ಕಾಂಗ್ರೆಸ್ ಹೈಕಮಾಂಡ್ ಎದುರು ನಿಷ್ಠುರವಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬದಲಾದ ರಾಜಕೀಯ ಸಂದರ್ಭದಲ್ಲಿ ಅಸಹಾಯಕರಂತೆ ಕಾಣಿಸುತ್ತಿದ್ದಾರೆ. ಆಪ್ತರ ತಲೆದಂಡಗಳನ್ನು ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳುವ ಹಾಗೂ ಸರ್ಕಾರದ ವಿರುದ್ಧ ಸಚಿವರೇ ಮಾತನಾಡುತ್ತಿದ್ದರೂ ಮೌನವಾಗಿರುವ ಸ್ಥಿತಿ ಅವರದ್ದಾಗಿದೆ.
ಶ್ರೀಸಾಮಾನ್ಯರು ವಿರೋಧ ಪಕ್ಷಗಳು ಸರ್ಕಾರದ ನಡೆಯನ್ನು ಟೀಕಿಸುವುದು ಸರ್ವಮಾನ್ಯ. ಆದರೆ ಕರ್ನಾಟಕದಲ್ಲಿ ಸರ್ಕಾರವೇ ಸರ್ಕಾರದ ವಿರುದ್ಧ ಮಾತನಾಡತೊಡಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವಿರುದ್ಧ ಲಿಂಗಾಯತ ಒಕ್ಕಲಿಗರ ಸಚಿವರು ಒಳ ಮೀಸಲಾತಿ ಸಮೀಕ್ಷೆ ಕುರಿತು ಬಲಗೈ ಸಮುದಾಯದ ಸಚಿವರ ಮಾತುಗಳನ್ನು ಈ ರಿವಾಜಿನಲ್ಲಿಯೇ ನೋಡಬೇಕು. ‘ಧರ್ಮಸ್ಥಳದ ಪ್ರಕರಣದಲ್ಲಿ ಷಡ್ಯಂತ್ರ ನಡೆಯುತ್ತಿದೆ ದರ್ಶನ್ ಜಾಮೀನು ರದ್ದಾಗಿದ್ದು ಕೇಳಿ ಶಾಕ್ ಆಯಿತು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಸ್ಐಟಿ ಬಗೆಗೆ ಸ್ವತಂ ಗೃಹ ಸಚಿವರೂ ಆಗಿರುವ ಜಿ. ಪರಮೇಶ್ವರ ಪ್ರಸ್ತಾಪಿಸಿದ ವಿಷಯಗಳು ಇದಕ್ಕೆ ಪುರಾವೆಯಂತಿವೆ.