂಬ ಪುಸ್ತಕದಲ್ಲಿ ಮಾಧವ ಗಾಡ್ಗೀಳ್ ಮತ್ತು ನಾನು `ಯೂರೋಪ್ ಹಾಗೂ ಉತ್ತರ ಅಮೆರಿಕಗಳಿಗೆ ತಮ್ಮ ಕೈಗಾರಿಕೀಕರಣದ ಸಂದರ್ಭದಲ್ಲಿ ಇದ್ದಂತಹ ವಸಾಹತುಗಳನ್ನು ಗೆದ್ದು ನೆಲೆಯಾಗುವಂತಹ ಅವಕಾಶ ಭಾರತಕ್ಕೆ ಇಲ್ಲ. ಹೀಗಾಗಿ ರಾಷ್ಟ್ರದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ಹೆಚ್ಚಿನ ವಿವೇಕ, ವಿವೇಚನೆ ಹಾಗೂ ದಕ್ಷತೆ ಅಗತ್ಯವಾಗುತ್ತದೆ~ ಎಂದಿದ್ದೆವು. <br /> <br /> ದುರಂತವೆಂದರೆ, ಆರ್ಥಿಕ ಉದಾರೀಕರಣದ ನಂತರ, ಸಂಪನ್ಮೂಲ ಬಳಕೆಯಲ್ಲಿ ಹೆಚ್ಚು ದುಂದುಗಾರಿಕೆಯ ರೂಪುರೇಷೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಪರಿಸರ ಚಳವಳಿಯಿಂದಾಗಿ 1980ರ ದಶಕದಲ್ಲಿ ಅಳವಡಿಸಲಾದ ಹೊಸ ಶಾಸನಾತ್ಮಕ ರಕ್ಷಣೆಗಳನ್ನು ಕಡೆಗಣಿಸಲಾಗಿದೆ ಅಥವಾ ಕೈಬಿಡಲಾಗಿದೆ. <br /> <br /> ಜಲ ಸಂರಕ್ಷಣೆ, ಸುಸ್ಥಿರ ಇಂಧನಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ ಅಥವಾ ಅಂಚಿಗೆ ಒತ್ತರಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿರಂತರ ಬೇಡಿಕೆ ಸೃಷ್ಟಿಸುವ ಅಮೆರಿಕನ್ ಜೀವನ ಶೈಲಿಯ ಆಕರ್ಷಣೆ, ಸೆಳೆತ ಹೆಚ್ಚಾಗಿದೆ.<br /> <br /> ಒಂದು ಕಾಲಕ್ಕೆ ಹೆಚ್ಚಿನ ಗೌರವ ಹೊಂದಿದ್ದ ಆದರೂ ಎಲ್ಲೋ ಕೆಲವರು ಮಾತ್ರ ಅನುಸರಿಸುತ್ತಿದ್ದ ಬುದ್ಧ, ಗಾಂಧಿ ಪ್ರತಿಪಾದಿಸಿದ ಸರಳತೆ ಹಾಗೂ ಮಿತವ್ಯಯದ ಮೌಲ್ಯಗಳು ಈಗ ಪೂರ್ಣವಾಗಿ ಮಾಯವಾಗಿವೆ. ಈಗ ಎಲ್ಲೆಲ್ಲೂ ಗಟ್ಟಿಯಾಗಿ ಕೇಳಿಸುವುದು `ದಿಲ್ ಮಾಂಗೇ ಮಾರೋ~. <br /> <br /> ಕಾರ್ಪೊರೆಟ್ ವಲಯ ಹಾಗೂ ಗ್ರಾಹಕ ವರ್ಗಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಭಾರತದ ಮಧ್ಯ ಭಾಗ ಹಾಗೂ ಈಶಾನ್ಯ ಪ್ರದೇಶಗಳ ಆದಿವಾಸಿ ಪ್ರದೇಶಗಳಲ್ಲಿನ ಸಂಪನ್ಮೂಲಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡಿದೆ.<br /> <br /> ಗಣಿಗಾರಿಕೆ ಹಾಗೂ ಜಲವಿದ್ಯುತ್ ಯೋಜನೆಗಳ ಅಲೆ, ಸ್ಥಳೀಯ ಪರಿಸರವನ್ನು ಕಡೆಗಣಿಸಿ ಸ್ಥಳೀಯ ಸಮುದಾಯಗಳನ್ನು ಸ್ಥಳಾಂತರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ವಲಯಗಳು `ಆಂತರಿಕ ವಸಾಹತು~ಗಳಾಗುವ ಹಾದಿಯಲ್ಲಿದ್ದು ವ್ಯಾಪಕ ಅಸಾಮಾಧಾನ ಸೃಷ್ಟಿಯಾಗಿದೆ.<br /> <br /> ಒರಿಸ್ಸಾದಂತಹ ರಾಜ್ಯದಲ್ಲಿ ಹದಿನೈದು ವರ್ಷಗಳ ಹಿಂದೆ ನಕ್ಸಲೀಯರೇ ಇರಲಿಲ್ಲ; ಹೀಗಿದ್ದೂ ಆದಿವಾಸಿ ಭೂಮಿಗಳನ್ನು ಗಣಿ ಕಂಪೆನಿಗಳಿಗೆ ಹಸ್ತಾಂತರಿಸಿದ ಪರಿಣಾಮವಾಗಿ ಎಡ ಧೋರಣೆಯ ಬಂಡಾಯಗಾರರು ಅರ್ಧ ಡಜನ್ಗಳಷ್ಟು ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.