<p><em><strong>ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ |<br />ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ||<br />ಮನುಜರ ಪರಸ್ಪರೋದ್ರೇಕ ಜಗದ ವಿಲಾಸ |<br />ಮನವೆ ಪರಮಾದ್ಭುತವೊ – ಮಂಕುತಿಮ್ಮ || 247 ||</strong></em></p>.<p><strong>ಪದ-ಅರ್ಥ: </strong>ಪಾರ್ವುದು=ಹಾರುವುದು, ಬಾಳಿನುರಿಯ=ಬಾಳಿನ+ಉರಿಯ, ಮನೆಗಲೆವ=ಮನೆಗೆ+ಅಲೆವ(ಅಲೆಯುವ), ಪರಸ್ಪರೋದ್ರೇಕ=ಪರಸ್ಪರ+ಉದ್ರೇಕ</p>.<p><strong>ವಾಚ್ಯಾರ್ಥ:</strong> ಬದುಕಿನ ಉರಿಯ ಕಿಡಿ ಮನದಿಂದ ಮನಕ್ಕೆ ಹಾರುತ್ತದೆ, ಮನೆಯಿಂದ ಮನೆಗೆ ಅಲೆಯುವ ಗಾಳಿ ಹೊಗೆಯಂತೆ. ಮನುಜರ ನಡುವಿನ ಪರಸ್ಪರ ಭಾವೋದ್ರೇಕವೇ ಈ ಜಗತ್ತಿನ ವಿಲಾಸ. ಈ ಮನಸ್ಸು ಒಂದು ಪರಮ ಅದ್ಭುತ.</p>.<p><strong>ವಿವರಣೆ: </strong>ಮನುಷ್ಯ ಸಂಘಜೀವಿ. ಆತ ಒಬ್ಬನೇ ಬದುಕಲಾರ. ಆದರೆ ಹೀಗೆ ಗುಂಪಿನಲ್ಲಿ ಬದುಕುವಾಗ ಪರಸ್ಪರರೊಂದಿಗೆ ಸಂಪರ್ಕ ಆಗಿಯೇ ತೀರುತ್ತದೆ. ಈ ಸಂಪರ್ಕವಾಗುವಾಗ ಕೆಲವೊಮ್ಮೆ ಸ್ನೇಹವಾಗಬಹುದು, ಕೆಲವೊಮ್ಮೆ ಘರ್ಷಣೆಯಾಗಬಹುದು. ಸಂಘ ಜೀವನದಲ್ಲಿ ಈ ಭಾವನೆಗಳು ಪರಸ್ಪರರನ್ನು ಪ್ರೇಮದಲ್ಲಿ ಬಂಧಿಸಬಹುದು ಇಲ್ಲವೇ ದ್ವೇಷದಲ್ಲಿ ಒಡೆಯಬಹುದು. ದ್ವೇಷವನ್ನು ಈ ಕಗ್ಗ ಬಹಳ ಅರ್ಥಪೂರ್ಣವಾಗಿ ಬಾಳಿನ ಉರಿಯ ಕಿಡಿ ಎಂದು ವರ್ಣಿಸುತ್ತದೆ. ದ್ವೇಷ, ಕುಟುಂಬ, ಸಮಾಜ, ದೇಶಗಳನ್ನು ಸುಟ್ಟು ಬೂದಿ ಮಾಡುವ ದುಷ್ಟ ಶಕ್ತಿ. ಇದನ್ನು ಶರಣರು ಕಿಚ್ಚು ಅಥವಾ ಅಗ್ನಿ ಎಂದು ಕರೆದರು.<br /> ***<br /><em>ತನುವಿನ ಕೋಪ ತನ್ನ ಹಿರಿತನದ ಕೇಡು !<br />ಮನದ ಕೋಪ ತನ್ನ ಅರಿವಿನ ಕೇಡು !