<p><em><strong>ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ |<br>ಮಾನಗಣಿತವು ನಮಗೆ? ಭಾನುವಿರದೊಡದೇಂ? ||<br>ಅನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು |<br>ಲೀನನಾಗದರೊಳಗೆ – ಮಂಕುತಿಮ್ಮ || 894 ||</strong></em></p>.<p><strong>ಪದ-ಅರ್ಥ:</strong> ಭಾನೂದಯಾಸ್ತಗಳಿನಲ್ತೆ=ಭಾನು(ಸೂರ್ಯ)+ಉದಯ+ಅಸ್ತ ಗಳಿನ್(ಮುಳುಗುವಿಕೆಗಳಿಂದ) +ಅಲ್ತೆ(ಅಲ್ಲವೆ), ದಿಕ್ಕಾಲಗಳ=ದಿಕ್ಕು+ಕಾಲಗಳ, ಮಾನಗಣಿತವು=ಮಾನ(ಅಳತೆ)+ಗಣಿತವು (ಲೆಕ್ಕಾಚಾರ), ಭಾನುವಿರದೊಡದೇಂ=ಭಾನು+ಇರದೊಡೆ (ಇರದಿದ್ದರೆ) +ಅದೇಂ, ಅನಂತ್ಯ=ಅನಂತವಾದ, ಲೀನವಾಗದರೊಳಗೆ=ಲೀನವಾಗು+ಅದರೊಳಗೆ.</p><p><strong>ವಾಚ್ಯಾರ್ಥ:</strong> ಸೂರ್ಯನ ಉದಯ ಮತ್ತು ಮುಳುಗುವಿಕೆಯಿಂದಲೇ ನಮಗೆ ದಿಕ್ಕು, ಕಾಲಗಳ ಅಳತೆ ಮತ್ತು ಲೆಕ್ಕಾಚಾರವಲ್ಲವೆ? ಸೂರ್ಯನೇ ಇರದಿದ್ದರೆ? ಆಗ ಇರುವುದು ಅನಂತವಾದ, ಶುದ್ಧಸತ್ವ ಪರಮಾತ್ಮನದು. ಅದರಲ್ಲಿ ನೀನು ಲೀನವಾಗು.</p><p><strong>ವಿವರಣೆ:</strong> ವೇದದಲ್ಲಿರುವ ವಿಚಾರದ ಪ್ರಖರತೆಗೆ ಋಗ್ವೇದದಲ್ಲಿ ಬರುವ “ನಾಸದೀಯ ಸೂಕ್ತ” ವನ್ನು ನೋಡಬೇಕು. ಈ ಸೃಷ್ಟಿ ಹುಟ್ಟಿದ್ದು ಹೇಗೆ? ಆಗ ಏನಿತ್ತು ಎಂಬ ಗಂಭೀರವಾದ ಚಿಂತನೆ ಅಲ್ಲಿ ಮೂಡಿದೆ. ಅದರ ಕೆಲವು ಶ್ಲೋಕಗಳ ಅನುವಾದವನ್ನು ಹೀಗೆ ಮಾಡಬಹುದು – “ಸತ್ತೆಂಬುದಿರಲಿಲ್ಲ, ಅಸತ್ತೂ ಇರಲಿಲ್ಲ, ಲೋಕ ನೀಲಾಕಾಶ, ಆಚೆಯದು ಇರಲಿಲ್ಲ.ಯಾರು ಬಲ್ಲರು ಅದನು ಯಾವ ಆಶ್ರಯದಲ್ಲಿ ಏನನಾವರಿಸಿತ್ತು – ಜಲಧಿಯಿತ್ತೆ? ಮೃತ್ಯುವೂ ಇರಲಿಲ್ಲ, ಅಮೃತ್ಯುವೂ ಇರಲಿಲ್ಲ ರಾತ್ರಿ ಹಗಲುಗಳಿಗೆ ಭೇದವಿರಲಿಲ್ಲ, ಆದಿ ಮೂಲವದೊಂದು ಉಸಿರಾಡುತ್ತಿತ್ತು, ಅದ ಹೊರತು ಬೇರೇನೂ ಇರಲಿಲ್ಲ ವಿಶ್ವದಲಿ” ಪ್ರಪಂಚ ಸೃಷ್ಟಿಯಾದಾಗ, ಸೂರ್ಯನು ಹುಟ್ಟದಿದ್ದಾಗ ಏನಿತ್ತು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತದೆ ಈ ಸೂಕ್ತ. ಈಗ ಸೂರ್ಯನಿದ್ದಾನೆ. ಆದ್ದರಿಂದ ನಮಗೆ ಹಗಲು-ಬೆಳಕುಗಳ ತಿಳಿವು ಬಂದಿದೆ.</p><p>ಸೂರ್ಯನಿಂದಲೇ ನಮಗೆ ದಿಕ್ಕುಗಳ ಮತ್ತು ಸಮಯಗಳ ಕಲ್ಪನೆ. ಕಗ್ಗ ಸೂಕ್ತದ ಮಾತನ್ನೇ ಕೇಳುತ್ತದೆ. ಸೂರ್ಯನೇ ಇಲ್ಲದಿದ್ದಾಗ ಏನಾಗಬಹುದು? ಅದಕ್ಕೆ ಸೂಕ್ತವೇ ಉತ್ತರ ನೀಡಿದೆ. ಆಗ, ಆದಿಮೂಲವೊಂದು ಇತ್ತು. ಅದರ ಹೊರತು ಬೇರೆ ಏನೂ ಇರಲಿಲ್ಲ ವಿಶ್ವದಲ್ಲಿ. ಆ ಆದಿಮೂಲವಾದದ್ದು ಅನಂತವಾದದ್ದು. ಅದೊಂದು ಪರಮಶುದ್ಧ ಸತ್ವ. ಅದೇ ಬ್ರಹ್ಮ. ಕಗ್ಗದ ಚಿಂತನೆ, ಪ್ರೇರಣೆ ಆ ಅನಂತವಾದ ಬ್ರಹ್ಮದಲ್ಲಿ ಲೀನವಾಗಬೇಕು ಎನ್ನುವುದು. ಯಾಕೆಂದರೆ ಈ ಪ್ರಪಂಚ, ಪ್ರಪಂಚದ ಪ್ರತಿಯೊಂದು ಸೃಷ್ಟಿ ಕೂಡ ಅಶಾಶ್ವತವಾದದ್ದು. ಒಂದಲ್ಲ ಒಂದು ದಿನ ಕರಗಿ ಹೋಗುವಂಥದ್ದು. ಆದರೆ ಪ್ರಪಂಚದ ಸೃಷ್ಟಿಗಿಂತ ಮೊದಲಿದ್ದು, ಅದು ಅಳಿದ ಮೇಲೂಇರುವ ಶಾಶ್ವತ ಸತ್ವದಲ್ಲಿ ಲೀನವಾಗುವುದು ಬದುಕಿನ ಉದ್ದೇಶ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ |<br>ಮಾನಗಣಿತವು ನಮಗೆ? ಭಾನುವಿರದೊಡದೇಂ? ||<br>ಅನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು |<br>ಲೀನನಾಗದರೊಳಗೆ – ಮಂಕುತಿಮ್ಮ || 894 ||</strong></em></p>.<p><strong>ಪದ-ಅರ್ಥ:</strong> ಭಾನೂದಯಾಸ್ತಗಳಿನಲ್ತೆ=ಭಾನು(ಸೂರ್ಯ)+ಉದಯ+ಅಸ್ತ ಗಳಿನ್(ಮುಳುಗುವಿಕೆಗಳಿಂದ) +ಅಲ್ತೆ(ಅಲ್ಲವೆ), ದಿಕ್ಕಾಲಗಳ=ದಿಕ್ಕು+ಕಾಲಗಳ, ಮಾನಗಣಿತವು=ಮಾನ(ಅಳತೆ)+ಗಣಿತವು (ಲೆಕ್ಕಾಚಾರ), ಭಾನುವಿರದೊಡದೇಂ=ಭಾನು+ಇರದೊಡೆ (ಇರದಿದ್ದರೆ) +ಅದೇಂ, ಅನಂತ್ಯ=ಅನಂತವಾದ, ಲೀನವಾಗದರೊಳಗೆ=ಲೀನವಾಗು+ಅದರೊಳಗೆ.</p><p><strong>ವಾಚ್ಯಾರ್ಥ:</strong> ಸೂರ್ಯನ ಉದಯ ಮತ್ತು ಮುಳುಗುವಿಕೆಯಿಂದಲೇ ನಮಗೆ ದಿಕ್ಕು, ಕಾಲಗಳ ಅಳತೆ ಮತ್ತು ಲೆಕ್ಕಾಚಾರವಲ್ಲವೆ? ಸೂರ್ಯನೇ ಇರದಿದ್ದರೆ? ಆಗ ಇರುವುದು ಅನಂತವಾದ, ಶುದ್ಧಸತ್ವ ಪರಮಾತ್ಮನದು. ಅದರಲ್ಲಿ ನೀನು ಲೀನವಾಗು.</p><p><strong>ವಿವರಣೆ:</strong> ವೇದದಲ್ಲಿರುವ ವಿಚಾರದ ಪ್ರಖರತೆಗೆ ಋಗ್ವೇದದಲ್ಲಿ ಬರುವ “ನಾಸದೀಯ ಸೂಕ್ತ” ವನ್ನು ನೋಡಬೇಕು. ಈ ಸೃಷ್ಟಿ ಹುಟ್ಟಿದ್ದು ಹೇಗೆ? ಆಗ ಏನಿತ್ತು ಎಂಬ ಗಂಭೀರವಾದ ಚಿಂತನೆ ಅಲ್ಲಿ ಮೂಡಿದೆ. ಅದರ ಕೆಲವು ಶ್ಲೋಕಗಳ ಅನುವಾದವನ್ನು ಹೀಗೆ ಮಾಡಬಹುದು – “ಸತ್ತೆಂಬುದಿರಲಿಲ್ಲ, ಅಸತ್ತೂ ಇರಲಿಲ್ಲ, ಲೋಕ ನೀಲಾಕಾಶ, ಆಚೆಯದು ಇರಲಿಲ್ಲ.ಯಾರು ಬಲ್ಲರು ಅದನು ಯಾವ ಆಶ್ರಯದಲ್ಲಿ ಏನನಾವರಿಸಿತ್ತು – ಜಲಧಿಯಿತ್ತೆ? ಮೃತ್ಯುವೂ ಇರಲಿಲ್ಲ, ಅಮೃತ್ಯುವೂ ಇರಲಿಲ್ಲ ರಾತ್ರಿ ಹಗಲುಗಳಿಗೆ ಭೇದವಿರಲಿಲ್ಲ, ಆದಿ ಮೂಲವದೊಂದು ಉಸಿರಾಡುತ್ತಿತ್ತು, ಅದ ಹೊರತು ಬೇರೇನೂ ಇರಲಿಲ್ಲ ವಿಶ್ವದಲಿ” ಪ್ರಪಂಚ ಸೃಷ್ಟಿಯಾದಾಗ, ಸೂರ್ಯನು ಹುಟ್ಟದಿದ್ದಾಗ ಏನಿತ್ತು ಎಂಬುದನ್ನು ಕಾವ್ಯಾತ್ಮಕವಾಗಿ ಹೇಳುತ್ತದೆ ಈ ಸೂಕ್ತ. ಈಗ ಸೂರ್ಯನಿದ್ದಾನೆ. ಆದ್ದರಿಂದ ನಮಗೆ ಹಗಲು-ಬೆಳಕುಗಳ ತಿಳಿವು ಬಂದಿದೆ.</p><p>ಸೂರ್ಯನಿಂದಲೇ ನಮಗೆ ದಿಕ್ಕುಗಳ ಮತ್ತು ಸಮಯಗಳ ಕಲ್ಪನೆ. ಕಗ್ಗ ಸೂಕ್ತದ ಮಾತನ್ನೇ ಕೇಳುತ್ತದೆ. ಸೂರ್ಯನೇ ಇಲ್ಲದಿದ್ದಾಗ ಏನಾಗಬಹುದು? ಅದಕ್ಕೆ ಸೂಕ್ತವೇ ಉತ್ತರ ನೀಡಿದೆ. ಆಗ, ಆದಿಮೂಲವೊಂದು ಇತ್ತು. ಅದರ ಹೊರತು ಬೇರೆ ಏನೂ ಇರಲಿಲ್ಲ ವಿಶ್ವದಲ್ಲಿ. ಆ ಆದಿಮೂಲವಾದದ್ದು ಅನಂತವಾದದ್ದು. ಅದೊಂದು ಪರಮಶುದ್ಧ ಸತ್ವ. ಅದೇ ಬ್ರಹ್ಮ. ಕಗ್ಗದ ಚಿಂತನೆ, ಪ್ರೇರಣೆ ಆ ಅನಂತವಾದ ಬ್ರಹ್ಮದಲ್ಲಿ ಲೀನವಾಗಬೇಕು ಎನ್ನುವುದು. ಯಾಕೆಂದರೆ ಈ ಪ್ರಪಂಚ, ಪ್ರಪಂಚದ ಪ್ರತಿಯೊಂದು ಸೃಷ್ಟಿ ಕೂಡ ಅಶಾಶ್ವತವಾದದ್ದು. ಒಂದಲ್ಲ ಒಂದು ದಿನ ಕರಗಿ ಹೋಗುವಂಥದ್ದು. ಆದರೆ ಪ್ರಪಂಚದ ಸೃಷ್ಟಿಗಿಂತ ಮೊದಲಿದ್ದು, ಅದು ಅಳಿದ ಮೇಲೂಇರುವ ಶಾಶ್ವತ ಸತ್ವದಲ್ಲಿ ಲೀನವಾಗುವುದು ಬದುಕಿನ ಉದ್ದೇಶ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>