ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು ದಸರಾ|ಭಾರ ಹೊರುವ ತಾಲೀಮು ಶುರು: 500 ಕೆ.ಜಿ ಹೊತ್ತ ಕ್ಯಾಪ್ಟನ್‌ ಅಭಿಮನ್ಯು

Published : 4 ಸೆಪ್ಟೆಂಬರ್ 2025, 2:34 IST
Last Updated : 4 ಸೆಪ್ಟೆಂಬರ್ 2025, 2:34 IST
ಫಾಲೋ ಮಾಡಿ
Comments
‘ಐದು ಆನೆಗಳಿಗೆ ತಾಲೀಮು’
ಡಿಸಿಎಫ್ (ವನ್ಯಜೀವಿ) ಐ.ಬಿ.ಪ್ರಭುಗೌಡ ಮಾತನಾಡಿ ‘5 ವರ್ಷದಿಂದ ಅಂಬಾರಿ ಹೊರುತ್ತಿರುವ ಅಭಿಮನ್ಯುವಿಗೆ ಭಾರ ಹೊರಿಸುವ ಅಭ್ಯಾಸ ಆರಂಭಿಸಲಾಗಿದೆ. 300 ಕೆ.ಜಿ  ತೂಕದ ಮರಳಿನ ಮೂಟೆಗಳ ಜತೆಗೆ 200 ಕೆ.ಜಿಯಷ್ಟು ನಮ್ದಾ ಗಾದಿ ಚಾಪು ಹಗ್ಗಗಳು ತೊಟ್ಟಿಲು ಸೇರಿ ಸುಮಾರು 500 ಕೆ.ಜಿಯಷ್ಟು ಭಾರವಿದೆ’ ಎಂದರು.  ‘ಧನಂಜಯ ಮಹೇಂದ್ರ ಪ್ರಶಾಂತ ಭೀಮ ಏಕಲವ್ಯನಿಗೆ ನಂತರ ಹೊರಿಸಲಾಗುವುದು. ಮತ್ತೆ ಅಭಿಮನ್ಯು ಹೊರಲಿದ್ದಾನೆ. ಹಂತ ಹಂತವಾಗಿ ಭಾರವನ್ನು ಸಾವಿರ ಕೆ.ಜಿ ವರೆಗೂ ಹೆಚ್ಚಿಸಲಾಗುವುದು. ಭಾರದ ನಡಿಗೆ ತಾಲೀಮಿನ ನಂತರ ಆನೆಗಳಿಗೆ ವಿಶ್ರಾಂತಿ ಬೇಕಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT