<p><em><strong>ಸಂಪತ್ಸು ಮಹತಾಂ ಚಿತ್ತಂ ಭವತ್ಯುತ್ಪಲಕೋಮಲಮ್ ।</strong></em></p>.<p><em><strong>ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮಹಾತ್ಮರ ಮನಸ್ಸು ಐಶ್ವರ್ಯ ಬಂದಾಗ ಕನ್ನೈದಿಲೆಯಂತೆ ಮೃದುವಾಗಿರುತ್ತದೆ; ಕಷ್ಟಗಳು ಬಂದಾಗ ದೊಡ್ಡ ಬೆಟ್ಟದಮೇಲಿರುವ ಕಲ್ಲುಗಳ ರಾಶಿಯಂತೆ ಕಠಿಣವಾಗಿರುತ್ತದೆ.‘</p>.<p>ಇದಕ್ಕೆ ಪೂರಕವಾಗಿ ಇನ್ನೊಂದು ಪ್ರಸಿದ್ಧ ಪದ್ಯವನ್ನೂ ಇಲ್ಲಿ ನೋಡಬಹುದು:</p>.<p><em><strong>ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ।</strong></em></p>.<p><em><strong>ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ ।।</strong></em></p>.<p>’ಲೋಕೋತ್ತರರಾದ, ಎಂದರೆ ತುಂಬ ಎತ್ತರದ ಸ್ಥಿತಿಯಲ್ಲಿರುವವರ, ಶ್ರೇಷ್ಠರ ಮನಸ್ಸು ಕೆಲವು ವೇಳೆ ವಜ್ರಕ್ಕಿಂತಲೂ ಗಡಸು, ಹಲವು ವೇಳೆ ಹೂವಿಗಿಂತಲೂ ಮೃದು. ಅವರ ಮನಸ್ಸನ್ನು ಅರಿಯವುದು ತುಂಬ ಕಷ್ಟವೇ ಸರಿ‘ ಎನ್ನುತ್ತಿದೆ, ಉತ್ತರರಾಮಚರಿತೆಯ ಈ ಪದ್ಯ.</p>.<p>ಜೀವನ ಒಂದೇ ರೀತಿಯಲ್ಲಿ ಸಾಗದು; ಸರಾಗವಾಗಿ ಸಾಗುತ್ತಿರುವ ನಡಿಗೆಯಲ್ಲಿ ಇದ್ದಕ್ಕಿದ್ದಂತೆ ಆಯ ತಪ್ಪಿದಂತಾಗಬಹುದು; ಕುಸಿಯುವಂತಾಗಬಹುದು; ಮುಗ್ಗರಿಸಿದಂತಾಗಬಹುದು. ಹಾಗೆ ಬೀಳುವಾಗ ನಮ್ಮ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ – ಎನ್ನುವುದೇ ನಮ್ಮ ನಿತ್ಯದ ವ್ಯಾಯಾಮದ ದಿಟವಾದ ಪರೀಕ್ಷೆ; ನಮ್ಮ ಶಕ್ತಿ–ಸಮತೋಲನಗಳ ದಿಟವಾದ ಪರೀಕ್ಷೆ.</p>.<p>ನಾವು ನೋಡುನೋಡುತ್ತಿದ್ದಂತೆ ನಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾದವು. ಸಂತೋಷವಾಗಿ, ಧೈರ್ಯವಾಗಿ, ನಾಳೆಯ ಬಗ್ಗೆ ಕನಸುಗಳನ್ನು ಕಟ್ಟಿಕೊಂಡು ಹಿತವಾಗಿ ಸಾಗುತ್ತಿದ್ದ ಜೀವನಯಾನ ಕೊರೊನಾ ದೆಸೆಯಿಂದ ದಿಕ್ಕಾಪಾಲಾಯಿತು; ಈಗ ಪ್ರತಿಕ್ಷಣವೂ ಆತಂಕ, ನಾಳೆ ಏನಾಗುವುದೋ ಎಂಬ ಭಯ; ರಸ್ತೆಯಲ್ಲಿ ಧೈರ್ಯವಾಗಿ ಓಡಾಡಲೂ ಆಗದಂಥ ಪರಿಸ್ಥಿತಿ.</p>.<p>ಇಂಥ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು? ಸುಭಾಷಿತ ಅದರ ಬಗ್ಗೆ ತಿಳಿಸಿಕೊಡುತ್ತಿದೆ.</p>.<p>ಮಹಾತ್ಮರು ಐಶ್ವರ್ಯ ಬಂದಾಗ, ಎಂದರೆ ಸುಖದಲ್ಲಿದ್ದಾಗ ಹೇಗಿರುತ್ತಾರೆ? ಕನ್ನೈದಿಲೆಯಂತೆ, ಎಂದರೆ ಹೂವಿನಂತೆ ಮೃದುವಾಗಿರುತ್ತಾರೆ. ಅದೇ ಕಷ್ಟ ಬಂದಾಗ ದೊಡ್ಡ ಬೆಟ್ಟದ ಕಲ್ಲುಗಳಂತೆ ಗಟ್ಟಿಯಾಗಿ ಪರಿಸ್ಥಿತಿಯನ್ನು ಎದುರಿಸುತ್ತಾರೆ, ಧೈರ್ಯವಾಗಿ, ಅಚಲವಾಗಿ – ಹೆದರಿ ಓಡಿಹೋಗದೆ.</p>.<p>ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಮಹಾತ್ಮರ ಲಕ್ಷಣ. ಸುಖವನ್ನು ಹೂವಿಗೂ, ಕಷ್ಟವನ್ನೂ ಕಲ್ಲಿಗೂ ಹೋಲಿಸಿರುವುದೂ ಸ್ವಾರಸ್ಯಕರವಾಗಿದೆ. ಹೂವಿನ ಮೇಲೆ ಕಲ್ಲು ಬಿದ್ದರೆ ಹೂವು ನಲುಗಿಹೋಗುತ್ತದೆ; ಕಲ್ಲಿನ ಮೇಲೆ ಹೂವನ್ನು ಬೆಳೆಯಲಾಗದು. ಈ ವೈರುದ್ಧ್ಯವನ್ನು ಸುಭಾಷಿತ ಕಾಣಿಸಿದೆ. ಎಂದರೆ ಎರಡು ವಿರುದ್ಧವಾಗಿರುವ ಪರಿಸ್ಥಿತಿಗಳನ್ನು ಎದುರಿಸಬಲ್ಲ ಸಾಮರ್ಥ್ಯವಿದ್ದವನೇ ದಿಟವಾದ ಮಹಾತ್ಮ, ಶಕ್ತಿಶಾಲಿ ಎನ್ನುವುದನ್ನು ಅದು ಸೂಚಿಸುತ್ತಿದೆ.</p>.<p>ಶ್ರೀರಾಮ ಹೂವಿನಂತೆ ಕೋಮಲವಾಗಿಯೂ ವಜ್ರದಂತೆ ಕಠಿಣವಾಗಿಯೂ ಇದ್ದ ಮಹಾಪುರುಷ; ಈ ಕಾರಣದಿಂದಲೇ ಅವನು ಲೋಕೋತ್ತರಪುರುಷ ಎಂಬ ಕೀರ್ತಿಯನ್ನು ಸಂಪಾದಿಸಿದ. ಶರಣು ಕೋರಿ ಬಂದ ಶತ್ರುಪಕ್ಷದವರಿಗೂ ಆಶ್ರಯ ಕೊಟ್ಟ; ಗರ್ವ ತೋರಿದ ಸಮುದ್ರವನ್ನೇ ಒಣಗಿಸಿಬಿಡಲೂ ಮುಂದಾದ. ವಿನಯ ಮತ್ತು ಧೈರ್ಯ, ಅಭಯ ಮತ್ತು ಪೌರುಷ – ಇಂಥ ಭಿನ್ನಭಾವಗಳು ಪರಸ್ಪರ ವಿರೋಧವಲ್ಲ, ಅವನ್ನು ಹೇಗೆ, ಎಲ್ಲಿ ಪ್ರಕಟಿಸಬೇಕೆಂಬ ಅರಿವು ಇರಬೇಕಾದ್ದು ಮುಖ್ಯ.</p>.<p><strong><u>ಪ್ರಜಾವಾಣಿ Podcast</u></strong></p>.<p><strong>ದಿನದ ಸೂಕ್ತಿಯನ್ನು ಕೇಳಲು ಇಲ್ಲಿ <a href="https://anchor.fm/prajavani/episodes/ep-eg923v/a-a2k8tp7" target="_blank">ಕ್ಲಿಕ್ ಮಾಡಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಸಂಪತ್ಸು ಮಹತಾಂ ಚಿತ್ತಂ ಭವತ್ಯುತ್ಪಲಕೋಮಲಮ್ ।</strong></em></p>.<p><em><strong>ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮಹಾತ್ಮರ ಮನಸ್ಸು ಐಶ್ವರ್ಯ ಬಂದಾಗ ಕನ್ನೈದಿಲೆಯಂತೆ ಮೃದುವಾಗಿರುತ್ತದೆ; ಕಷ್ಟಗಳು ಬಂದಾಗ ದೊಡ್ಡ ಬೆಟ್ಟದಮೇಲಿರುವ ಕಲ್ಲುಗಳ ರಾಶಿಯಂತೆ ಕಠಿಣವಾಗಿರುತ್ತದೆ.‘</p>.<p>ಇದಕ್ಕೆ ಪೂರಕವಾಗಿ ಇನ್ನೊಂದು ಪ್ರಸಿದ್ಧ ಪದ್ಯವನ್ನೂ ಇಲ್ಲಿ ನೋಡಬಹುದು:</p>.<p><em><strong>ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ।</strong></em></p>.<p><em><strong>ಲೋಕೋತ್ತರಾಣಾಂ ಚೇತಾಂಸಿ ಕೋ ಹಿ ವಿಜ್ಞಾತುಮರ್ಹತಿ ।।</strong></em></p>.<p>’ಲೋಕೋತ್ತರರಾದ, ಎಂದರೆ ತುಂಬ ಎತ್ತರದ ಸ್ಥಿತಿಯಲ್ಲಿರುವವರ, ಶ್ರೇಷ್ಠರ ಮನಸ್ಸು ಕೆಲವು ವೇಳೆ ವಜ್ರಕ್ಕಿಂತಲೂ ಗಡಸು, ಹಲವು ವೇಳೆ ಹೂವಿಗಿಂತಲೂ ಮೃದು. ಅವರ ಮನಸ್ಸನ್ನು ಅರಿಯವುದು ತುಂಬ ಕಷ್ಟವೇ ಸರಿ‘ ಎನ್ನುತ್ತಿದೆ, ಉತ್ತರರಾಮಚರಿತೆಯ ಈ ಪದ್ಯ.</p>.<p>ಜೀವನ ಒಂದೇ ರೀತಿಯಲ್ಲಿ ಸಾಗದು; ಸರಾಗವಾಗಿ ಸಾಗುತ್ತಿರುವ ನಡಿಗೆಯಲ್ಲಿ ಇದ್ದಕ್ಕಿದ್ದಂತೆ ಆಯ ತಪ್ಪಿದಂತಾಗಬಹುದು; ಕುಸಿಯುವಂತಾಗಬಹುದು; ಮುಗ್ಗರಿಸಿದಂತಾಗಬಹುದು. ಹಾಗೆ ಬೀಳುವಾಗ ನಮ್ಮ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ – ಎನ್ನುವುದೇ ನಮ್ಮ ನಿತ್ಯದ ವ್ಯಾಯಾಮದ ದಿಟವಾದ ಪರೀಕ್ಷೆ; ನಮ್ಮ ಶಕ್ತಿ–ಸಮತೋಲನಗಳ ದಿಟವಾದ ಪರೀಕ್ಷೆ.</p>.<p>ನಾವು ನೋಡುನೋಡುತ್ತಿದ್ದಂತೆ ನಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾದವು. ಸಂತೋಷವಾಗಿ, ಧೈರ್ಯವಾಗಿ, ನಾಳೆಯ ಬಗ್ಗೆ ಕನಸುಗಳನ್ನು ಕಟ್ಟಿಕೊಂಡು ಹಿತವಾಗಿ ಸಾಗುತ್ತಿದ್ದ ಜೀವನಯಾನ ಕೊರೊನಾ ದೆಸೆಯಿಂದ ದಿಕ್ಕಾಪಾಲಾಯಿತು; ಈಗ ಪ್ರತಿಕ್ಷಣವೂ ಆತಂಕ, ನಾಳೆ ಏನಾಗುವುದೋ ಎಂಬ ಭಯ; ರಸ್ತೆಯಲ್ಲಿ ಧೈರ್ಯವಾಗಿ ಓಡಾಡಲೂ ಆಗದಂಥ ಪರಿಸ್ಥಿತಿ.</p>.<p>ಇಂಥ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು? ಸುಭಾಷಿತ ಅದರ ಬಗ್ಗೆ ತಿಳಿಸಿಕೊಡುತ್ತಿದೆ.</p>.<p>ಮಹಾತ್ಮರು ಐಶ್ವರ್ಯ ಬಂದಾಗ, ಎಂದರೆ ಸುಖದಲ್ಲಿದ್ದಾಗ ಹೇಗಿರುತ್ತಾರೆ? ಕನ್ನೈದಿಲೆಯಂತೆ, ಎಂದರೆ ಹೂವಿನಂತೆ ಮೃದುವಾಗಿರುತ್ತಾರೆ. ಅದೇ ಕಷ್ಟ ಬಂದಾಗ ದೊಡ್ಡ ಬೆಟ್ಟದ ಕಲ್ಲುಗಳಂತೆ ಗಟ್ಟಿಯಾಗಿ ಪರಿಸ್ಥಿತಿಯನ್ನು ಎದುರಿಸುತ್ತಾರೆ, ಧೈರ್ಯವಾಗಿ, ಅಚಲವಾಗಿ – ಹೆದರಿ ಓಡಿಹೋಗದೆ.</p>.<p>ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಮಹಾತ್ಮರ ಲಕ್ಷಣ. ಸುಖವನ್ನು ಹೂವಿಗೂ, ಕಷ್ಟವನ್ನೂ ಕಲ್ಲಿಗೂ ಹೋಲಿಸಿರುವುದೂ ಸ್ವಾರಸ್ಯಕರವಾಗಿದೆ. ಹೂವಿನ ಮೇಲೆ ಕಲ್ಲು ಬಿದ್ದರೆ ಹೂವು ನಲುಗಿಹೋಗುತ್ತದೆ; ಕಲ್ಲಿನ ಮೇಲೆ ಹೂವನ್ನು ಬೆಳೆಯಲಾಗದು. ಈ ವೈರುದ್ಧ್ಯವನ್ನು ಸುಭಾಷಿತ ಕಾಣಿಸಿದೆ. ಎಂದರೆ ಎರಡು ವಿರುದ್ಧವಾಗಿರುವ ಪರಿಸ್ಥಿತಿಗಳನ್ನು ಎದುರಿಸಬಲ್ಲ ಸಾಮರ್ಥ್ಯವಿದ್ದವನೇ ದಿಟವಾದ ಮಹಾತ್ಮ, ಶಕ್ತಿಶಾಲಿ ಎನ್ನುವುದನ್ನು ಅದು ಸೂಚಿಸುತ್ತಿದೆ.</p>.<p>ಶ್ರೀರಾಮ ಹೂವಿನಂತೆ ಕೋಮಲವಾಗಿಯೂ ವಜ್ರದಂತೆ ಕಠಿಣವಾಗಿಯೂ ಇದ್ದ ಮಹಾಪುರುಷ; ಈ ಕಾರಣದಿಂದಲೇ ಅವನು ಲೋಕೋತ್ತರಪುರುಷ ಎಂಬ ಕೀರ್ತಿಯನ್ನು ಸಂಪಾದಿಸಿದ. ಶರಣು ಕೋರಿ ಬಂದ ಶತ್ರುಪಕ್ಷದವರಿಗೂ ಆಶ್ರಯ ಕೊಟ್ಟ; ಗರ್ವ ತೋರಿದ ಸಮುದ್ರವನ್ನೇ ಒಣಗಿಸಿಬಿಡಲೂ ಮುಂದಾದ. ವಿನಯ ಮತ್ತು ಧೈರ್ಯ, ಅಭಯ ಮತ್ತು ಪೌರುಷ – ಇಂಥ ಭಿನ್ನಭಾವಗಳು ಪರಸ್ಪರ ವಿರೋಧವಲ್ಲ, ಅವನ್ನು ಹೇಗೆ, ಎಲ್ಲಿ ಪ್ರಕಟಿಸಬೇಕೆಂಬ ಅರಿವು ಇರಬೇಕಾದ್ದು ಮುಖ್ಯ.</p>.<p><strong><u>ಪ್ರಜಾವಾಣಿ Podcast</u></strong></p>.<p><strong>ದಿನದ ಸೂಕ್ತಿಯನ್ನು ಕೇಳಲು ಇಲ್ಲಿ <a href="https://anchor.fm/prajavani/episodes/ep-eg923v/a-a2k8tp7" target="_blank">ಕ್ಲಿಕ್ ಮಾಡಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>