<p>ಮಾನುಷ್ಯಂ ನಾವಮಾಸಾದ್ಯ ತರ ದುಃಖಮಹಾನದೀಮ್ ।</p>.<p>ಮೂಢ ಕಾಲೋ ನ ನಿದ್ರಾಯಾ ಇಯಂ ನೌರ್ದುರ್ಲಭಾ ಪುನಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮನುಷ್ಯಶರೀರ ಎಂಬ ದೋಣಿಯನ್ನು ಪಡೆದು ದುಃಖ ಎಂಬ ದೊಡ್ಡ ನದಿಯನ್ನು ದಾಟು. ಮೂರ್ಖ! ನಿದ್ರೆಗೆ ಇದು ಸಮಯವಲ್ಲ. ಈ ದೋಣಿ ಮತ್ತೆ ಸಿಕ್ಕುವುದಿಲ್ಲ.’</p>.<p>ಸಾಮಾನ್ಯವಾಗಿ ಮನುಷ್ಯನ ಶರೀರವನ್ನು ಒಂದು ಹೊರೆ ಎನ್ನುವಂತೆ ಹಲವರು ಭಾವಿಸಿಕೊಳ್ಳುತ್ತಾರೆ. ಆದರೆ ಮನುಷ್ಯಜನ್ಮವನ್ನು ಸಾರ್ಥಕವಾಗಿ ಉಪಯೋಗಿಸಿಕೊಳ್ಳುವ ಮಾರ್ಗವನ್ನು ಈ ಸುಭಾಷಿತ ಇಲ್ಲಿ ತಿಳಿಸಿಕೊಡುತ್ತಿದೆ.</p>.<p>ಸಂಸಾರ ಎಂದರೆ ನಮ್ಮ ಈ ಜೀವನಚಕ್ರ. ಇದನ್ನು ಸಾಮಾನ್ಯವಾಗಿ ಸಾಗರಕ್ಕೆ ಹೋಲಿಸುವುದುಂಟು. ಸಾಗರವನ್ನು ದಾಟುವ ಬಗೆ ಹೇಗೆ? ಹಡಗಿನ ಮೂಲಕ ದಾಟಬೇಕು, ಅಲ್ಲವೆ? ಸಂಸಾರವೇ ಸಮುದ್ರವಾದರೆ ಆಗ ಅದನ್ನು ದಾಟಿ ಪಾರಾಗುವ ಬಗೆ ಹೇಗೆ? ಸುಭಾಷಿತ ಹೇಳುತ್ತಿದೆ, ನಮ್ಮ ಈ ಶರೀರವೇ ದೋಣಿ, ಹಡಗು; ಇದರ ನೆರವಿನಿಂದಲೇ ನಾವು ಸಂಸಾರಸಾಗರವನ್ನು ದಾಟಿ ಆಚೆಯ ದಡವನ್ನು ಸೇರಬೇಕಾಗಿದೆ.</p>.<p>ಆದರೆ ಸುಭಾಷಿತ ಇಲ್ಲಿ ಇನ್ನೊಂದು ಸಂಗತಿಯನ್ನೂ ಹೇಳಿದೆ. ಸಂಸಾರವನ್ನು ಕೇವಲ ಸಾಗರ ಎಂದಷ್ಟೆ ಹೇಳಿಲ್ಲ; ಅದನ್ನು ದುಃಖಸಾಗರ ಎಂದು ಹೇಳಿದೆ. ದಾಟುವುದು ಎಂದರೆ ಇಲ್ಲಿ ತಪ್ಪಿಸಿಕೊಳ್ಳುವುದು; ನಮ್ಮದಲ್ಲದ ನೆಲೆಯಿಂದ ನಮ್ಮದಾಗಿರುವ ನೆಲೆಗೆ ಹೋಗುವುದು. ಸಂಸಾರಸಾಗರದಲ್ಲಿ ಈಗ ದುಃಖ ಬಂದಿದೆ; ಇದು ಬಂದಿರುವುದು ಕೂಡ ಶರೀರದ ಕಾರಣದಿಂದಾಗಿಯೇ. ಈ ದುಃಖದಿಂದ ಪಾರಾಗಿಸುವ ಸಾಧನ ಯಾವುದು ಎಂದರೆ ಅದು ಕೂಡ ಈ ಶರೀರವೇ. ಆದರೆ ಅದಕ್ಕಾಗಿ ಈ ಶರೀರವನ್ನು ನಾವು ದೋಣಿಯಾಗಿಸಿಕೊಳ್ಳಬೇಕಿದೆ; ಎಂದರೆ ಸಂಸಾರದ ಅದನ್ನು ನೀರಿನಲ್ಲಿ ಮುಳುಗಿಸಬಾರದು, ತೇಲಿಸಬೇಕು. ಹೀಗೆ ನಮ್ಮ ದೇಹವನ್ನು ಸಿದ್ಧಪಡಿಸಿಕೊಂಡರೆ ಸಂಸಾರಸಾಗರವನ್ನು ಸುಲಭವಾಗಿ ದಾಟಬಹುದು.</p>.<p>ದೋಟಿಯನ್ನು ನಾವು ಸಿದ್ಧಪಡಿಸಿಕೊಂಡರಷ್ಟೆ ಸಾಲದು; ಸಮುದ್ರವನ್ನು ದಾಟುವುದಕ್ಕೆ ಸರಿಯಾದ ಸಮಯಕ್ಕಾಗಿ ಕಾಯಬೇಕು. ಆದುದರಿಂದ ನಾವು ಸದಾ ಎಚ್ಚರವಾಗಿರಬೇಕು. ಒಂದು ವೇಳೆ ನಾವು ನಿದ್ರೆಗೆ ಜಾರಿದರೆ ಒಳ್ಳೆಯ ಸಮಯ ನಮ್ಮಿಂದ ಕೈ ತಪ್ಪಿಹೋಗಬಹುದು. ನಾವು ಸಿದ್ಧವಾಗಿರಿಸಿಕೊಂಡಿರುವ ದೋಣಿ ಶಿಥಿಲವಾಗುವ ಸಂಭವವೂ ಇರುತ್ತದೆ.</p>.<p>ಮನುಷ್ಯಜನ್ಮ ನಮಗೆ ದಕ್ಕಿದೆ. ಇಡಿಯ ಸೃಷ್ಟಿಯಲ್ಲಿಯೇ ಶ್ರೇಷ್ಠ ಸೃಷ್ಟಿ ಎಂದರೆ ಅದು ಮನುಷ್ಯನೇ ಹೌದು. ಇಂಥ ವಿಶೇಷ ವರವನ್ನು ನಾವು ಕಳೆದುಕೊಳ್ಳಬಾರದು. ಈ ಶರೀರವನ್ನು ಹೀನಕಾರ್ಯಗಳಲ್ಲಿ ತೊಡಗಿಸಿ, ಸಂಸಾರಸಾಗರದಲ್ಲಿ ಮುಳುಗುವಂತೆ ಮಾಡಬಾರದು. ಅದರ ಸರಿಯಾದ ಉಪಯೋಗದಿಂದ ದುಃಖದ ಕಡಲಿನಿಂದ ಪಾರಾಗುವುದರ ಕಡೆಗೆ ನಮ್ಮ ಶರೀರದೋಣಿಯನ್ನು ಸಿದ್ಧಪಡಿಸಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾನುಷ್ಯಂ ನಾವಮಾಸಾದ್ಯ ತರ ದುಃಖಮಹಾನದೀಮ್ ।</p>.<p>ಮೂಢ ಕಾಲೋ ನ ನಿದ್ರಾಯಾ ಇಯಂ ನೌರ್ದುರ್ಲಭಾ ಪುನಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮನುಷ್ಯಶರೀರ ಎಂಬ ದೋಣಿಯನ್ನು ಪಡೆದು ದುಃಖ ಎಂಬ ದೊಡ್ಡ ನದಿಯನ್ನು ದಾಟು. ಮೂರ್ಖ! ನಿದ್ರೆಗೆ ಇದು ಸಮಯವಲ್ಲ. ಈ ದೋಣಿ ಮತ್ತೆ ಸಿಕ್ಕುವುದಿಲ್ಲ.’</p>.<p>ಸಾಮಾನ್ಯವಾಗಿ ಮನುಷ್ಯನ ಶರೀರವನ್ನು ಒಂದು ಹೊರೆ ಎನ್ನುವಂತೆ ಹಲವರು ಭಾವಿಸಿಕೊಳ್ಳುತ್ತಾರೆ. ಆದರೆ ಮನುಷ್ಯಜನ್ಮವನ್ನು ಸಾರ್ಥಕವಾಗಿ ಉಪಯೋಗಿಸಿಕೊಳ್ಳುವ ಮಾರ್ಗವನ್ನು ಈ ಸುಭಾಷಿತ ಇಲ್ಲಿ ತಿಳಿಸಿಕೊಡುತ್ತಿದೆ.</p>.<p>ಸಂಸಾರ ಎಂದರೆ ನಮ್ಮ ಈ ಜೀವನಚಕ್ರ. ಇದನ್ನು ಸಾಮಾನ್ಯವಾಗಿ ಸಾಗರಕ್ಕೆ ಹೋಲಿಸುವುದುಂಟು. ಸಾಗರವನ್ನು ದಾಟುವ ಬಗೆ ಹೇಗೆ? ಹಡಗಿನ ಮೂಲಕ ದಾಟಬೇಕು, ಅಲ್ಲವೆ? ಸಂಸಾರವೇ ಸಮುದ್ರವಾದರೆ ಆಗ ಅದನ್ನು ದಾಟಿ ಪಾರಾಗುವ ಬಗೆ ಹೇಗೆ? ಸುಭಾಷಿತ ಹೇಳುತ್ತಿದೆ, ನಮ್ಮ ಈ ಶರೀರವೇ ದೋಣಿ, ಹಡಗು; ಇದರ ನೆರವಿನಿಂದಲೇ ನಾವು ಸಂಸಾರಸಾಗರವನ್ನು ದಾಟಿ ಆಚೆಯ ದಡವನ್ನು ಸೇರಬೇಕಾಗಿದೆ.</p>.<p>ಆದರೆ ಸುಭಾಷಿತ ಇಲ್ಲಿ ಇನ್ನೊಂದು ಸಂಗತಿಯನ್ನೂ ಹೇಳಿದೆ. ಸಂಸಾರವನ್ನು ಕೇವಲ ಸಾಗರ ಎಂದಷ್ಟೆ ಹೇಳಿಲ್ಲ; ಅದನ್ನು ದುಃಖಸಾಗರ ಎಂದು ಹೇಳಿದೆ. ದಾಟುವುದು ಎಂದರೆ ಇಲ್ಲಿ ತಪ್ಪಿಸಿಕೊಳ್ಳುವುದು; ನಮ್ಮದಲ್ಲದ ನೆಲೆಯಿಂದ ನಮ್ಮದಾಗಿರುವ ನೆಲೆಗೆ ಹೋಗುವುದು. ಸಂಸಾರಸಾಗರದಲ್ಲಿ ಈಗ ದುಃಖ ಬಂದಿದೆ; ಇದು ಬಂದಿರುವುದು ಕೂಡ ಶರೀರದ ಕಾರಣದಿಂದಾಗಿಯೇ. ಈ ದುಃಖದಿಂದ ಪಾರಾಗಿಸುವ ಸಾಧನ ಯಾವುದು ಎಂದರೆ ಅದು ಕೂಡ ಈ ಶರೀರವೇ. ಆದರೆ ಅದಕ್ಕಾಗಿ ಈ ಶರೀರವನ್ನು ನಾವು ದೋಣಿಯಾಗಿಸಿಕೊಳ್ಳಬೇಕಿದೆ; ಎಂದರೆ ಸಂಸಾರದ ಅದನ್ನು ನೀರಿನಲ್ಲಿ ಮುಳುಗಿಸಬಾರದು, ತೇಲಿಸಬೇಕು. ಹೀಗೆ ನಮ್ಮ ದೇಹವನ್ನು ಸಿದ್ಧಪಡಿಸಿಕೊಂಡರೆ ಸಂಸಾರಸಾಗರವನ್ನು ಸುಲಭವಾಗಿ ದಾಟಬಹುದು.</p>.<p>ದೋಟಿಯನ್ನು ನಾವು ಸಿದ್ಧಪಡಿಸಿಕೊಂಡರಷ್ಟೆ ಸಾಲದು; ಸಮುದ್ರವನ್ನು ದಾಟುವುದಕ್ಕೆ ಸರಿಯಾದ ಸಮಯಕ್ಕಾಗಿ ಕಾಯಬೇಕು. ಆದುದರಿಂದ ನಾವು ಸದಾ ಎಚ್ಚರವಾಗಿರಬೇಕು. ಒಂದು ವೇಳೆ ನಾವು ನಿದ್ರೆಗೆ ಜಾರಿದರೆ ಒಳ್ಳೆಯ ಸಮಯ ನಮ್ಮಿಂದ ಕೈ ತಪ್ಪಿಹೋಗಬಹುದು. ನಾವು ಸಿದ್ಧವಾಗಿರಿಸಿಕೊಂಡಿರುವ ದೋಣಿ ಶಿಥಿಲವಾಗುವ ಸಂಭವವೂ ಇರುತ್ತದೆ.</p>.<p>ಮನುಷ್ಯಜನ್ಮ ನಮಗೆ ದಕ್ಕಿದೆ. ಇಡಿಯ ಸೃಷ್ಟಿಯಲ್ಲಿಯೇ ಶ್ರೇಷ್ಠ ಸೃಷ್ಟಿ ಎಂದರೆ ಅದು ಮನುಷ್ಯನೇ ಹೌದು. ಇಂಥ ವಿಶೇಷ ವರವನ್ನು ನಾವು ಕಳೆದುಕೊಳ್ಳಬಾರದು. ಈ ಶರೀರವನ್ನು ಹೀನಕಾರ್ಯಗಳಲ್ಲಿ ತೊಡಗಿಸಿ, ಸಂಸಾರಸಾಗರದಲ್ಲಿ ಮುಳುಗುವಂತೆ ಮಾಡಬಾರದು. ಅದರ ಸರಿಯಾದ ಉಪಯೋಗದಿಂದ ದುಃಖದ ಕಡಲಿನಿಂದ ಪಾರಾಗುವುದರ ಕಡೆಗೆ ನಮ್ಮ ಶರೀರದೋಣಿಯನ್ನು ಸಿದ್ಧಪಡಿಸಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>