<br />ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ,<br />ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ !</em></p>.<p>ಅನಾಹುತಕಾರಿಯಾದ ಕ್ರೋಧ ಅಥವಾ ದ್ವೇಷ ಹುಟ್ಟುವುದು ನಮ್ಮ ನಮ್ಮ ಮನಗಳಲ್ಲಿಯೇ. ಬೆಂಕಿಯನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೊಬ್ಬರ ಮೇಲೆ ತೂರ ಹೊರಟರೆ ಅದು ಮೊದಲು ಸುಡುವುದು ನಮ್ಮ ಕೈಯನ್ನೇ. ಅನಂತರ ಮತ್ತೊಬ್ಬರನ್ನು ಸುಡುತ್ತದೆ. ಅಂತೆಯೇ ನಮ್ಮ ಮನದಲ್ಲಿ ಹುಟ್ಟಿದ ಈ ದ್ವೇಷದ ಕಿಡಿ ಮನದ ಶಾಂತಿಯನ್ನು ಕದಡಿ ನಂತರ ಬೆಂಕಿ ಹತ್ತಿದ ಮನೆಯಿಂದ ಮತ್ತೊಂದು ಮನೆಗೆ ಸಾಗುವ ಹೊಗೆಯಂತೆ, ನೆರೆಮನೆಗೆ, ಪಕ್ಕದ ಊರಿಗೆ, ಬೇರೆ ದೇಶಕ್ಕೆ ಹಬ್ಬಿ ಇಡೀ ವಿಶ್ವವನ್ನೇ ಉಸಿರುಗಟ್ಟಿಸುತ್ತದೆ.</p>.<p>ಮನುಷ್ಯರ ಪರಸ್ಪರ ಸಂಪರ್ಕ ಬರೀ ದ್ವೇಷವನ್ನು ಅಥವಾ ಹೊಡೆದಾಟವನ್ನು ತರುತ್ತದೆ ಎಂದಲ್ಲ. ಈ ಸಂಪರ್ಕದಲ್ಲಿ ಹೊಸವಿಚಾರಗಳು, ಹೊಸ ನೀತಿಗಳು ಹೊಳೆದು ಪ್ರಪಂಚವನ್ನು ಬೆಳೆಸಿವೆ, ಕೋಟೆಗಳನ್ನು ಕಟ್ಟಿಸಿವೆ, ಬದುಕನ್ನು ಹಗುರಗೊಳಿಸಿವೆ, ಪ್ರಪಂಚವನ್ನು ಶ್ರೀಮಂತಗೊಳಿಸಿವೆ. ಹೀಗೆ ಮನುಷ್ಯ – ಮನುಷ್ಯರ ನಡುವಿನ ಸಂಪರ್ಕ ಸ್ವಾರ್ಥಕೇಂದ್ರಿತವಾದಾಗ ವಿಷಮತೆಯನ್ನು, ದ್ವೇಷವನ್ನು, ವಿಭಜನೆಯನ್ನು ತಂದು ಪ್ರಪಂಚವನ್ನು ಅಗ್ನಿಕುಂಡಕ್ಕೆ ನೂಕುತ್ತದೆ. ಅದೇ ಸಂಪರ್ಕ ಸ್ವಾರ್ಥರಹಿತವಾದಾಗ ಶಾಂತಿಯ ರಸ ಹರಿಯುತ್ತದೆ, ಪ್ರಪಂಚ ಆನಂದದಿಂದ ನಲಿಯುತ್ತದೆ.</p>.