ರಾಮಾಯಣ ಆರಂಭವಾಗುವುದೇ ಹುಡುಕಾಟದಲ್ಲಿ. ಯಾವುದರ ಹುಡುಕಾಟ? ಒಳಿತಿನ ಹುಡುಕಾಟದಲ್ಲಿ, ಸಜ್ಜನನ ಹುಡುಕಾಟದಲ್ಲಿ, ಧರ್ಮವಂತನ ಹುಡುಕಾಟದಲ್ಲಿ. ಈ ಹುಡುಕಾಟ ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುವಂಥದ್ದು. ಈ ಹುಡುಕಾಟಕ್ಕೆ ತೊಡಗಿದವರೇ ವಾಲ್ಮೀಕಿ ಮಹರ್ಷಿಗಳು. ಎಲ್ಲ ಪ್ರಶ್ನೆಗಳಿಗೂ ಅವರು ಕಂಡುಕೊಂಡ ಉತ್ತರವೇ ಶ್ರೀರಾಮ.