ನಗರದ ಅಮರಾವತಿಯ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪುಷ್ಪಲಂಕಾರ, ಪಂಚಾಮೃತ ನೈವೇದ್ಯ ಸಮರ್ಪಿಸಲಾಯಿತು. ಇದೇ 19ರ ವರೆಗೆ ನಿತ್ಯ ಬೆಳಿಗ್ಗೆ 5ಕ್ಕೆ ರುದ್ರಾಭಿಷೇಕ ನಡೆಯುತ್ತದೆ. 19ರಂದು ಸಂಜೆ 4ಕ್ಕೆ ಚಂದ್ರಮೌಳೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಅಮ್ಮನ ದೇವಸ್ಥಾನಕ್ಕೆ ತರಲಾಗುತ್ತದೆ. ನಂತರ ಬನ್ನಿ ಮುಡಿಯಲಾಗುತ್ತದೆ.