<p>ಇವೆರಡೂ ಸಾಧ್ಯತೆಗಳು ಹುಟ್ಟುವುದು ನಮ್ಮ ಮನಸ್ಸುಗಳಲ್ಲಿ. ಇವುಗಳಿಂದಲೇ ಪ್ರಪಂಚದ ವಿಲಾಸ. ಅದಕ್ಕೆ ಕಗ್ಗ ಮನಸ್ಸನ್ನು ಪರಮಾದ್ಭುತ ಎಂದು ಕರೆಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ |<br />ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ||<br />ಮನುಜರ ಪರಸ್ಪರೋದ್ರೇಕ ಜಗದ ವಿಲಾಸ |<br />ಮನವೆ ಪರಮಾದ್ಭುತವೊ – ಮಂಕುತಿಮ್ಮ || 247 ||</strong></em></p>.<p><strong>ಪದ-ಅರ್ಥ: </strong>ಪಾರ್ವುದು=ಹಾರುವುದು, ಬಾಳಿನುರಿಯ=ಬಾಳಿನ+ಉರಿಯ, ಮನೆಗಲೆವ=ಮನೆಗೆ+ಅಲೆವ(ಅಲೆಯುವ), ಪರಸ್ಪರೋದ್ರೇಕ=ಪರಸ್ಪರ+ಉದ್ರೇಕ</p>.<p><strong>ವಾಚ್ಯಾರ್ಥ:</strong> ಬದುಕಿನ ಉರಿಯ ಕಿಡಿ ಮನದಿಂದ ಮನಕ್ಕೆ ಹಾರುತ್ತದೆ, ಮನೆಯಿಂದ ಮನೆಗೆ ಅಲೆಯುವ ಗಾಳಿ ಹೊಗೆಯಂತೆ. ಮನುಜರ ನಡುವಿನ ಪರಸ್ಪರ ಭಾವೋದ್ರೇಕವೇ ಈ ಜಗತ್ತಿನ ವಿಲಾಸ. ಈ ಮನಸ್ಸು ಒಂದು ಪರಮ ಅದ್ಭುತ.</p>.<p><strong>ವಿವರಣೆ: </strong>ಮನುಷ್ಯ ಸಂಘಜೀವಿ. ಆತ ಒಬ್ಬನೇ ಬದುಕಲಾರ. ಆದರೆ ಹೀಗೆ ಗುಂಪಿನಲ್ಲಿ ಬದುಕುವಾಗ ಪರಸ್ಪರರೊಂದಿಗೆ ಸಂಪರ್ಕ ಆಗಿಯೇ ತೀರುತ್ತದೆ. ಈ ಸಂಪರ್ಕವಾಗುವಾಗ ಕೆಲವೊಮ್ಮೆ ಸ್ನೇಹವಾಗಬಹುದು, ಕೆಲವೊಮ್ಮೆ ಘರ್ಷಣೆಯಾಗಬಹುದು. ಸಂಘ ಜೀವನದಲ್ಲಿ ಈ ಭಾವನೆಗಳು ಪರಸ್ಪರರನ್ನು ಪ್ರೇಮದಲ್ಲಿ ಬಂಧಿಸಬಹುದು ಇಲ್ಲವೇ ದ್ವೇಷದಲ್ಲಿ ಒಡೆಯಬಹುದು. ದ್ವೇಷವನ್ನು ಈ ಕಗ್ಗ ಬಹಳ ಅರ್ಥಪೂರ್ಣವಾಗಿ ಬಾಳಿನ ಉರಿಯ ಕಿಡಿ ಎಂದು ವರ್ಣಿಸುತ್ತದೆ. ದ್ವೇಷ, ಕುಟುಂಬ, ಸಮಾಜ, ದೇಶಗಳನ್ನು ಸುಟ್ಟು ಬೂದಿ ಮಾಡುವ ದುಷ್ಟ ಶಕ್ತಿ. ಇದನ್ನು ಶರಣರು ಕಿಚ್ಚು ಅಥವಾ ಅಗ್ನಿ ಎಂದು ಕರೆದರು.<br /> ***<br /><em>ತನುವಿನ ಕೋಪ ತನ್ನ ಹಿರಿತನದ ಕೇಡು !<br />ಮನದ ಕೋಪ ತನ್ನ ಅರಿವಿನ ಕೇಡು !<br />ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ,<br />ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ !</em></p>.<p>ಅನಾಹುತಕಾರಿಯಾದ ಕ್ರೋಧ ಅಥವಾ ದ್ವೇಷ ಹುಟ್ಟುವುದು ನಮ್ಮ ನಮ್ಮ ಮನಗಳಲ್ಲಿಯೇ. ಬೆಂಕಿಯನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೊಬ್ಬರ ಮೇಲೆ ತೂರ ಹೊರಟರೆ ಅದು ಮೊದಲು ಸುಡುವುದು ನಮ್ಮ ಕೈಯನ್ನೇ. ಅನಂತರ ಮತ್ತೊಬ್ಬರನ್ನು ಸುಡುತ್ತದೆ. ಅಂತೆಯೇ ನಮ್ಮ ಮನದಲ್ಲಿ ಹುಟ್ಟಿದ ಈ ದ್ವೇಷದ ಕಿಡಿ ಮನದ ಶಾಂತಿಯನ್ನು ಕದಡಿ ನಂತರ ಬೆಂಕಿ ಹತ್ತಿದ ಮನೆಯಿಂದ ಮತ್ತೊಂದು ಮನೆಗೆ ಸಾಗುವ ಹೊಗೆಯಂತೆ, ನೆರೆಮನೆಗೆ, ಪಕ್ಕದ ಊರಿಗೆ, ಬೇರೆ ದೇಶಕ್ಕೆ ಹಬ್ಬಿ ಇಡೀ ವಿಶ್ವವನ್ನೇ ಉಸಿರುಗಟ್ಟಿಸುತ್ತದೆ.</p>.<p>ಮನುಷ್ಯರ ಪರಸ್ಪರ ಸಂಪರ್ಕ ಬರೀ ದ್ವೇಷವನ್ನು ಅಥವಾ ಹೊಡೆದಾಟವನ್ನು ತರುತ್ತದೆ ಎಂದಲ್ಲ. ಈ ಸಂಪರ್ಕದಲ್ಲಿ ಹೊಸವಿಚಾರಗಳು, ಹೊಸ ನೀತಿಗಳು ಹೊಳೆದು ಪ್ರಪಂಚವನ್ನು ಬೆಳೆಸಿವೆ, ಕೋಟೆಗಳನ್ನು ಕಟ್ಟಿಸಿವೆ, ಬದುಕನ್ನು ಹಗುರಗೊಳಿಸಿವೆ, ಪ್ರಪಂಚವನ್ನು ಶ್ರೀಮಂತಗೊಳಿಸಿವೆ. ಹೀಗೆ ಮನುಷ್ಯ – ಮನುಷ್ಯರ ನಡುವಿನ ಸಂಪರ್ಕ ಸ್ವಾರ್ಥಕೇಂದ್ರಿತವಾದಾಗ ವಿಷಮತೆಯನ್ನು, ದ್ವೇಷವನ್ನು, ವಿಭಜನೆಯನ್ನು ತಂದು ಪ್ರಪಂಚವನ್ನು ಅಗ್ನಿಕುಂಡಕ್ಕೆ ನೂಕುತ್ತದೆ. ಅದೇ ಸಂಪರ್ಕ ಸ್ವಾರ್ಥರಹಿತವಾದಾಗ ಶಾಂತಿಯ ರಸ ಹರಿಯುತ್ತದೆ, ಪ್ರಪಂಚ ಆನಂದದಿಂದ ನಲಿಯುತ್ತದೆ.</p>.<p>ಇವೆರಡೂ ಸಾಧ್ಯತೆಗಳು ಹುಟ್ಟುವುದು ನಮ್ಮ ಮನಸ್ಸುಗಳಲ್ಲಿ. ಇವುಗಳಿಂದಲೇ ಪ್ರಪಂಚದ ವಿಲಾಸ. ಅದಕ್ಕೆ ಕಗ್ಗ ಮನಸ್ಸನ್ನು ಪರಮಾದ್ಭುತ ಎಂದು ಕರೆಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>