<br /> <br /> ಈ ಮಧ್ಯೆ ಈಶಾನ್ಯ ರಾಜ್ಯಗಳಲ್ಲಿ ಅಣೆಕಟ್ಟು ಕಟ್ಟುವ ವೇಗ ಆ ಅಲಕ್ಷಿತ, ಶೋಷಿತ ವಲಯದ ಜನರಲ್ಲಿ ಅಸಮಾಧಾನದ ಅಲೆಯನ್ನು ಎಬ್ಬಿಸುತ್ತಿದೆ. ಏನೇ ಆಗಲಿ ಅಭಿವೃದ್ಧಿ ಎಂಬಂತಹ ತತ್ವಕ್ಕೆ ಬದ್ಧರಾದವರು ಪರಿಸರ ಹಾಗೂ ಅಭಿವೃದ್ಧಿ ಮಧ್ಯೆ ಇಲ್ಲದ ವಿರೋಧ ಸೃಷ್ಟಿಸಿದ್ದಾರೆ.<br /> <br /> ನಿಜ ಹೇಳಬೇಕೆಂದರೆ, ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಅಥವಾ ಬಡತನ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ಭಾರತದಲ್ಲಿ ಈಗ ಅನುಸರಿಸಲಾಗುತ್ತಿರುವ ಅಭಿವೃದ್ಧಿಯ ಪಥ ದೂರದೃಷ್ಟಿ ಇಲ್ಲದ್ದು, ವಿನಾಶಕಾರಿ ಹಾಗೂ ಸಾಮಾಜಿಕವಾಗಿ ಧ್ರುವೀಕರಣ ಮಾಡುವಂತಹದ್ದು.<br /> <br /> ಆದರೆ ದಿವಂಗತ ಎ.ಕೆ.ಎನ್. ರೆಡ್ಡಿ (<a href="http://www.amuly-areddy.org.in/">www.amuly-areddy.org.in</a>) ಹಾಗೂ ಪ್ರಯಾಸ್ ಗ್ರೂಪ್ನಂತಹ (<a href="http://www.prayas-pune.org/">www.prayas-pune.org</a> ) ತಜ್ಞರು ನಮ್ಮ ಇಂಧನ ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲು ದೊಡ್ಡ ಅಣೆಕಟ್ಟುಗಳು ಮಾತ್ರವೇ ಏಕೈಕ ಅಥವಾ ಉತ್ತಮ ಮಾರ್ಗ ಆಗಿರಬೇಕಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. <br /> <br /> ಭಾರತೀಯ ಸಂದರ್ಭಗಳಿಗೆ ಹೆಚ್ಚು ಸೂಕ್ತವಾದದ್ದು ಕಡಿಮೆ ಇಂಧನ ಬಳಸುವ ತಂತ್ರಜ್ಞಾನಗಳು ಹಾಗೂ ಇಂಧನ ಪೂರೈಕೆ ನಷ್ಟಗಳನ್ನು ಕಡಿಮೆ ಮಾಡುವಂತಹವು. <br /> <br /> ಕಿರು ಜಲ ವಿದ್ಯುತ್ ಯೋಜನೆಗಳು ಆರ್ಥಿಕವಾಗಿ ಕಾರ್ಯಸಾಧು, ಪರಿಸರ ದೃಷ್ಟಿಯಲ್ಲಿ ಸುಸ್ಥಿರ ಹಾಗೂ ದೊಡ್ಡ ಯೋಜನೆಗಳಿಗೆ ಸಾಮಾಜಿಕವಾಗಿ ಒಳಗೊಳ್ಳುವ ಪರ್ಯಾಯಗಳಾಗಬಹುದು.<br /> <br /> ಈ ಪರ್ಯಾಯಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿಲ್ಲ. ಕಾರಣ- ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿರುವ ಗುತ್ತಿಗೆದಾರ -ಪ್ರವರ್ತಕ- ರಾಜಕಾರಣಿ ನಡುವಿನ ಸಂಬಂಧಗಳ ಪ್ರಭಾವ.<br /> <br /> ಈ ಹಿತಾಸಕ್ತಿಗಳನ್ನು ಬಯಲುಗೊಳಿಸುವ ಬದಲು ಅವನ್ನೇ ಅನುಮೋದಿಸುವ ಅಥವಾ ಅವರಿಗೆ ಸಮರ್ಥನೆ ನೀಡುವ ಮೂಲಕ ರಾಷ್ಟ್ರದ ಇತರ ಭಾಗಗಳ ಆಶಯಗಳಿಗೆ ನವದೆಹಲಿಯಲ್ಲಿನ ಸಂಪಾದಕರು ಪರಕೀಯರಾಗಿದ್ದಾರೆ ಎಂಬುದಕ್ಕೆ ಇದು ದ್ಯೋತಕ.<br /> <br /> (ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a>)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>